AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Amrit Kalash: ಎಸ್​ಬಿಐಯಿಂದ ಅಮೃತ ಕಲಶ್ ಡಿಪಾಸಿಟ್ ಠೇವಣಿ ಯೋಜನೆ​; ಸಿಗಲಿದೆ ಹೆಚ್ಚು ಬಡ್ಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸದಾಗಿ ಅಮೃತ ಕಲಶ್ ಡಿಪಾಸಿಟ್ ಟರ್ಮ್ ಡಿಪಾಸಿಟ್ ಯೋಜನೆ ಆರಂಭಿಸಿದೆ. ನಿರ್ದಿಷ್ಟ ಅವಧಿಗೆ ಹೆಚ್ಚು ಬಡ್ಡಿ ಸೇರಿದಂತೆ ಹಲವು ಪ್ರಯೋಜನಗಳನ್ನು ಈ ಯೋಜನೆಯಿಂದ ಠೇವಣಿದಾರರು ಪಡೆಯಬಹುದಾಗಿದೆ.

SBI Amrit Kalash: ಎಸ್​ಬಿಐಯಿಂದ ಅಮೃತ ಕಲಶ್ ಡಿಪಾಸಿಟ್ ಠೇವಣಿ ಯೋಜನೆ​; ಸಿಗಲಿದೆ ಹೆಚ್ಚು ಬಡ್ಡಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 04, 2023 | 9:00 AM

Share

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೊಸದಾಗಿ ಅಮೃತ ಕಲಶ್ ಡಿಪಾಸಿಟ್ (Amrit Kalash Deposit) ಟರ್ಮ್ ಡಿಪಾಸಿಟ್ ಯೋಜನೆ ಆರಂಭಿಸಿದೆ. ನಿರ್ದಿಷ್ಟ ಅವಧಿಗೆ ಹೆಚ್ಚು ಬಡ್ಡಿ ಸೇರಿದಂತೆ ಹಲವು ಪ್ರಯೋಜನಗಳನ್ನು ಈ ಯೋಜನೆಯಿಂದ ಠೇವಣಿದಾರರು ಪಡೆಯಬಹುದಾಗಿದೆ. ಅನಿವಾಸಿ ಬಾರತೀಯರೂ ಈ ಯೋಜನೆಯಡಿ ಠೇವಣಿ ಇಡಬಹುದಾಗಿದ್ದು, ಪ್ರಯೋಜನಗಳನ್ನು ಪಡೆಯಬಹುದು. 400 ದಿನಗಳ ಠೇವಣಿ ಯೋಜನೆ ಆಕರ್ಷಕ ಬಡ್ಡಿಯ ಆಫರ್ ನೀಡುತ್ತಿದೆ. ಈ ಠೇವಣಿ ಯೋಜನೆಯಡಿ ಹಿರಿಯ ನಾಗಕರಿಕರು ಶೇ 7.60 ವರೆಗೆ ಬಡ್ಡಿ ಪಡೆಯಬಹುದಾಗಿದೆ. ಈ ಯೋಜನೆಯಡಿ ಠೇವಣಿ ಖಾತೆ ತೆರೆಯಲು ಮಾರ್ಚ್​ 31ರ ವರೆಗೆ ಮಾತ್ರ ಅವಕಾಶವಿದೆ.

ಅಮೃತ್ ಕಲಶ್ ಡಿಪಾಸಿಟ್ ಠೇವಣಿಗಳು

ಅಮೃತ್ ಕಲಶ್ ಡಿಪಾಸಿಟ್ ಅಡಿಯಲ್ಲಿ ದೇಶೀಯ ರಿಟೇಲ್ ಟರ್ಮ್ ಡಿಪಾಸಿಟ್ (2 ಕೋಟಿ ರೂ), ಎನ್​ಆರ್​ಐ ರುಪೀ ಟರ್ಮ್ ಡಿಪಾಸಿಟ್ ಖಾತೆ ತೆರೆಯಬಹುದಾಗಿದೆ. ಹೊಸದಾಗಿ ಖಾತೆ ತೆರೆಯುವುದರ ಜತೆ ಹಳೆಯ ಠೇವಣಿಗಳನ್ನು ಅಮೃತ್ ಕಲಶ್​ಗೆ ನವೀಕರಿಸುವ ಅವಕಾಶವೂ ಇದೆ. ಟರ್ಮ್ ಮತ್ತು ಸ್ಪೆಷಲ್ ಟರ್ಮ್ ಡಿಪಾಸಿಟ್ ಆಯ್ಕೆಗಳು ಮಾತ್ರ ಯೋಜನೆಯಡಿ ಲಭ್ಯವಿವೆ.

ಬಡ್ಡಿ ಲೆಕ್ಕಾಚಾರ ಹೇಗೆ?

ಮಾಸಿಕ, ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ಬಡ್ಡಿ ಆಯ್ಕೆಗೆ ಅವಕಾಶವಿದೆ. ಮೆಚ್ಯೂರಿಟಿ ಅವಧಿಯ ಬಡ್ಡಿ ದರ ಆಯ್ದುಕೊಳ್ಳಲೂ ಅವಕಾಶವಿದೆ. ಈ ಯೋಜನೆಯಡಿ ದೊರೆಯುವ ಬಡ್ಡಿ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಅವಧಿಪೂರ್ವ ಹಿಂಪಡೆಯುವಿಕೆಗೆ ಅವಕಾಶ, ಸಾಲ ಸೌಲಭ್ಯವೂ ಇದೆ.

ಇತರ ಎಫ್​ಡಿಗಳು

ಎಸ್​​ಬಿಐ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ ಅಥವಾ ಎಫ್​ಡಿ ಬಡ್ಡಿ ದರಗಳನ್ನು ಹೆಚ್ಚಳ ಸುಮಾರು 5 ಮೂಲಾಂಶದಷ್ಟು ಹೆಚ್ಚಳ ಮಾಡಿ 25 ಮೂಲಾಂಶ ನಿಗದಿಮಾಡಿದೆ. ಇದು ಫೆಬ್ರುವರಿ 15ರಿಂದಲೇ ಅಸ್ತಿತ್ವಕ್ಕೆ ಬಂದಿದೆ. ಬ್ಯಾಂಕ್ ಇದೀಗ ಸಾಮಾನ್ಯ ಗ್ರಾಹಕರ ಎಫ್​ಡಿಗಳಿಗೆ ಶೇ 3ರಿಂದ 7ರ ವರೆಗೆ ಬಡ್ಡಿ ನೀಡುತ್ತಿದ್ದು, ಹಿರಿಯ ನಾಗರಿಕರಿಗೆ ಶೇ 3.5ರಿಂದ 7.50 ವರೆಗೆ ಬಡ್ಡಿ ನೀಡುತ್ತಿದೆ.

ಆರ್​ಬಿಐ ಫೆಬ್ರುವರಿ ಮೊದಲ ವಾರದಲ್ಲಿ ರೆಪೊ ದರವನ್ನು 25 ಮೂಲಾಂಶ ಹೆಚ್ಚಿಸಿ ಶೇ 6.50ಕ್ಕೆ ನಿಗದಿಪಡಿಸಿತ್ತು. ಇದರ ಬೆನ್ನಲ್ಲೇ ಎಸ್​ಬಿಐ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ