AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DHFL trading suspend: ಡಿಎಚ್​ಎಫ್ಎಲ್ ಷೇರು ವಹಿವಾಟು ಅಮಾನತು ಮಾಡಿದ ಬಿಎಸ್​ಇ, ಎನ್​ಎಸ್​ಇ

ಜೂನ್ 14, 2021ರಿಂದ ಅನ್ವಯ ಆಗುವಂತೆ ಡಿಎಚ್​ಎಫ್ಎಲ್ ಷೇರು ವಹಿವಾಟನ್ನು ಎನ್​ಎಸ್​ಇ ಮತ್ತು ಬಿಎಸ್​ಇಯಲ್ಲಿ ಅಮಾನತು ಮಾಡಲಾಗಿದೆ. ಈ ನಿರ್ಧಾರದ ಹಿಂದಿನ ಕಾರಣ ಇಲ್ಲಿದೆ.

DHFL trading suspend: ಡಿಎಚ್​ಎಫ್ಎಲ್ ಷೇರು ವಹಿವಾಟು ಅಮಾನತು ಮಾಡಿದ ಬಿಎಸ್​ಇ, ಎನ್​ಎಸ್​ಇ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 13, 2021 | 12:32 AM

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಇಂಡಿಯಾ (ಎನ್​ಎಸ್​ಇ)ನಿಂದ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಡಿಎಚ್​ಎಫ್​ಎಲ್​) ಈಕ್ವಿಟಿ ಷೇರು ವಹಿವಾಟನ್ನು ಅಮಾನತು ಮಾಡಲಾಗಿದೆ. ಈ ನಿಷೇಧವು ಜೂನ್ 14, 2021ರಿಂದ ಜಾರಿಗೆ ಬರಲಿದೆ ಎಂದು ಎರಡು ಎಕ್ಸ್​ಚೇಂಜ್​ನ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಬಿಎಸ್​ಇ ಮತ್ತು ಎನ್​ಎಸ್​ಇ ಸುತ್ತೋಲೆಯಲ್ಲಿ ತಿಳಿಸಿರುವಂತೆ, ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧೀಕರಣ (NCLT), ಮುಂಬೈ ಪೀಠವು ಒಪ್ಪಿಕೊಂಡಿರುವಂಥ ತೀರುವಳಿ ಯೋಜನೆ ಬಗ್ಗೆ ಜೂನ್ 8ನೇ ತಾರೀಕಿನಂದು ಡಿಎಚ್​ಎಫ್​ಎಲ್​ನಿಂದ ಎಕ್ಸ್​ಚೇಂಜ್​ಗಳಿಗೆ ಮಾಹಿತಿ ನೀಡಲಾಗಿದೆ ಎಂದು ಬಿಎಸ್​ಇ ಮತ್ತು ಎನ್​ಎಸ್​ಇ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದರಿಂದ ಕಂಪೆನಿಯ ಈಕ್ವಿಟಿ ಷೇರುಗಳು ಡಿಲಿಸ್ಟ್ ಆಗುತ್ತವೆ ಎನ್ನಲಾಗಿದೆ.

ಡಿಎಚ್​ಎಫ್​ಎಲ್​ಗೆ ಪಿರಾಮಲ್ ಸಮೂಹ ಯಶಸ್ವಿ ಬಿಡ್​ ಮಾಡಿದ್ದು, ತೀರುವಳಿ ಯೋಜನೆಗೆ ಎನ್​ಸಿಎಲ್​ಟಿ ಒಪ್ಪಿಗೆ ನೀಡಿದೆ. ಡಿಎಚ್​ಎಫ್​ಎಲ್​ ಷೇರಿನ ವಹಿವಾಟು ನಡೆಸಲು ಒಪ್ಪಿಗೆ ನೀಡಿದ್ದಾಗಿಯೂ ಷೇರಿಗೆ ಶೂನ್ಯ ಮೌಲ್ಯ ಎಂದು ಕಟ್ಟಲಾಗಿದೆ. ಬಿಎಸ್​ಇ ಮತ್ತು ಎನ್​ಎಸ್​ಇ ಸುತ್ತೋಲೆಯಲ್ಲಿ ತಿಳಿಸಿರುವಂತೆ, ಡಿಎಚ್​ಎಫ್​ಎಲ್ ಜೂನ್ 9ರಂದು ಹೇಳಿರುವ ಪ್ರಕಾರ, ಈಕ್ವಿಟಿ ಷೇರಿಗೆ ಯಾವುದೇ ಮೌಲ್ಯವಿಲ್ಲ. ಇದು ಕಂಪೆನಿಯ ಲಿಕ್ವಿಡೇಷನ್ ಮೌಲ್ಯದ ಪ್ರಕಾರ ಆಗಿರುವಂಥದ್ದು. ಇದನ್ನು ಅಂದಾಜು ಮಾಡಿರುವವರು ನೋಂದಾಯಿತ ಮೌಲ್ಯಮಾಪಕರು. ಅವರನ್ನು ನೇಮಕ ಮಾಡಿರುವುದು Insolvency and Bankruptcy Board of India (Insolvency Resolution Process for Corporate Persons) ನಿಯಮಾವಳಿ, 2016 ಅಡಿಯಲ್ಲಿ.

ಇನ್ನೂ ಮುಂದುವರಿದು, ಕಂಪೆನಿ ಹೇಳಿರುವಂತೆ ತೀರುವಳಿ ಯೋಜನೆಗೆ ಒಪ್ಪಿರುವಂಥ ಎನ್​ಸಿಎಲ್​ಟಿ ಲಿಖಿತ ಆದೇಶಕ್ಕಾಗಿ ಕಾಯಲಾಗುತ್ತಿದೆ. ಉಳಿದ ಮಾಹಿತಿಗಳು ಉಳಿದಂತೆ ಹಾಗೇ ಇವೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಡಿಎಚ್​ಎಫ್​ಎಲ್​ ಷೇರನ್ನು ಈ ವಾರದ ಆರಂಭದಲ್ಲಿ ವಹಿವಾಟು ನಡೆಸಲು ಅವಕಾಶ ನೀಡಲಾಗಿತ್ತು. ಜತೆಗೆ ಗರಿಷ್ಠ ಮಟ್ಟ ಶೇ 10ರಷ್ಟು ಏರಿಕೆಗೂ ಅನುಮತಿಸಿತ್ತು. ಎನ್​ಎಸ್​ಇಯಲ್ಲಿ 14 ಕೋಟಿ ಷೇರು ವಹಿವಾಟಾಗಿತ್ತು. ಜೂನ್​ 8ನೇ ತಾರೀಕಿನಂದು 200 ಕೊಟಿ ಮೌಲ್ಯದ 9 ಕೋಟಿ ಷೇರುಗಳನ್ನು ಹೂಡಿಕೆದಾರರು ಡೆಲಿವರಿ ತೆಗೆದುಕೊಂಡಿದ್ದರು.

ಈಕ್ವಿಟಿ ಷೇರುಗಳ ಬೆಲೆ ಸೊನ್ನೆ ಎಂದು ತಿಳಿಸಿದ ಮೇಲೆ ಡಿಎಚ್​ಎಫ್​ಎಲ್ ಷೇರುಗಳನ್ನು ವಹಿವಾಟು ನಡೆಸುವುದಕ್ಕೆ ಎರಡೂ ಎಕ್ಸ್​ಚೇಂಜ್​ನಲ್ಲಿ ಅವಕಾಶ ನೀಡಲಾಗಿತ್ತು. ಜೂನ್ 9ನೇ ತಾರೀಕಿನಂದು ಡಿಎಚ್​ಎಫ್​ಎಲ್​ನ 50 ಲಕ್ಷ ಷೇರು ವಹಿವಾಟಾಗಿತ್ತು. ಈ ಬೆಳವಣಿಗೆಗೆ ತಜ್ಞರು ಭಾರೀ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಹೂಡಿಕೆದಾರರ ಹಿತ ಕಾಯುವ ಕಾರಣಕ್ಕೆ ಆದಷ್ಟು ಬೇಗ ಡಿಎಚ್​ಎಫ್​ಎಲ್​ ಷೇರಿನ ವಹಿವಾಟು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಡಿಎಚ್​ಎಫ್​ಎಲ್ ಎಂಬುದು ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿ. ಮುಖ್ಯವಾಗಿ ಹೌಸಿಂಗ್ ಫೈನಾನ್ಸ್ ಮೇಲೆ ಗಮನ ಹರಿಸುತ್ತಿತ್ತು/ 2019ರ ಮಧ್ಯಭಾಗದಲ್ಲಿ ಕಂಪೆನಿಯಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಿತು. ಕಂಪೆನಿಯ ಕಮರ್ಷಿಯಲ್ ಪೇಪರ್, ಅಲ್ಪಾವಧಿಯ ಸಾಲಪತ್ರಗಳನ್ನು ಕಳೆದ ವರ್ಷದ ಜೂನ್​ನಲ್ಲಿ ಡಿಗೆ, ಅಂದರೆ ಡಿಫಾಲ್ಟ್​ಗೆ (ಮರುಪಾವತಿಸದಿರುವುದು) ಇಳಿಸಲಾಯಿತು. ಕಂಪೆನಿಯಿಂದ ಹಲವು ಪಾವತಿ ಮಾಡಲು ಆಗಲಿಲ್ಲ. ಕಂಪೆನಿಯು ದಿವಾಳಿ ಆದ ಮೇಲೆ ಅಂದಾಜು 90,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಸಾಲಗಾರರಿಗೆ ಬಾಕಿ ಇತ್ತು. 2019ರ ನವೆಂಬರ್​ನಲ್ಲಿ ಆರ್​ಬಿಐನಿಂದ ಡಿಎಚ್​ಎಫ್​ಎಲ್ ತೀರುವಳಿಗೆ ಐಬಿಸಿ (ಇನ್​ಸಾಲ್ವೆನ್ಸಿ ಅಂಡ್ ಬ್ಯಾಂಕ್​ರಪ್ಸಿ ಕೋಡ್)ಗೆ ಸೂಚಿಸಲಾಯಿತು. ಅಡಮಾನದ ಮೇಲೆ ಸಾಲ ನೀಡುವ ವ್ಯವಹಾರ ಮಾಡುವ ಸಂಸ್ಥೆಯನ್ನು ಐಬಿಸಿಗೆ ಸೂಚಿಸಿದ ಮೂರನೇ ಸಂಸ್ಥೆ ಡಿಎಚ್​ಎಫ್​ಎಲ್. ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾದಿಂದಲೇ ಎನ್​ಸಿಎಲ್​ಟಿಗೆ ರೆಫರ್​ ಮಾಡಿದ ಮೊದಲ ಕಂಪೆನಿ ಕೂಡ ಡಿಎಚ್​ಎಫ್​ಎಲ್.

ಇದನ್ನೂ ಓದಿ: ಡಿಎಚ್​ಎಫ್​ಎಲ್​ನಿಂದ 14,046 ಕೋಟಿ ರೂ. ಪಿಎಂಎವೈ ವಂಚನೆ; ಸಿಬಿಐನಿಂದ ಪ್ರಕರಣ ದಾಖಲು

(DHFL trading in shares suspend by BSE and NSE from June 14, 2021. Here is the reasons behind explained)

Published On - 12:27 am, Sun, 13 June 21

ಡಿಸ್ನಿ ಲ್ಯಾಂಡ್, ಕಾವೇರಿ ಆರತಿ ಯೋಜನೆಗಳನ್ನು ವಿರೋಧಿಸಿದ ರೈತ ಮಹಿಳೆಯರು
ಡಿಸ್ನಿ ಲ್ಯಾಂಡ್, ಕಾವೇರಿ ಆರತಿ ಯೋಜನೆಗಳನ್ನು ವಿರೋಧಿಸಿದ ರೈತ ಮಹಿಳೆಯರು
ಊರ ಜನರಿಂದ ಸೋಫಿಯ ಮಾವ, ಕುಟುಂಬಸ್ಥರಿಗೆ ಅಭಿನಂದನೆ
ಊರ ಜನರಿಂದ ಸೋಫಿಯ ಮಾವ, ಕುಟುಂಬಸ್ಥರಿಗೆ ಅಭಿನಂದನೆ
ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು