AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPFO: ಪಿಂಚಣಿ ವೇತನದ ಮಿತಿ ರೂ. 15,000ದಿಂದ ರೂ. 21,000ಕ್ಕೆ ಹೆಚ್ಚಿಸಲು ಚಿಂತನೆ; ಇದರ ಪರಿಣಾಮ ಏನು?

ಪೆನ್ಷನ್ ಮಿತಿಯ ಪಿಎಫ್ ಅನ್ನು ಇಪಿಎಫ್​ಒದಿಂದ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ವರದಿ ಆಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

EPFO: ಪಿಂಚಣಿ ವೇತನದ ಮಿತಿ ರೂ. 15,000ದಿಂದ ರೂ. 21,000ಕ್ಕೆ ಹೆಚ್ಚಿಸಲು ಚಿಂತನೆ; ಇದರ ಪರಿಣಾಮ ಏನು?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:May 03, 2022 | 5:42 PM

Share

ಪಿಂಚಣಿಗಾಗಿ ಅಸ್ತಿತ್ವದಲ್ಲಿರುವ ವೇತನ ಮಿತಿಯು 2014ರ ಸೆಪ್ಟೆಂಬರ್​ನಿಂದ ಬದಲಾಗದೆ ಇದ್ದು, ಅದನ್ನು ಹೆಚ್ಚಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪರಿಗಣಿಸುತ್ತಿದೆ. ವರದಿಗಳ ಪ್ರಕಾರ, ಇಪಿಎಫ್‌ಒ ಪಿಂಚಣಿಗಾಗಿ ಅಸ್ತಿತ್ವದಲ್ಲಿರುವ ವೇತನ ಮಿತಿಯನ್ನು ರೂ. 15,000ದಿಂದ ರೂ. 21,000ಕ್ಕೆ ಹೆಚ್ಚಿಸಲು ಪರಿಗಣಿಸುತ್ತಿದೆ. ಉದ್ದೇಶಪೂರ್ವಕವಾಗಿ ಇಪಿಎಫ್‌ಒ ಸದಸ್ಯರು ಪಿಂಚಣಿ ವೇತನದ ಹೆಚ್ಚಳದ ಪರವಾಗಿದ್ದಾರೆ. ಪಿಂಚಣಿ ವೇತನದ ಮಿತಿಯ ಮೇಲಿನ ಕೊನೆಯ ತಿದ್ದುಪಡಿಯನ್ನು 2014ರಲ್ಲಿ ಮಾಡಲಾಯಿತು. ಆಗ ಸರ್ಕಾರವು ಪಿಎಫ್ ವೇತನದ ಮಿತಿಯನ್ನು ರೂ. 6,500ರಿಂದ ರೂ. 15,000ಕ್ಕೆ ಏರಿಸಿತು.

ಒಂದೆಡೆ, ಹೊಸ ಮಿತಿಯು ಹೆಚ್ಚಿನ ಜನರನ್ನು ವ್ಯಾಪ್ತಿಗೆ ತರುತ್ತದೆ. ಆದರೆ ಇದು ಸರ್ಕಾರಕ್ಕೆ ಹೊರೆಯಾಗುತ್ತದೆ. ಸದ್ಯ ಈ ವಿಷಯ ಸರ್ಕಾರದ ಹಸಿರು ನಿಶಾನೆಗಾಗಿ ಕಾಯುತ್ತಿದೆ. ಹೆಚ್ಚಿದ ಪಿಎಫ್ ವೇತನ ಮಿತಿಗಾಗಿ ಸರ್ಕಾರವು 6,750 ಕೋಟಿ ರೂಪಾಯಿ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ವರದಿಯಾಗಿದೆ.

ಪ್ರಸ್ತುತ ಕೊಡುಗೆಯ ದರಗಳ ಪ್ರಕಾರ, ಅಸ್ತಿತ್ವದಲ್ಲಿರುವ ಇಪಿಎಸ್ ಸದಸ್ಯ (01-09-2014ರಂತೆ) ಅವರ ಪಿಂಚಣಿ ಕೊಡುಗೆಯ ಹಿಂದಿನ ಇಪಿಎಸ್ ವೇತನದ ಮಿತಿಯನ್ನು 01-09-2014ರಿಂದ ರೂ. 15,000ಕ್ಕಿಂತ ಹೆಚ್ಚಿನ ಕೊಡುಗೆಗೆ ರೂ. 6500ರ ಮೇಲಿನ ಕೊಡುಗೆಗೆ ಪಾವತಿಸಲಾಗಿದೆ/ಅವರು ಹೊಸ ಸಮ್ಮತಿಯನ್ನು ನೀಡಬೇಕು ಮತ್ತು ರೂ. 15,000ಕ್ಕಿಂತ ಹೆಚ್ಚಿನ ವೇತನದ ಮೇಲೆ ಶೇ 1.16ರ ಮೊತ್ತವನ್ನು ಉದ್ಯೋಗದಾತರ ಮೂಲಕ ಪಿಂಚಣಿ ನಿಧಿಗೆ (A/C No 10) ಕೊಡುಗೆ ನೀಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: New Labour Law: ಕೆಲಸದ ಸಮಯ, ಕೈಗೆ ಬರುವ ಸಂಬಳ, ಪಿಎಫ್​ ಹೀಗೆ ಜುಲೈ 1ರಿಂದ ನಿರೀಕ್ಷಿಸಿ ಹಲವು ಬದಲಾವಣೆ

Published On - 5:42 pm, Tue, 3 May 22

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್