ಹೊಸ ಆದಾಯ ತೆರಿಗೆ ಸಿಸ್ಟಂ ಆಯ್ಕೆ ಮಾಡಿಕೊಂಡವರ ಸಂಖ್ಯೆ ಕಡಿಮೆ; ಏನು ಕಾರಣ?

New tax regime vs Old tax regime: ಸದ್ಯದಲ್ಲೇ ಹೊಸ ಸರ್ಕಾರದಿಂದ ಮೊದಲ ಪೂರ್ಣಪ್ರಮಾಣದ ಬಜೆಟ್ ಮಂಡನೆ ಆಗಲಿದೆ. ಆದಾಯ ತೆರಿಗೆ ಇಳಿಸುವುದೋ, ಸ್ಲ್ಯಾಬ್​ನಲ್ಲಿ ಬದಲಾವಣೆ ತರುವುದೋ ಅಥವಾ ಟ್ಯಾಕ್ಸ್ ಡಿಡಕ್ಷನ್ ಹೆಚ್ಚಿಸುವುದೋ ಇತ್ಯಾದಿ ಯಾವುದಾದರೂ ಬದಲಾವಣೆಯ ನಿರೀಕ್ಷೆಯಲ್ಲಿ ತೆರಿಗೆ ಪಾವತಿದಾರರಿದ್ದಾರೆ. ಟ್ಯಾಕ್ಸ್ ಡಿಡಕ್ಷನ್ ಅವಕಾಶದ ಕಾರಣ ಹೆಚ್ಚಿನ ಜನರು ಹೊಸ ತೆರಿಗೆ ವ್ಯವಸ್ಥೆಯನ್ನು ಇನ್ನೂ ಅಳವಡಿಸಿಕೊಂಡಿಲ್ಲ.

ಹೊಸ ಆದಾಯ ತೆರಿಗೆ ಸಿಸ್ಟಂ ಆಯ್ಕೆ ಮಾಡಿಕೊಂಡವರ ಸಂಖ್ಯೆ ಕಡಿಮೆ; ಏನು ಕಾರಣ?
ಆದಾಯ ತೆರಿಗೆ
Follow us
|

Updated on: Jun 05, 2024 | 4:29 PM

ಈ ವರ್ಷದ ಮೊದಲ ಪೂರ್ಣಪ್ರಮಾಣದ ಬಜೆಟ್ ಜುಲೈನಲ್ಲಿ ನಡೆಯುವ ಸಾಧ್ಯತೆ ಇದೆ. ಅಕ್ಷರಶಃ ಮೈತ್ರಿ ಸರ್ಕಾರ (NDA Alliance government) ಅಸ್ತಿತ್ವಕ್ಕೆ ಬರುವುದರಿಂದ ಸಾಕಷ್ಟು ತೆರಿಗೆ ಭತ್ಯೆಗಳನ್ನು (tax benefits) ನಿರೀಕ್ಷಿಸಬಹುದು. ಈ ಹಿನ್ನೆಲೆಯಲ್ಲಿ ಬಜೆಟ್​ನಲ್ಲಿ ಆದಾಯ ತೆರಿಗೆ ಬಗ್ಗೆ ಎಲ್ಲರ ಕುತೂಹಲ ನೆಟ್ಟಿದೆ. ಸದ್ಯ ಐಟಿ ಪಾವತಿದಾರರ ಮುಂದೆ ಎರಡು ಆಯ್ಕೆಗಳಿಗೆ. ಒಂದು, ಹಳೆಯ ಟ್ಯಾಕ್ಸ್ ರೆಜಿಮೆ, ಮತ್ತೊಂದು ಹೊಸ ಟ್ಯಾಕ್ಸ್ ರೆಜಿಮೆ. ಹೊಸ ಟ್ಯಾಕ್ಸ್ ಸಿಸ್ಟಂ ಒಂದು ರೀತಿಯಲ್ಲಿ ಒನ್​ವೇ. ಅಲ್ಲಿಗೆ ಹೋದರೆ ನಿಮಗೆ ಮತ್ತೊಂದು ಆಯ್ಕೆ ಇಲ್ಲ. ಒಮ್ಮೆ ನೀವು ಹೊಸ ಟ್ಯಾಕ್ಸ್ ರೆಜಿಮೆ (New Tax Regime) ಆಯ್ದುಕೊಂಡರೆ ಕೊನೆಯವರೆಗೂ ಅದೇ ಸಿಸ್ಟಂ ಅನ್ವಯ ಆಗುತ್ತದೆ. ಈಗಲೂ ಕೂಡ ಹೆಚ್ಚಿನ ಜನರು ಹಳೆಯ ಟ್ಯಾಕ್ಸ್ ಸಿಸ್ಟಂನಲ್ಲೇ ಮುಂದುವರಿಯುತ್ತಿದ್ದಾರೆ.

ಹಳೆಯ ಟ್ಯಾಕ್ಸ್ ರೆಜಿಮೆ ಯಾಕೆ ಜನಪ್ರಿಯ?

ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಸ್ಲ್ಯಾಬ್ ರೇಟ್ ಹೆಚ್ಚಿದೆ. ಆದರೆ, ಅದರ ಜೊತೆಗೆ ವಿವಿಧ ತೆರಿಗೆ ವಿನಾಯಿತಿ, ತೆರಿಗೆ ರಿಯಾಯಿತಿಗಳೂ ಲಭ್ಯ ಇವೆ. ಮನೆ ಬಾಡಿಗೆ ಭತ್ಯೆ (ಹೌಸ್ ರೆಂಟ್ ಅಲೋಯನ್ಸ್), ಲೀವ್ ಟ್ರಾವಲ್ ರಿಯಾಯಿತಿ, ಸೆಕ್ಷನ್ 80ಸಿ ಅಡಿಯಲ್ಲಿನ ಡಿಡಕ್ಷನ್ಸ್, ಸೆಕ್ಷನ್ 80 ಡಿ ಅಡಿಯಲ್ಲಿ ಮೆಡಿಕಲ್ ಇನ್ಷೂರೆನ್ಸ್ ಪ್ರೀಮಿಯಮ್, ಸೆಕ್ಷನ್ 80ಸಿಸಿಡಿ ಅಡಿಯಲ್ಲಿ ಎನ್​ಪಿಎಸ್ ಹೀಗೆ ವಿವಿಧ ಹೂಡಿಕೆಗಳ ನಿರ್ದಿಷ್ಟ ಮೊತ್ತಗಳಿಗೆ ತೆರಿಗೆ ವಿನಾಯಿತಿ ಸಿಗುತ್ತದೆ.

ಇದನ್ನೂ ಓದಿ: ಈ ನಮ್ಮ ಬೇಡಿಕೆ ಈಡೇರಿಸಿ: ಹೊಸ ಸರ್ಕಾರಕಕ್ಕೆ ರಿಯಲ್ ಎಸ್ಟೇಟ್ ಉದ್ಯಮದ ಕೋರಿಕೆ

ಸೆಕ್ಷನ್ 80ಸಿ ಅಡಿಯಲ್ಲಿ ಪಿಪಿಎಫ್, ಇಪಿಎಫ್, ಇಎಲ್​ಎಸ್​ಎಸ್ ಹೂಡಿಕೆಗಳಿಗೆ ಟ್ಯಾಕ್ಸ್ ಡಿಡಕ್ಷನ್ ಅವಕಾಶವು ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿ ಲಭ್ಯ ಇರುತ್ತದೆ. ಹೀಗಾಗಿ, ಜನರಿಗೆ ಹಣ ಉಳಿಸಲು, ಹೂಡಿಕೆ ಮಾಡಲು ಉತ್ತೇಜನ ಸಿಗುತ್ತದೆ.

ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ನಿವೃತ್ತಿ ಬಳಿಕ ಪಿಂಚಣಿ ಅವಕಾಶ ಇರುವುದಿಲ್ಲ. ದುಡಿಮೆಯ ಅವಧಿಯಲ್ಲಿ ಏನೆಲ್ಲಾ ಹಣ ಕೂಡಿಟ್ಟಿರುತ್ತಾರೋ ಅದಷ್ಟೇ ನಿವೃತ್ತಿ ಕಾಲಕ್ಕೆ ಆಗಿಬರುವುದು. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳು ತಮ್ಮ ಸಂಬಳದಲ್ಲಿ ಹೆಚ್ಚಿನ ಹಣವನ್ನು ಇಪಿಎಫ್, ಎನ್​ಪಿಎಸ್, ಪಿಪಿಎಫ್ ಮತ್ತು ಇಎಲ್​ಎಸ್​ಎಸ್ ಫಂಡ್​ಗಳಿಗೆ ವಿನಿಯೋಗಿಸಬೇಕು. ಇದರಿಂದ ಉತ್ತಮ ಎನಿಸುವ ರಿಟೈರ್ಮೆಂಟ್ ಫಂಡ್ ನಿಮಗೆ ಸಿಗುತ್ತದೆ.

ಹಳೆಯ ಟ್ಯಾಕ್ಸ್ ರೆಜಿಮೆಯನ್ನು ರದ್ದುಗೊಳಿಸಿದರೆ ಟ್ಯಾಕ್ಸ್ ಬೆನಿಫಿಟ್​ನ ಆಕರ್ಷಣೆ ಕಡಿಮೆ ಆಗುತ್ತದೆ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಟ್ಯಾಕ್ಸ್ ಡಿಡಕ್ಷನ್​ಗಳಿಲ್ಲ. ಒಟ್ಟಾರೆ ತೆರಿಗೆ ಪ್ರಮಾಣ ಕಡಿಮೆ ಆದರೂ ಜನರಲ್ಲಿ ನಿವೃತ್ತಿ ಸ್ಕೀಮ್​ಗಳಿಗೆ ಹಣ ತೊಡಗಿಸಲು ಉತ್ತೇಜನ ಸಿಗದಂತಾಗುತ್ತದೆ. ಈ ಕಾರಣಕ್ಕೆ ಹೆಚ್ಚಿನ ಜನರು ಈಗಲೂ ಕೂಡ ಹಳೆಯ ಟ್ಯಾಕ್ಸ್ ರೆಜಿಮೆಯನ್ನೇ ಮುಂದುವರಿಸುತ್ತಿರಬಹುದು.

ಇದನ್ನೂ ಓದಿ: ಪರ್ಸನಲ್ ಲೋನ್ ಅನ್ನು ಮುಂಗಡವಾಗಿ ತೀರಿಸಬೇಕೆ? ಈ ಅಂಶಗಳು ತಿಳಿದಿರಲಿ

ಸರ್ಕಾರ ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಸೂಕ್ತ ಬದಲಾವಣೆ ಮಾಡಿದರೆ ಉತ್ತಮ ಎನ್ನುವ ಸಲಹೆ ಕೇಳಿಬರುತ್ತಿದೆ. ಟ್ಯಾಕ್ಸ್ ಬೆನಿಫಿಟ್ ಅಥವಾ ತೆರಿಗೆ ವಿನಾಯಿತಿಗಳನ್ನು ಕಲ್ಪಿಸುವುದು ಸಮಂಜಸ ಎಂಬ ಅನಿಸಿಕೆ ಇದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ