AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ ಪೇಟಿಎಂ ಸಿಇಒ ಯಡವಟ್ಟು; ಡಿಲೀಟ್ ಆದ ಪೋಸ್ಟ್​ನಲ್ಲಿ ಶರ್ಮಾ ಬರೆದದ್ದೇನು?

Paytm CEO Vijay Shekhar Sharma deletes post on Ratan Tata: ಅಕ್ಟೋಬರ್ 9ರಂದು ನಿಧನರಾದ ರತನ್ ಟಾಟಾ ಅವರಿಗೆ ಗೌರವ ಸೂಚಿಸುವ ಭರದಲ್ಲಿ ತಪ್ಪಾದ ಪದಬಳಕೆ ಮಾಡಿ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಯಡವಟ್ಟು ಮಾಡಿಕೊಂಡಿದ್ದಾರೆ. ತಮ್ಮ ಪೋಸ್ಟ್​ನಲ್ಲಿ ರತನ್ ಟಾಟಾಗೆ ನಮನ ಸಲ್ಲಿಸಿದ ಶರ್ಮಾ, ಕೊನೆಯಲ್ಲಿ ಓಕೆ ಟಾಟಾ ಬೈ ಬೈ ಎಂದು ಉಡಾಫೆ ರೀತಿಯಲ್ಲಿ ಬರೆದಿದ್ದರು. ಇಂಟರ್ನೆಟ್​ನಲ್ಲಿ ತೀಕ್ಷ್ಣ ಟೀಕೆ ಬಂದ ಬಳಿಕ ಪೋಸ್ಟ್ ಡಿಲೀಟ್ ಮಾಡಿದ್ದಾರೆ ಅವರು.

ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ ಪೇಟಿಎಂ ಸಿಇಒ ಯಡವಟ್ಟು; ಡಿಲೀಟ್ ಆದ ಪೋಸ್ಟ್​ನಲ್ಲಿ ಶರ್ಮಾ ಬರೆದದ್ದೇನು?
ರತನ್ ಟಾಟಾ, ವಿಜಯ್ ಶೇಖರ್ ಶರ್ಮಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 11, 2024 | 4:05 PM

ಮುಂಬೈ, ಅಕ್ಟೋಬರ್ 11: ರತನ್ ಟಾಟಾ ಮೊನ್ನೆ ನಿಧನರಾಗಿದ್ದಕ್ಕೆ ದೇಶ ವಿದೇಶಗಳಿಂದ ಸಂತಾಪ, ದುಃಖ, ನೋವು ವ್ಯಕ್ತವಾಗಿದ್ದವು. ಇಡೀ ಉದ್ಯಮ ವಲಯ ಕಂಬನಿ ಮಿಡಿದಿತ್ತು. ಭಾರತದ ಕೈಗಾರಿಕೋದ್ಯಮದ ಇತಿಹಾಸದಲ್ಲೇ ರತನ್ ಟಾಟಾ ಮೇರು ವ್ಯಕ್ತಿತ್ವದವರಾಗಿದ್ದರು. ಬಹಳಷ್ಟು ಉದ್ಯಮಿಗಳು ಮತ್ತು ಆಂಟ್ರನ್ಯೂರ್​ಗಳು ರತನ್ ಟಾಟಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದರು. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ, ಓಲಾ ಸಿಇಒ ಭವೀಶ್ ಅಗರ್ವಾಲ್, ಪೀಪಲ್ ಗ್ರೂಪ್ ಸಿಇಒ ಅನುಪಮ್ ಮಿಟ್ಟಲ್ ಹಾಗೂ ಮನುಕುಮಾರ್ ಜೈನ್, ಅಶ್ನೀರ್ ಗ್ರೋವರ್ ಮೊದಲಾದ ಹಲವು ಉದ್ಯಮಿಗಳೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದರು. ಈ ವೇಳೆ, ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಕೂಡ ಸಂತಾಪ ವ್ಯಕ್ತಪಡಿಸಿದರಾದರೂ ತಪ್ಪಾದ ಭಾವ ವ್ಯಕ್ತಪಡಿಸುವ ಪದಬಳಕೆ ಮಾಡಿ ಯಡವಟ್ಟು ಮಾಡಿಕೊಂಡರು. ನೆಟ್ಟಿಗರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಶರ್ಮಾ ಅವರು ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಓಕೆ ಟಾಟಾ ಬೈ ಬೈ…

ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ರತನ್ ಟಾಟಾ ಬಗ್ಗೆ ಗೌರವ ಸೂಚಿಸಿ ಬರೆದಿದ್ದರಾದರೂ ಕೊನೆಯ ಬಳಸಿದ ಪದ ಉಡಾಫೆಯ ರೀತಿ ತೋರುತ್ತಿತ್ತು. ಅದು ಹೀಗಿದೆ ಓದಿ:

‘ಈ ಒಬ್ಬ ಶ್ರೇಷ್ಠ ವ್ಯಕ್ತಿ ಪ್ರತಿ ತಲೆಮಾರಿಗೂ ಸ್ಫೂರ್ತಿಯಾಗಿದ್ದಾರೆ. ಮುಂದಿನ ತಲೆಮಾರಿನ ಉದ್ಯಮಿಗಳಿಗೆ ಭಾರತದ ಅತ್ಯಂತ ಸರಳ ಉದ್ಯಮಿಯೊಂದಿಗೆ ಸಂವಾದ ನಡೆಸುವ ಅವಕಾಶ ಸಿಗುವುದಿಲ್ಲ. ನಿಮಗೆ ನಮನಗಳು ಸರ್. ಓಕೆ ಟಾಟಾ ಬೈ ಬೈ’ ಎಂದು ಪೇಟಿಎಂ ಸಿಇಒ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದರು.

ಇದನ್ನೂ ಓದಿ: ಟಾಟಾ ಗ್ರೂಪ್​ಗೆ ಮುಂದಿನ ವಾರಸುದಾರ ನೋಯಲ್ ಟಾಟಾ; ಟ್ರಸ್ಟ್​ಗಳ ಮಂಡಳಿಗೆ ಛೇರ್ಮನ್ ಆಗಿ ನೇಮಕ

ಇಲ್ಲಿ ಕೊನೆಯಲ್ಲಿ ಅವರು ಬರೆದ ‘ಓಕೆ ಟಾಟಾ ಬೈ ಬೈ’ ಪದ ಬಳಕೆ ಬಹಳಷ್ಟು ನೆಟ್ಟಿಗರಿಗೆ ಅಪಥ್ಯವಾಗಿತ್ತು. ಅಂತೆಯೇ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಇದರಿಂದ ಅವರು ತಮ್ಮ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಆ ನಂತರ ಅವರು ಮತ್ತೊಂದು ಪೋಸ್ಟ್ ಹಾಕಿದ್ದು, ಓಕೆ ಟಾಟಾ ಬೈ ಬೈ ಪದಬಳಕೆ ಬದಲು ‘ನಮ್ಮ ಹೃದಯದಲ್ಲಿ ನೀವು ಸದಾ ಇರುವಿರಿ’ ಎಂದು ಬರೆದು ತಪ್ಪು ಸರಿ ಮಾಡಿಕೊಂಡಿದ್ದಾರೆ.

1937ರ ಡಿಸೆಂಬರ್ 28ರಂದು ಮುಂಬೈನಲ್ಲಿ ಜನಿಸಿದ ರತನ್ ಟಾಟಾ 1991ರಿಂದ 2012ರವರೆಗೆ ಟಾಟಾ ಗ್ರೂಪ್ ಮಾಲಕ ಸಂಸ್ಥೆ ಟಾಟಾ ಸನ್ಸ್​ನ ಚೇರ್ಮನ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ನಾಯಕತ್ವದಲ್ಲಿ ಟಾಟಾ ಗ್ರೂಪ್​ನ ಹಲವಾರು ಕಂಪನಿಗಳು ಶ್ರೇಷ್ಠ ಮಟ್ಟ ತಲುಪಿವೆ. ಇವತ್ತು ಟಾಟಾ ಗ್ರೂಪ್​ನ ಲಿಸ್ಟೆಡ್ ಷೇರುಗಳ ಒಟ್ಟಾರೆ ಮಾರುಕಟ್ಟೆ ಸಂಪತ್ತು 31 ಲಕ್ಷ ಕೋಟಿ ರೂ ದಾಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?