AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RuPay Card: ಮಾಸ್ಟರ್ ಕಾರ್ಡ್, ವೀಸಾಗಿಂತ ರುಪೇ ಕ್ರೆಡಿಟ್ ಕಾರ್ಡ್ ಯಾಕೆ ಉತ್ತಮ? ಇಲ್ಲಿವೆ ರುಪೇ ಕಾರ್ಡ್​ನ ಅನುಕೂಲತೆಗಳು

Benefits of RuPay Credit Cards: ರುಪೇ ಕಾರ್ಡ್​ಗಳು ಇದೀಗ ಬಹಳ ಜನಪ್ರಿಯವಾಗುತ್ತಿವೆ. ಕ್ರೆಡಿಟ್ ಕಾರ್ಡ್ ಕ್ಷೇತ್ರದಲ್ಲಿ ವೀಸಾ ಮತ್ತು ಮಾಸ್ಟರ್​ಕಾರ್ಡ್ ಸಂಸ್ಥೆಗಳು ಹೊಂದಿದ್ದ ಪ್ರಾಬಲ್ಯವನ್ನು ರುಪೇ ಮುರಿಯುತ್ತಿದೆ. ರುಪೆ ಕಾರ್ಡ್​ಗಳಿಂದ ಅನುಕೂಲ ಮತ್ತು ಅನನುಕೂಲಗಳು ಏನು ಎಂಬ ವಿವರ ಇಲ್ಲಿದೆ..

RuPay Card: ಮಾಸ್ಟರ್ ಕಾರ್ಡ್, ವೀಸಾಗಿಂತ ರುಪೇ ಕ್ರೆಡಿಟ್ ಕಾರ್ಡ್ ಯಾಕೆ ಉತ್ತಮ? ಇಲ್ಲಿವೆ ರುಪೇ ಕಾರ್ಡ್​ನ ಅನುಕೂಲತೆಗಳು
ರುಪೇ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 14, 2023 | 2:18 PM

ಕೆಲ ವರ್ಷಗಳ ಹಿಂದಿನವರೆಗೂ ಕ್ರೆಡಿಟ್ ಕಾರ್ಡ್​ಗಳೆಂದರೆ ಸಾಮಾನ್ಯವಾಗಿ ವೀಸಾ, ಮಾಸ್ಟರ್ ಕಾರ್ಡ್​ನದ್ದಾಗಿರುತ್ತಿದ್ದವು. ಈಗ ರುಪೇ ಕಾರ್ಡ್​ಗಳ ಸಂಖ್ಯೆ ಹೆಚ್ಚುತ್ತಿದೆ, ಜನಪ್ರಿಯತೆಯೂ ಹೆಚ್ಚುತ್ತಿದೆ. ರುಪೇ ಎಂಬುದು ಸರ್ಕಾರದಿಂದಲೇ ಪ್ರಚಾರ ಪಡೆದಿರುವ ಸರ್ಕಾರೀ ಸಂಸ್ಥೆಯೇ ರೂಪಿಸಿರುವ ಕಾರ್ಡ್ ನೆಟ್ವರ್ಕ್. ಹೀಗಾಗಿ, ರುಪೇ ಕಾರ್ಡ್ ವಿಶ್ವಾಸಾರ್ಹವೆನಿಸಿವೆ, ಹಲವು ಲಾಭಗಳನ್ನೂ ತರುತ್ತವೆ.

ವೀಸಾ, ಮಾಸ್ಟರ್​ಕಾರ್ಡ್​ಗಳಂತೆ ರುಪೇ ಕೂಡ ಕಾರ್ಡ್ ನೆಟ್ವರ್ಕ್. ಕಾರ್ಡ್ ನೆಟ್ವರ್ಕ್​ಗಳು ಸ್ವತಃ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಕೊಡುವುದಿಲ್ಲ. ಬ್ಯಾಂಕುಗಳ ಮೂಲಕ ವಿತರಿಸುತ್ತವೆ. ಬ್ಯಾಂಕುಗಳು ಯಾವುದೇ ಕಾರ್ಡ್ ನೆಟ್ವರ್ಕ್ ಕಂಪನಿಯೊಂದಿಗೆ ಸಹಯೋಗದಲ್ಲಿ ಕಾರ್ಡ್ ನೀಡುತ್ತವೆ. ಅಂತೆಯೇ ನೀವು ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ವೀಸಾ ಕಾರ್ಡ್ ಪಡೆಯಬಹುದು, ಮಾಸ್ಟರ್ ಕಾರ್ಡ್ ಪಡೆಯಬಹುದು. ರುಪೇ ಕಾರ್ಡ್ ಕೂಡ ಪಡೆಯಬಹುದು. ಎಲ್ಲಾ ಬ್ಯಾಂಕುಗಳು ಎಲ್ಲಾ ಕಾರ್ಡ್ ನೆಟ್ವರ್ಕ್​ಗಳ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಬೇಕು ಎಂದು ಇತ್ತೀಚೆಗೆ ಸರ್ಕಾರ ತಿಳಿಸಿತ್ತು. ಹಾಗೆಯೇ, ಯುಪಿಐ ಪಾವತಿಗೆ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಅವಕಾಶ ಮಾಡಿಕೊಡಲಾಗಿದೆ. ಇದು ರುಪೇ ಕಾರ್ಡ್​ಗೆ ಪ್ರಾಮುಖ್ಯತೆ ಗಿಟ್ಟಿಸುವ ಸರ್ಕಾರದ ಒಂದು ಹೆಜ್ಜೆ ಎಂದು ಪರಿಗಣಿಸಲಡ್ಡಿ ಇಲ್ಲ.

ಇದನ್ನೂ ಓದಿESI: ಇಎಸ್​ಐ ಯೋಜನೆ, ಯಾರು ಪಡೆಯಬಹುದು ಈ ಸ್ಕೀಮ್? ಏನಿದರ ವಿಶೇಷತೆಗಳು?

ರುಪೇ ಕ್ರೆಡಿಟ್ ಕಾರ್ಡ್​ನ ಅನುಕೂಲತೆಗಳು

  • ಕ್ರೆಡಿಟ್ ಕಾರ್ಡ್ ಕಂಪನಿಗಳ ಪೈಕಿ ರುಪೇ ಮಾತ್ರವೇ ಭಾರತದ್ದು. ಇದರ ಸರ್ವರ್​ಗಳು ಭಾರತದಲ್ಲಿ ಇದ್ದು, ವಹಿವಾಟು ಬಹಳ ವೇಗವಾಗಿ ನಡೆಯಲು ಸಾಧ್ಯವಾಗುತ್ತದೆ.
  • ರುಪೇ ಕಾರ್ಡನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ (ಎನ್​ಪಿಸಿಐ) ಅಭಿವೃದ್ಧಿಪಡಿಸಿದ್ದು, ವಂಚನೆ ಇತ್ಯಾದಿಗಳಿಗೆ ಅವಕಾಶ ಇಲ್ಲದಂತೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
  • ರುಪೇ ಕಾರ್ಡ್​ಗಳ ವಾರ್ಷಿಕ ಶುಲ್ಕ ಹಾಗೂ ಪ್ರವೇಶ ಶುಲ್ಕ ಬಹಳ ಕಡಿಮೆ.
  • ಯುಪಿಐ ಆ್ಯಪ್​ಗಳಿಗೆ ರುಪೇ ಕಾರ್ಡ್​ಗಳನ್ನು ಲಿಂಕ್ ಮಾಡಬಹುದು. ಬೇರೆ ಕ್ರೆಡಿಟ್ ಕಾರ್ಡ್​ಗಳಿಗೆ ಇದಕ್ಕೆ ಅವಕಾಶ ಇಲ್ಲ.
  • ರುಪೇ ಬಳಿ ಆ್ಯಂಟಿಫಿಶಿಂಗ್ ಟೆಕ್ನಾಲಜಿ ಇದೆ. ಅತ್ಯುನ್ನತ ಇಎಂವಿ ಚಿಪ್​ಸೆಟ್ ಹೊಂದಿದೆ. ಇದು ಬಹಳ ಸುರಕ್ಷಿತ ಹಾಗೂ ವೇಗದ ವಹಿವಾಟಿಗೆ ಅನುವು ಮಾಡಿಕೊಡುತ್ತದೆ.
  • ರುಪೇ ನೆಟ್ವರ್ಕ್​ನಲ್ಲಿ ಹಲವು ವರ್ಗಗಳಿಗೆ, ಗುಂಪುಗಳಿಗೆ, ಹವ್ಯಾಸಗಳಿಗೆ ತಕ್ಕಂತಹ ವಿವಿಧ ಕಾರ್ಡ್​ಗಳ ಆಯ್ಕೆಗಳಿವೆ.
  • ಬಹಳಷ್ಟು ವರ್ತಕರೊಂದಿಗೆ ರುಪೇ ಸಹಭಾಗಿತ್ವ ಹೊಂದಿದೆ. ರಿವಾರ್ಡ್, ಡಿಸ್ಕೌಂಟ್ ಪ್ರಮಾಣ ಹೆಚ್ಚು ಇರುತ್ತದೆ.
  • ರುಪೇ ಕ್ರೆಡಿಟ್ ಕಾರ್ಡ್​ಗಳ ಅನನುಕೂಲತೆಗಳೇನು?
  • ಹೊರದೇಶಗಳಿಗೆ ಹೋದರೆ ರುಪೇ ಕ್ರೆಡಿಟ್ ಕಾರ್ಡ್ ಬಳಸುವ ಪಿಒಎಸ್ ಹೆಚ್ಚು ಪ್ರಮಾಣದಲ್ಲಿ ಇಲ್ಲ.
  • ವೀಸಾ ಅಥವಾ ಮಾಸ್ಟರ್​ಕಾರ್ಡ್​ಗಳಿಗೆ ಹೋಲಿಸಿದರೆ ರುಪೇ ಕ್ರೆಡಿಟ್ ಕಾರ್ಡ್​ಗಳಲ್ಲಿ ಕ್ರೆಡಿಟ್ ಲಿಮಿಟ್ ಕಡಿಮೆ ಇದೆ.

ಇದನ್ನೂ ಓದಿAadhaar VID: ಆಧಾರ್ ವರ್ಚುವಲ್ ಐಡಿ ಪಡೆಯುವುದು ಹೇಗೆ? ಏನಿದು ವರ್ಚುವಲ್ ಐಡಿ? ಹಳೆಯ ವಿಐಡಿ ರಿಟ್ರೀವ್ ಮಾಡುವುದು ಹೇಗೆ?

ಮೇಲಿನ ಈ ಎರಡು ಅನನುಕೂಲತೆಗಳನ್ನು ಸರಿದೂಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ವಿದೇಶಗಳಲ್ಲಿ ರುಪೇ ಕ್ರೆಡಿಟ್ ಕಾರ್ಡ್​ಗೆ ಮಾನ್ಯತೆ ಹೆಚ್ಚಿಸುವ ಪ್ರಯತ್ನವಾಗುತ್ತಿದೆ. ಫೋರೆಕ್ಸ್ ಕಾರ್ಡ್, ಪ್ರೀಪೇಡ್ ಕಾರ್ಡ್ ಇತ್ಯಾದಿಗಳನ್ನು ಒದಗಿಸುತ್ತಿದೆ.

ಇದೀಗ ಕ್ರೆಡಿಟ್ ಕಾರ್ಡ್ ವರ್ಗಾವಣೆಗೆ ಅವಕಾಶ ಮಾಡಿಕೊಡುವ ಕಾನೂನನ್ನು ಸರ್ಕಾರ ರೂಪಿಸುತ್ತಿದೆ. ಅಂದರೆ ಒಂದು ಕಾರ್ಡ್ ನೆಟ್ವರ್ಕ್​ನಲ್ಲಿರುವ ಕಾರ್ಡನ್ನು ಬೇರೆ ನೆಟ್ವರ್ಕ್​ಗೆ ಬದಲಾಯಿಸುವ ಅವಕಾಶವನ್ನು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಒದಗಿಸಬೇಕಾಗುತ್ತದೆ. ಉದಾಹರಣೆಗೆ, ಎಚ್​ಡಿಎಫ್​ಸಿಯ ವೀಸಾ ಕ್ರೆಡಿಟ್ ಕಾರ್ಡ್ ಹೊಂದಿರುವವರು ಬೇಕಾದರೆ ತಮ್ಮ ಕಾರ್ಡ್ ನೆಟ್ವರ್ಕ್ ಅನ್ನು ರುಪೇ ಅಥವಾ ಮಾಸ್ಟರ್​​ಕಾರ್ಡ್​ಗೆ ಬದಲಾಯಿಸಿಕೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?