ಭಾರತದ 14 ಮಹಾದಾನಿಗಳಲ್ಲಿ ಕನ್ನಡಿಗರೇ ಹೆಚ್ಚು; ಇಲ್ಲಿದೆ ಹುರುನ್ ಫಿಲಾಂತ್ರೋಪಿ ಪಟ್ಟಿ ಮುಖ್ಯಾಂಶ

EdelGive Hurun India Philanthropy List 2023: ಎಡೆಲ್​ಗಿವ್ ಹುರುನ್ ಇಂಡಿಯಾ ಫಿಲಾಂತ್ರೋಪಿ ಪಟ್ಟಿಯಲ್ಲಿ ಬಹಳಷ್ಟು ಕನ್ನಡಿಗರು ಮತ್ತು ಕರುನಾಡಿಗರು ಇದ್ದಾರೆ. ವಿಪ್ರೋದ ಅಜೀಮ್ ಪ್ರೇಮ್​ಜಿ, ನಂದನ್ ನಿಲೇಕಣಿ, ರೋಹಿಣಿ ನಿಲೇಕಣಿ, ನಿಖಿಲ್ ಕಾಮತ್, ಕಿರಣ್ ಮಜುಮ್ದಾರ್ ಶಾ, ನಿತಿನ್ ಕಾಮತ್ ಮೊದಲಾದವರು ಕರ್ನಾಟಕ ದಾನ ಶೂರರೆನಿಸಿದ್ದಾರೆ.

ಭಾರತದ 14 ಮಹಾದಾನಿಗಳಲ್ಲಿ ಕನ್ನಡಿಗರೇ ಹೆಚ್ಚು; ಇಲ್ಲಿದೆ ಹುರುನ್ ಫಿಲಾಂತ್ರೋಪಿ ಪಟ್ಟಿ ಮುಖ್ಯಾಂಶ
ನಿಖಿಲ್ ಕಾಮತ್
Follow us
|

Updated on: Nov 03, 2023 | 12:30 PM

ಎಡೆಲ್​ಗಿವ್ ಹುರುನ್ ಇಂಡಿಯಾ ಫಿಲಾಂತ್ರೋಪಿ ಪಟ್ಟಿ (EdelGive Hurun India Philanthropy List 2023) ಪ್ರಕಟವಾಗಿದ್ದು, ವರ್ಷದಿಂದ ವರ್ಷಕ್ಕೆ ದಾನಶೂರ ಭಾರತೀಯರ ಪಟ್ಟಿ ಬೆಳೆಯುತ್ತಾ ಹೋಗಿದೆ. 2022-23ರ ಒಂದು ವರ್ಷದಲ್ಲಿ ನೂರಕ್ಕೂ ಹೆಚ್ಚು ಕೋಟಿ ರೂ ದಾನ ಮಾಡಿದವರ ಸಂಖ್ಯೆ 14 ಮುಟ್ಟಿದೆ. ಹೆಚ್​ಸಿಎಲ್ ಟೆಕ್ನಾಲಜೀಸ್​ನ ಶಿವ್ ನಾದರ್ (Shiv Nadar) ಅವರು ಸತತ ಮೂರು ವರ್ಷಗಳಿಂದ ಭಾರತದ ಅತಿ ಮಹಾದಾನಿ (Most Generous Philanthropist) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಮಾಡಿದ ದಾನವನ್ನು ದಿನದ ಲೆಕ್ಕದಲ್ಲಿ ಮುಂದಿಟ್ಟರೆ ದಿನಕ್ಕೆ 5 ಕೋಟಿ ರೂಗೂ ಹೆಚ್ಚಾಗುತ್ತದೆ. ಒಂದು ವರ್ಷದಲ್ಲಿ ಶಿವ್ ನಾದರ್ ಅವರು 2,042 ಕೋಟಿ ರೂ ದಾನ ಮಾಡಿದ್ದಾರೆ. ಎಡೆಲ್​ಗಿವ್ ಹುರುನ್ ಇಂಡಿಯಾ ಫಿಲಾಂತ್ರೋಪಿ ಪಟ್ಟಿ 2023 ಯಲ್ಲಿ ಈ ಮಾಹಿತಿ ಇದೆ.

ಕರ್ನಾಟಕದವರೂ ದಾನಕ್ಕೆ ಸೈ…

ಎಡೆಲ್​ಗಿವ್ ಹುರುನ್ ಇಂಡಿಯಾ ಫಿಲಾಂತ್ರೋಪಿ ಪಟ್ಟಿಯಲ್ಲಿ ಬಹಳಷ್ಟು ಕನ್ನಡಿಗರು ಮತ್ತು ಕರುನಾಡಿಗರು ಇದ್ದಾರೆ. ವಿಪ್ರೋದ ಅಜೀಮ್ ಪ್ರೇಮ್​ಜಿ, ನಂದನ್ ನಿಲೇಕಣಿ, ರೋಹಿಣಿ ನಿಲೇಕಣಿ, ನಿಖಿಲ್ ಕಾಮತ್, ಕಿರಣ್ ಮಜುಮ್ದಾರ್ ಶಾ, ನಿತಿನ್ ಕಾಮತ್ ಮೊದಲಾದವರು ಕರ್ನಾಟಕ ದಾನ ಶೂರರೆನಿಸಿದ್ದಾರೆ.

ಅಜೀಮ್ ಪ್ರೇಮ್​ಜಿ ಮೊದಲಿಂದಲೂ ದಾನಗಳಿಗೆ ಎತ್ತಿದ ಕೈ. ಅವರು 2022-23ರ ಹಣಕಾಸು ವರ್ಷದಲ್ಲಿ ಒಟ್ಟು 1,774 ಕೋಟಿ ರೂ ದಾನ ಮಾಡಿದ್ದಾರೆ. ರೋಹಿಣಿ ನಿಲೇಕಣಿ ಅತಿಹೆಚ್ಚು ದಾನ ಮಾಡಿದ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಒಂದು ವರ್ಷದಲ್ಲಿ ಮಾಡಿದ ದಾನ 170 ಕೋಟಿ ರೂ. ನಂದನ್ ನಿಲೇಕಣಿ 189 ಕೋಟಿ ರೂ ದಾನ ಮಾಡಿದ್ದಾರೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಬೆಲೆ ಏರಿಕೆ; ವಿಶ್ವನಗರಿಗಳಲ್ಲಿ ಬೆಂಗಳೂರು 17ನೇ ಸ್ಥಾನದಲ್ಲಿ; ಟಾಪ್-5ನಲ್ಲಿ ಮುಂಬೈ

ಒಟ್ಟು 14 ವ್ಯಕ್ತಿಗಳು ಒಂದು ವರ್ಷದಲ್ಲಿ 100 ಕೋಟಿ ರೂಗೂ ಹೆಚ್ಚು ದಾನ ಮಾಡಿದ್ದಾರೆ. 50 ಕೋಟಿ ರೂಗೂ ಹೆಚ್ಚು ದಾನ ಮಾಡಿದ ವ್ಯಕ್ತಿಗಳ ಸಂಖ್ಯೆ 24 ಇದೆ. 20 ಕೋಟಿಗೂ ಹೆಚ್ಚು ದಾನ ಮಾಡಿದವರು 47 ಮಂದಿ. 5 ಕೋಟಿ ರೂಗೂ ಹೆಚ್ಚು ದಾನ ಮಾಡಿದವರ ಸಂಖ್ಯೆ 119 ಇದೆ. ಹಿಂದಿನ ವರ್ಷಕ್ಕಿಂತ ಈ ವರ್ಷ ದಾನಿಗಳ ಸಂಖ್ಯೆ ಬಹಳ ಹೆಚ್ಚಾಗಿದೆ.

ಪ್ರಮುಖ ದಾನಿಗಳು

  • ಶಿವ್ ನಾದರ್: 2,042 ಕೋಟಿ ರೂ
  • ಅಜೀಮ್ ಪ್ರೇಮ್​ಜಿ: 1,774 ಕೋಟಿ ರೂ
  • ಮುಕೇಶ್ ಅಂಬಾನಿ: 376 ಕೋಟಿ ರೂ
  • ಗೌತಮ್ ಅದಾನಿ ಮತ್ತು ಕುಟುಂಬ: 285 ಕೋಟಿ ರೂ
  • ನಂದನ್ ನಿಲೇಕಣಿ: 189 ಕೋಟಿ ರೂ
  • ರೋಹಿಣಿ ನಿಲೇಕಣಿ: 170 ಕೋಟಿ ರೂ
  • ನಿಖಿಲ್ ಕಾಮತ್: 110 ಕೋಟಿ ರೂ

ಇದನ್ನೂ ಓದಿ: ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯವೀರ ತ್ರಿಮೂರ್ತಿಗಳನ್ನು ಹೆಸರಿಸಿದ ಇನ್ಫೋಸಿಸ್ ನಾರಾಯಣಮೂರ್ತಿ

ಕನ್ನಡಿಗರಾದ 38 ವರ್ಷದ ನಿಖಿಲ್ ಕಾಮತ್ ಅತ್ಯಂತ ಕಿರಿಯ ವಯಸ್ಸಿನ ಮಹಾದಾನಿ ಎನಿಸಿದ್ದಾರೆ. ಸುಮಾರು 30,000 ಕೋಟಿ ರೂ ಮೊತ್ತದ ಸಂಪತ್ತು ಹೊಂದಿರುವ ನಿಖಿಲ್ ಕಾಮತ್ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ತತ್ವ ಅಳವಡಿಸಿಕೊಂಡವರು. ದಾನಕ್ಕೆ ಉತ್ತೇಜಿಸಲೆಂದೇ ಅವರೊಂದು ಗುಂಪು ರಚಿಸಿದ್ದು, ಯುವ ಉದ್ಯಮಿಗಳನ್ನು ಈ ಗುಂಪಿಗೆ ಸೇರ್ಪಡೆಗೊಳಿಸಿದ್ದಾರೆ. ಅವರ ಆದಾಯದ ಶೇ. 25ರಷ್ಟು ಹಣವನ್ನು ದಾನ ಧರ್ಮ, ಸಮಾಜಸೇವೆಗಳಿಗೆ ಖರ್ಚು ಮಾಡುವಂತೆ ಪ್ರೇರೇಪಿಸುತ್ತಾರೆ. ಅವರ ಅಣ್ಣ ನಿತಿನ್ ಕಾಮತ್ ಕೂಡ ಹವಾಮಾನ ಸಂಬಂಧಿತ ಚಟುವಟಿಕೆಗಳಿಗೆ ಹಣ ನೀಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ