AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ?

Prevent AC Explosions: ದೆಹಲಿಯ ವಿವೇಕ್ ವಿಹಾರ್‌ನಲ್ಲಿ ಎಸಿ ಸ್ಫೋಟಗೊಂಡು ಪ್ರಾಣಹಾನಿಯಾದ ಘಟನೆ ಆತಂಕ ಮೂಡಿಸಿದೆ. ಅತಿಯಾದ ಬಳಕೆ, ಕಳಪೆ ನಿರ್ವಹಣೆ, ವೈರಿಂಗ್ ದೋಷಗಳು ಎಸಿ ಸ್ಫೋಟಕ್ಕೆ ಪ್ರಮುಖ ಕಾರಣಗಳು. ನಿಯಮಿತ ಸರ್ವಿಸ್, ವಿಶ್ರಾಂತಿ ನೀಡುವುದು ಮತ್ತು ವೋಲ್ಟೇಜ್ ನಿಯಂತ್ರಣದಂತಹ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಮೂಲಕ ಇಂತಹ ದುರಂತಗಳನ್ನು ತಪ್ಪಿಸಬಹುದು.

ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ?
ಎಸಿImage Credit source: AI/Mediaforge/TV9
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 03, 2026 | 3:16 PM

Share

ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ಇತ್ತೀಚೆಗೆ ಎಸಿ ಸ್ಫೋಟಗೊಂಡು ಉಂಟಾದ ಭೀಕರ ಬೆಂಕಿಯಿಂದಾಗಿ 9 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸ್ಫೋಟ (AC blast) ಹೇಗಾಯಿತು, ಏನು ಕಾರಣ ಎಂದು ಇನ್ನೂವರೆಗೆ ಗೊತ್ತಾಗಿಲ್ಲ. ಎಸಿ ಯೂನಿಟ್​ನೊಳಗೆ ಶಾರ್ಟ್ ಸರ್ಕ್ಯೂಟ್ ಆಗಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ತಜ್ಞರ ಪ್ರಕಾರ, ಬೇಸಿಗೆಯ ಧಗೆಯಲ್ಲಿ ಏರ್ ಕಂಡೀಷನರ್​ಗಳು ಸ್ಫೋಟಗೊಳ್ಳುವ ಅಪಾಯ ಹೆಚ್ಚಿರುತ್ತದೆ. ಬೇಸಿಗೆಯ ತೀವ್ರ ಶಾಖದಿಂದಾಗಿ ಎಸಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಇಂತಹ ಸ್ಫೋಟಗಳು ಸಂಭವಿಸುತ್ತಿವೆ ಎಂದು ಹೇಳಲಾಗುತ್ತಿದೆ.

ಎಸಿ ಸ್ಫೋಟಕ್ಕೆ ಸಂಭಾವ್ಯ ಕಾರಣಗಳೇನು?

  • ಅತಿಯಾದ ಬಳಕೆ: ಬೇಸಿಗೆಯಲ್ಲಿ ದಿನವಿಡೀ ಎಸಿಗಳನ್ನು ಚಾಲನೆಯಲ್ಲಿಡುವುದರಿಂದ ಅವುಗಳಲ್ಲಿ ಅತಿಯಾದ ಉಷ್ಣತೆ (Overheating) ಉಂಟಾಗುತ್ತದೆ.
  • ಕಳಪೆ ನಿರ್ವಹಣೆ: ಸರಿಯಾದ ಸಮಯದಲ್ಲಿ ಸರ್ವಿಸ್ ಮಾಡಿಸದಿರುವುದು, ಫಿಲ್ಟರ್‌ಗಳಲ್ಲಿ ಧೂಳು ತುಂಬಿಕೊಳ್ಳುವುದು ಗಾಳಿಯ ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತದೆ.
  • ವೈರಿಂಗ್ ದೋಷ: ಹಳೆಯ ವೈರಿಂಗ್ ಅಥವಾ ಶಾರ್ಟ್ ಸರ್ಕ್ಯೂಟ್ ಸ್ಫೋಟಕ್ಕೆ ಪ್ರಮುಖ ಕಾರಣವಾಗುತ್ತದೆ.
  • ಅಸಮರ್ಪಕ ಗ್ಯಾಸ್ ಒತ್ತಡ: ಕಂಪ್ರೆಸರ್‌ನಲ್ಲಿ ಗ್ಯಾಸ್ ಲೀಕ್ ಆಗುವುದು ಅಥವಾ ಒತ್ತಡದಲ್ಲಿ ಏರುಪೇರಾಗುವುದು ಅಪಾಯಕಾರಿ.

ಇದನ್ನೂ ಓದಿ: ಬಿಸಿಲ ಬೇಗೆಯ ನಡುವೆ ತಂಪು ಸುದ್ದಿ: ಮೇ ಮಧ್ಯಭಾಗದಲ್ಲೇ ಮುಂಗಾರು ಎಂಟ್ರಿ!

ಅನಾಹುತ ತಡೆಯಲು ಮುನ್ನೆಚ್ಚರಿಕೆ ಕ್ರಮಗಳು

  • ನಿಯಮಿತ ಸರ್ವಿಸ್: ವರ್ಷಕ್ಕೆ ಕನಿಷ್ಠ ಎರಡು ಬಾರಿ ಪರಿಣಿತರಿಂದ ಎಸಿ ಸರ್ವಿಸ್ ಮಾಡಿಸಿ. ಮುಖ್ಯವಾಗಿ ಬೇಸಿಗೆ ಶುರುವಾಗುವ ಮೊದಲು ತಪಾಸಣೆ ಮಾಡುವುದು ಅತ್ಯಗತ್ಯ.
  • ಬ್ರೇಕ್ ನೀಡಿ: ಎಸಿಯನ್ನು ಸತತವಾಗಿ ಗಂಟೆಗಟ್ಟಲೆ ಓಡಿಸಬೇಡಿ. ಮಧ್ಯದಲ್ಲಿ ಸ್ವಲ್ಪ ಸಮಯ ಸ್ವಿಚ್ ಆಫ್ ಮಾಡುವ ಮೂಲಕ ಕಂಪ್ರೆಸರ್‌ಗೆ ವಿಶ್ರಾಂತಿ ನೀಡಿ.
  • ಸರಿಯಾದ ವೋಲ್ಟೇಜ್: ಎಸಿಗೆ ಸ್ಥಿರವಾದ ವಿದ್ಯುತ್ ಪೂರೈಕೆ ಇರಲಿ. ವೋಲ್ಟೇಜ್ ಸ್ಟೆಬಿಲೈಸರ್ ಬಳಸುವುದು ಸುರಕ್ಷಿತ.
  • ಧೂಳು ಸ್ವಚ್ಛಗೊಳಿಸಿ: ಹದಿನೈದು ದಿನಕ್ಕೊಮ್ಮೆ ಎಸಿಯ ಫಿಲ್ಟರ್‌ಗಳನ್ನು ನೀವೇ ಸ್ವಚ್ಛಗೊಳಿಸಿ.
  • ಹಳೆಯ ಎಸಿಗಳ ಬದಲಾವಣೆ: ನಿಮ್ಮ ಎಸಿ ತುಂಬಾ ಹಳೆಯದಾಗಿದ್ದರೆ (10 ವರ್ಷಕ್ಕಿಂತ ಹೆಚ್ಚು), ಅದನ್ನು ಬದಲಿಸುವುದು ಉತ್ತಮ. ಹಳೆಯ ಕಂಪ್ರೆಸರ್‌ಗಳು ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು.

ಎಸಿ ಸ್ಫೋಟಗೊಳ್ಳುವ ಸಾಧ್ಯತೆಗೆ ಎಚ್ಚರಿಕೆ ಸಂಕೇತಗಳು

  • ಎಸಿಯಿಂದ ವಿಚಿತ್ರವಾದ ಶಬ್ದ ಬರುವುದು.
  • ಸುಟ್ಟ ವಾಸನೆ ಬರುವುದು.
  • ಕೂಲಿಂಗ್ ದಿಢೀರನೆ ಕಡಿಮೆಯಾಗುವುದು.
  • ವೈರಿಂಗ್‌ನಲ್ಲಿ ಬಿಸಿಯಾಗುವುದು ಅಥವಾ ಕಿಡಿ ಕಂಡುಬರುವುದು.

ಇದನ್ನೂ ಓದಿ: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ನ್ಯೂಜಿಲೆಂಡ್; ದೇಶಕ್ಕಾಗುವ ಪ್ರಯೋಜನಗಳೇನು?

ಇಂತಹ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಎಸಿ ಆಫ್ ಮಾಡಿ ತಂತ್ರಜ್ಞರನ್ನು ಸಂಪರ್ಕಿಸುವುದು ಜೀವ ಉಳಿಸಲು ಸಹಕಾರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!