AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಆರ್​ಐಗಳ ಡೆಪಾಸಿಟ್​ಗಳನ್ನು ಕೈಬೀಸಿ ಕರೆಯುತ್ತಿವೆ ಭಾರತದ ಹೊಸ FCNR(B) ದರಗಳು; ಅನಿವಾಸಿ ಭಾರತೀಯರಿಗೆ ಹೇಗೆ ಲಾಭ?

How India's new FCNR B rates can benefit NRIs: ಆರ್​ಬಿಐ FCNR (B) ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಅದರ ಪರಿಣಾಮವಾಗಿ ಹಲವು ಬ್ಯಾಂಕುಗಳು ಇದರ ದರಗಳನ್ನು ಹೆಚ್ಚಿಸಿವೆ. ಅನಿವಾಸಿ ಭಾರತೀಯರು ತಾವು ಕೆಲಸ ಮಾಡುವ ದೇಶಗಳ ಕರೆನ್ಸಿಯಲ್ಲೇ ಭಾರತದ ಬ್ಯಾಂಕುಗಳಲ್ಲಿ ಠೇವಣಿ ಇಡಬಹುದು. ಭಾರತೀಯರಿಗೆ ಸಿಗುವ ಎಫ್​ಡಿ ದರಗಳು ಆ ಎನ್​ಆರ್​ಐ ಠೇವಣಿಗಳಿಗೂ ಸಿಗುತ್ತವೆ. ಕರೆನ್ಸಿ ವಿನಿಮಯದ ಅಗತ್ಯವೇ ಇರುವುದಿಲ್ಲ.

ಎನ್​ಆರ್​ಐಗಳ ಡೆಪಾಸಿಟ್​ಗಳನ್ನು ಕೈಬೀಸಿ ಕರೆಯುತ್ತಿವೆ ಭಾರತದ ಹೊಸ FCNR(B) ದರಗಳು; ಅನಿವಾಸಿ ಭಾರತೀಯರಿಗೆ ಹೇಗೆ ಲಾಭ?
ಡಾಲರ್ ಕರೆನ್ಸಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 16, 2026 | 1:13 PM

Share

ನವದೆಹಲಿ, ಜೂನ್ 16: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಕೈಗೊಂಡಿರುವ ಮಹತ್ವದ ನಿರ್ಧಾರದಿಂದಾಗಿ ಭಾರತದಲ್ಲಿ FCNR (B) ಠೇವಣಿಗಳ ಮೇಲಿನ ಬಡ್ಡಿ ದರಗಳು ದಾಖಲೆ ಮಟ್ಟಕ್ಕೆ ಏರಿಕೆಯಾಗಿವೆ. ಅನಿವಾಸಿ ಭಾರತೀಯರಿಗೆ (NRIs) ಇದು ಸುವರ್ಣಾವಕಾಶವಾಗಿ ಮಾರ್ಪಟ್ಟಿದೆ. ಎಫ್‌ಸಿಎನ್‌ಆರ್(ಬಿ) – Foreign Currency Non-Resident (Bank) Deposit- ಎಂದರೆ ಅನಿವಾಸಿ ಭಾರತೀಯರು ತಾವು ವಿದೇಶದಲ್ಲಿ ಗಳಿಸಿದ ಹಣವನ್ನು ಭಾರತೀಯ ಬ್ಯಾಂಕುಗಳಲ್ಲಿ ವಿದೇಶಿ ಕರೆನ್ಸಿಯ ರೂಪದಲ್ಲೇ (ಉದಾಹರಣೆಗೆ ಯುಎಸ್ ಡಾಲರ್, ಬ್ರಿಟಿಷ್ ಪೌಂಡ್, ಯುರೋ ಇತ್ಯಾದಿ) ಇಡಬಹುದಾದ ಒಂದು ಫಿಕ್ಸೆಡ್ ಡೆಪಾಸಿಟ್ (Fixed Deposit) ಯೋಜನೆ ಆಗಿದೆ.

ಜೂನ್ 2026ರಲ್ಲಿ ಆರ್‌ಬಿಐ (RBI) ಬ್ಯಾಂಕುಗಳಿಗಾಗಿ ಒಂದು ವಿಶೇಷ ‘ಫಾರೆಕ್ಸ್ ಸ್ವಾಪ್ ವಿಂಡೋ’ (Forex Swap Window) ಸೌಲಭ್ಯವನ್ನು ಮುಕ್ತಗೊಳಿಸಿದೆ. ಇದರ ಅಡಿಯಲ್ಲಿ ಸೆಪ್ಟೆಂಬರ್ 30 ರವರೆಗೆ ಜಮೆಯಾಗುವ ಹೊಸ FCNR(B) ಠೇವಣಿಗಳ ಮೇಲಿನ ‘ಕರೆನ್ಸಿ ಏರಿಳಿತದ ರಿಸ್ಕ್ ವೆಚ್ಚವನ್ನು’ (Hedging Cost) ಆರ್‌ಬಿಐ ತಾನೇ ಭರಿಸಲಿದೆ. ಇದರಿಂದಾಗಿ ಬ್ಯಾಂಕುಗಳ ಮೇಲಿನ ಆರ್ಥಿಕ ಹೊರೆ ತಪ್ಪುತ್ತದೆ. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ನೀಡಲು ಸಾಧ್ಯವಾಗುತ್ತದೆ. ಈ ಮೊದಲು ಶೇಕಡಾ 3 ರಿಂದ 4 ರಷ್ಟಿದ್ದ ಬಡ್ಡಿ ದರಗಳು, ಈಗ ಶೇ. 6 ರಿಂದ 7.1 ರಷ್ಟು ದಾಖಲೆ ಮಟ್ಟಕ್ಕೆ ಜಿಗಿದಿವೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ಧೂಳೆಬ್ಬಿಸುತ್ತಿರುವ ಸ್ಪೇಸ್​ಎಕ್ಸ್; ಇಲಾನ್ ಮಸ್ಕ್ ಒಂದು ದಿನದಲ್ಲಿ ಗಳಿಸಿದ ಸಂಪತ್ತು ವಾರನ್ ಬಫೆಟ್​ನ ಒಟ್ಟೂ ಸಂಪತ್ತಿಗೆ ಸಮ

ಪ್ರಮುಖ ಬ್ಯಾಂಕುಗಳ ಪ್ರಸ್ತುತ ಬಡ್ಡಿ ದರಗಳು (USD ಠೇವಣಿಗಳ ಮೇಲೆ)

  • ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 7.10
  • ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ 7.13
  • ಐಸಿಐಸಿಐ ಬ್ಯಾಂಕ್: ಶೇ. 6.50
  • ಎಚ್‌ಡಿಎಫ್‌ಸಿ ಬ್ಯಾಂಕ್: ಶೇ. 6
  • ಆಕ್ಸಿಸ್ ಬ್ಯಾಂಕ್: ಶೇ. 6
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): ಶೇ. 5.75 – 6.00

NRI ಹೂಡಿಕೆದಾರರಿಗೆ ಇದರಿಂದ ಆಗುವ 4 ಪ್ರಮುಖ ಲಾಭಗಳು

  1. ಕರೆನ್ಸಿ ನಷ್ಟದ ಭಯವಿಲ್ಲ: ಸಾಮಾನ್ಯವಾಗಿ ವಿದೇಶದಿಂದ ಭಾರತಕ್ಕೆ ಹಣ ಕಳುಹಿಸಿ NRE ಅಕೌಂಟ್‌ನಲ್ಲಿ ಇಟ್ಟಾಗ, ರೂಪಾಯಿ ಮೌಲ್ಯ ಕುಸಿದರೆ (Depreciation) ನಷ್ಟವಾಗುವ ಸಾಧ್ಯತೆ ಇರುತ್ತದೆ. ಆದರೆ FCNR(B) ನಲ್ಲಿ ನೀವು ಡಾಲರ್ ರೂಪದಲ್ಲೇ ಹಣ ಇಡುವುದರಿಂದ ಮತ್ತು ವಾಪಸ್ ಪಡೆಯುವಾಗಲೂ ಡಾಲರ್ ರೂಪದಲ್ಲೇ ಸಿಗುವುದರಿಂದ ರೂಪಾಯಿ ಮೌಲ್ಯದ ಏರಿಳಿತ ನಿಮ್ಮ ಹೂಡಿಕೆಯ ಮೇಲೆ ಯಾವುದೇ ಪ್ರಭಾವ (No Currency Risk) ಬೀರುವುದಿಲ್ಲ.
  2. ಭಾರತದಲ್ಲಿ ಸಂಪೂರ್ಣ ತೆರಿಗೆ ಮುಕ್ತ: ಭಾರತದ ಆದಾಯ ತೆರಿಗೆ ನಿಯಮಗಳ ಪ್ರಕಾರ, FCNR(B) ಠೇವಣಿಗಳ ಮೇಲೆ ಗಳಿಸುವ ಸಂಪೂರ್ಣ ಬಡ್ಡಿ ಆದಾಯಕ್ಕೆ ಭಾರತದಲ್ಲಿ ಯಾವುದೇ ತೆರಿಗೆ ಇರುವುದಿಲ್ಲ (100% Tax-Free).
  3. ಸುಲಭವಾಗಿ ವಿದೇಶಕ್ಕೆ ಮರು-ಸಾಗಣೆ: ಈ ಖಾತೆಯಲ್ಲಿರುವ ಅಸಲು ಮತ್ತು ಬಡ್ಡಿ ಹಣ ಎರಡನ್ನೂ ಯಾವುದೇ ಮಿತಿ ಅಥವಾ ಕಠಿಣ ನಿಯಮಗಳಿಲ್ಲದೆ, ನೀವು ವಾಸಿಸುತ್ತಿರುವ ವಿದೇಶಕ್ಕೆ ಸುಲಭವಾಗಿ ವರ್ಗಾಯಿಸಿಕೊಳ್ಳಬಹುದು (Full Repatriation).
  4. ದೇಶಿ ಬ್ಯಾಂಕುಗಳಿಗಿಂತ ಹೆಚ್ಚಿನ ಲಾಭ: ಪ್ರಸ್ತುತ ಅಮೆರಿಕ ಅಥವಾ ಯೂರೋಪ್‌ನ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿಗಳ (CDs) ಮೇಲೆ ಶೇಕಡಾ 4 ರಿಂದ 5 ರಷ್ಟು ಮಾತ್ರ ಬಡ್ಡಿ ಸಿಗುತ್ತಿದೆ. ಆದರೆ ಭಾರತದ ಬ್ಯಾಂಕುಗಳು ಸುರಕ್ಷಿತವಾಗಿ ಅದೇ ಡಾಲರ್ ಮೇಲೆ 6% ರಿಂದ 7% ಕ್ಕಿಂತ ಹೆಚ್ಚು ಬಡ್ಡಿ ನೀಡುತ್ತಿರುವುದರಿಂದ NRIಗಳಿಗೆ ಇದು ಅತ್ಯುತ್ತಮ ಮತ್ತು ಸುರಕ್ಷಿತ ಹೂಡಿಕೆಯಾಗಿದೆ.

ಇದನ್ನೂ ಓದಿ: ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ರಫ್ತು ಸುಂಕ ಹೆಚ್ಚಳ; ಪೆಟ್ರೋಲ್ ರೀಟೇಲ್ ಬೆಲೆ ಮೇಲೆ ಪರಿಣಾಮ ಬೀರುತ್ತಾ?

ಸೆಪ್ಟೆಂಬರ್ 30ರವರೆಗೆ ಇದೆ ಈ ಆಫರ್

ಆರ್‌ಬಿಐ ನೀಡಿರುವ ಈ ವಿಶೇಷ ರಿಯಾಯಿತಿ ಸೌಲಭ್ಯವು 2026ರ ಸೆಪ್ಟೆಂಬರ್ 30 ರವರೆಗೆ ಮಾತ್ರ ಲಭ್ಯವಿರುತ್ತದೆ. ಈ ಅವಧಿಯ ಒಳಗಾಗಿ ಆರಂಭಿಸುವ 3 ರಿಂದ 5 ವರ್ಷಗಳ ಅವಧಿಯ ಠೇವಣಿಗಳಿಗೆ ಮಾತ್ರ ಈ ಹೆಚ್ಚಿನ ಬಡ್ಡಿ ದರ ಅನ್ವಯವಾಗುತ್ತದೆ. ಕನಿಷ್ಠ 1 ವರ್ಷದ ಲಾಕ್-ಇನ್ ಅವಧಿ ಇರಲಿದ್ದು, ಅವಧಿಗೂ ಮುನ್ನ ಹಣ ಹಿಂಪಡೆದರೆ ಬಡ್ಡಿಯಲ್ಲಿ ಕಡಿತವಾಗುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Tue, 16 June 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕೊನೆಗೂ ಖಾತೆ ವಹಿಸಿಕೊಂಡ ಸಚಿವ ಕೃಷ್ಣ ಭೈರೇಗೌಡ: ಜಿಬಿಎ ಕಚೇರಿಯಲ್ಲಿ ಸಭೆ
ಕೊನೆಗೂ ಖಾತೆ ವಹಿಸಿಕೊಂಡ ಸಚಿವ ಕೃಷ್ಣ ಭೈರೇಗೌಡ: ಜಿಬಿಎ ಕಚೇರಿಯಲ್ಲಿ ಸಭೆ
ಹುಬ್ಬಳ್ಳಿ ಭಂಡಿವಾಡದಲ್ಲಿ ಹತ್ತೇ ನಿಮಿಷದಲ್ಲಿ ಉಳೀತು ಇನ್ನೂರು ಮಕ್ಕಳ ಜೀವ
ಹುಬ್ಬಳ್ಳಿ ಭಂಡಿವಾಡದಲ್ಲಿ ಹತ್ತೇ ನಿಮಿಷದಲ್ಲಿ ಉಳೀತು ಇನ್ನೂರು ಮಕ್ಕಳ ಜೀವ
ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?
ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?
ಎಸಿಎಫ್​​ ಮನೆಯಲ್ಲಿ ಖಜಾನೆ ಕಂಡು ಲೋಕಾಯಕ್ತ ಅಧಿಕಾರಿಗಳೇ ಶಾಕ್​​
ಎಸಿಎಫ್​​ ಮನೆಯಲ್ಲಿ ಖಜಾನೆ ಕಂಡು ಲೋಕಾಯಕ್ತ ಅಧಿಕಾರಿಗಳೇ ಶಾಕ್​​
ಮೈಸೂರು ಪಬ್​​ ದುರಂತ ಕೇಸ್​​ಗೆ ಟ್ವಿಸ್ಟ್​​: ಕೇಳಿಬಂತು ಸ್ಫೋಟಕ ಆರೋಪ
ಮೈಸೂರು ಪಬ್​​ ದುರಂತ ಕೇಸ್​​ಗೆ ಟ್ವಿಸ್ಟ್​​: ಕೇಳಿಬಂತು ಸ್ಫೋಟಕ ಆರೋಪ
ಮೇಲ್ಛಾವಣಿ ಕುಸಿತದಿಂದ ಜೀವ ಭಯದಲ್ಲೇ ಸರ್ಕಾರಿ ಶಾಲೆಗೆ ಬರುತ್ತಿರುವ ಮಕ್ಕಳು
ಮೇಲ್ಛಾವಣಿ ಕುಸಿತದಿಂದ ಜೀವ ಭಯದಲ್ಲೇ ಸರ್ಕಾರಿ ಶಾಲೆಗೆ ಬರುತ್ತಿರುವ ಮಕ್ಕಳು
ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ
ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ
ಈ ರಾಶಿಯವರಿಗಿಂದು ಹಣದ ವಿಷಯದಲ್ಲಿ ಆತುರದ ನಿರ್ಧಾರ ಬೇಡ
ಈ ರಾಶಿಯವರಿಗಿಂದು ಹಣದ ವಿಷಯದಲ್ಲಿ ಆತುರದ ನಿರ್ಧಾರ ಬೇಡ
ಗರುಡ ಪುರಾಣದ ಪ್ರಕಾರ ಊಟ ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು? ಫಲಗಳೇನು?
ಗರುಡ ಪುರಾಣದ ಪ್ರಕಾರ ಊಟ ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು? ಫಲಗಳೇನು?
2028ರ ಎಲೆಕ್ಷನ್ ಗೆಲ್ಲಲು ಜೋಶಿಗೆ ಸಾರಥ್ಯ?ಇದಕ್ಕೆ ಅವರು ಹೇಳಿದ್ದೇನು?
2028ರ ಎಲೆಕ್ಷನ್ ಗೆಲ್ಲಲು ಜೋಶಿಗೆ ಸಾರಥ್ಯ?ಇದಕ್ಕೆ ಅವರು ಹೇಳಿದ್ದೇನು?