AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​ಎಎಲ್ ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿಯಾ? ಸರ್ಕಾರಿ ಷೇರೆಂದರೆ ಮೂಗುಮುರಿಯುತ್ತಿದ್ದವರ ಮುಖ ಈಗ ಎಚ್​ಎಲ್​ಎಲ್​ನತ್ತ

HAL Super Stock: ನವೆಂಬರ್ 10ರಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆಯ ಷೇರುಬೆಲೆ 2,110.95 ರೂಗೆ ಮಟ್ಟಕ್ಕೆ ಹೋಗಿತ್ತು. ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಅದರ ನಿವ್ವಳ ಲಾಭ 1,236 ಕೋಟಿ ರೂಗೆ ಏರಿತ್ತು. ಹಾಗೆಯೇ, ವಿಶ್ವದ ಅತಿದೊಡ್ಡ ವಿಮಾನ ತಯಾರಿಕಾ ಸಂಸ್ಥೆ ಏರ್​ಬಸ್​ನ ಎ-320 ವಿಮಾನದ ಎಂಆರ್​ಒ ಘಟಕ ಸ್ಥಾಪನೆಗೆ ಎಚ್​ಎಎಲ್ ಒಪ್ಪಂದ ಮಾಡಿಕೊಂಡಿತು. ಈ ಬೆಳವಣಿಗೆಗಳು ಎಚ್​ಎಎಲ್ ಷೇರಿಗೆ ಇದ್ದ ಡಿಮ್ಯಾಂಡ್ ಅನ್ನು ಇನ್ನಷ್ಟು ಹೆಚ್ಚಿಸಿವೆ.

ಎಚ್​ಎಎಲ್ ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿಯಾ? ಸರ್ಕಾರಿ ಷೇರೆಂದರೆ ಮೂಗುಮುರಿಯುತ್ತಿದ್ದವರ ಮುಖ ಈಗ ಎಚ್​ಎಲ್​ಎಲ್​ನತ್ತ
ಎಚ್​ಎಎಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2023 | 11:36 AM

Share

ಷೇರು ಮಾರುಕಟ್ಟೆಯಲ್ಲಿ ಬಹಳಷ್ಟು ಪಳಗಿದ ಹೂಡಿಕೆದಾರರು ಸರ್ಕಾರಿ ಸಂಸ್ಥೆಗಳ ಷೇರೆಂದರೆ (PSU sector stocks) ಮೂಗು ಮುರಿಯುವುದುಂಟು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಕಾರ್ಯನಿರ್ವಹಣೆ ಬಗ್ಗೆ ಇರುವ ಅಸಮಾಧಾನವು ಇದಕ್ಕೆ ಕಾರಣ. ಐದಾರು ವರ್ಷದ ಹಿಂದೆ ಷೇರುಪೇಟೆಗೆ ಅಡಿ ಇಟ್ಟ ಎಚ್​ಎಎಲ್ ಸಂಸ್ಥೆ (HAL- Hindustan Aeronautics Ltd) ಬಗ್ಗೆಯೂ ಹಲವರು ಅನುಮಾನದ ದೃಷ್ಟಿ ನೆಟ್ಟಿದ್ದು ಹೌದು. ಆದರೆ, ಈಗ ಎಲ್ಲರ ನಿರೀಕ್ಷೆಮೀರಿ ಎಚ್​ಎಎಲ್ ಗರಿಗೆದರಿದೆ. 2018ರ ಮಾರ್ಚ್​ನಲ್ಲಿ ಪದಾರ್ಪಣೆಯಾದಂದಿನಿಂದ ಇಲ್ಲಿಯವರೆಗೆ ಐದೂವರೆ ವರ್ಷದಲ್ಲಿ ಎಚ್​ಎಎಲ್ ಷೇರು ಶೇ. 262ರಷ್ಟು ಬೆಳೆದಿದೆ.

ನವೆಂಬರ್ 10ರಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆಯ ಷೇರುಬೆಲೆ 2,110.95 ರೂಗೆ ಮಟ್ಟಕ್ಕೆ ಹೋಗಿತ್ತು. ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಅದರ ನಿವ್ವಳ ಲಾಭ 1,236 ಕೋಟಿ ರೂಗೆ ಏರಿತ್ತು. ಹಾಗೆಯೇ, ವಿಶ್ವದ ಅತಿದೊಡ್ಡ ವಿಮಾನ ತಯಾರಿಕಾ ಸಂಸ್ಥೆ ಏರ್​ಬಸ್​ನ ಎ-320 ವಿಮಾನದ ಎಂಆರ್​ಒ ಘಟಕ ಸ್ಥಾಪನೆಗೆ ಎಚ್​ಎಎಲ್ ಒಪ್ಪಂದ ಮಾಡಿಕೊಂಡಿತು. ಈ ಬೆಳವಣಿಗೆಗಳು ಎಚ್​ಎಲ್ ಷೇರಿಗೆ ಇದ್ದ ಡಿಮ್ಯಾಂಡ್ ಅನ್ನು ಇನ್ನಷ್ಟು ಹೆಚ್ಚಿಸಿವೆ.

ಇದನ್ನೂ ಓದಿ: ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?

ರಕ್ಷಣಾ ವಲಯಕ್ಕೆ ಸರ್ಕಾರ ಕೊಟ್ಟಿರುವ ಒತ್ತು ಎಚ್​ಎಎಲ್​ಗೆ ವರದಾನ

ರಕ್ಷಣಾ ಕ್ಷೇತ್ರದಲ್ಲಿ ಎಚ್​ಎಎಲ್ ಹಳೆಯ ಹುಲಿ. ಎಚ್​ಎಎಲ್ ಅನ್ನು ಮೂಲೆಗುಂಪು ಮಾಡಿ ಖಾಸಗಿ ವಲಯಕ್ಕೆ ಸರ್ಕಾರ ಪ್ರಾಮುಖ್ಯತೆ ಕೊಡುತ್ತಿದೆ ಎಂದು ಕೆಲ ವರ್ಷಗಳ ಹಿಂದೆ ಆರೋಪ ಇತ್ತು. ಆದರೆ, ಇದೀಗ ಎಚ್​ಎಎಲ್ ಸಾಕಷ್ಟು ಒಪ್ಪಂದಗಳನ್ನು ಗಿಟ್ಟಿಸಿದೆ.

ಸರ್ಕಾರ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು, ಅದರ ಫಲ ಎಚ್​ಎಎಲ್​ಗೆ ಹೆಚ್ಚು ಸಿಗುತ್ತಿದೆ. ಎಚ್​ಎಎಲ್ ನಿರ್ಮಿತ ಯುದ್ಧವಿಮಾನಗಳನ್ನು ವಿದೇಶಗಳಿಗೂ ರಫ್ತು ಮಾಡಲು ಮುಂದಲಾಗಿದೆ. ಈ ಎಲ್ಲಾ ಕಾರಣದಿಂದ ಎಚ್​ಎಎಲ್ ಸಂಸ್ಥೆ ಮುಂದಿನ ಹಲವು ವರ್ಷಗಳ ಕಾಲ ಸಾಕಷ್ಟು ಯೋಜನೆಗಳನ್ನು ನಿರ್ವಹಿಸಲಿರುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ: HAL Share: ಎಚ್​ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್​ಎಎಲ್ ಷೇರು

ಎಚ್​ಎಎಲ್ ಚಿನ್ನದ ಮೊಟ್ಟೆ ಇಡುವ ಕೋಳಿ…

ಎಚ್​ಎಎಲ್ ಸಂಸ್ಥೆ ಕಳೆದ ಒಂದು ವರ್ಷದಲ್ಲಿ ಶೇ. 66ರಷ್ಟು ಬೆಳೆದಿದೆ. ಐದೂವರೆ ವರ್ಷದಲ್ಲಿ ಶೇ. 262ರಷ್ಟು ಹೆಚ್ಚಿದೆ. ಈ ಓಟ ಇಲ್ಲಿಗೇ ನಿಲ್ಲುವಂಥದ್ದಲ್ಲ. ಹೂಡಿಕೆ ತಜ್ಞ ಕುಶ್ ಬೋಹ್ರ ಅವರ ಪ್ರಕಾರ ಎಚ್​ಎಎಲ್ ಷೇರಿನ ವೇಗದ ಓಟ ಇನ್ನೂ ಬಹಳ ಕಾಲ ಇರಲಿದೆ. ಸರ್ಕಾರ ಕೂಡ ಡಿಫೆನ್ಸ್ ಸೆಕ್ಟರ್​ಗೆ ಒತ್ತು ಕೊಡುತ್ತಿರುವುದರಿಂದ ಎಚ್​ಎಎಲ್ ದೀರ್ಘಾವಧಿಯಲ್ಲಿ ಬಹಳ ಬೆಳೆಯಲಿರುವ ಸಂಸ್ಥೆಯಾಗಿದೆ. ಸದ್ಯ ಎಚ್​ಎಎಲ್ ಷೇರಿನ ಬೆಲೆ 2,056 ರೂ ಇದೆ. 2020ರ ಡಿಸೆಂಬರ್ ತಿಂಗಳಲ್ಲಿ ಇದರ ಬೆಲೆ ಕೇವಲ 343 ರೂ ಇತ್ತು. ಮೂರು ವರ್ಷದಲ್ಲಿ ಅಗಾಧವಾಗಿ ಬೆಳೆದಿರುವ ಎಚ್​ಎಎಲ್ ಷೇರುಬೆಲೆ ಮುಂದಿನ ದೀಪಾವಳಿಗೆ 2,500 ರೂ ದಾಟುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!