AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Currency Notes: ಗಾಂಧಿ ನೋಟಿಗೆ ಜತೆಯಾಗಲಿವೆಯಂತೆ ಟಾಗೋರ್, ಕಲಾಂ ನೋಟುಗಳು

ಭಾರತದ ಕರೆನ್ಸಿಗಳಲ್ಲಿ ಮಹಾತ್ಮ ಗಾಂಧಿ ಜತೆಗೆ ರವೀಂದ್ರನಾಥ್ ಟಾಗೋರ್ ಮತ್ತು ಅಬ್ದುಲ್ ಕಲಾಂ ಫೋಟೋ ಬಳಸುವುದಕ್ಕೆ ಯೋಜಿಸಲಾಗಿದೆ.

Currency Notes: ಗಾಂಧಿ ನೋಟಿಗೆ ಜತೆಯಾಗಲಿವೆಯಂತೆ ಟಾಗೋರ್, ಕಲಾಂ ನೋಟುಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 06, 2022 | 3:54 PM

ಈ ಹಿಂದೆಂದೂ ಬಳಸಿರದಂಥ ವ್ಯಕ್ತಿಗಳ ಚಿತ್ರಗಳನ್ನು ಭಾರತೀಯ ಕರೆನ್ಸಿಯಲ್ಲಿ (Indian Currency) ಮುದ್ರಿಸುವ ಸಾಧ್ಯತೆ ಇದೆ. ಇನ್ನು ಮುಂದೆ ಗಾಂಧಿ ನೋಟಿನ ಜತೆಗೆ ಟಾಗೋರ್ ನೋಟು, ಕಲಾಂ ನೋಟು ಸಹ ಬರಲಿವೆ. ಈ ತನಕ ಭಾರತದ ಕರೆನ್ಸಿಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿತ್ರ ಮಾತ್ರ ಇರುತ್ತಿತ್ತು. ಒಂದು ವೇಳೆ ವರದಿಗಳನ್ನು ನಂಬುವುದಾದರೆ ಈ ಬದಲಾವಣೆಯು ಎಲ್ಲ ನೋಟುಗಳಲ್ಲಿ ಆಗಲಿದೆ. ಹಣಕಾಸು ಸಚಿವಾಲಯ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರವೀಂದ್ರನಾಥ ಟಾಗೋರ್ ಮತ್ತು ಎಪಿಜೆ ಅಬ್ದುಲ್​ ಕಲಾಂ ಅವರ ವಾಟರ್​ಮಾರ್ಕ್ ಚಿತ್ರಗಳನ್ನು ಹೊಸ ಸರಣಿಯ ವಿವಿಧ ಮೌಲ್ಯದ ಬ್ಯಾಂಕ್​ ನೋಟುಗಳಲ್ಲಿ ಬಳಸಲಾಗುವುದು. ಬಂಗಾಲದ ಅತಿ ದೊಡ್ಡ ಐಕಾನ್ ರವೀಂದ್ರನಾಥ್ ಟಾಗೋರ್, ಹನ್ನೊಂದನೇ ರಾಷ್ಟ್ರಪತಿ ಅಬ್ದುಲ್ ಕಲಾಂ ಇನ್ನು ಮುಂದೆ ಮಹಾತ್ಮ ಗಾಂಧಿ ಅವರ ಜತೆಗೆ ಸ್ಥಾನ ಪಡೆದುಕೊಳ್ಳಬಹುದಾಗಿದೆ.

ಆದರೆ, ಪ್ರಶ್ನೆ ಮೂಡುವುದೇನೆಂದರೆ, ಈ ನಡೆಯನ್ನು ಸರ್ಕಾರಕ್ಕೆ ಏಕೆ ಇಟ್ಟಿದೆ? ನಿಮಗೆ ಗೊತ್ತಿರಲಿ, ಅಮೆರಿಕದಲ್ಲಿ ವಿವಿಧ ಮುಖಬೆಲೆಯ ಡಾಲರ್​ಗಳಿಗೆ ಆ ದೇಶದ ವಿವಿಧ ನಿರ್ಮಾತೃಗಳ ಚಿತ್ರಗಳನ್ನು ಬಳಸಲಾಗಿದೆ. ಜಾರ್ಜ್ ವಾಷಿಂಗ್ಟನ್, ಬೆಂಜಮಿನ್ ಫ್ರಾಂಕ್ಲಿನ್, ಥಾಮಸ್ ಜೆಫರ್​ಸನ್, ಆಂಡ್ರೂ ಜಾಕ್ಸನ್, ಅಲೆಕ್ಸಾಂಡರ್ ಹ್ಯಾಮಿಲ್ಟನ್ ಹಾಗೂ 19ನೇ ಶತಮಾನತದಲ್ಲಿ ಅಲ್ಲಿ ರಾಷ್ಟ್ರಾಧ್ಯಕ್ಷರಾಗಿದ್ದಂಥ ಅಬ್ರಹಾಂ ಲಿಂಕನ್ ಒಳಗೊಂಡಂತೆ ಇತರರ ಚಿತ್ರಗಳಿವೆ.

ಆರ್​ಬಿಐ ಮತ್ತು ಸೆಕ್ಯೂರಿಟಿ ಪ್ರಿಂಟಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SPMCIL)- ಇದು ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಗಾಂಧಿ, ಟಾಗೋರ್ ಮತ್ತು ಕಲಾಂ ವಾಟರ್​ಮಾರ್ಕ್ ಒಳಗೊಂಡ ಎರಡು ನಮೂನೆಗಳನ್ನು ಐಐಟಿ-ದೆಹಲಿಯ ಗೌರವ ಪ್ರಾಧ್ಯಾಪಕರಾದ ದಿಲೀಪ್ ಟಿ. ಸಹಾನಿ ಅವರಿಗೆ ಕಳುಹಿಸಲಾಗಿದೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡುತ್ತಾರೆ. ಅಂತಿಮ ಸರ್ಕಾರದ ಮುಂದೆ ಪ್ರಸ್ತುತ ಪಡಿಸಲಾಗುತ್ತದೆ. ಪ್ರೊಫೆಸರ್ ಸಹಾನಿ ವಾಟರ್​ಮಾರ್ಕ್​ಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅವರು ಎಲೆಕ್ಟ್ರೋಮ್ಯಾಗ್ನೆಟಿಕ್ ಇನ್​ಸ್ಟ್ರುಮೆಂಟೇಷನ್​ನಲ್ಲಿ ಪರಿಣತರು. ಅವರಿಗೆ ಮೋದಿ ಸರ್ಕಾರದಿಂದ ಈ ವರ್ಷದ ಜನವರಿಯಲ್ಲಿ ಪದ್ಮಶ್ರೀ ಗೌರವ ದೊರೆತಿದೆ.

ಮೂಲಗಳು ತಿಳಿಸುವಂತೆ, 2017ರಲ್ಲಿ ಭದ್ರತಾ ಫೀಚರ್​ಗಳಿಗೆ ಸಂಬಂಧಿಸಿದಂತೆ ಆರ್​ಬಿಐ ನೇಮಿಸಿದ್ದ ಒಂಬತ್ತರ ಪೈಕಿ ಒಂದು ಸಮಿತಿಯು ಹೊಸ ಸರಣಿ ನೋಟುಗಳ ವಿತರಣೆಗೆ ಸಂಬಂಧಿಸಿದಂತೆ 2020ರಲ್ಲಿ ವರದಿಯೊಂದನ್ನು ಸಲ್ಲಿಸಿತ್ತು. ಗಾಂಧಿ ವಾಟರ್​ಮಾರ್ಕ್ ಜತೆಗೆ ಟಾಗೋರ್ ಮತ್ತು ಕಲಾಂ ಅವರ ವಾಟರ್​ಮಾರ್ಕ್ 2000 ರೂಪಾಯಿ ಮುಖಬೆಲೆಯ ನೋಟು ಬಿಟ್ಟು ಎಲ್ಲ ನೋಟುಗಳಲ್ಲಿ ಸೇರ್ಪಡೆ ಮಾಡುವಂತೆ ಸಲಹೆ ನೀಡಿತ್ತು. ಈಗಾಗಲೇ 2000 ರೂಪಾಯಿ ಮುಖಬೆಲೆಯ ನೋಟು ಮುದ್ರಣ ನಿಲ್ಲಿಸಲಾಗಿದೆ.

2021ರಲ್ಲಿ ಆರ್‌ಬಿಐ ತನ್ನ ಮೈಸೂರು ಮೂಲದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್​ ಪ್ರೈವೇಟ್ ಲಿಮಿಟೆಡ್ ಮತ್ತು ಹೊಶಂಗಾಬಾದ್‌ನಲ್ಲಿರುವ ಎಸ್‌ಪಿಎಂಸಿಐಎಲ್‌ನ ಸೆಕ್ಯೂರಿಟಿ ಪೇಪರ್ ಮಿಲ್‌ಗೆ ತಮ್ಮದೇ ಆದ ವಾಟರ್‌ಮಾರ್ಕ್ ಮಾದರಿಗಳನ್ನು ವಿನ್ಯಾಸಗೊಳಿಸಲು ಸೂಚನೆಗಳನ್ನು ನೀಡಿತು. ಆ ನಂತರ ಆರ್​ಬಿಐ ಮತ್ತು SPMCIL ತಮ್ಮ ಮಾದರಿಗಳನ್ನು ಪರೀಕ್ಷಿಸಲು ಸಹಾನಿಗೆ ಕಳುಹಿಸಿದವು. ಮಾದರಿಗಳ “ಸೂಕ್ಷ್ಮ ಅಂಶಗಳ” ಕುರಿತು ಸಹಾನಿ ಅಧಿಕಾರಿಗಳೊಂದಿಗೆ ಹಲವಾರು ಸುತ್ತಿನ ಚರ್ಚೆಗಳನ್ನು ನಡೆಸಿದ್ದಾರೆ.

ಕಲ್ಕತ್ತಾ ಹೈಕೋರ್ಟ್‌ನಲ್ಲಿ 2017ರಲ್ಲಿ PIL ಸಲ್ಲಿಕೆ ಅಲ್ಲದೆ ಅದೇ ವರ್ಷದಲ್ಲಿ, 2017ರಲ್ಲಿ ಕಲ್ಕತ್ತಾ ಹೈಕೋರ್ಟ್ ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗೆ ಎಂಟು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿ, ದೇಶದಲ್ಲಿನ ಕರೆನ್ಸಿ ನೋಟುಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಅಥವಾ ಇತರ ಯಾವುದೇ ಪ್ರಮುಖ ಫೋಟೋಗಳನ್ನು ಏಕೆ ಹೊಂದಿರಬಾರದು ಕೇಳಿತ್ತು. ವ್ಯಕ್ತಿತ್ವ. ಈ ಸಂಬಂಧವಾಗಿ ನಗರದ ನಿವಾಸಿ ಪೃಥ್ವೀಶ್ ದಾಸ್‌ಗುಪ್ತಾ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪೀಠವು ಆಲಿಸಿದ ನಂತರ ಈ ಪ್ರಶ್ನೆಯನ್ನು ಕೇಳಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Fake Currency: ಎಲ್ಲ ಮುಖಬೆಲೆಯ ನಕಲಿ ನೋಟುಗಳ ಚಲಾವಣೆಯಲ್ಲಿ ಹೆಚ್ಚಳ ಆರ್​ಬಿಐ ಅಂಕಿ-ಅಂಶದಿಂದ ಬಯಲು

Published On - 3:52 pm, Mon, 6 June 22

ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು
ನಮ್ಮ ಆಚರಣೆ ನಮ್ಮ ಹಕ್ಕು, ಎಲ್ಲಿದ್ದರೂ ಹಿಂದೂಗಳೇ ಎಂದ ಪಾಕ್​ ಹಿಂದೂಗಳು
ನಮ್ಮ ಆಚರಣೆ ನಮ್ಮ ಹಕ್ಕು, ಎಲ್ಲಿದ್ದರೂ ಹಿಂದೂಗಳೇ ಎಂದ ಪಾಕ್​ ಹಿಂದೂಗಳು
ಕಾನೂನು ಪ್ರಕ್ರಿಯೆ ಮೂಲಕ ಜನಾರ್ಧನ ರೆಡ್ಡಿಗೆ ರಿಲೀಫ್: ಶ್ರೀರಾಮುಲು
ಕಾನೂನು ಪ್ರಕ್ರಿಯೆ ಮೂಲಕ ಜನಾರ್ಧನ ರೆಡ್ಡಿಗೆ ರಿಲೀಫ್: ಶ್ರೀರಾಮುಲು