AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Nominee: ನಾಮಿನಿ ಯಾಕೆ ಬೇಕು? ಹತ್ತು ನಿಮಿಷ ಕೆಲಸಕ್ಕೆ ಹತ್ತಾರು ದಿನ ಅಲೆದಾಡಬೇಕಾದೀತು ಹುಷಾರ್

Importance of Nomination: ಬ್ಯಾಂಕ್ ಖಾತೆಯಲ್ಲಿ ಹಣ ಎಷ್ಟೇ ಇರಲಿ, ಆದರೆ, ನಾಮಿನಿ ಹೆಸರಿಸುವುದನ್ನು ಖಂಡಿತ ಮರೆಯದಿರಿ. ನಿಮ್ಮ ಹಣ ಅರ್ಹ ವಾರಸುದಾರರಿಗೆ ತಲುಪಲು ನಾಮಿನಿ ಬೇಕು. ನಾಮಿನಿ ಎಂದಾಕ್ಷಣ ಹಣಕ್ಕೆ ವಾರಸುದಾರನೆಂದಲ್ಲ. ನೀವು ಸತ್ತ ಬಳಿಕ ನಿಮ್ಮ ಹಣ ಹಂಚಿಕೆ ನಿರ್ವಹಿಸುವ ನಂಬಿಕಸ್ಥರಾಗಿರಬೇಕು. ನಾಮಿನಿ ಇಲ್ಲದಿದ್ದರೆ ವಾರಸುದಾರರು ಹಣ ಪಡೆಯಲು ಸಾಕಷ್ಟು ಯಾತನಾತ್ಮಕ ಎನಿಸುವ ಕಾನೂನು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

Bank Nominee: ನಾಮಿನಿ ಯಾಕೆ ಬೇಕು? ಹತ್ತು ನಿಮಿಷ ಕೆಲಸಕ್ಕೆ ಹತ್ತಾರು ದಿನ ಅಲೆದಾಡಬೇಕಾದೀತು ಹುಷಾರ್
ನಾಮಿನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 12, 2023 | 4:49 PM

Share

ಬ್ಯಾಂಕ್ ಖಾತೆಯನ್ನೂ ಒಳಗೊಂಡಂತೆ ಯಾವುದೇ ಹಣಕಾಸು ಯೋಜನೆಯಲ್ಲೂ ನಾಮಿನಿ (bank nominee) ಹೆಸರಿಸುವ ಆಯ್ಕೆ ಇರುತ್ತದೆ. ಕೆಲ ಕಡೆ ನಾಮಿನಿ ಹೆಸರಿಸುವುದು ಕಡ್ಡಾಯ ಇರುತ್ತದೆ. ಮತ್ತೆ ಕೆಲ ಕಡೆ ಐಚ್ಛಿಕ. ಸಾಕಷ್ಟು ಸಂದರ್ಭದಲ್ಲಿ ಬ್ಯಾಂಕ್ ಖಾತೆದಾರರು ಬೇರೆ ಬೇರೆ ಕಾರಣಕ್ಕೆ ನಾಮಿನಿ ಹೆಸರಿಸಿರುವುದಿಲ್ಲ. ಅಥವಾ ನಾಮಿನಿ ಅಪ್​ಡೇಟ್ ಮಾಡಿರುವುದಿಲ್ಲ. ಇದರಿಂದ ಖಾತೆದಾರ ಮೃತಪಟ್ಟ ಬಳಿಕ ಅವರ ಹಣ ವರ್ಗಾವಣೆ ಕಾರ್ಯ ಕಷ್ಟವಾಗುತ್ತದೆ.

ನಾಮಿನಿ ಯಾಕೆ ಬೇಕು?

ಖಾತೆದಾರ ಮೃತಪಟ್ಟಾಗ ಅವರ ಹಣ ಯಾರಿಗೆ ಸೇರಬೇಕು ಎಂಬುದನ್ನು ನಿರ್ಧರಿಸುವ ಕಾರ್ಯಕ್ಕೆ ನಾಮಿನಿ ಬೇಕು. ನಾಮಿನಿ ಎಂದರೆ ವಾರಸುದಾರರೇ ಎಂದರ್ಥವಲ್ಲ. ತಮ್ಮ ಸಾವಿನ ಬಳಿಕ ಹಣವನ್ನು ಅರ್ಹ ವಾರಸುದಾರರಿಗೆ ಹಂಚಲು ತಾನು ನಂಬುವ ವ್ಯಕ್ತಿಯನ್ನು ನಾಮಿನಿಯಾಗಿ ಹೆಸರಿಸಬಹುದು. ಆ ನಾಮಿನಿಯೇ ವಾರಸುದಾರರಾಗಿರಲೂ ಬಹುದು.

ಇದನ್ನೂ ಓದಿ: ಪವರ್ ಆಫ್ ಕಾಂಪೌಂಡಿಂಗ್: ನಿಮ್ಮ ಸಂಪತ್ತು ವೃದ್ಧಿಸುವ ವಿಸ್ಮಯಕಾರಿ ಹೂಡಿಕೆ ಅಂಶ

ನಾಮಿನಿ ಹೆಸರಿಸದೇ ಇದ್ದರೆ ಏನಾಗುತ್ತದೆ?

ಒಂದು ಬ್ಯಾಂಕ್ ಖಾತೆಗೆ ನಾಮಿನಿಯೇ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆ ಖಾತೆಯಲ್ಲಿರುವ ಹಣ ಪಡೆಯಲು ವಾರಸುದಾರರು ಕಷ್ಟಪಡಬೇಕಾಗುತ್ತದೆ. ನಾಮಿನಿ ಇದ್ದಾಗ ಅವರು ಯಾರಿಗೆ ಹಣ ಹೋಗಬೇಕು ಎಂಬುದನ್ನು ಬ್ಯಾಂಕ್​ಗೆ ತಿಳಿಸಿ ಹಣ ವರ್ಗಾವಣೆ ಕಾರ್ಯವನ್ನು ಸುಲಭವಾಗಿಸುತ್ತಾರೆ.

ನಾಮಿನಿ ಇಲ್ಲದಿದ್ದರೆ ಮೃತ ಖಾತೆದಾರನ ಬ್ಯಾಂಕ್ ಹಣಕ್ಕಾಗಿ ವಾರಸುದಾರರು ಹರಸಾಹಸ ನಡೆಸಬೇಕಾಗುತ್ತದೆ. ವಾರಸುದಾರ ಪ್ರಮಾಣಪತ್ರ ಸೇರಿದಂತೆ ವಿವಿಧ ಸರ್ಟಿಫಿಕೇಟ್, ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಪತ್ರಿಕೆಗಳಲ್ಲಿ ನೋಟೀಸ್ ಮುದ್ರಿಸಬೇಕಾಗುತ್ತದೆ. ವಿವಾದಾತ್ಮಕ ಪ್ರಕರಣಗಳಲ್ಲಿ ವಾರಸುದಾರರು ಪ್ರೊಬೇಟ್ ಪಡೆಯಬೇಕಾಗುತ್ತದೆ. ಕೆಲವೊಮ್ಮೆ ಇಂಥ ಪ್ರೊಬೇಟ್​ಗಳನ್ನು ಪಡೆಯಲು 50,000 ರೂವರೆಗೂ ವೆಚ್ಚ ಆಗಬಹುದು.

ಇದನ್ನೂ ಓದಿ: Money Matters: ಒಟ್ಟಿಗೆ ಹಣ ಬಂದರೆ ಸಾಲ ತೀರಿಸಬೇಕಾ? ಹೂಡಿಕೆ ಮಾಡಬೇಕಾ? ಯಾವ ನಿರ್ಧಾರ ಉತ್ತಮ?

ಅದೇ ನಾಮಿನಿಯನ್ನು ಹೆಸರಿಸಲಾಗಿದ್ದರೆ ಹಣ ವರ್ಗಾವಣೆ ಪ್ರಕ್ರಿಯೆ ಕೇವಲ 10 ನಿಮಿಷದಲ್ಲಿ ಸಮಾಪ್ತಿಗೊಳ್ಳುತ್ತದೆ. ಹೀಗಾಗಿ, ನೀವು ಬ್ಯಾಂಕ್ ಖಾತೆ ಹೊಂದಿದ್ದರೆ ನಾಮಿನಿ ಹೆಸರಿಸುವುದನ್ನು ಮರೆಯದಿರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Tue, 12 December 23

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!