AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Piramal Group: ಡಿಎಚ್​​ಎಫ್​ಎಲ್​ ಸ್ವಾಧೀನ ಪೂರ್ಣಗೊಳಿಸಿದ ಪಿರಮಲ್; ಏನಿದು ಭಾರತದ ಅತಿದೊಡ್ಡ ವಹಿವಾಟು?

ಡಿಎಚ್​ಎಫ್​ಎಲ್​ ಸ್ವಾಧೀನ ಪ್ರಕ್ರಿಯೆಯನ್ನು ಪಿರಮಲ್ ಸಮೂಹ ಪೂರ್ತಿಗೊಳಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಲೇಖನದಲ್ಲಿದೆ.

Piramal Group: ಡಿಎಚ್​​ಎಫ್​ಎಲ್​ ಸ್ವಾಧೀನ ಪೂರ್ಣಗೊಳಿಸಿದ ಪಿರಮಲ್; ಏನಿದು ಭಾರತದ ಅತಿದೊಡ್ಡ ವಹಿವಾಟು?
Follow us
TV9 Web
| Updated By: Srinivas Mata

Updated on:Sep 29, 2021 | 5:12 PM

ಪಿರಮಲ್ ಕಂಪೆನಿಯಿಂದ 34,250 ಕೋಟಿ ರೂಪಾಯಿಗಳಿಗೆ ಡಿಎಚ್‌ಎಫ್‌ಎಲ್ ಸ್ವಾಧೀನವನ್ನು ಪೂರ್ಣಗೊಳಿಸಿದ್ದು, ಇದರಲ್ಲಿ ನಗದು ಮತ್ತು ಪರಿವರ್ತಿಸಲಾಗದ ಡಿಬೆಂಚರ್‌ಗಳು (Non-convertible debentures) ಸೇರಿವೆ. ಒಟ್ಟು ಮೊತ್ತವಾದ 34,250 ಕೋಟಿ ರುಪಾಯಿಗಳಲ್ಲಿ ಸುಮಾರು 14,700 ಕೋಟಿ ರೂಪಾಯಿಗಳ ಮುಂಗಡ ನಗದು ಪಾವತಿ ಮತ್ತು ಸುಮಾರು 19,550 ಕೋಟಿ ರೂಪಾಯಿಗಳ ಸಾಲದ ಇನ್​ಸ್ಟ್ರುಮೆಂಟ್ ವಿತರಣೆಯನ್ನು ಒಳಗೊಂಡಿದೆ (10 ವರ್ಷದ NCDಗಳು ಶೇ 6.75 ದರದ ಅರ್ಧ ವಾರ್ಷಿಕ ಆಧಾರದ ಮೇಲೆ). ಒತ್ತಡದ ಸ್ವತ್ತುಗಳ ಅತಿದೊಡ್ಡ ಮರುಪಡೆಯುವುದು ಅಂದರೆ, ಡಿಎಚ್‌ಎಫ್‌ಎಲ್ ದಿವಾಳಿತನ ಪರಿಹಾರ ಪ್ರಕರಣದಲ್ಲಿ ಬ್ಯಾಂಕ್​ ನಗದು ಮತ್ತು ಎನ್‌ಸಿಡಿಗಳನ್ನು ಪಡೆಯುತ್ತಿದೆ. ಹಣಕಾಸು ಸೇವೆಗಳ (Financial Services) ವಲಯದಲ್ಲಿ ಐಬಿಸಿ (Insolvency And Bankruptcy Code) ಮಾರ್ಗದ ಅಡಿಯಲ್ಲಿ ಇದು ಮೊದಲ ಯಶಸ್ವಿ ತೀರುವಳಿಯಾಗಿದೆ ಮತ್ತು ಮೌಲ್ಯದ ದೃಷ್ಟಿಯಿಂದ ಅತಿದೊಡ್ಡ ತೀರುವಳಿಗಳಲ್ಲಿ ಒಂದಾಗಿದೆ. ಮರುಪಡೆಯುವಿಕೆ ಬ್ಯಾಂಕ್​ಗಳು ತಮ್ಮ ಬಾಟಮ್ ಲೈನ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಒಪ್ಪಂದದ ಮಾಹಿತಿಗಳು ಇಲ್ಲಿವೆ: DHFLನ ಸಾಲಗಾರರು (FD ಹೊಂದಿರುವವರು ಸೇರಿದಂತೆ) ಈ ತೀರುವಳಿ ಪ್ರಕ್ರಿಯೆಯಿಂದ ರೂ. 38,000 ಕೋಟಿಗಳ ಒಟ್ಟು ಮೊತ್ತವನ್ನು ಹಿಂಪಡೆಯುತ್ತಾರೆ. ಈ ಮೊತ್ತವು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ.

(i) ರೂ. 34,250 ಕೋಟಿಗಳನ್ನು ಪಿಸಿಎಚ್‌ಎಫ್‌ಎಲ್ ನಗದು ಮತ್ತು ಪರಿವರ್ತಿಸಲಾಗದ ಡಿಬೆಂಚರ್‌ಗಳ ಸಂಯೋಜನೆಯಾಗಿ ಪಾವತಿಸಬೇಕು ಮತ್ತು (ii) ರೂ. 3,800 ಕೋಟಿಗಳು, ಇದು ಡಿಎಚ್‌ಎಫ್‌ಎಲ್‌ನಲ್ಲಿ ಲಭ್ಯವಿರುವ ನಗದು ಬಾಕಿಯಿಂದ ಸಾಲಗಾರರು ಪಡೆಯುತ್ತಾರೆ (ತೀರುವಳಿ ಯೋಜನೆಯ ಪ್ರಕಾರ).

ಸುಮಾರು ಶೇ 94ರಷ್ಟು ಸಾಲದಾತರು ಪಿರಮಲ್ ಅವರ ತೀರುವಳಿ ಯೋಜನೆಯ ಪರವಾಗಿ ಮತ ಚಲಾಯಿಸಿದ್ದಾರೆ. ರೆಗ್ಯುಲೇಟರಿ ಫೈಲಿಂಗ್‌ನ ಪ್ರಕಾರ, ಪಿರಮಲ್ ಗ್ರೂಪ್ ಸ್ವಾಧೀನಪಡಿಸಿಕೊಳ್ಳುವ ಮೂಲಕ ಸುಮಾರು ಹೆಚ್ಚಿನ ಡಿಎಚ್‌ಎಫ್‌ಎಲ್ ಸಾಲಗಾರರು ಶೇ 46ರಷ್ಟು ವಸೂಲಿ ಮಾಡಿದಂತಾಗುತ್ತದೆ. ಇನ್ನು ಮುಂದೆ ಈ ಎಲ್ಲ ಫಲಿತಾಂಶದ ಫಲವಾಗಿ ಕಂಪೆನಿಯನ್ನು PCHFL ಎಂದು ಕರೆಯಲಾಗುತ್ತದೆ.

“ಈ ಅತ್ಯಾಕರ್ಷಕ ಸ್ವಾಧೀನವನ್ನು ಪೂರ್ಣಗೊಳಿಸಲು ಗೊತ್ತುಪಡಿಸಿದ ಪಾವತಿಯನ್ನು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ಇದು ನಮ್ಮ ದೇಶದ ಪ್ರಮುಖ ಮತ್ತು ಡಿಜಿಟಲ್ ಆಧಾರಿತ, ವೈವಿಧ್ಯಮಯ ಹಣಕಾಸು ಸೇವೆಗಳ ಸಂಘಟನೆಯಾಗುವ ನಮ್ಮ ಯೋಜನೆಗಳನ್ನು ವೇಗಗೊಳಿಸುತ್ತದೆ. ಇದು ನಮ್ಮ ದೇಶದ ಗ್ರಾಹಕರ ಆರ್ಥಿಕ ಅಗತ್ಯಗಳನ್ನು ಪೂರೈಸುವತ್ತ ಗಮನ ಹರಿಸುತ್ತದೆ. ಯಾವುದೇ ಮುಂದುವರಿದ ಆರ್ಥಿಕತೆಯ ಒಂದು ಪ್ರಮುಖ ಲಕ್ಷಣವೆಂದರೆ ದೃಢವಾದ ದಿವಾಳಿತನ ಸಂಹಿತೆ. ದಿವಾಳಿತನ ಸುಧಾರಣೆಗಳು ಈ ರೀತಿಯ ಸಂಕೀರ್ಣ ನಿರ್ಣಯಗಳನ್ನು ಹೆಚ್ಚು ಸಂಪೂರ್ಣ ಮತ್ತು ಸಕಾಲಿಕ ವಿಧಾನದಲ್ಲಿ ಪರಿಹರಿಸಲು ಸಾಧ್ಯ ಮಾಡಿದೆ,” ಎಂದು ಪಿರಮಲ್ ಸಮೂಹದ ಅಧ್ಯಕ್ಷ ಅಜಯ್ ಪಿರಮಲ್ ಹೇಳಿದ್ದಾರೆ.

“ವಿಲೀನಗೊಂಡ ಘಟಕವು ಪಿರಮಾಲ್‌ನ ಆರ್ಥಿಕ ಸಾಮರ್ಥ್ಯ, ಮೂಲ ಮೌಲ್ಯಗಳು ಮತ್ತು ಸಾಂಸ್ಥಿಕ ವಿಶ್ವಾಸಾರ್ಹತೆಯನ್ನು ಡಿಎಚ್‌ಎಫ್‌ಎಲ್‌ನ ಭೌಗೋಳಿಕ ಹೆಜ್ಜೆಗುರುತು ಮತ್ತು 301 ಶಾಖೆಗಳ ವಿತರಣಾ ಜಾಲ ಹಾಗೂ 2,338 ಉದ್ಯೋಗಿಗಳಿಗೆ 24 ರಾಜ್ಯಗಳಲ್ಲಿ 1 ಮಿಲಿಯನ್ ಜೀವಮಾನದ ಗ್ರಾಹಕರ ಜತೆಗೆ ಸೇರ್ಪಡೆ ಮಾಡುತ್ತಿದೆ. ಇದು ದೇಶದ ಪ್ರಮುಖ ವಸತಿ ಹಣಕಾಸು ಕಂಪನಿಗಳಲ್ಲಿ ಒಂದಾಗಿದೆ,” ಎಂದು ಪಿರಮಲ್ ಸಮೂಹವು ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ಹೇಳಿದೆ.

ಇದನ್ನೂ ಓದಿ: DHFL trading suspend: ಡಿಎಚ್​ಎಫ್ಎಲ್ ಷೇರು ವಹಿವಾಟು ಅಮಾನತು ಮಾಡಿದ ಬಿಎಸ್​ಇ, ಎನ್​ಎಸ್​ಇ

Published On - 5:11 pm, Wed, 29 September 21

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ