AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL-Insurance: ಐಪಿಎಲ್ ಅಬ್ಬರದ ಮಧ್ಯೆ ನಷ್ಟ ಎದುರಿಸಲು ಇನ್ಷೂರೆನ್ಸ್ ಮೊರೆ; ಯಾವ್ಯಾವುದಕ್ಕೆ ವಿಮೆ? ಇಲ್ಲಿದೆ ಡೀಟೇಲ್ಸ್

Insurance Coverage For Loss of IPL Revenue: ಈ ಬಾರಿಯ ಐಪಿಎಲ್​ನಲ್ಲಿ ಹಣದ ಹೊಳೆಯೇ ಹರಿಯುತ್ತಿದ್ದು, ಟೂರ್ನಿಯಲ್ಲಿ ಸ್ವಲ್ಪ ಏರುಪೇರಾದರೂ ಸಂಬಂಧಪಟ್ಟವರಿಗೆ ದೊಡ್ಡ ನಷ್ಟವೇ ಆಗುತ್ತದೆ. ಹೀಗಾಗಿ, ಈ ನಷ್ಟ ಸಾಧ್ಯತೆ ಎದುರಿಸಲು ಹಲವರು ವಿಮಾ ಪಾಲಿಸಿ ಮಾಡಿಸಿದ್ದಾರೆ.

IPL-Insurance: ಐಪಿಎಲ್ ಅಬ್ಬರದ ಮಧ್ಯೆ ನಷ್ಟ ಎದುರಿಸಲು ಇನ್ಷೂರೆನ್ಸ್ ಮೊರೆ; ಯಾವ್ಯಾವುದಕ್ಕೆ ವಿಮೆ? ಇಲ್ಲಿದೆ ಡೀಟೇಲ್ಸ್
ಐಪಿಎಲ್ ಟೂರ್ನಿಯ ವೇಳೆ ಗಾಯದ ಸಮಸ್ಯೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 13, 2023 | 6:01 PM

Share

ನವದೆಹಲಿ: ಐಪಿಎಲ್​ನ 16ನೇ ಸೀಸನ್ ಧಮಾಕ ಚಾಲ್ತಿಯಲ್ಲಿದೆ. ಇಡೀ ವಿಶ್ವದಲ್ಲೇ ದೊಡ್ಡ ಬ್ಯುಸಿನೆಸ್ ಇರುವ ಕ್ರೀಡಾಕೂಟದಲ್ಲಿ ಐಪಿಎಲ್ ಕೂಡ ಒಂದು. ಈ ಟೂರ್ನಿಗೆ ಹಣದ ಸುರಿಮಳೆಯೇ ಆಗುತ್ತದೆ. ಹಣ ಹಾಕಿದವರು ದುಪ್ಪಟ್ಟು ಲಾಭವನ್ನೂ ಗಳಿಸುತ್ತಿದ್ದಾರೆ. ಅಂತೆಯೇ ಪ್ರತಿಯೊಂದೂ ಇಲ್ಲಿ ದೊಡ್ಡ ಮೊತ್ತದ ಹೂಡಿಕೆ ಮತ್ತು ವ್ಯವಹಾರವೇ. ಅಮೆರಿಕದ ನ್ಯಾಷನಲ್ ಫುಟ್ಬಾಲ್ ಲೀಗ್ (NFL) ಬಿಟ್ಟರೆ ಅತೀ ಹೆಚ್ಚು ಮೌಲ್ಯದ ಕ್ರೀಡಾಕೂಟ ಎಂದರೆ ಅದು ಐಪಿಎಲ್. ಮಾಧ್ಯಮ ಪ್ರಸಾರ ಹಕ್ಕುಗಳಿಂದಲೇ ಈ ಸೀಸನ್​ನಲ್ಲಿ ಬಿಸಿಸಿಐ ಬರೋಬ್ಬರಿ 48,000 ಕೋಟಿ ರೂ ಗಳಿಸಿದೆ. 2018ರ ಸೀಸನ್​ಗೆ (IPL-14) ಹೋಲಿಸಿದರೆ ಈ ಬಾರಿ ಮಾಧ್ಯಮ ಹಕ್ಕಿನಿಂದ ಬಿಸಿಸಿಐಗೆ ಮೂರು ಪಟ್ಟು ಹೆಚ್ಚು ಬೆಲೆ ಸಿಕ್ಕಿದೆ.

ಐಪಿಎಲ್​ಗೆ ಜೋಡಿತವಾದ ಎಲ್ಲಾ ವ್ಯವಹಾರಸ್ಥರು (IPL Stakeholders) ಉದಾರವಾಗಿ ಹಣ ಹಾಕುತ್ತಿದ್ದಾರೆ. ಪಂದ್ಯ ನಿಂತುಹೋಗಿಯೋ, ಏನಾದರೂ ಯಾವುದಾದರೂ ರೀತಿಯಲ್ಲಿ ಅವಘಡ ಸಂಭವಿಸಿ ನಷ್ಟವಾಗುವ ಅಪಾಯ ಹೆಚ್ಚೇ ಇರುತ್ತದೆ. ಒಂದು ಲೆಕ್ಕಾಚಾರದಲ್ಲಿ ಈ ವರ್ಷದ ಐಪಿಎಲ್​ನಲ್ಲಿ ವಿವಿಧ ವ್ಯವಹಾರಸ್ಥರಿಗೆ ನಷ್ಟ ಎದುರಾಗುವ ಅಪಾಯ ಇರುವ ಮೊತ್ತ 10 ಸಾವಿರ ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ. ಹೀಗಾಗಿ, ಈ ನಷ್ಟಕ್ಕೆ ಪ್ರತಿಯಾಗಿ ಅದನ್ನು ಸರಿದೂಗಿಸಲು ಹಲವರು ಇನ್ಷೂರೆನ್ಸ್ ಮೊರೆ ಹೋಗಿದ್ದಾರೆ. ವಿವಿಧ ರೀತಿಯ ಇನ್ಷೂರೆನ್ಸ್ ಪಾಲಿಸಿಗಳನ್ನು ನಷ್ಟಕ್ಕೆ ಪ್ರತಿಯಾಗಿ ಮಾಡಿಸುತ್ತಿದ್ದಾರೆ. ಇದರ ಮಧ್ಯೆ ವಿಮಾ ಸಂಸ್ಥೆಗಳು ಅವಘಡ ಸಂಭವಿಸದಿರಲಿ ಎಂದು ಕಾತರದಿಂದ ಕಾದು ಕೂರುವಂತಾಗಿದೆ.

ಇದನ್ನೂ ಓದಿHardwyn India: 3 ವರ್ಷದಲ್ಲಿ 43ಪಟ್ಟು ಹೆಚ್ಚು ಲಾಭ; ಹಾರ್ಡ್​ವಿನ್ ಷೇರಿಗೆ ಹಣ ಹಾಕಿದವರು ಇವತ್ತು ಕೋಟ್ಯಾಧೀಶ್ವರರು

ಐಪಿಎಲ್ ಜೋಡಿತ ವ್ಯವಹಾರಿಗಳೆಂದರೆ ಇಲ್ಲಿ ಬಿಸಿಸಿಐ, ಪ್ರಸಾರ ಸಂಸ್ಥೆಗಳು, ಪ್ರಾಯೋಜಕರು, ಫ್ರಾಂಚೈಸಿ ಮಾಲೀಕರು ಮೊದಲಾದವರು ಬರುತ್ತಾರೆ. ಹವಾಮಾನ ಬದಲಾವಣೆ, ಗಲಭೆ, ಉಗ್ರ ದಾಳಿ ಇತ್ಯಾದಿ ಕಾರಣದಿಂದ ಪಂದ್ಯ ರದ್ದಾಗಿ ಅದರಿಂದ ನಷ್ಟ ಎದುರಾಗಬಹುದು. ಆಟಗಾರನಿಗೆ ಗಾಯವಾಗಿ, ಅನಾರೋಗ್ಯವಾಗಿ ಫ್ರಾಂಚೈಸಿಗೆ ನಷ್ಟ ಆಗಬಹುದು. ಅನಿರೀಕ್ಷಿತ ಕಾನೂನು ವೆಚ್ಚವೂ ಎದುರಾಗಬಹುದು. ಇವುಗಳಿಂದ ಉಂಟಾಗಬಹುದಾದ ನಷ್ಟವನ್ನು ಕವರ್ ಮಾಡುವಂತಹ ವಿಮಾ ಪಾಲಿಸಿಗಳನ್ನು ಮಾಡಿಸಲಾಗಿರುವುದು ತಿಳಿದುಬಂದಿದೆ.

ಐಪಿಎಲ್​ಗೆ ಕೋವಿಡ್ ಪರಿಣಾಮಕ್ಕೆ ಇನ್ಷೂರೆನ್ಸ್ ಕವರೇಜ್ ಇಲ್ಲ

ಕಳೆದ ವರ್ಷ 2022ರಲ್ಲಿ ಇಂಗ್ಲೆಂಡ್​ನ ವಿಂಬಲ್ಡನ್​ನಲ್ಲಿ ನಡೆದ ಗ್ರ್ಯಾನ್​ಸ್ಲಾಮ್ ಟೆನಿಸ್ ಟೂರ್ನಿಗೆ ವಿಮೆ ಮಾಡಿಸಲಾಗಿತ್ತು. ಆಲ್ ಇಂಡಿಯಾ ಲಾನ್ ಟೆನಿಸ್ ಕ್ಲಬ್ ಕೋವಿಡ್ ರೋಗದಿಂದ ಉಂಟಾಗುವ ನಷ್ಟಕ್ಕೆ ಕವರ್ ಮಾಡುವ ಇನ್ಷೂರೆನ್ಸ್ ಪಾಲಿಸಿ ಮಾಡಿಸಿತ್ತು. ವಿಮಾ ಕಂಪನಿ ದುರದೃಷ್ಟಕ್ಕೆ 2022ರ ವಿಂಬಲ್ಡನ್ ಟೆನಿಸ್ ಟೂರ್ನಿ ಕೋವಿಡ್-19 ಕಾರಣಕ್ಕೆ ರದ್ದುಗೊಂಡಿತ್ತು. ಎಐಎಲ್​ಟಿಸಿಯ ಅದೃಷ್ಟಕ್ಕೆ ವಿಮಾ ಪಾಲಿಸಿ ಇದ್ದರಿಂದ 142 ಮಿಲಿಯನ್ ಡಾಲರ್ (ಸುಮಾರು 1,100 ಕೋಟಿ ರೂ) ಮೊತ್ತದಷ್ಟು ಭಾರೀ ಹಣ ಕ್ಲೈಮ್ ಮಾಡಿತ್ತು.

ಇದನ್ನೂ ಓದಿIncome Tax: ಹೊಸ ಅದಾಯ ತೆರಿಗೆ ವ್ಯವಸ್ಥೆಯೋ ಹಳೆಯದ್ದೋ? ಆಯ್ಕೆ ಮಾಡಿಕೊಳ್ಳದಿದ್ದರೆ ಏನಾಗುತ್ತದೆ? ಸಿಬಿಡಿಟಿ ಹೊಸ ನೋಟೀಸ್​ನಲ್ಲಿ ಏನು ಹೇಳಿದೆ?

ಈ ಹಿನ್ನೆಲೆಯಲ್ಲಿ ಐಪಿಎಲ್ 2023 ಟೂರ್ನಿಗೆ ಕೋವಿಡ್ ಸಂಗತಿಯನ್ನು ವಿಮಾ ವ್ಯಾಪ್ತಿಯಿಂದ ದೂರ ಇಡಲು ಇನ್ಷೂರೆನ್ಸ್ ಕಂಪನಿಗಳು ನಿರ್ಧರಿಸಿರುವಂತಿವೆ. ಕೋವಿಡ್​ನಿಂದಾಗಿ ಟೂರ್ನಿ ರದ್ದಾದರೆ, ಅಥವಾ ಯಾವುದಾದರೂ ಪಂದ್ಯ ರದ್ದಾದರೆ ಅದಕ್ಕೆ ಇನ್ಷೂರೆನ್ಸ್ ಕವರೇಜ್ ಇರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!