HDFC: ಇಂಡಸ್​ಇಂಡ್ ಷೇರು ಖರೀದಿಸಲು ಎಚ್​ಡಿಎಫ್​ಸಿಗೆ ಸಿಕ್ತು ಆರ್​ಬಿಐ ಅನುಮತಿ; ಷೇರುದಾರರದ್ದು ಇಲ್ಲವಾ ಸಮ್ಮತಿ?

HDFC Bank and IndusInd Bank: ಹಿಂದೂಜಾ ಗ್ರೂಪ್​ನ ಇಂಡಸ್​ಇಂಡ್ ಬ್ಯಾಂಕ್​ನ ಶೇ. 9.50ರವರೆಗೆ ಷೇರುಪಾಲು ಖರೀದಿಸಲು ಎಚ್​ಡಿಎಫ್​ಸಿಗೆ ಆರ್​ಬಿಐ ಅನುಮತಿಸಿದೆ. ಎಚ್​ಡಿಎಫ್​ಸಿಯ ಅಗ್ರಿಗೇಟ್ ಹೋಲ್ಡಿಂಗ್ ಶೇ. 9.50 ಮೀರಬಾರದು ಎಂದು ಆರ್​ಬಿಐ ಷರತ್ತು ಹಾಕಿದೆ. ಅನುಮತಿ ಸಿಕ್ಕ ಬೆನ್ನಲ್ಲೇ ಫೆಬ್ರುವರಿ 6ರ ಬೆಳಗಿನ ಷೇರುಪೇಟೆ ವಹಿವಾಟಿನಲ್ಲಿ ಎಚ್​ಡಿಎಫ್​ಸಿ ಮತ್ತು ಇಂಡಸ್​ಇಂಡ್ ಬ್ಯಾಂಕುಗಳ ಷೇರುಗಳು ನೀರಸ ಅರಂಭ ಪಡೆದಿವೆ.

HDFC: ಇಂಡಸ್​ಇಂಡ್ ಷೇರು ಖರೀದಿಸಲು ಎಚ್​ಡಿಎಫ್​ಸಿಗೆ ಸಿಕ್ತು ಆರ್​ಬಿಐ ಅನುಮತಿ; ಷೇರುದಾರರದ್ದು ಇಲ್ಲವಾ ಸಮ್ಮತಿ?
ಎಚ್​ಡಿಎಫ್​ಸಿ ಬ್ಯಾಂಕ್
Follow us
|

Updated on: Feb 06, 2024 | 10:51 AM

ನವದೆಹಲಿ, ಫೆಬ್ರುವರಿ 6: ಇಂಡಸ್​ಇಂಡ್ ಬ್ಯಾಂಕ್​ನ ಶೇ. 9.50ರಷ್ಟು ಷೇರುಪಾಲನ್ನು ಖರೀದಿಸಲು ಎಚ್​ಡಿಎಫ್​ಸಿಗೆ ಆರ್​ಬಿಐ ಅನುಮತಿಸಿರುವ ಸುದ್ದಿ ಬಂದಿದೆ. ಇದರ ಬೆನ್ನಲ್ಲೇ ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಇಂಡಸ್​ಇಂಡ್ ಬ್ಯಾಂಕ್​ನ (IndusInd Bank) ಷೇರುಗಳು ಇವತ್ತಿನ (ಫೆ. 6) ಬೆಳಗಿನ ವಹಿವಾಟಿನಲ್ಲಿ ನೀರಸ ಆರಂಭ ಕಂಡಿವೆ. ಬೆಳಗ್ಗೆ 10 ಗಂಟೆಯ ವಹಿವಾಟಿನಲ್ಲಿ ಎರಡೂ ಷೇರುಗಳು ಶೇ. 0.50ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಶೇ. 9.50ಯಷ್ಟು ಪೇಯ್ಡ್ ಅಪ್ ಷೇರು ಮೊತ್ತ (Paid-up share capital) ಅಥವಾ ವೋಟಿಂಗ್ ರೈಟ್ಸ್ ಪಡೆಯಲು ಅನುಮತಿ ನೀಡಬೇಕೆಂದು ಎಚ್​ಡಿಎಫ್​ಸಿ ಸಲ್ಲಿಸಿದ ಅರ್ಜಿಗೆ ಆರ್​ಬಿಐ ಫೆ. 5ರಂದು ಸಮ್ಮತಿ ನೀಡಿದೆ. ಈ ವಿಷಯವನ್ನು ಇಂಡಸ್​ಇಂಡ್ ಬ್ಯಾಂಕ್ ಷೇರುವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಫೈಲಿಂಗ್​ನಲ್ಲಿ (exchange filing) ತಿಳಿಸಿದೆ.

ಹೂಡಿಕೆದಾರರು ಷೇರನ್ನು ನೇರವಾಗಿ ಕಂಪನಿಯಿಂದ ಖರೀದಿಸಿದರೆ, ಹಣವು ಕಂಪನಿಗೆ ಸಂದಾಯವಾಗುತ್ತದೆ. ಅಂಥ ಖರೀದಿಗೆ ಪೇಯ್ಡ್ ಅಪ್ ಕ್ಯಾಪಿಟಲ್ ಎನ್ನುತ್ತಾರೆ. ಐಪಿಒ ಇದಕ್ಕೆ ಉದಾಹರಣೆ. ಷೇರು ವಿನಿಮಯ ಕೇಂದ್ರದಲ್ಲಿ ಷೇರು ಖರೀದಿಸಿದರೆ ಆ ಹಣ ಕಂಪನಿಗೆ ಹೋಗುವುದಿಲ್ಲ. ಹೀಗಾಗಿ ಅದು ಪೇಯ್ಡ್ ಅಪ್ ಕ್ಯಾಪಿಟಲ್ ಎನಿಸುವುದಿಲ್ಲ.

ಎಚ್​ಡಿಎಫ್​ಸಿ ಬ್ಯಾಂಕ್ ಒಂದು ವರ್ಷದ ಒಳಗೆ ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಪ್ರಮುಖ ಷೇರುಪಾಲನ್ನು ಖರೀದಿಸಬೇಕು. ಇಲ್ಲದಿದ್ದರೆ ಈ ಅನುಮೋದನೆ ಅನೂರ್ಜಿತಗೊಳ್ಳುತ್ತದೆ ಎಂದು ಆರ್​ಬಿಐ ನಿಬಂಧನೆ ಹಾಕಿದೆ.

ಇದನ್ನೂ ಓದಿ: ಡೀಪ್​ಫೇಕ್ ಆಟ; ನಕಲಿ ಸಿಎಫ್​ಒ ಸೂಚನೆ ಕೇಳಿ 200 ಕೋಟಿ ರೂ ಕಳೆದುಕೊಂಡ ಉದ್ಯೋಗಿಗಳು

ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಎಚ್​ಡಿಎಫ್​ಸಿಯ ಅಗ್ರಿಗೇಟ್ ಹೋಲ್ಡಿಂಗ್ ಶೇ. 9.50ಕ್ಕಿಂತ ಹೆಚ್ಚಿರಬಾರದು, ಅಥವಾ ವೋಟಿಂಗ್ ರೈಟ್ಸ್ ಅನ್ನು ಮೀರಬಾರದು ಎಂದು ಆರ್​ಬಿಐ ಷರತ್ತು ಹಾಕಿದೆ. ಅಗ್ರಿಗೇಟ್ ಹೋಲ್ಡಿಂಗ್ ಎಂದರೆ ಎಚ್​ಡಿಎಫ್​ಸಿ ಗ್ರೂಪ್​ನ ಎಲ್ಲಾ ಸಂಸ್ಥೆಗಳೂ ಸೇರಿ ಇಂಡಸ್​ಇಂಡ್​ನಲ್ಲಿ ಹೊಂದಿರುವ ಒಟ್ಟೂ ಷೇರುಪಾಲು. ಈ ಒಟ್ಟೂ ಷೇರುಪಾಲು ಶೇ. 5ಕ್ಕಿಂತ ಕಡಿಮೆ ಆಗಿ ಹೋಗಿದ್ದು, ಅದನ್ನು ಶೇ. 5 ಅಥವಾ ಅದಕ್ಕಿಂತ ಮೇಲೆ ಹೆಚ್ಚಿಸಲು ಎಚ್​ಡಿಎಫ್​ಸಿ ಮತ್ತೆ ಆರ್​ಬಿಐನ ಅನುಮೋದನೆ ಪಡೆಯಬೇಕಾಗುತ್ತದೆ.

ಎಚ್​ಡಿಎಫ್​ಸಿ ಬ್ಯಾಂಕ್ ಸ್ಪಷ್ಟನೆ

ಐಡಿಎಫ್​ಸಿ ಬ್ಯಾಂಕ್​ನಲ್ಲಿ ಶೇ. 9.50ರವರೆಗೆ ಷೇರುಪಾಲು ಖರೀದಿಸಲು ಎಚ್​ಡಿಎಫ್​ಸಿ ಬ್ಯಾಂಕ್​ಗೆ ಆರ್​ಬಿಐ ಅನುಮತಿ ನೀಡಿರುವ ಸುದ್ದಿಗೆ ಎಚ್​ಡಿಎಫ್​ಸಿ ಬ್ಯಾಂಕ್ ಪ್ರತಿಕ್ರಿಯಿಸಿದೆ. ಇಲ್ಲಿ ಅನುಮೋದನೆ ನೀಡಲಾಗಿರುವುದು ಎಚ್​ಡಿಎಫ್​ಸಿ ಬ್ಯಾಂಕ್​ಗೆ ಅಲ್ಲ, ಎಚ್​ಡಿಎಫ್​ಸಿ ಗ್ರೂಪ್​ಗೆ ಎಂದು ಅರ್ಥ ಮಾಡಿಕೊಳ್ಳಬೇಕು. ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಪಾಲು ಖರೀದಿಸಲು ಆರ್​ಬಿಐ ನೀಡಿರುವ ಅನುಮೋದನೆಯು ಎಚ್​ಡಿಎಫ್​ಸಿ ಗ್ರೂಪ್​ನ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಹಾಗೂ ಇನ್ಷೂರೆನ್ಸ್ ವಿಭಾಗಗಳಿಗೆ ಎಂದು ಎಚ್​ಡಿಎಫ್​ಸಿ ಬ್ಯಾಂಕ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಛೇರ್ಮನ್ ಜೇಯ್ ಲೀ ಆರೋಪಮುಕ್ತ; ಮತ್ತೆ ಜೈಲು ಸೇರುವ ಅಪಾಯದಿಂದ ಪಾರು

ಹಿಂದೂಜಾ ಗ್ರೂಪ್​ಗೆ ಸೇರಿದ ಇಂಡಸ್​ಇಂಡ್ ಬ್ಯಾಂಕ್ ಡಿಸೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ 2,297.8 ಕೋಟಿ ರೂ ನಿವ್ವಳ ಲಾಭ ಪಡೆದಿದೆ. ಏಪ್ರಿಲ್​ನಿಂದ ಡಿಸೆಂಬರ್​ವರೆಗೆ ಆ ಬ್ಯಾಂಕ್​ನ ಲಾಭ 6,628 ಕೋಟಿ ರೂ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್