AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijaypat Singhania: ಬೀದಿಗೆ ಬಿದ್ಧ ಶ್ರೀಮಂತ; 13 ಲಕ್ಷ ಕೋಟಿ ರೂ ಮೌಲ್ಯದ ರೇಮಂಡ್ಸ್ ಕಂಪನಿ ಮಾಜಿ ಛೇರ್ಮನ್​ನ ಕರುಣಾಜನಕ ಕಥೆ

Rich to Rag Story of Raymonds Ex Chairman: ರೇಮಂಡ್ ಗ್ರೂಪ್​ನ ಮಾಜಿ ಛೇರ್ಮನ್ ಹಾಗೂ ಸಾಹಸ ಕ್ರೀಡೆಗಳ ಉತ್ಸಾಹಿ ವಿಜಯ್​ಪತ್ ಸಿಂಘಾನಿಯಾ ಒಂದು ಕಾಲದಲ್ಲಿ ಭಾರತದ ಅತಿಶ್ರೀಮಂತರ ಪೈಕಿ ಒಬ್ಬರೆನಿಸಿದವರು. ಇವತ್ತು ಇವರು ಮುಂಬೈನಲ್ಲಿ ಒಂದು ಸಾಧಾರಣ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ.

Vijaypat Singhania: ಬೀದಿಗೆ ಬಿದ್ಧ ಶ್ರೀಮಂತ; 13 ಲಕ್ಷ ಕೋಟಿ ರೂ ಮೌಲ್ಯದ ರೇಮಂಡ್ಸ್ ಕಂಪನಿ ಮಾಜಿ ಛೇರ್ಮನ್​ನ ಕರುಣಾಜನಕ ಕಥೆ
ವಿಜಯ್​ಪತ್ ಸಿಂಘಾನಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 13, 2023 | 1:34 PM

ರೇಮಂಡ್ಸ್ ಸಂಸ್ಥೆ (Raymonds Group) ಹೆಸರು ಕೇಳಿರಬಹುದು. ಮದುವೆ ಸಮಾರಂಭಗಳಿಗೆ ಪುರುಷರು ಬಟ್ಟೆಬರೆ ಖರೀದಿಸಬೇಕಾದರೆ ರೇಮಂಡ್ಸ್ ಶೋರೂಮ್​ಗೆ ಹೋಗುವುದು ಸಾಮಾನ್ಯ. ಇವತ್ತು ಈ ಸಂಸ್ಥೆಯ ಷೇರುಸಂಪತ್ತು 13 ಲಕ್ಷಕೋಟಿ ರೂ ಆಗಿದೆ. ಈ ಯಶಸ್ವಿ ಕಂಪನಿಯ ಆಡಳಿತ ಚುಕ್ಕಾಣಿ ಹೊಂದಿದ್ದ ವ್ಯಕ್ತಿ ಇವತ್ತು ನಿರ್ಗತಿಕರಂತೆ ಬದುಕುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ರೇಮಂಡ್ ಗ್ರೂಪ್​ನ ಮಾಜಿ ಛೇರ್ಮನ್ ವಿಜಯ್​ಪತ್ ಸಿಂಘಾನಿಯಾ (Vijaypat Singhania) ಅವರೇ ಆ ವ್ಯಕ್ತಿ. ಒಂದು ಕಾಲದಲ್ಲಿ ಭಾರತದ ಅತ್ಯಂತ ಶ್ರೀಮಂತರಲ್ಲಿ ಒಬ್ಬರೆನಿಸಿದ್ದ ವಿಜಯಪತ್ ಸಿಂಘಾನಿಯಾ ಇವತ್ತು ಮುಂಬೈನಲ್ಲಿ ಒಂದು ಸಾಧಾರಣ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಕಲ ಅಷ್ಟೈಷ್ವರ್ಯಗಳನ್ನು ಹೊಂದಿ ಸುಖದ ಜೀವನ ನಡೆಸುತ್ತಿದ್ದ ಈ ಹಿರಿಯರಿಗೆ ಈಗ ಬರುವ ಆದಾಯ ಹೊಟ್ಟೆ ಬಟ್ಟೆಗಾಗುವಷ್ಟು ಮಾತ್ರ. ವಿಜಯ್​ಪತ್ ಸಿಂಘಾನಿಯಾ ಅವರಿಗೆ ಯಾಕಿಂಥ ಸ್ಥಿತಿ ಎರಗಿ ಬಂತು? ರೇಮಂಡ್ಸ್ ಕಂಪನಿ ಈಗ ಉತ್ತುಂಗದಲ್ಲಿರುವಾಗ ವ್ಯಾವಹಾರಿಕ ನಷ್ಟದಿಂದ ಅವರಿಗೆ ಈ ದುರ್ಗತಿ ಬಂದಿರಲು ಸಾಧ್ಯವಿಲ್ಲ. ಹಾಗಾದರೆ ಏನು ಕಾರಣ? ವರದಿಗಳ ಪ್ರಕಾರ, ವಿಜಯ್​ಪತ್ ಸಿಂಘಾನಿಯಾ ಅವರ ಈ ದುಸ್ಥಿತಿಗೆ ಕೌಟುಂಬಿಕ ವ್ಯಾಜ್ಯವೇ ಕಾರಣ ಎನ್ನಲಾಗಿದೆ.

ಮಗನ ಜೊತೆಗಿನ ಜಟಾಪಟಿ ಈಗ ವಿಜಯ್​ಪತ್ ಸಿಂಘಾನಿಯಾ ಅವರಿಗೆ ಈ ಸ್ಥಿತಿಗೆ ಇಳಿಯುವಂತೆ ಮಾಡಿದೆ. ರೇಮಂಡ್ಸ್ ಸಂಸ್ಥೆಯಲ್ಲಿ ಅವರು ಶೇ. 37ರಷ್ಟು ಷೇರುಪಾಲು ಹೊಂದಿದ್ದರು. 2015ರಲ್ಲಿ ಅಷ್ಟೂ ಷೇರುಗಳನ್ನು ಕಿರಿಯ ಮಗ ಗೌತಮ್ ಸಿಂಘಾನಿಯಾಗೆ ಧಾರೆ ಎರೆದರು. ಅದಾಗಿ ಕೆಲ ವರ್ಷಗಳಲ್ಲಿ ರೇಮಂಡ್ ಗ್ರೂಪ್​ನ ವಿಶ್ರಾಂತ ಛೇರ್ಮನ್ (ಎಮಿರಿಟಸ್) ಹುದ್ದೆಯಿಂದ ವಿಜಯ್​ಪತ್ ಅವರನ್ನು ಕಿತ್ತುಹಾಕಲಾಯಿತು. ಅವರಿಗೆ ಒಂದು ಸ್ವಂತಮನೆಯೂ ಇಲ್ಲದಾಯಿತು.

ಇವರ ಹಿರಿಯ ಮಗ ಮಧುಪತಿ ಸಿಂಘಾನಿಯಾ ಅವರು ಕುಟುಂಬದಿಂದ ದೂರಗೊಂಡು ಮುಂಬೈನಲ್ಲಿರುವ ಪಿತ್ರಾರ್ಜಿ ಆಸ್ತಿ ಬಿಟ್ಟುಕೊಟ್ಟು ದೂರದ ಸಿಂಗಾಪುರಕ್ಕೆ ಹೋಗಿ ನೆಲಸಿದ್ದಾರೆ. ಮಧುಪತಿ ಅವರಿಗೆ ಸಾಕಷ್ಟು ಅವಮಾನವಾದ್ದರಿಂದ ಈ ಬೆಳವಣಿಗೆ ಆಗಿತ್ತು ಎಂದು ಹೇಳಲಾಗುತ್ತದೆ. ಆದರೆ, ದೊಡ್ಡ ಮಗ ದೂರವಾದ ಬಳಿಕ ವಿಜಯ್​ಪತ್ ಸಿಂಘಾನಿಯಾಗೆ ಕಿರಿಯ ಮಗನಿಂದ ಘಾಸಿಯಾಗಿದೆ. ಇಬ್ಬರ ಮಧ್ಯೆ ಕೋರ್ಟ್​ನಲ್ಲಿ ಆಸ್ತಿವ್ಯಾಜ್ಯ ನಡೆಯುತ್ತಿದೆ.

ಇದನ್ನೂ ಓದಿ: HAL Share: ಎಚ್​ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್​ಎಎಲ್ ಷೇರು

ಸಿಂಘಾನಿಯಾ ಕುಟುಂಬ ನೂರಕ್ಕೂ ಹೆಚ್ಚು ವರ್ಷಗಳಿಂದ ಜವಳಿ ಉದ್ಯಮದಲ್ಲಿ ಹೆಸರು ಮಾಡಿದವರು. ಎಂಬತ್ತು, ತೊಂಬತ್ತರ ದಶಕದಲ್ಲಿ ವಿಜಯ್​ಪತ್ ಸಿಂಘಾನಿಯಾ ನೇತೃತ್ವದಲ್ಲಿ ಇವರ ಉದ್ಯಮ ಹೊಸ ಎತ್ತರಕ್ಕೆ ಹೋಗಿತ್ತು. ಈಗ ಮಗ ಗೌತಮ್ ಸಿಂಘಾನಿಯಾ ನೇತೃತ್ವದಲ್ಲೂ ರೇಮಂಡ್ ಗ್ರೂಪ್ ಸಾಕಷ್ಟು ಬೆಳೆದಿದೆ.

ವಿಮಾನಯಾನ, ಕಾರ್ ಚಾಲನೆ ಇತ್ಯಾದಿ ಸಾಹಸಗಳ ಮೂಲಕ ಹೆಸರಾಗಿದ್ದ, ಕೇಂದ್ರದಿಂದ ಪದ್ಮ ಪ್ರಶಸ್ತಿಗಳನ್ನು ಪಡೆದಿದ್ದ ವಿಜಯ್​ಪತ್ ಸಿಂಘಾನಿಯಾ ಇವತ್ತು ರೇಮಂಡ್ ಗ್ರೂಪ್​ನಲ್ಲಿ ಶೇ. 37ರಷ್ಟು ಷೇರುಪಾಲು ಉಳಿಸಿಕೊಂಡಿದ್ದರೆ ಲಕ್ಷಾಂತರ ಕೋಟಿ ರೂ ಆಸ್ತಿವಂತರಾಗಿರುತ್ತಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:31 pm, Sun, 13 August 23

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್