AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PF Interest: ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದ ಪಿಎಫ್​ ಬಡ್ಡಿ ದರ ಶೇ 8.1ಕ್ಕೆ

2021-22ನೇ ಸಾಲಿಗೆ ಇಪಿಎಫ್​ಒದಿಂದ ಪಿಎಫ್​ ಬಡ್ಡಿ ದರ ಶೇ 8.1ರಷ್ಟು ನಿಗದಿ ಮಾಡಲಾಗಿದ್ದು, ನಾಲ್ಕು ದಶಕದಲ್ಲೇ ಕನಿಷ್ಠ ಮಟ್ಟವನ್ನು ತಲುಪಿದೆ.

PF Interest: ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದ ಪಿಎಫ್​ ಬಡ್ಡಿ ದರ ಶೇ 8.1ಕ್ಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 03, 2022 | 8:14 PM

Share

ಇಪಿಎಫ್​ಒ (EPFO) ಆದೇಶದ ಪ್ರಕಾರ, 2021-22ನೇ ಸಾಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿ ಮೇಲೆ ಶೇ 8.1ರಷ್ಟು ಬಡ್ಡಿ ದರ ನೀಡಲು ಸರ್ಕಾರವು ಮಂಜೂರು ಮಾಡಿದೆ. ಇದು ನಾಲ್ಕು ದಶಕದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಪಿಟಿಐ ವರದಿ ಮಾಡಿದೆ. ಈ ನಿರ್ಧಾರವು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್​ನ (EPFO) 5 ಕೋಟಿ ಚಂದಾದಾರರ ಮೇಲೆ ಪರಿಣಾಮ ಬೀರಲಿದೆ. ಹಣಕಾಸು ವರ್ಷ 2021-22ರಲ್ಲಿ ಶೇ 8.1ರಷ್ಟು ಬಡ್ಡಿ ದರ ನೀಡುವುದಕ್ಕೆ ಮಾರ್ಚ್​ ತಿಂಗಳಲ್ಲಿ ನಿರ್ಧಾರ ಮಾಡಲಾಯಿತು. ಈ ಹಿಂದೆ ಶೇ 8.5ರಷ್ಟು ಬಡ್ಡಿ ದರ ನೀಡಲಾಗಿತ್ತು. 1977-78ರ ನಂತರದಲ್ಲಿ ಈ ಶೇ 8.1ರ ಬಡ್ಡಿ ದರವು ಅತ್ಯಂತ ಕನಿಷ್ಠ ಮಟ್ಟದ ಬಡ್ಡಿದರ ಆಗಿದೆ. ಈ ಹಿಂದೆ ಶೇ 8ರಷ್ಟಿತ್ತು. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, 2021-22ನೇ ಸಾಲಿನಲ್ಲಿ ಶೇ 8.1ರಷ್ಟು ಬಡ್ಡಿಯನ್ನು ಜಮೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಪ್ರಸ್ತಾವವನ್ನು ಒಪ್ಪಿಗೆ ಪಡೆಯುವುದರ ಸಲುವಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗಿದೆ.

2021ರ ಮಾರ್ಚ್​ನಲ್ಲಿ ಕೇಂದ್ರೀಯ ಮಂಡಳಿ ಟ್ರಸ್ಟಿಗಳು (CBT) 2020-21ನೇ ಸಾಲಿನಲ್ಲಿ ಶೇ 8.5ರ ಬಡ್ಡಿ ದರವನ್ನು ನಿರ್ಧರಿಸಿದ್ದರು. ಸಿಬಿಟಿಯಲ್ಲಿ ಸರ್ಕಾರ, ಉದ್ಯೋಗಿಗಳು ಮತ್ತು ಸಿಬ್ಬಂದಿ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಇದರ ನೇತೃತ್ವವನ್ನು ಕಾರ್ಮಿಕ ಸಚಿವರು ವಹಿಸುತ್ತಾರೆ. 2019-20ರಲ್ಲಿ ಏಳು ವರ್ಷದ ಕನಿಷ್ಠ ಮಟ್ಟ ಶೇ 8.5ಕ್ಕೆ ಬಡ್ಡಿ ದರ ಕುಸಿಯಿತು. ಅದಕ್ಕೂ ಮುನ್ನ 2018-19ರ ಸಾಲಿನಲ್ಲಿ ಪಿಎಫ್​ ಬಡ್ಡಿ ದರ ಶೇ 8.65 ಇತ್ತು. 2019-20ರಲ್ಲಿ ನೀಡಿದ್ದ ಬಡ್ಡಿ ದರದ ಮೊತ್ತ ಶೇ 8.5 2012-13ರ ನಂತರದ ಕನಿಷ್ಠ ಮಟ್ಟವಾಗಿತ್ತು. ಇಪಿಎಫ್​ಒದಿಂದ ಅದರ ಚಂದಾದಾರರಿಗೆ 2016-17ರಲ್ಲಿ ಶೇ 8.65 ಹಾಗೂ 2017-18ರಲ್ಲಿ ಶೇ 8.55ರಷ್ಟು ಬಡ್ಡಿ ನೀಡಲಾಗಿದೆ.

2015-16ರಲ್ಲಿ ಬಡ್ಡಿ ದರ ಸ್ವಲ್ಪ ಮಟ್ಟಿಗೆ ಹೆಚ್ಚು, ಅಂದರೆ ಶೇ 8.8ರಷ್ಟಿತ್ತು. 2013-14 ಹಾಗೂ 2014-15ರಲ್ಲಿ ಶೇ 8.75 ಆಯಿತು. 2012-13ರಲ್ಲಿ ಮಂಜೂರು ಮಾಡಿದ್ದ ಶೇ 8.5ಕ್ಕಿಂತ ಹೆಚ್ಚಾಗಿತ್ತು. 2011-12ರಲ್ಲಿ ಬಡ್ಡಿ ದರದ ಪ್ರಮಾಣ ಶೇ 8.25ರಷ್ಟಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Universal Account Number: ನಿಮ್ಮ ಇಪಿಎಫ್ ಖಾತೆಯ ಯುಎಎನ್ ಅನ್ನು ಕಂಡುಹಿಡಿಯುವುದು ಹೇಗೆ

Published On - 8:14 pm, Fri, 3 June 22

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ