AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Amrit Kalash: ಎಸ್​ಬಿಐಯಿಂದ ಅಮೃತ ಕಲಶ್ ಡಿಪಾಸಿಟ್ ಠೇವಣಿ ಯೋಜನೆ​; ಸಿಗಲಿದೆ ಹೆಚ್ಚು ಬಡ್ಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸದಾಗಿ ಅಮೃತ ಕಲಶ್ ಡಿಪಾಸಿಟ್ ಟರ್ಮ್ ಡಿಪಾಸಿಟ್ ಯೋಜನೆ ಆರಂಭಿಸಿದೆ. ನಿರ್ದಿಷ್ಟ ಅವಧಿಗೆ ಹೆಚ್ಚು ಬಡ್ಡಿ ಸೇರಿದಂತೆ ಹಲವು ಪ್ರಯೋಜನಗಳನ್ನು ಈ ಯೋಜನೆಯಿಂದ ಠೇವಣಿದಾರರು ಪಡೆಯಬಹುದಾಗಿದೆ.

SBI Amrit Kalash: ಎಸ್​ಬಿಐಯಿಂದ ಅಮೃತ ಕಲಶ್ ಡಿಪಾಸಿಟ್ ಠೇವಣಿ ಯೋಜನೆ​; ಸಿಗಲಿದೆ ಹೆಚ್ಚು ಬಡ್ಡಿ
ಸಾಂದರ್ಭಿಕ ಚಿತ್ರ
TV9 Web
| Updated By: Ganapathi Sharma|

Updated on: Mar 04, 2023 | 9:00 AM

Share

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೊಸದಾಗಿ ಅಮೃತ ಕಲಶ್ ಡಿಪಾಸಿಟ್ (Amrit Kalash Deposit) ಟರ್ಮ್ ಡಿಪಾಸಿಟ್ ಯೋಜನೆ ಆರಂಭಿಸಿದೆ. ನಿರ್ದಿಷ್ಟ ಅವಧಿಗೆ ಹೆಚ್ಚು ಬಡ್ಡಿ ಸೇರಿದಂತೆ ಹಲವು ಪ್ರಯೋಜನಗಳನ್ನು ಈ ಯೋಜನೆಯಿಂದ ಠೇವಣಿದಾರರು ಪಡೆಯಬಹುದಾಗಿದೆ. ಅನಿವಾಸಿ ಬಾರತೀಯರೂ ಈ ಯೋಜನೆಯಡಿ ಠೇವಣಿ ಇಡಬಹುದಾಗಿದ್ದು, ಪ್ರಯೋಜನಗಳನ್ನು ಪಡೆಯಬಹುದು. 400 ದಿನಗಳ ಠೇವಣಿ ಯೋಜನೆ ಆಕರ್ಷಕ ಬಡ್ಡಿಯ ಆಫರ್ ನೀಡುತ್ತಿದೆ. ಈ ಠೇವಣಿ ಯೋಜನೆಯಡಿ ಹಿರಿಯ ನಾಗಕರಿಕರು ಶೇ 7.60 ವರೆಗೆ ಬಡ್ಡಿ ಪಡೆಯಬಹುದಾಗಿದೆ. ಈ ಯೋಜನೆಯಡಿ ಠೇವಣಿ ಖಾತೆ ತೆರೆಯಲು ಮಾರ್ಚ್​ 31ರ ವರೆಗೆ ಮಾತ್ರ ಅವಕಾಶವಿದೆ.

ಅಮೃತ್ ಕಲಶ್ ಡಿಪಾಸಿಟ್ ಠೇವಣಿಗಳು

ಅಮೃತ್ ಕಲಶ್ ಡಿಪಾಸಿಟ್ ಅಡಿಯಲ್ಲಿ ದೇಶೀಯ ರಿಟೇಲ್ ಟರ್ಮ್ ಡಿಪಾಸಿಟ್ (2 ಕೋಟಿ ರೂ), ಎನ್​ಆರ್​ಐ ರುಪೀ ಟರ್ಮ್ ಡಿಪಾಸಿಟ್ ಖಾತೆ ತೆರೆಯಬಹುದಾಗಿದೆ. ಹೊಸದಾಗಿ ಖಾತೆ ತೆರೆಯುವುದರ ಜತೆ ಹಳೆಯ ಠೇವಣಿಗಳನ್ನು ಅಮೃತ್ ಕಲಶ್​ಗೆ ನವೀಕರಿಸುವ ಅವಕಾಶವೂ ಇದೆ. ಟರ್ಮ್ ಮತ್ತು ಸ್ಪೆಷಲ್ ಟರ್ಮ್ ಡಿಪಾಸಿಟ್ ಆಯ್ಕೆಗಳು ಮಾತ್ರ ಯೋಜನೆಯಡಿ ಲಭ್ಯವಿವೆ.

ಬಡ್ಡಿ ಲೆಕ್ಕಾಚಾರ ಹೇಗೆ?

ಮಾಸಿಕ, ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ಬಡ್ಡಿ ಆಯ್ಕೆಗೆ ಅವಕಾಶವಿದೆ. ಮೆಚ್ಯೂರಿಟಿ ಅವಧಿಯ ಬಡ್ಡಿ ದರ ಆಯ್ದುಕೊಳ್ಳಲೂ ಅವಕಾಶವಿದೆ. ಈ ಯೋಜನೆಯಡಿ ದೊರೆಯುವ ಬಡ್ಡಿ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಅವಧಿಪೂರ್ವ ಹಿಂಪಡೆಯುವಿಕೆಗೆ ಅವಕಾಶ, ಸಾಲ ಸೌಲಭ್ಯವೂ ಇದೆ.

ಇತರ ಎಫ್​ಡಿಗಳು

ಎಸ್​​ಬಿಐ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ ಅಥವಾ ಎಫ್​ಡಿ ಬಡ್ಡಿ ದರಗಳನ್ನು ಹೆಚ್ಚಳ ಸುಮಾರು 5 ಮೂಲಾಂಶದಷ್ಟು ಹೆಚ್ಚಳ ಮಾಡಿ 25 ಮೂಲಾಂಶ ನಿಗದಿಮಾಡಿದೆ. ಇದು ಫೆಬ್ರುವರಿ 15ರಿಂದಲೇ ಅಸ್ತಿತ್ವಕ್ಕೆ ಬಂದಿದೆ. ಬ್ಯಾಂಕ್ ಇದೀಗ ಸಾಮಾನ್ಯ ಗ್ರಾಹಕರ ಎಫ್​ಡಿಗಳಿಗೆ ಶೇ 3ರಿಂದ 7ರ ವರೆಗೆ ಬಡ್ಡಿ ನೀಡುತ್ತಿದ್ದು, ಹಿರಿಯ ನಾಗರಿಕರಿಗೆ ಶೇ 3.5ರಿಂದ 7.50 ವರೆಗೆ ಬಡ್ಡಿ ನೀಡುತ್ತಿದೆ.

ಆರ್​ಬಿಐ ಫೆಬ್ರುವರಿ ಮೊದಲ ವಾರದಲ್ಲಿ ರೆಪೊ ದರವನ್ನು 25 ಮೂಲಾಂಶ ಹೆಚ್ಚಿಸಿ ಶೇ 6.50ಕ್ಕೆ ನಿಗದಿಪಡಿಸಿತ್ತು. ಇದರ ಬೆನ್ನಲ್ಲೇ ಎಸ್​ಬಿಐ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು