AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋನ್ ಪೇ, ಗೂಗಲ್ ಪೇಯನ್ನು ಬೈಪಾಸ್ ಮಾಡುವ ಹೊಸ ಯುಪಿಐ ಪ್ಲಗಿನ್; ಆನ್​ಲೈನ್ ವರ್ತಕರಿಗೊಂದು ಹೊಸ ಸೌಲಭ್ಯ

UPI Plugin: ಸ್ವಿಗ್ಗಿ, ಮಿನ್​ತ್ರಾ ಇತ್ಯಾದಿ ಆನ್​ಲೈನ್ ವರ್ತಕರಿಗೆ ಗ್ರಾಹಕರಿಂದ ಸುಲಭವಾಗಿ ಪೇಮೆಂಟ್ ಆಗಲು ಅನುವಾಗುವಂತೆ ಎನ್​ಪಿಸಿಐ ಹೊಸ ಯುಪಿಐ ಪ್ಲಗಿನ್ ಅಥವಾ ಎಸ್​ಡಿಕೆ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ.

ಫೋನ್ ಪೇ, ಗೂಗಲ್ ಪೇಯನ್ನು ಬೈಪಾಸ್ ಮಾಡುವ ಹೊಸ ಯುಪಿಐ ಪ್ಲಗಿನ್; ಆನ್​ಲೈನ್ ವರ್ತಕರಿಗೊಂದು ಹೊಸ ಸೌಲಭ್ಯ
ಯುಪಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 07, 2023 | 2:41 PM

Share

ನವದೆಹಲಿ, ಆಗಸ್ಟ್ 7: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ (NPCI) ಸಂಸ್ಥೆ ಯುಪಿಐನಲ್ಲಿ ಹೊಸ ಆವಿಷ್ಕಾರ ತಂದಿದೆ. ಇದು ಸ್ವಿಗ್ಗಿ, ಜೊಮಾಟೊ, ಮಿಂತ್ರಾ ಇತ್ಯಾದಿ ಇಕಾಮರ್ಸ್ ಕಂಪನಿಗಳಿಗೆ ಹೊಸ ಪೇಮೆಂಟ್ ಅವಕಾಶ ಮಾಡಿಕೊಡುತ್ತದೆ. ಈ ಕಂಪನಿಗಳು ಗ್ರಾಹಕರಿಂದ ಹಣ ಪಡೆಯಲು ಪೇಮೆಂಟ್ ಆ್ಯಪ್​ಗಳಿಗೆ ಕಳುಹಿಸುವ ಬದಲು ತಮ್ಮಲ್ಲೇ ನೇರವಾಗಿ ಹಣಪಾವತಿಗೆ ಅವಕಾಶ ಕೊಡುತ್ತದೆ ಹೊಸ ಯುಪಿಐ ಆವಿಷ್ಕಾರ. ಇದು ಮರ್ಚೆಂಟ್ ಸಾಫ್ಟ್​ವೇರ್ ಡೆವಲಪ್ಮೆಂಟ್ ಕಿಟ್ ಅಥವಾ ಯುಪಿಐ ಪ್ಲಗ್ಗಿನ್ ಆಗಿರುವ ಈ ಹೊಸ ಉತ್ಪನ್ನವು ಇಕಾಮರ್ಸ್ ಕಂಪನಿಗಳಿಗೆ ತಮ್ಮದೇ ಪ್ರತ್ಯೇಕ ವರ್ಚುವಲ್ ಪೇಮೆಂಟ್ ವಿಳಾಸ (Virtual Payment Address) ನೀಡುತ್ತದೆ. ಇದನ್ನು ಬಳಸಿ ತಮ್ಮದೇ ಪ್ಲಾಟ್​ಫಾರ್ಮ್​ನೊಳಗೆಯೇ ಗ್ರಾಹಕರಿಂದ ಪೇಮೆಂಟ್ ಪಡೆಯಲು ಸಾಧ್ಯವಾಗುತ್ತದೆ.

ಈಗಿರುವ ವ್ಯವಸ್ಥೆಯಲ್ಲಿ, ಸ್ವಿಗ್ಗಿ ಆ್ಯಪ್​ಗೆ ಹೋಗುವ ಗ್ರಾಹಕ ಹಣಪಾವತಿಸಲು ಯುಪಿಐ ಪೇಮೆಂಟ್ ಎಂಬ ಆಯ್ಕೆ ಆರಿಸಿಕೊಂಡರೆ, ಅವರು ಗೂಗಲ್ ಪೇ, ಫೋನ್ ಪೇನಂತರ ಪೇಮೆಂಟ್ ಆ್ಯಪ್​ಗೆ ಹೋಗಬೇಕಾಗುತ್ತದೆ. ಅಲ್ಲಿ ಹಣ ಪಾವತಿಸಿದ ಬಳಿಕ ವಾಪಸ್ ಸ್ವಿಗ್ಗಿ ಪ್ಲಾಟ್​ಫಾರ್ಮ್​ಗೆ ಮರಳುತ್ತಾರೆ. ಈ ಸಂದರ್ಭದಲ್ಲಿ ಕೆಲ ಬಾರಿ ಪೇಮೆಂಟ್ ವೈಫಲ್ಯದ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಎನ್​ಪಿಸಿಐ ಈಗ ಹೊಸ ಯುಪಿಐ ಪ್ಲಗ್ಗಿನ್ ಅನ್ನು ಆವಿಷ್ಕರಿಸಿರುವುದು ತಿಳಿದುಬಂದಿದೆ. ಈ ಪ್ಲಗ್ಗಿನ್ ಅನ್ನು ಸ್ವಿಗ್ಗಿ ತನ್ನ ಪೇಮೆಂಟ್ ಆಪ್ಷನ್ ಆಗಿ ಬಳಸಬಹುದು. ಪೇಮೆಂಟ್ ಆ್ಯಪ್​ಗೆ ರೀಡೈರೆಕ್ಟ್ ಆಗುವ ಬದಲು ಸ್ವಿಗ್ಗಿ ಪ್ಲಾಟ್​ಫಾರ್ಮ್​ನಲ್ಲಿಯೇ ಇರುವ ಯುಪಿಐ ಪ್ಲಗಿನ್ ಅಥವಾ ಎಸ್​ಡಿಕೆ ಮೂಲಕ ಗ್ರಾಹಕನಿಂದ ಹಣ ಪಾವತಿ ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್ ಇದೆಯಾ? ಬಹಳ ಸುಲಭವಾಗಿ ಮತ್ತು ತೀರಾ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ

ಪೇಮೆಂಟ್ ಗೇಟ್​ವೇ ಮತ್ತು ಪ್ರೋಸಸಿಂಗ್ ಕಂಪನಿಗಳಾದ ರೇಜರ್​ಪೇ, ಜಸ್​ಪೇ, ಪೇಟಿಎಂ ಈಗಾಗಲೇ ತಮ್ಮ ವರ್ತಕರಿಗೆ ಇಂಥದ್ದೊಂದು ಯುಪಿಐ ಪ್ಲಗಿನ್ ಅಥವಾ ಎಸ್​ಡಿಕೆ ಬಳಕೆಗೆ ಅವಕಾಶ ಕೊಟ್ಟಿದೆ.

ಫೋನ್ ಪೇ, ಗೂಗಲ್ ಪೇಗೆ ಕಷ್ಟ?

ಒಂದು ವೇಳೆ ಯುಪಿಐ ಪೇಮೆಂಟ್​ಗೆ ಎನ್​ಪಿಸಿಐ ರೂಪಿಸಿರುವ ಸಾಫ್ಟ್​ವೇರ್ ಡೆವಲಪ್ಮೆಂಟ್ ಕಿಟ್ ಅನ್ನು ವರ್ತಕರು ಬಳಸತೊಡಗಿದರೆ ಹೆಚ್ಚು ಹಾನಿಯಾಗುವುದು ಫೋನ್ ಪೇ ಮತ್ತು ಗೂಗಲ್ ಪೇಗೆ. ಇವೆರಡು ಕೂಡ ಭಾರತದ ಅತಿದೊಡ್ಡ ಪೇಮೆಂಟ್ ಆ್ಯಪ್​ಗಳಾಗಿವೆ. ಸ್ವಿಗ್ಗಿ, ಮಿನ್​ತ್ರಾ ಇತ್ಯಾದಿ ದೊಡ್ಡ ವರ್ತಕರು ಕೈಬಿಟ್ಟುಹೋದರೆ ಇವುಗಳ ಮಾರುಕಟ್ಟೆ ಹಿಡಿತ ಕಡಿಮೆ ಆಗಬಹುದು.

ಇದನ್ನೂ ಓದಿ: ಅನಿಲ್ ಅಂಬಾನಿ ಬೆಂಬಲಿತ ಕಂಪನಿಗಳದ್ದೂ ಸೇರಿ ಲಕ್ಷ ಕೋಟಿ ರೂನಷ್ಟು ಕೆಟ್ಟ ಸಾಲ ಮಾರಲಿರುವ ಎಸ್​ಬಿಐ; ಇದನ್ನು ಖರೀದಿಸುತ್ತಿರುವವರು ಯಾರು?

ಫೋನ್ ಪೇ ಮುಖ್ಯಸ್ಥರ ಪ್ರತಿಕ್ರಿಯೆ

ಫೋನ್ ಪೇ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಸಿಟಿಒ ರಾಹುಲ್ ಚಾರಿ ಕಳೆದ ತಿಂಗಳು ಈ ಹೊಸ ಯುಪಿಐ ಆವಿಷ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.

‘ಯುಪಿಐ ಪ್ಲಗಿನ್ ಮಾಡಲ್​ನಿಂದ ಪೇಮೆಂಟ್ ಯಶಸ್ಸಿನ ಪ್ರಮಾಣ ಉತ್ತಮಗೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪೇಮೆಂಟ್ ವ್ಯವಸ್ಥೆಯ ಜವಾಬ್ದಾರಿಯು ಪೇಮೆಂಟ್ ಆ್ಯಪ್ ಬದಲು ಪ್ರಾಯೋಜಿತ ಬ್ಯಾಂಕ್ ಮತ್ತು ವರ್ತಕರ ಆ್ಯಪ್​ಗೆ ವರ್ಗವಾಗುತ್ತದೆ ಅಷ್ಟೇ. ವರ್ತಕರಿಗೆ ಇದು ಹೆಚ್ಚು ಹೊರೆ ತರುತ್ತದೆ. ಇದರಿಂದ ಅವರು ತಮ್ಮ ಮುಖ್ಯ ವ್ಯವಹಾರದತ್ತ ಗಮನ ಕೊಡಲು ಆಗದೇಹೋಗಬಹುದು’ ಎಂದು ರಾಹುಲ್ ಚಾರಿ ತಮ್ಮ ಬ್ಲಾಗ್​ವೊಂದರಲ್ಲಿ ಬರೆದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!