AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijaypat Singhania: ಬೀದಿಗೆ ಬಿದ್ಧ ಶ್ರೀಮಂತ; 13 ಲಕ್ಷ ಕೋಟಿ ರೂ ಮೌಲ್ಯದ ರೇಮಂಡ್ಸ್ ಕಂಪನಿ ಮಾಜಿ ಛೇರ್ಮನ್​ನ ಕರುಣಾಜನಕ ಕಥೆ

Rich to Rag Story of Raymonds Ex Chairman: ರೇಮಂಡ್ ಗ್ರೂಪ್​ನ ಮಾಜಿ ಛೇರ್ಮನ್ ಹಾಗೂ ಸಾಹಸ ಕ್ರೀಡೆಗಳ ಉತ್ಸಾಹಿ ವಿಜಯ್​ಪತ್ ಸಿಂಘಾನಿಯಾ ಒಂದು ಕಾಲದಲ್ಲಿ ಭಾರತದ ಅತಿಶ್ರೀಮಂತರ ಪೈಕಿ ಒಬ್ಬರೆನಿಸಿದವರು. ಇವತ್ತು ಇವರು ಮುಂಬೈನಲ್ಲಿ ಒಂದು ಸಾಧಾರಣ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ.

Vijaypat Singhania: ಬೀದಿಗೆ ಬಿದ್ಧ ಶ್ರೀಮಂತ; 13 ಲಕ್ಷ ಕೋಟಿ ರೂ ಮೌಲ್ಯದ ರೇಮಂಡ್ಸ್ ಕಂಪನಿ ಮಾಜಿ ಛೇರ್ಮನ್​ನ ಕರುಣಾಜನಕ ಕಥೆ
ವಿಜಯ್​ಪತ್ ಸಿಂಘಾನಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 13, 2023 | 1:34 PM

Share

ರೇಮಂಡ್ಸ್ ಸಂಸ್ಥೆ (Raymonds Group) ಹೆಸರು ಕೇಳಿರಬಹುದು. ಮದುವೆ ಸಮಾರಂಭಗಳಿಗೆ ಪುರುಷರು ಬಟ್ಟೆಬರೆ ಖರೀದಿಸಬೇಕಾದರೆ ರೇಮಂಡ್ಸ್ ಶೋರೂಮ್​ಗೆ ಹೋಗುವುದು ಸಾಮಾನ್ಯ. ಇವತ್ತು ಈ ಸಂಸ್ಥೆಯ ಷೇರುಸಂಪತ್ತು 13 ಲಕ್ಷಕೋಟಿ ರೂ ಆಗಿದೆ. ಈ ಯಶಸ್ವಿ ಕಂಪನಿಯ ಆಡಳಿತ ಚುಕ್ಕಾಣಿ ಹೊಂದಿದ್ದ ವ್ಯಕ್ತಿ ಇವತ್ತು ನಿರ್ಗತಿಕರಂತೆ ಬದುಕುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ರೇಮಂಡ್ ಗ್ರೂಪ್​ನ ಮಾಜಿ ಛೇರ್ಮನ್ ವಿಜಯ್​ಪತ್ ಸಿಂಘಾನಿಯಾ (Vijaypat Singhania) ಅವರೇ ಆ ವ್ಯಕ್ತಿ. ಒಂದು ಕಾಲದಲ್ಲಿ ಭಾರತದ ಅತ್ಯಂತ ಶ್ರೀಮಂತರಲ್ಲಿ ಒಬ್ಬರೆನಿಸಿದ್ದ ವಿಜಯಪತ್ ಸಿಂಘಾನಿಯಾ ಇವತ್ತು ಮುಂಬೈನಲ್ಲಿ ಒಂದು ಸಾಧಾರಣ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಕಲ ಅಷ್ಟೈಷ್ವರ್ಯಗಳನ್ನು ಹೊಂದಿ ಸುಖದ ಜೀವನ ನಡೆಸುತ್ತಿದ್ದ ಈ ಹಿರಿಯರಿಗೆ ಈಗ ಬರುವ ಆದಾಯ ಹೊಟ್ಟೆ ಬಟ್ಟೆಗಾಗುವಷ್ಟು ಮಾತ್ರ. ವಿಜಯ್​ಪತ್ ಸಿಂಘಾನಿಯಾ ಅವರಿಗೆ ಯಾಕಿಂಥ ಸ್ಥಿತಿ ಎರಗಿ ಬಂತು? ರೇಮಂಡ್ಸ್ ಕಂಪನಿ ಈಗ ಉತ್ತುಂಗದಲ್ಲಿರುವಾಗ ವ್ಯಾವಹಾರಿಕ ನಷ್ಟದಿಂದ ಅವರಿಗೆ ಈ ದುರ್ಗತಿ ಬಂದಿರಲು ಸಾಧ್ಯವಿಲ್ಲ. ಹಾಗಾದರೆ ಏನು ಕಾರಣ? ವರದಿಗಳ ಪ್ರಕಾರ, ವಿಜಯ್​ಪತ್ ಸಿಂಘಾನಿಯಾ ಅವರ ಈ ದುಸ್ಥಿತಿಗೆ ಕೌಟುಂಬಿಕ ವ್ಯಾಜ್ಯವೇ ಕಾರಣ ಎನ್ನಲಾಗಿದೆ.

ಮಗನ ಜೊತೆಗಿನ ಜಟಾಪಟಿ ಈಗ ವಿಜಯ್​ಪತ್ ಸಿಂಘಾನಿಯಾ ಅವರಿಗೆ ಈ ಸ್ಥಿತಿಗೆ ಇಳಿಯುವಂತೆ ಮಾಡಿದೆ. ರೇಮಂಡ್ಸ್ ಸಂಸ್ಥೆಯಲ್ಲಿ ಅವರು ಶೇ. 37ರಷ್ಟು ಷೇರುಪಾಲು ಹೊಂದಿದ್ದರು. 2015ರಲ್ಲಿ ಅಷ್ಟೂ ಷೇರುಗಳನ್ನು ಕಿರಿಯ ಮಗ ಗೌತಮ್ ಸಿಂಘಾನಿಯಾಗೆ ಧಾರೆ ಎರೆದರು. ಅದಾಗಿ ಕೆಲ ವರ್ಷಗಳಲ್ಲಿ ರೇಮಂಡ್ ಗ್ರೂಪ್​ನ ವಿಶ್ರಾಂತ ಛೇರ್ಮನ್ (ಎಮಿರಿಟಸ್) ಹುದ್ದೆಯಿಂದ ವಿಜಯ್​ಪತ್ ಅವರನ್ನು ಕಿತ್ತುಹಾಕಲಾಯಿತು. ಅವರಿಗೆ ಒಂದು ಸ್ವಂತಮನೆಯೂ ಇಲ್ಲದಾಯಿತು.

ಇವರ ಹಿರಿಯ ಮಗ ಮಧುಪತಿ ಸಿಂಘಾನಿಯಾ ಅವರು ಕುಟುಂಬದಿಂದ ದೂರಗೊಂಡು ಮುಂಬೈನಲ್ಲಿರುವ ಪಿತ್ರಾರ್ಜಿ ಆಸ್ತಿ ಬಿಟ್ಟುಕೊಟ್ಟು ದೂರದ ಸಿಂಗಾಪುರಕ್ಕೆ ಹೋಗಿ ನೆಲಸಿದ್ದಾರೆ. ಮಧುಪತಿ ಅವರಿಗೆ ಸಾಕಷ್ಟು ಅವಮಾನವಾದ್ದರಿಂದ ಈ ಬೆಳವಣಿಗೆ ಆಗಿತ್ತು ಎಂದು ಹೇಳಲಾಗುತ್ತದೆ. ಆದರೆ, ದೊಡ್ಡ ಮಗ ದೂರವಾದ ಬಳಿಕ ವಿಜಯ್​ಪತ್ ಸಿಂಘಾನಿಯಾಗೆ ಕಿರಿಯ ಮಗನಿಂದ ಘಾಸಿಯಾಗಿದೆ. ಇಬ್ಬರ ಮಧ್ಯೆ ಕೋರ್ಟ್​ನಲ್ಲಿ ಆಸ್ತಿವ್ಯಾಜ್ಯ ನಡೆಯುತ್ತಿದೆ.

ಇದನ್ನೂ ಓದಿ: HAL Share: ಎಚ್​ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್​ಎಎಲ್ ಷೇರು

ಸಿಂಘಾನಿಯಾ ಕುಟುಂಬ ನೂರಕ್ಕೂ ಹೆಚ್ಚು ವರ್ಷಗಳಿಂದ ಜವಳಿ ಉದ್ಯಮದಲ್ಲಿ ಹೆಸರು ಮಾಡಿದವರು. ಎಂಬತ್ತು, ತೊಂಬತ್ತರ ದಶಕದಲ್ಲಿ ವಿಜಯ್​ಪತ್ ಸಿಂಘಾನಿಯಾ ನೇತೃತ್ವದಲ್ಲಿ ಇವರ ಉದ್ಯಮ ಹೊಸ ಎತ್ತರಕ್ಕೆ ಹೋಗಿತ್ತು. ಈಗ ಮಗ ಗೌತಮ್ ಸಿಂಘಾನಿಯಾ ನೇತೃತ್ವದಲ್ಲೂ ರೇಮಂಡ್ ಗ್ರೂಪ್ ಸಾಕಷ್ಟು ಬೆಳೆದಿದೆ.

ವಿಮಾನಯಾನ, ಕಾರ್ ಚಾಲನೆ ಇತ್ಯಾದಿ ಸಾಹಸಗಳ ಮೂಲಕ ಹೆಸರಾಗಿದ್ದ, ಕೇಂದ್ರದಿಂದ ಪದ್ಮ ಪ್ರಶಸ್ತಿಗಳನ್ನು ಪಡೆದಿದ್ದ ವಿಜಯ್​ಪತ್ ಸಿಂಘಾನಿಯಾ ಇವತ್ತು ರೇಮಂಡ್ ಗ್ರೂಪ್​ನಲ್ಲಿ ಶೇ. 37ರಷ್ಟು ಷೇರುಪಾಲು ಉಳಿಸಿಕೊಂಡಿದ್ದರೆ ಲಕ್ಷಾಂತರ ಕೋಟಿ ರೂ ಆಸ್ತಿವಂತರಾಗಿರುತ್ತಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:31 pm, Sun, 13 August 23

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್