Bank Nominee: ನಾಮಿನಿ ಯಾಕೆ ಬೇಕು? ಹತ್ತು ನಿಮಿಷ ಕೆಲಸಕ್ಕೆ ಹತ್ತಾರು ದಿನ ಅಲೆದಾಡಬೇಕಾದೀತು ಹುಷಾರ್

Importance of Nomination: ಬ್ಯಾಂಕ್ ಖಾತೆಯಲ್ಲಿ ಹಣ ಎಷ್ಟೇ ಇರಲಿ, ಆದರೆ, ನಾಮಿನಿ ಹೆಸರಿಸುವುದನ್ನು ಖಂಡಿತ ಮರೆಯದಿರಿ. ನಿಮ್ಮ ಹಣ ಅರ್ಹ ವಾರಸುದಾರರಿಗೆ ತಲುಪಲು ನಾಮಿನಿ ಬೇಕು. ನಾಮಿನಿ ಎಂದಾಕ್ಷಣ ಹಣಕ್ಕೆ ವಾರಸುದಾರನೆಂದಲ್ಲ. ನೀವು ಸತ್ತ ಬಳಿಕ ನಿಮ್ಮ ಹಣ ಹಂಚಿಕೆ ನಿರ್ವಹಿಸುವ ನಂಬಿಕಸ್ಥರಾಗಿರಬೇಕು. ನಾಮಿನಿ ಇಲ್ಲದಿದ್ದರೆ ವಾರಸುದಾರರು ಹಣ ಪಡೆಯಲು ಸಾಕಷ್ಟು ಯಾತನಾತ್ಮಕ ಎನಿಸುವ ಕಾನೂನು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

Bank Nominee: ನಾಮಿನಿ ಯಾಕೆ ಬೇಕು? ಹತ್ತು ನಿಮಿಷ ಕೆಲಸಕ್ಕೆ ಹತ್ತಾರು ದಿನ ಅಲೆದಾಡಬೇಕಾದೀತು ಹುಷಾರ್
ನಾಮಿನಿ
Follow us
|

Updated on:Dec 12, 2023 | 4:49 PM

ಬ್ಯಾಂಕ್ ಖಾತೆಯನ್ನೂ ಒಳಗೊಂಡಂತೆ ಯಾವುದೇ ಹಣಕಾಸು ಯೋಜನೆಯಲ್ಲೂ ನಾಮಿನಿ (bank nominee) ಹೆಸರಿಸುವ ಆಯ್ಕೆ ಇರುತ್ತದೆ. ಕೆಲ ಕಡೆ ನಾಮಿನಿ ಹೆಸರಿಸುವುದು ಕಡ್ಡಾಯ ಇರುತ್ತದೆ. ಮತ್ತೆ ಕೆಲ ಕಡೆ ಐಚ್ಛಿಕ. ಸಾಕಷ್ಟು ಸಂದರ್ಭದಲ್ಲಿ ಬ್ಯಾಂಕ್ ಖಾತೆದಾರರು ಬೇರೆ ಬೇರೆ ಕಾರಣಕ್ಕೆ ನಾಮಿನಿ ಹೆಸರಿಸಿರುವುದಿಲ್ಲ. ಅಥವಾ ನಾಮಿನಿ ಅಪ್​ಡೇಟ್ ಮಾಡಿರುವುದಿಲ್ಲ. ಇದರಿಂದ ಖಾತೆದಾರ ಮೃತಪಟ್ಟ ಬಳಿಕ ಅವರ ಹಣ ವರ್ಗಾವಣೆ ಕಾರ್ಯ ಕಷ್ಟವಾಗುತ್ತದೆ.

ನಾಮಿನಿ ಯಾಕೆ ಬೇಕು?

ಖಾತೆದಾರ ಮೃತಪಟ್ಟಾಗ ಅವರ ಹಣ ಯಾರಿಗೆ ಸೇರಬೇಕು ಎಂಬುದನ್ನು ನಿರ್ಧರಿಸುವ ಕಾರ್ಯಕ್ಕೆ ನಾಮಿನಿ ಬೇಕು. ನಾಮಿನಿ ಎಂದರೆ ವಾರಸುದಾರರೇ ಎಂದರ್ಥವಲ್ಲ. ತಮ್ಮ ಸಾವಿನ ಬಳಿಕ ಹಣವನ್ನು ಅರ್ಹ ವಾರಸುದಾರರಿಗೆ ಹಂಚಲು ತಾನು ನಂಬುವ ವ್ಯಕ್ತಿಯನ್ನು ನಾಮಿನಿಯಾಗಿ ಹೆಸರಿಸಬಹುದು. ಆ ನಾಮಿನಿಯೇ ವಾರಸುದಾರರಾಗಿರಲೂ ಬಹುದು.

ಇದನ್ನೂ ಓದಿ: ಪವರ್ ಆಫ್ ಕಾಂಪೌಂಡಿಂಗ್: ನಿಮ್ಮ ಸಂಪತ್ತು ವೃದ್ಧಿಸುವ ವಿಸ್ಮಯಕಾರಿ ಹೂಡಿಕೆ ಅಂಶ

ನಾಮಿನಿ ಹೆಸರಿಸದೇ ಇದ್ದರೆ ಏನಾಗುತ್ತದೆ?

ಒಂದು ಬ್ಯಾಂಕ್ ಖಾತೆಗೆ ನಾಮಿನಿಯೇ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆ ಖಾತೆಯಲ್ಲಿರುವ ಹಣ ಪಡೆಯಲು ವಾರಸುದಾರರು ಕಷ್ಟಪಡಬೇಕಾಗುತ್ತದೆ. ನಾಮಿನಿ ಇದ್ದಾಗ ಅವರು ಯಾರಿಗೆ ಹಣ ಹೋಗಬೇಕು ಎಂಬುದನ್ನು ಬ್ಯಾಂಕ್​ಗೆ ತಿಳಿಸಿ ಹಣ ವರ್ಗಾವಣೆ ಕಾರ್ಯವನ್ನು ಸುಲಭವಾಗಿಸುತ್ತಾರೆ.

ನಾಮಿನಿ ಇಲ್ಲದಿದ್ದರೆ ಮೃತ ಖಾತೆದಾರನ ಬ್ಯಾಂಕ್ ಹಣಕ್ಕಾಗಿ ವಾರಸುದಾರರು ಹರಸಾಹಸ ನಡೆಸಬೇಕಾಗುತ್ತದೆ. ವಾರಸುದಾರ ಪ್ರಮಾಣಪತ್ರ ಸೇರಿದಂತೆ ವಿವಿಧ ಸರ್ಟಿಫಿಕೇಟ್, ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಪತ್ರಿಕೆಗಳಲ್ಲಿ ನೋಟೀಸ್ ಮುದ್ರಿಸಬೇಕಾಗುತ್ತದೆ. ವಿವಾದಾತ್ಮಕ ಪ್ರಕರಣಗಳಲ್ಲಿ ವಾರಸುದಾರರು ಪ್ರೊಬೇಟ್ ಪಡೆಯಬೇಕಾಗುತ್ತದೆ. ಕೆಲವೊಮ್ಮೆ ಇಂಥ ಪ್ರೊಬೇಟ್​ಗಳನ್ನು ಪಡೆಯಲು 50,000 ರೂವರೆಗೂ ವೆಚ್ಚ ಆಗಬಹುದು.

ಇದನ್ನೂ ಓದಿ: Money Matters: ಒಟ್ಟಿಗೆ ಹಣ ಬಂದರೆ ಸಾಲ ತೀರಿಸಬೇಕಾ? ಹೂಡಿಕೆ ಮಾಡಬೇಕಾ? ಯಾವ ನಿರ್ಧಾರ ಉತ್ತಮ?

ಅದೇ ನಾಮಿನಿಯನ್ನು ಹೆಸರಿಸಲಾಗಿದ್ದರೆ ಹಣ ವರ್ಗಾವಣೆ ಪ್ರಕ್ರಿಯೆ ಕೇವಲ 10 ನಿಮಿಷದಲ್ಲಿ ಸಮಾಪ್ತಿಗೊಳ್ಳುತ್ತದೆ. ಹೀಗಾಗಿ, ನೀವು ಬ್ಯಾಂಕ್ ಖಾತೆ ಹೊಂದಿದ್ದರೆ ನಾಮಿನಿ ಹೆಸರಿಸುವುದನ್ನು ಮರೆಯದಿರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Tue, 12 December 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ