AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Kanyadan Scheme: ಎಲ್​ಐಸಿ ಕನ್ಯಾದಾನ್ ಪಾಲಿಸಿ: ಹೆಣ್ಮಕ್ಕಳ ಓದು ಮತ್ತು ಮದುವೆ ಖರ್ಚಿಗೆ ಉತ್ತಮ ಸ್ಕೀಮ್

Insurance Plan For Girl Child: 1 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹೆಣ್ಮಕ್ಕಳ ಹೆಸರಿನಲ್ಲಿ ಪಾಲಕರು ಪಡೆಯಬಹುದಾದ ಎಲ್​ಐಸಿ ಕನ್ಯಾದಾನ್ ಸ್ಕೀಮ್​ನಲ್ಲಿ ಹಲವು ಫೀಚರ್​ಗಳಿದ್ದು, ಹೆಣ್ಮಗುವಿನ ಭವಿಷ್ಯಕ್ಕೆ ಹೇಳಿಮಾಡಿಸಿದ ಯೋಜನೆಯಾಗಿದೆ.

LIC Kanyadan Scheme: ಎಲ್​ಐಸಿ ಕನ್ಯಾದಾನ್ ಪಾಲಿಸಿ: ಹೆಣ್ಮಕ್ಕಳ ಓದು ಮತ್ತು ಮದುವೆ ಖರ್ಚಿಗೆ ಉತ್ತಮ ಸ್ಕೀಮ್
ಎಲ್​ಐಸಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 18, 2023 | 1:04 PM

ಹೆಣ್ಮಕ್ಕಳಿಗೆಂದು ಎಲ್​ಐಸಿ ಕೆಲವಾರು ಉತ್ತಮ ಪಾಲಿಸಿಗಳನ್ನು ಹೊಂದಿದೆ. ಎಲ್​ಐಸಿ ಜೀವನ್ ತರುಣ್, ಎಲ್​ಐಸಿ ಕನ್ಯಾದಾನ್ ಪಾಲಿಸಿ, ಎಲ್​ಐಸಿ ಚೈಲ್ಡ್ ಫ್ಯೂಚರ್ ಪ್ಲಾನ್, ಎಲ್​ಐಸಿ ಸಿಂಗಲ್ ಪ್ರೀಮಿಯಮ್ ಚೈಲ್ಡ್ ಪ್ಲಾನ್ ಇತ್ಯಾದಿ ಯೋಜನೆಗಳಿವೆ. ಹೆಣ್ಮಗು ದೊಡ್ಡವಳಾಗಿ ಆಕೆಯ ಶಿಕ್ಷಣವೆಚ್ಚ ಮತ್ತು ವಿವಾಹವೆಚ್ಚಗಳಿಗೆ ಬೇಕರುವ ಹಣದ ಅಗತ್ಯಗಳನ್ನು ಈ ಪಾಲಿಸಿಗಳು ನೀಡುತ್ತವೆ. ಈ ಪೈಕಿ ಎಲ್​ಐಸಿ ಕನ್ಯಾದಾನ್ ಪಾಲಿಸಿ (LIC Kanyadan Policy) ಹೆಚ್ಚು ಗಮನ ಸೆಳೆಯುತ್ತಿದೆ. ಒಂದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹೆಣ್ಮಗುವಿನ ಹೆಸರಿನಲ್ಲಿ ಈ ಸ್ಕೀಮ್ ಪಡೆಯಬಹುದು. ತಂದೆ, ತಾಯಿ ಅಥವಾ ಬೇರೆ ಪಾಲಕರು 18ರಿಂದ 50 ವರ್ಷ ವಯೋಮಾನದವರು ಎಲ್​ಐಸಿ ಕನ್ಯಾದಾನ್ ಪ್ಲಾನ್ ಆರಂಭಿಸಲು ಸಾಧ್ಯ. ಪಾಲಿಸಿ ಅವಧಿ 13ರಿಂದ 25 ವರ್ಷದವರೆಗೂ ಇರುತ್ತದೆ.

ಎಲ್​ಐಸಿ ಕನ್ಯಾದಾನ್ ಪಾಲಿಸಿ 2023 ಮುಖ್ಯಾಂಶಗಳು

  • ಅನಿವಾಸಿ ಭಾರತೀಯ ಸೇರಿದಂತೆ ಯಾವುದೇ ಭಾರತೀಯ ವ್ಯಕ್ತಿ ಈ ಸ್ಕೀಮ್​ನಲ್ಲಿ ಹೂಡಿಕೆ ಮಾಡಬಹುದು.
  • ಪಾಲಿಸಿ ಪಡೆಯಲು ಹೆಣ್ಮಗುವಿನ ವಯಸ್ಸು ಕನಿಷ್ಠ 1 ವರ್ಷ ಆಗಿರಬೇಕು. ಹೆಣ್ಮಗುವಿನ ಹೆಸರಿನಲ್ಲಿ ಪಾಲಕರು ಪಾಲಿಸಿ ಆರಂಭಿಸಬಹುದು. ಪಾಲಕರ ವಯಸ್ಸು 18ರಿಂದ 50 ವರ್ಷ ಇರಬೇಕು.
  • ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಪ್ರೀಮಿಯಮ್ ಕಟ್ಟುವ ಅವಕಾಶ ಇರುತ್ತದೆ
  • ದಿನಕ್ಕೆ 75ರೂನಂತೆ ನೀವು ಈ ಪಾಲಿಸಿಗೆ ಹೂಡಿಕೆ ಮಾಡಿದರೆ 25 ವರ್ಷ ಬಳಿಕ 14 ಲಕ್ಷ ರೂ ರಿಟರ್ನ್ ಸಿಗುತ್ತದೆ.
  • ಪಾಲಿಸಿ ಅವಧಿಗಿಂತ ಮುಂಚಿನ 3 ವರ್ಷಗಳವರೆಗೆ ಮಾತ್ರ ಪ್ರೀಮಿಯಮ್ ಪಾವತಿ.
  • ಪಾಲಿಸಿಯ ಫಲಾನುಭವಿ ಅಪಘಾತದಲ್ಲಿ ಮೃತಪಟ್ಟರೆ ಕುಟುಂಬ ಸದಸ್ಯರಿಗೆ 10 ಲಕ್ಷ ರೂ ಪರಿಹಾರ ಸಿಗುತ್ತದೆ
  • ಫಲಾನುಭವಿಗೆ ಸಹಜ ಸಾವು ಸಂಭವಿಸಿದರೆ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಸಿಗುತ್ತದೆ
  • ಸತತ 3 ವರ್ಷ ನೀವು ಪ್ರೀಮಿಯಮ್ ಕಟ್ಟಿದ್ದರೆ ಪಾಲಿಸಿ ಅಡ ಇಟ್ಟು ಸಾಲ ಪಡೆಯಬಹುದು. ನೀವು ಆವರೆಗೆ ಕಟ್ಟಿರುವ ಪ್ರೀಮಿಯಮ್ ಮೊತ್ತಕ್ಕೆ ಅನುಗುಣವಾಗಿ ಸಾಲ ಸಿಗುತ್ತದೆ.
  • ಈ ಪಾಲಿಸಿಯ ಯಾವುದೇ ಮೊತ್ತಕ್ಕೂ ತೆರಿಗೆ ಇರುವುದಿಲ್ಲ. ಟ್ಯಾಕ್ಸ್ ಡಿಡಕ್ಷನ್​ಗೂ ಇದು ಸಹಾಯಕವಾಗುತ್ತದೆ.
  • ಪಾಲಿಸಿದಾರ ಸಾವನ್ನಪ್ಪಿದರೆ ಪ್ರೀಮಿಯಮ್ ಕಟ್ಟುವುದನ್ನು ಮುಂದುವರಿಸುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಕುಟುಂಬಕ್ಕೆ ಪ್ರತೀ ವರ್ಷ 1 ಲಕ್ಷ ರೂ ಪರಿಹಾರ ಸಿಗುತ್ತಿರುತ್ತದೆ.

ಇದನ್ನೂ ಓದಿDhan Vriddhi Policy: ಎಲ್​ಐಸಿ ಧನ ವೃದ್ಧಿ ಯೋಜನೆ; ಇದು ನಿಮ್ಮ ಪಾಲಿನ ಮನಿಪ್ಲಾಂಟ್; ಬೇಕಷ್ಟು ಬೆಳೆಸಿ, ಬೇಕೆಂದಾಗ ಹಿಂಪಡೆಯಿರಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್