AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇ. 10 ಕ್ಯಾಷ್​ಬ್ಯಾಕ್, ರಿವಾರ್ಡ್ಸ್, ಉಚಿತ ವೆಲ್ನೆಸ್ ಸೆಂಟರ್… ಪತಂಜಲಿ ಕ್ರೆಡಿಟ್ ಕಾರ್ಡ್​ಗಳಿಂದ ಹಲವು ಲಾಭ

Patanjali's co-branded credit cards: ವಿವಿಧ ಬ್ಯಾಂಕ್​ಗಳ ಸಹಯೋಗದಲ್ಲಿ ಪತಂಜಲಿ ಸಂಸ್ಥೆ ಕೂಡ ಕೋ ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್​ಗಳನ್ನು ವಿತರಿಸುತ್ತಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಹಲವು ಅನುಕೂಲಗಳನ್ನು ಪತಂಜಲಿ ಸಂಸ್ಥೆ ನೀಡುತ್ತಿದೆ. ಭರ್ಜರಿ ಕ್ಯಾಷ್​ಬ್ಯಾಕ್​ಗಳು, ವೆಲ್ನೆಸ್ ಸೆಂಟರ್​ಗಳಲ್ಲಿ ಉಚಿತ ಸೇವೆ, ರಿವಾರ್ಡ್ ಪಾಯಿಂಟ್ಸ್, ಇನ್ಷೂರೆನ್ಸ್ ಇತ್ಯಾದಿ ಬೆನಿಫಿಟ್ಸ್ ನೀಡುತ್ತದೆ. ಆರ್​ಬಿಎಲ್ ಮತ್ತು ಪಿಎನ್​ಬಿ ಬ್ಯಾಂಕ್​ಗಳೊಂದಿಗೆ ಪತಂಜಲಿ ಒಪ್ಪಂದ ಮಾಡಿಕೊಂಡು ತನ್ನ ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದೆ.

ಶೇ. 10 ಕ್ಯಾಷ್​ಬ್ಯಾಕ್, ರಿವಾರ್ಡ್ಸ್, ಉಚಿತ ವೆಲ್ನೆಸ್ ಸೆಂಟರ್... ಪತಂಜಲಿ ಕ್ರೆಡಿಟ್ ಕಾರ್ಡ್​ಗಳಿಂದ ಹಲವು ಲಾಭ
ಪತಂಜಲಿ ಕ್ರೆಡಿಟ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 24, 2025 | 3:05 PM

Share

ಪತಂಜಲಿ ಸಂಸ್ಥೆ ಆಯುರ್ವೇದ ಉತ್ಪನ್ನಗಳ ಮಾರಾಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಸಹ ನೀಡುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು RBL ಬ್ಯಾಂಕ್​ಗಳ ಸಹಯೋಗದೊಂದಿಗೆ, ಗ್ರಾಹಕರಿಗೆ ವಿಶೇಷ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ ಮತ್ತು ಬಹುಮಾನಗಳನ್ನು ನೀಡುವ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳನ್ನು ಪತಂಜಲಿ (Patanjali co-branded credit cards) ಪರಿಚಯಿಸಿದೆ. ಈ ಕಾರ್ಡ್‌ಗಳು ಗ್ರಾಹಕರಿಗೆ ಪ್ರತಿ ಖರೀದಿಯಲ್ಲೂ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುವ ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿವೆ.

RBL ಬ್ಯಾಂಕ್​ನಿಂದ ಪತಂಜಲಿ ಕ್ರೆಡಿಟ್ ಕಾರ್ಡ್​ಗಳು

ಆರ್‌ಬಿಎಲ್ ಬ್ಯಾಂಕ್ ಎರಡು ರೀತಿಯ ಪತಂಜಲಿ ಕಾರ್ಡ್‌ಗಳನ್ನು ನೀಡುತ್ತದೆ: ಗೋಲ್ಡ್ ಮತ್ತು ಪ್ಲಾಟಿನಂ. ಪತಂಜಲಿ ಮಳಿಗೆಗಳಲ್ಲಿ ಶಾಪಿಂಗ್ ಮಾಡುವವರಿಗೆ ಎರಡೂ ಕಾರ್ಡ್‌ಗಳು ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತವೆ. ಪತಂಜಲಿ ಗೋಲ್ಡ್ ಕ್ರೆಡಿಟ್ ಕಾರ್ಡ್ ಬಳಸಿ ಪತಂಜಲಿ ಉತ್ಪನ್ನಗಳನ್ನು ಖರೀದಿಸಿದರೆ ಶೇ. 10ರಷ್ಟು ಕ್ಯಾಷ್​ಬ್ಯಾಕ್ ನೀಡುತ್ತದೆ. ಒಂದು ತಿಂಗಳಲ್ಲಿ ಈ ರೀತಿ ಗರಿಷ್ಠ 750 ರೂಗಳಷ್ಟು ಕ್ಯಾಷ್​ಬ್ಯಾಕ್ ಪಡೆಯಬಹುದು.

ಈ ಪತಂಜಲಿ ಸ್ವರ್ಣ ಕ್ರೆಡಿಟ್ ಕಾರ್ಡ್ ಪಡೆದು 30 ದಿನದೊಳಗೆ ಮಾಡುವ ಮೊದಲ ಒಂದು ಸಾವಿರ ರೂ ವಹಿವಾಟಿಗೆ 6,000 ವೆಲ್ಕಮ್ ರಿವಾರ್ಡ್​ಗಳನ್ನು ನೀಡಲಾಗುತ್ತದೆ. ವರ್ಷಕ್ಕೆ 3 ಲಕ್ಷ ರೂ ವೆಚ್ಚ ಮಾಡಿದರೆ 1,500 ರೂ ವೋಚರ್ ನೀಡಲಾಗುತ್ತದೆ.

ವರ್ಷಕ್ಕೆ ಐದು ಲಕ್ಷ ರೂ ವ್ಯಯಿಸಿದರೆ ಪತಂಜಲಿ ವೆಲ್ನೆಸ್ ಸೆಂಟರ್​ನಲ್ಲಿ 4-5 ದಿನ ಉಳಿದುಕೊಳ್ಳುವ ಅವಕಾಶ ಕೊಡಲಾಗುತ್ತದೆ. ಬುಕ್​ಮೈಶೋ ಮೂವೀ ಟಿಕೆಟ್ ಮೇಲೆ 1+1 ಡಿಸ್ಕೌಂಟ್ ಕೊಡಲಾಗುತ್ತದೆ.

ಇದನ್ನೂ ಓದಿ: ಕಳೆದ ಬಾರಿ ವಿಳಂಬವಾಗಿದ್ದ ಪಿಎಂ ಕಿಸಾನ್ ಹಣ ಈ ಬಾರಿ ಬೇಗ ಸಿಗುವ ನಿರೀಕ್ಷೆ; ಇಲ್ಲಿದೆ 21ನೇ ಕಂತಿನ ಬಿಡುಗಡೆ ದಿನಾಂಕ

ಆರ್​ಬಿಎಲ್​ನ ಪತಂಜಲಿ ಪ್ಲಾಟಿನಂ ಅಥವಾ ವಿಶಿಷ್ಟ ಕ್ರೆಡಿಟ್ ಕಾರ್ಡ್​ನ ಪ್ರಯೋಜನಗಳು

ಈ ಕ್ರೆಡಿಟ್ ಕಾರ್ಡ್ ಬಳಸಿ ಪತಂಜಲಿ ಉತ್ಪನ್ನಗಳನ್ನು ಖರೀದಿಸಿದರೆ ಶೇ. 10 ಕ್ಯಾಷ್​​ಬ್ಯಾಕ್ ಸಿಗುತ್ತದೆ. ಒಂದು ತಿಂಗಳಲ್ಲಿ 500 ರೂವರೆಗೆ ಕ್ಯಾಷ್​​ಬ್ಯಾಕ್ ಪಡೆಯಲು ಅವಕಾಶ ಇದೆ.

ವರ್ಷಕ್ಕೆ ಒಂದೂವರೆ ಲಕ್ಷ ರೂ ವ್ಯಯಿಸಿದರೆ 499 ರೂಗಳ ಆರಂಭಿಕ ಶುಲ್ಕ ಹಾಗೂ ವಾರ್ಷಿಕ ಶುಲ್ಕಗಳನ್ನು ಮನ್ನಾ ಮಾಡಲಾಗುತ್ತದೆ.

4 ಲಕ್ಷ ರೂ ವಾರ್ಷಿಕ ವೆಚ್ಚ ಮಾಡಿದಲ್ಲಿ ಪತಂಜಲಿ ವೆಲ್ನೆಸ್ ಸೆಂಟರ್​ನಲ್ಲಿ 2-3 ದಿನ ಉಳಿಯಲು ಅವಕಾಶ ಇರುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ (PNB) ಪತಂಜಲಿ ಕ್ರೆಡಿಟ್ ಕಾರ್ಡ್​ಗಳು

ಆರ್​​ಬಿಎಲ್ ಜೊತೆ ಮಾಡಿಕೊಂಡಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆಗೂ ಪತಂಜಲಿ ಒಪ್ಪಂದ ಮಾಡಿಕೊಂಡು ಕ್ರೆಡಿಟ್ ಕಾರ್ಡ್ ನೀಡುತ್ತಿದೆ. ಪಿಎನ್​ಬಿ ಪತಂಜಲಿ ರುಪೇ ಪ್ಲಾಟಿನಂ ಕಾರ್ಡ್ ಮತ್ತು ಪಿಎನ್​ಬಿ ಪತಂಜಲಿ ರುಪೇ ಸೆಲೆಕ್ಟ್ ಕಾರ್ಡ್ ಇವನ್ನು ಸದ್ಯಕ್ಕೆ ನೀಡಲಾಗುತ್ತಿದೆ. ಈ ಕಾರ್ಡ್​ಗಳು ಪತಂಜಲಿ ಮಳಿಗೆಗಳಲ್ಲಿ ಮಾತ್ರವಲ್ಲ, ಇತರ ಕಡೆಗಳಲ್ಲೂ ಬೆನಿಫಿಟ್ಸ್ ಕೊಡುತ್ತವೆ. ಪ್ಲಾಟಿನಂ ಕಾರ್ಡ್ ಅನ್ನು ಆ್ಯಕ್ಟಿವೇಟ್ ಮಾಡಿದ ಬಳಿಕ 300 ರಿವಾರ್ಡ್ ಪಾಯಿಂಟ್ಸ್ ಸಿಗುತ್ತದೆ. ಇದರ ಬಳಕೆ ಮಾಡಿದಂತೆ ಕ್ಯಾಷ್​ಬ್ಯಾಕ್, ರಿವಾರ್ಡ್ ಪಾಯಿಂಟ್ಸ್, ಇನ್ಷೂರೆನ್ಸ್ ಇತ್ಯಾದಿ ಸೌಲಭ್ಯ ಸಿಗುತ್ತದೆ.

ಪಿಎನ್​ಬಿ ಪತಂಜಲಿ ರುಪೇ ಸೆಲೆಕ್ಟ್ ಕಾರ್ಡ್ ಅನುಕೂಲಗಳು

ಈ ಕ್ರೆಡಿಟ್ ಕಾರ್ಡ್​ಗೆ ಸೇರ್ಪಡೆ ಶುಲ್ಕ ಇರುವುದಿಲ್ಲ. ಪ್ರತೀ ಕ್ವಾರ್ಟರ್​ಗೆ ಒಮ್ಮೆಯಾದರೂ ಈ ಕಾರ್ಡ್ ಬಳಸಿಕೊಂಡು ಹೋದಲ್ಲಿ ವಾರ್ಷಿಕ ಶುಲ್ಕವೂ ಇರುವುದಿಲ್ಲ.

ಇದನ್ನೂ ಓದಿ: ತಿಂಗಳಿಗೆ 21,000-26,000 ರೂ ಹೂಡಿಕೆ; 10 ವರ್ಷದಲ್ಲಿ 50 ಲಕ್ಷ ರೂ ಗಳಿಕೆ

ಪತಂಜಲಿ ಸ್ಟೋರ್​ಗಳಲ್ಲಿ ಈ ಕಾರ್ಡ್ ಬಳಸಿ 2,500 ರೂಗಿಂತ ಹೆಚ್ಚು ಖರೀದಿ ಮಾಡಿದರೆ ಶೇ. 2 ಕ್ಯಾಷ್​ಬ್ಯಾಕ್ ಸಿಗುತ್ತದೆ. ಪ್ರತೀ ಟ್ರಾನ್ಸಾಕ್ಷನ್​ಗೆ ಗರಿಷ್ಠ 50 ರೂ ಕ್ಯಾಷ್​​ಬ್ಯಾಕ್ ಮಿತಿ ಇರುತ್ತದೆ.

ಇನ್ಷೂರೆನ್ಸ್ ಕವರೇಜ್, ಏರ್​ಪೋರ್ಟ್ ಲೋಂಜ್ ಸೇವ್, ರಿವಾರ್ಡ್ ಪಾಯಿಂಟ್ಸ್ ಇತ್ಯಾದಿ ಇನ್ನೂ ಅನೇಕ ಅನುಕೂಲಗಳನ್ನು ಪಿಎನ್​ಬಿ ಪತಂಜಲಿ ರುಪೇ ಸೆಲೆಕ್ಟ್ ಕಾರ್ಡ್ ನೀಡುತ್ತದೆ.

ಸ್ವದೇಶಿ ಸಮೃದ್ಧಿ ಕಾರ್ಡ್‌ದಾರರಿಗೆ ಪ್ರಯೋಜನಗಳು

ಪತಂಜಲಿಯ ಸ್ವದೇಶಿ ಸಮೃದ್ಧಿ ಕಾರ್ಡ್ ಬಳಸುವ ಗ್ರಾಹಕರು PNB-ಪತಂಜಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ರೀಚಾರ್ಜ್‌ಗಳು ಅಥವಾ ವಹಿವಾಟುಗಳ ಮೇಲೆ ಹೆಚ್ಚುವರಿ 5-7% ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಈ ಫೀಚರ್ ಅನ್ನು ರೆಗ್ಯುಲರ್ ಪತಂಜಲಿ ಗ್ರಾಹಕರಿಗಾಗಿ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ