AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​ಎಎಲ್ ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿಯಾ? ಸರ್ಕಾರಿ ಷೇರೆಂದರೆ ಮೂಗುಮುರಿಯುತ್ತಿದ್ದವರ ಮುಖ ಈಗ ಎಚ್​ಎಲ್​ಎಲ್​ನತ್ತ

HAL Super Stock: ನವೆಂಬರ್ 10ರಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆಯ ಷೇರುಬೆಲೆ 2,110.95 ರೂಗೆ ಮಟ್ಟಕ್ಕೆ ಹೋಗಿತ್ತು. ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಅದರ ನಿವ್ವಳ ಲಾಭ 1,236 ಕೋಟಿ ರೂಗೆ ಏರಿತ್ತು. ಹಾಗೆಯೇ, ವಿಶ್ವದ ಅತಿದೊಡ್ಡ ವಿಮಾನ ತಯಾರಿಕಾ ಸಂಸ್ಥೆ ಏರ್​ಬಸ್​ನ ಎ-320 ವಿಮಾನದ ಎಂಆರ್​ಒ ಘಟಕ ಸ್ಥಾಪನೆಗೆ ಎಚ್​ಎಎಲ್ ಒಪ್ಪಂದ ಮಾಡಿಕೊಂಡಿತು. ಈ ಬೆಳವಣಿಗೆಗಳು ಎಚ್​ಎಎಲ್ ಷೇರಿಗೆ ಇದ್ದ ಡಿಮ್ಯಾಂಡ್ ಅನ್ನು ಇನ್ನಷ್ಟು ಹೆಚ್ಚಿಸಿವೆ.

ಎಚ್​ಎಎಲ್ ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿಯಾ? ಸರ್ಕಾರಿ ಷೇರೆಂದರೆ ಮೂಗುಮುರಿಯುತ್ತಿದ್ದವರ ಮುಖ ಈಗ ಎಚ್​ಎಲ್​ಎಲ್​ನತ್ತ
ಎಚ್​ಎಎಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2023 | 11:36 AM

Share

ಷೇರು ಮಾರುಕಟ್ಟೆಯಲ್ಲಿ ಬಹಳಷ್ಟು ಪಳಗಿದ ಹೂಡಿಕೆದಾರರು ಸರ್ಕಾರಿ ಸಂಸ್ಥೆಗಳ ಷೇರೆಂದರೆ (PSU sector stocks) ಮೂಗು ಮುರಿಯುವುದುಂಟು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಕಾರ್ಯನಿರ್ವಹಣೆ ಬಗ್ಗೆ ಇರುವ ಅಸಮಾಧಾನವು ಇದಕ್ಕೆ ಕಾರಣ. ಐದಾರು ವರ್ಷದ ಹಿಂದೆ ಷೇರುಪೇಟೆಗೆ ಅಡಿ ಇಟ್ಟ ಎಚ್​ಎಎಲ್ ಸಂಸ್ಥೆ (HAL- Hindustan Aeronautics Ltd) ಬಗ್ಗೆಯೂ ಹಲವರು ಅನುಮಾನದ ದೃಷ್ಟಿ ನೆಟ್ಟಿದ್ದು ಹೌದು. ಆದರೆ, ಈಗ ಎಲ್ಲರ ನಿರೀಕ್ಷೆಮೀರಿ ಎಚ್​ಎಎಲ್ ಗರಿಗೆದರಿದೆ. 2018ರ ಮಾರ್ಚ್​ನಲ್ಲಿ ಪದಾರ್ಪಣೆಯಾದಂದಿನಿಂದ ಇಲ್ಲಿಯವರೆಗೆ ಐದೂವರೆ ವರ್ಷದಲ್ಲಿ ಎಚ್​ಎಎಲ್ ಷೇರು ಶೇ. 262ರಷ್ಟು ಬೆಳೆದಿದೆ.

ನವೆಂಬರ್ 10ರಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆಯ ಷೇರುಬೆಲೆ 2,110.95 ರೂಗೆ ಮಟ್ಟಕ್ಕೆ ಹೋಗಿತ್ತು. ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಅದರ ನಿವ್ವಳ ಲಾಭ 1,236 ಕೋಟಿ ರೂಗೆ ಏರಿತ್ತು. ಹಾಗೆಯೇ, ವಿಶ್ವದ ಅತಿದೊಡ್ಡ ವಿಮಾನ ತಯಾರಿಕಾ ಸಂಸ್ಥೆ ಏರ್​ಬಸ್​ನ ಎ-320 ವಿಮಾನದ ಎಂಆರ್​ಒ ಘಟಕ ಸ್ಥಾಪನೆಗೆ ಎಚ್​ಎಎಲ್ ಒಪ್ಪಂದ ಮಾಡಿಕೊಂಡಿತು. ಈ ಬೆಳವಣಿಗೆಗಳು ಎಚ್​ಎಲ್ ಷೇರಿಗೆ ಇದ್ದ ಡಿಮ್ಯಾಂಡ್ ಅನ್ನು ಇನ್ನಷ್ಟು ಹೆಚ್ಚಿಸಿವೆ.

ಇದನ್ನೂ ಓದಿ: ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?

ರಕ್ಷಣಾ ವಲಯಕ್ಕೆ ಸರ್ಕಾರ ಕೊಟ್ಟಿರುವ ಒತ್ತು ಎಚ್​ಎಎಲ್​ಗೆ ವರದಾನ

ರಕ್ಷಣಾ ಕ್ಷೇತ್ರದಲ್ಲಿ ಎಚ್​ಎಎಲ್ ಹಳೆಯ ಹುಲಿ. ಎಚ್​ಎಎಲ್ ಅನ್ನು ಮೂಲೆಗುಂಪು ಮಾಡಿ ಖಾಸಗಿ ವಲಯಕ್ಕೆ ಸರ್ಕಾರ ಪ್ರಾಮುಖ್ಯತೆ ಕೊಡುತ್ತಿದೆ ಎಂದು ಕೆಲ ವರ್ಷಗಳ ಹಿಂದೆ ಆರೋಪ ಇತ್ತು. ಆದರೆ, ಇದೀಗ ಎಚ್​ಎಎಲ್ ಸಾಕಷ್ಟು ಒಪ್ಪಂದಗಳನ್ನು ಗಿಟ್ಟಿಸಿದೆ.

ಸರ್ಕಾರ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು, ಅದರ ಫಲ ಎಚ್​ಎಎಲ್​ಗೆ ಹೆಚ್ಚು ಸಿಗುತ್ತಿದೆ. ಎಚ್​ಎಎಲ್ ನಿರ್ಮಿತ ಯುದ್ಧವಿಮಾನಗಳನ್ನು ವಿದೇಶಗಳಿಗೂ ರಫ್ತು ಮಾಡಲು ಮುಂದಲಾಗಿದೆ. ಈ ಎಲ್ಲಾ ಕಾರಣದಿಂದ ಎಚ್​ಎಎಲ್ ಸಂಸ್ಥೆ ಮುಂದಿನ ಹಲವು ವರ್ಷಗಳ ಕಾಲ ಸಾಕಷ್ಟು ಯೋಜನೆಗಳನ್ನು ನಿರ್ವಹಿಸಲಿರುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ: HAL Share: ಎಚ್​ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್​ಎಎಲ್ ಷೇರು

ಎಚ್​ಎಎಲ್ ಚಿನ್ನದ ಮೊಟ್ಟೆ ಇಡುವ ಕೋಳಿ…

ಎಚ್​ಎಎಲ್ ಸಂಸ್ಥೆ ಕಳೆದ ಒಂದು ವರ್ಷದಲ್ಲಿ ಶೇ. 66ರಷ್ಟು ಬೆಳೆದಿದೆ. ಐದೂವರೆ ವರ್ಷದಲ್ಲಿ ಶೇ. 262ರಷ್ಟು ಹೆಚ್ಚಿದೆ. ಈ ಓಟ ಇಲ್ಲಿಗೇ ನಿಲ್ಲುವಂಥದ್ದಲ್ಲ. ಹೂಡಿಕೆ ತಜ್ಞ ಕುಶ್ ಬೋಹ್ರ ಅವರ ಪ್ರಕಾರ ಎಚ್​ಎಎಲ್ ಷೇರಿನ ವೇಗದ ಓಟ ಇನ್ನೂ ಬಹಳ ಕಾಲ ಇರಲಿದೆ. ಸರ್ಕಾರ ಕೂಡ ಡಿಫೆನ್ಸ್ ಸೆಕ್ಟರ್​ಗೆ ಒತ್ತು ಕೊಡುತ್ತಿರುವುದರಿಂದ ಎಚ್​ಎಎಲ್ ದೀರ್ಘಾವಧಿಯಲ್ಲಿ ಬಹಳ ಬೆಳೆಯಲಿರುವ ಸಂಸ್ಥೆಯಾಗಿದೆ. ಸದ್ಯ ಎಚ್​ಎಎಲ್ ಷೇರಿನ ಬೆಲೆ 2,056 ರೂ ಇದೆ. 2020ರ ಡಿಸೆಂಬರ್ ತಿಂಗಳಲ್ಲಿ ಇದರ ಬೆಲೆ ಕೇವಲ 343 ರೂ ಇತ್ತು. ಮೂರು ವರ್ಷದಲ್ಲಿ ಅಗಾಧವಾಗಿ ಬೆಳೆದಿರುವ ಎಚ್​ಎಎಲ್ ಷೇರುಬೆಲೆ ಮುಂದಿನ ದೀಪಾವಳಿಗೆ 2,500 ರೂ ದಾಟುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!