ಪಿಎಂ ಮುದ್ರಾ ಸ್ಕೀಮ್; ಹೊಸ ವಿಭಾಗ ಸೇರ್ಪಡೆ; ಸಾಲದ ಮಿತಿ 20 ಲಕ್ಷ ರೂಗೆ ಹೆಚ್ಚಳ

PM Mudra Yojana: ಪಿಎಂ ಮುದ್ರಾ ಯೋಜನೆಯಲ್ಲಿ ಶಿಶು, ಕಿಶೋರ್, ತರುಣ್ ವಿಭಾಗಗಳಿಗೆ ಈಗ ತರುಣ್ ಪ್ಲಸ್ ವಿಭಾಗವೂ ಸೇರ್ಪಡೆಯಾಗಿದ್ದು ಸಾಲದ ಮಿತಿಯನ್ನು 20 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಶಿಶು ವಿಭಾಗದಲ್ಲಿ 50,000 ರೂ, ಕಿಶೋರ್ ವಿಭಾಗದಲ್ಲಿ 5 ಲಕ್ಷ ರೂ, ತರುಣ್ ವಿಭಾಗದಲ್ಲಿ 10 ಲಕ್ಷ ರೂ, ತರುಣ್ ಪ್ಲಸ್ ವಿಭಾಗದಲ್ಲಿ 20 ಲಕ್ಷ ರೂ ಸಾಲದ ಮಿತಿ ಇದೆ.

ಪಿಎಂ ಮುದ್ರಾ ಸ್ಕೀಮ್; ಹೊಸ ವಿಭಾಗ ಸೇರ್ಪಡೆ; ಸಾಲದ ಮಿತಿ 20 ಲಕ್ಷ ರೂಗೆ ಹೆಚ್ಚಳ
ಪಿಎಂ ಮುದ್ರಾ ಯೋಜನೆ
Follow us
|

Updated on: Oct 25, 2024 | 3:32 PM

ನವದೆಹಲಿ, ಅಕ್ಟೋಬರ್ 25: ಕಳೆದ ಬಾರಿ ಬಜೆಟ್ ವೇಳೆ ಘೋಷಿಸಲಾದಂತೆ ಪಿಎಂ ಮುದ್ರಾ ಯೋಜನೆಯಲ್ಲಿ ಸಾಲದ ಮಿತಿಯನ್ನು 10 ಲಕ್ಷ ರೂನಿಂದ 20 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಹಣಕಾಸು ಸಚಿವಾಲಯ ಇಂದು ಶುಕ್ರವಾರ ಸಾಲದ ಮಿತಿ ಏರಿಕೆಯನ್ನು ಪ್ರಕಟಿಸಿದೆ. ದೇಶದಲ್ಲಿ ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹಿಸಲೆಂದು ಮುದ್ರಾ ಯೋಜನೆ ಅಡಿ ಸರ್ಕಾರ ಸಾಲ ಒದಗಿಸುತ್ತಿದೆ. ಕ್ರೆಡಿಟ್ ಗ್ಯಾರಂಟಿ ಫಂಡ್ (ಸಿಜಿಎಫ್​ಎಂಯು) ಅಡಿಯಲ್ಲಿ 20 ಲಕ್ಷ ರೂವರೆಗೂ ಮುದ್ರಾ ಸಾಲ ನೀಡಲಾಗುತ್ತಿದೆ.

ಪಿಎಂ ಮುದ್ರಾ ಯೋಜನೆ ಅಡಿಯಲ್ಲಿ ತರುಣ್ ಪ್ಲಸ್ ಎನ್ನುವ ಹೊಸ ಕೆಟಗರಿ ಮಾಡಲಾಗಿದೆ. ಈವರೆಗೂ ಶಿಶು, ಕಿಶೋರ ಮತ್ತು ತರುಣ್ ಎಂಬ ವಿಭಾಗಗಳಿದ್ದವು. ಶಿಶು ವಿಭಾಗದಲ್ಲಿ 50,000 ರೂವರೆಗೂ ಸಾಲ ಸಿಗುತ್ತದೆ. ಕಿಶೋರ್ ವಿಭಾಗದಲ್ಲಿ 5 ಲಕ್ಷ ರೂವರೆಗೂ ಸಾಲದ ಅವಕಾಶ ಇರುತ್ತದೆ. ತರುಣ್ ವಿಭಾಗದಲ್ಲಿ ಐದರಿಂದ ಹತ್ತು ಲಕ್ಷ ರೂವರೆಗೂ ಸಾಲ ಸೌಲಭ್ಯ ಇರುತ್ತದೆ. ಈಗ ತರುಣ್ ಪ್ಲಸ್ ವಿಭಾಗವನ್ನು ಸೇರಿಸಲಾಗಿದ್ದು, 10 ಲಕ್ಷ ಮೇಲ್ಪಟ್ಟ ಮತ್ತು 20 ಲಕ್ಷ ರೂವರೆಗೆ ಸಾಲ ಕೊಡಲಾಗುತ್ತದೆ.

ಇದನ್ನೂ ಓದಿ: ಡಿಬಿಟಿ ಚಮತ್ಕಾರ; 8 ವರ್ಷದಲ್ಲಿ ಸರ್ಕಾರಕ್ಕೆ 3 ಲಕ್ಷ ಕೋಟಿ ರೂ ಹಣ ಉಳಿತಾಯ: ನಿರ್ಮಲಾ ಸೀತಾರಾಮನ್

ತರುಣ್ ವಿಭಾಗದಲ್ಲಿ ಸಾಲ ಪಡೆದು ಅದನ್ನು ಸರಿಯಾದ ಸಮಯಕ್ಕೆ ತೀರಿಸಿದವರಿಗೆ ತರುಣ್ ಪ್ಲಸ್ ವಿಭಾಗದಲ್ಲಿ 20 ಲಕ್ಷ ರೂವರೆಗೆ ಸಾಲದ ಅವಕಾಶ ಸಿಗುತ್ತದೆ.

ಏನಿದು ಪಿಎಂ ಮುದ್ರಾ ಯೋಜನೆ?

ನರೇಂದ್ರ ಮೋದಿ ನೇತೃತ್ವದ ಮೊದಲ ಎನ್​ಡಿಎ ಸರ್ಕಾರದಲ್ಲಿ ತೆಗೆದುಕೊಂಡು ಹಲವು ಯೋಜನೆಗಳಲ್ಲಿ ಪಿಎಂ ಮುದ್ರಾ ಸ್ಕೀಮ್ ಕೂಡ ಒಂದು. 2015ರ ಏಪ್ರಿಲ್ 8ರಂದು ಪಿಎಂಎಂವೈ ಆರಂಭವಾಯಿತು. ಕಾರ್ಪೊರೇಟ್ ಅಲ್ಲ, ಕೃಷಿ ಅಲ್ಲದ ಸಣ್ಣ ಉದ್ದಿಮೆಗಳಿಗೆ ಉತ್ತೇಜನ ನೀಡಲು ಸುಲಭ ಸಾಲ ನೀಡುವ ಯೋಜನೆ ಇದು. ಯಾವುದೇ ಅಡಮಾನ ಇಲ್ಲದೇ ಸಾಲ ನೀಡಲಾಗುತ್ತದೆ. ಪಡೆದ ಸಾಲವನ್ನು ಸರಿಯಾಗಿ ತೀರಿಸಿದವರಿಗೆ ಇನ್ನಷ್ಟು ಹೆಚ್ಚಿನ ಸಾಲ ಪಡೆಯುವ ಅವಕಾಶವನ್ನೂ ಈ ಸ್ಕೀಮ್​ನಲ್ಲಿ ಕೊಡಲಾಗಿದೆ.

ಇದನ್ನೂ ಓದಿ: ಕಳೆದ ದೀಪಾವಳಿಯಿಂದ 82 ಐಪಿಒ; ಲಕ್ಷ ಕೋಟಿ ರೂ ಬಂಡವಾಳ; ಸಾಲಿನಲ್ಲಿವೆ ಇನ್ನೂ 63 ಕಂಪನಿಗಳು

ಇಲ್ಲಿಯವರೆಗೆ 41 ಕೋಟಿಗೂ ಅಧಿಕ ಖಾತೆಗಳಿಗೆ ಒಟ್ಟಾರೆ 2,14,364.71 ಕೋಟಿ ರೂ ಮೊತ್ತದ ಸಾಲದ ಹಣವನ್ನು ವಿತರಿಸಲಾಗಿದೆ. ಈ 41 ಕೋಟಿ ಅಕೌಂಟ್​ಗಳಲ್ಲಿ ಶೇ. 68ರಷ್ಟವು ಮಹಿಳಾ ಉದ್ದಿಮೆದಾರರಿಗೆ ಸೇರಿವೆ. ಶೇ. 51ರಷ್ಟು ಮಂದಿ ಫಲಾನುಭವಿಗಳು ಹಿಂದುಳಿದ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯೋಗೇಶ್ವರ್​ಗೆ ಟಿಕೆಟ್ ನೀಡದ್ದು ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಯಿತೇ?
ಯೋಗೇಶ್ವರ್​ಗೆ ಟಿಕೆಟ್ ನೀಡದ್ದು ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಯಿತೇ?
ಹಾಸನಾಂಬೆಯ ದರ್ಶನಕ್ಕೆ ಬೆಳಗ್ಗೆ 4 ಗಂಟೆಯಿಂದ ಸರತಿ ಸಾಲಲ್ಲಿ ಭಕ್ತರ ದಂಡು
ಹಾಸನಾಂಬೆಯ ದರ್ಶನಕ್ಕೆ ಬೆಳಗ್ಗೆ 4 ಗಂಟೆಯಿಂದ ಸರತಿ ಸಾಲಲ್ಲಿ ಭಕ್ತರ ದಂಡು
ಗೋಕಾಕ್: ಭಾರಿ ಮಳೆಗೆ ತುಂಬಿ ಹರಿದ ಹಳ್ಳ ದಾಟಲು ಜೆಸಿಬಿ ಏರಿದ ಶಾಲೆ ಮಕ್ಕಳು
ಗೋಕಾಕ್: ಭಾರಿ ಮಳೆಗೆ ತುಂಬಿ ಹರಿದ ಹಳ್ಳ ದಾಟಲು ಜೆಸಿಬಿ ಏರಿದ ಶಾಲೆ ಮಕ್ಕಳು
KSRTC ಬಸ್​ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು
KSRTC ಬಸ್​ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು
ಕಿವೀಸ್ ಬ್ಯಾಟರ್ ಎದುರು ಹಿಂದಿಯಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ ಪಂತ್
ಕಿವೀಸ್ ಬ್ಯಾಟರ್ ಎದುರು ಹಿಂದಿಯಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ ಪಂತ್
ಮುಡಾ ಪ್ರಕರಣ; ಕೋರ್ಟ್ ಆದೇಶ ಮರುಪರಿಶೀಲನೆ ಕೋರುವ ಅವಕಾಶವಿದೆ: ಪರಮೇಶ್ವರ್
ಮುಡಾ ಪ್ರಕರಣ; ಕೋರ್ಟ್ ಆದೇಶ ಮರುಪರಿಶೀಲನೆ ಕೋರುವ ಅವಕಾಶವಿದೆ: ಪರಮೇಶ್ವರ್
1 ರನ್​ಗೆ ಸುಸ್ತಾದ ಕೊಹ್ಲಿ; ಹಳೆಯ ದೌರ್ಬಲ್ಯಕ್ಕೆ ಮತ್ತೊಮ್ಮೆ ಬಲಿ
1 ರನ್​ಗೆ ಸುಸ್ತಾದ ಕೊಹ್ಲಿ; ಹಳೆಯ ದೌರ್ಬಲ್ಯಕ್ಕೆ ಮತ್ತೊಮ್ಮೆ ಬಲಿ
ಫೂಜೆಯಲ್ಲಿ ನಿಖಿಲ್ ಪತ್ನಿ ರೇವತಿ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಹ ಭಾಗಿ
ಫೂಜೆಯಲ್ಲಿ ನಿಖಿಲ್ ಪತ್ನಿ ರೇವತಿ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಹ ಭಾಗಿ
ಹಾಸನಾಂಬೆ ದರ್ಶನಕ್ಕೆ ಹೇಗಿದೆ ವ್ಯವಸ್ಥೆ? ಭಕ್ತರು ಹೇಳೋದೇನು ನೋಡಿ
ಹಾಸನಾಂಬೆ ದರ್ಶನಕ್ಕೆ ಹೇಗಿದೆ ವ್ಯವಸ್ಥೆ? ಭಕ್ತರು ಹೇಳೋದೇನು ನೋಡಿ
ಬಿಜೆಪಿ ಪ್ರಬಲ ಪ್ರತಿಸ್ಪರ್ಧಿ ಎಂದಿದ್ದ ನನಗೆ ಟಿಕೆಟ್ ವಂಚಿಸಲಾಗಿದೆ: ಖಾದ್ರಿ
ಬಿಜೆಪಿ ಪ್ರಬಲ ಪ್ರತಿಸ್ಪರ್ಧಿ ಎಂದಿದ್ದ ನನಗೆ ಟಿಕೆಟ್ ವಂಚಿಸಲಾಗಿದೆ: ಖಾದ್ರಿ