AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

HDFC: ಇಂಡಸ್​ಇಂಡ್ ಷೇರು ಖರೀದಿಸಲು ಎಚ್​ಡಿಎಫ್​ಸಿಗೆ ಸಿಕ್ತು ಆರ್​ಬಿಐ ಅನುಮತಿ; ಷೇರುದಾರರದ್ದು ಇಲ್ಲವಾ ಸಮ್ಮತಿ?

HDFC Bank and IndusInd Bank: ಹಿಂದೂಜಾ ಗ್ರೂಪ್​ನ ಇಂಡಸ್​ಇಂಡ್ ಬ್ಯಾಂಕ್​ನ ಶೇ. 9.50ರವರೆಗೆ ಷೇರುಪಾಲು ಖರೀದಿಸಲು ಎಚ್​ಡಿಎಫ್​ಸಿಗೆ ಆರ್​ಬಿಐ ಅನುಮತಿಸಿದೆ. ಎಚ್​ಡಿಎಫ್​ಸಿಯ ಅಗ್ರಿಗೇಟ್ ಹೋಲ್ಡಿಂಗ್ ಶೇ. 9.50 ಮೀರಬಾರದು ಎಂದು ಆರ್​ಬಿಐ ಷರತ್ತು ಹಾಕಿದೆ. ಅನುಮತಿ ಸಿಕ್ಕ ಬೆನ್ನಲ್ಲೇ ಫೆಬ್ರುವರಿ 6ರ ಬೆಳಗಿನ ಷೇರುಪೇಟೆ ವಹಿವಾಟಿನಲ್ಲಿ ಎಚ್​ಡಿಎಫ್​ಸಿ ಮತ್ತು ಇಂಡಸ್​ಇಂಡ್ ಬ್ಯಾಂಕುಗಳ ಷೇರುಗಳು ನೀರಸ ಅರಂಭ ಪಡೆದಿವೆ.

HDFC: ಇಂಡಸ್​ಇಂಡ್ ಷೇರು ಖರೀದಿಸಲು ಎಚ್​ಡಿಎಫ್​ಸಿಗೆ ಸಿಕ್ತು ಆರ್​ಬಿಐ ಅನುಮತಿ; ಷೇರುದಾರರದ್ದು ಇಲ್ಲವಾ ಸಮ್ಮತಿ?
ಎಚ್​ಡಿಎಫ್​ಸಿ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 06, 2024 | 10:51 AM

Share

ನವದೆಹಲಿ, ಫೆಬ್ರುವರಿ 6: ಇಂಡಸ್​ಇಂಡ್ ಬ್ಯಾಂಕ್​ನ ಶೇ. 9.50ರಷ್ಟು ಷೇರುಪಾಲನ್ನು ಖರೀದಿಸಲು ಎಚ್​ಡಿಎಫ್​ಸಿಗೆ ಆರ್​ಬಿಐ ಅನುಮತಿಸಿರುವ ಸುದ್ದಿ ಬಂದಿದೆ. ಇದರ ಬೆನ್ನಲ್ಲೇ ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಇಂಡಸ್​ಇಂಡ್ ಬ್ಯಾಂಕ್​ನ (IndusInd Bank) ಷೇರುಗಳು ಇವತ್ತಿನ (ಫೆ. 6) ಬೆಳಗಿನ ವಹಿವಾಟಿನಲ್ಲಿ ನೀರಸ ಆರಂಭ ಕಂಡಿವೆ. ಬೆಳಗ್ಗೆ 10 ಗಂಟೆಯ ವಹಿವಾಟಿನಲ್ಲಿ ಎರಡೂ ಷೇರುಗಳು ಶೇ. 0.50ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಶೇ. 9.50ಯಷ್ಟು ಪೇಯ್ಡ್ ಅಪ್ ಷೇರು ಮೊತ್ತ (Paid-up share capital) ಅಥವಾ ವೋಟಿಂಗ್ ರೈಟ್ಸ್ ಪಡೆಯಲು ಅನುಮತಿ ನೀಡಬೇಕೆಂದು ಎಚ್​ಡಿಎಫ್​ಸಿ ಸಲ್ಲಿಸಿದ ಅರ್ಜಿಗೆ ಆರ್​ಬಿಐ ಫೆ. 5ರಂದು ಸಮ್ಮತಿ ನೀಡಿದೆ. ಈ ವಿಷಯವನ್ನು ಇಂಡಸ್​ಇಂಡ್ ಬ್ಯಾಂಕ್ ಷೇರುವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಫೈಲಿಂಗ್​ನಲ್ಲಿ (exchange filing) ತಿಳಿಸಿದೆ.

ಹೂಡಿಕೆದಾರರು ಷೇರನ್ನು ನೇರವಾಗಿ ಕಂಪನಿಯಿಂದ ಖರೀದಿಸಿದರೆ, ಹಣವು ಕಂಪನಿಗೆ ಸಂದಾಯವಾಗುತ್ತದೆ. ಅಂಥ ಖರೀದಿಗೆ ಪೇಯ್ಡ್ ಅಪ್ ಕ್ಯಾಪಿಟಲ್ ಎನ್ನುತ್ತಾರೆ. ಐಪಿಒ ಇದಕ್ಕೆ ಉದಾಹರಣೆ. ಷೇರು ವಿನಿಮಯ ಕೇಂದ್ರದಲ್ಲಿ ಷೇರು ಖರೀದಿಸಿದರೆ ಆ ಹಣ ಕಂಪನಿಗೆ ಹೋಗುವುದಿಲ್ಲ. ಹೀಗಾಗಿ ಅದು ಪೇಯ್ಡ್ ಅಪ್ ಕ್ಯಾಪಿಟಲ್ ಎನಿಸುವುದಿಲ್ಲ.

ಎಚ್​ಡಿಎಫ್​ಸಿ ಬ್ಯಾಂಕ್ ಒಂದು ವರ್ಷದ ಒಳಗೆ ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಪ್ರಮುಖ ಷೇರುಪಾಲನ್ನು ಖರೀದಿಸಬೇಕು. ಇಲ್ಲದಿದ್ದರೆ ಈ ಅನುಮೋದನೆ ಅನೂರ್ಜಿತಗೊಳ್ಳುತ್ತದೆ ಎಂದು ಆರ್​ಬಿಐ ನಿಬಂಧನೆ ಹಾಕಿದೆ.

ಇದನ್ನೂ ಓದಿ: ಡೀಪ್​ಫೇಕ್ ಆಟ; ನಕಲಿ ಸಿಎಫ್​ಒ ಸೂಚನೆ ಕೇಳಿ 200 ಕೋಟಿ ರೂ ಕಳೆದುಕೊಂಡ ಉದ್ಯೋಗಿಗಳು

ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಎಚ್​ಡಿಎಫ್​ಸಿಯ ಅಗ್ರಿಗೇಟ್ ಹೋಲ್ಡಿಂಗ್ ಶೇ. 9.50ಕ್ಕಿಂತ ಹೆಚ್ಚಿರಬಾರದು, ಅಥವಾ ವೋಟಿಂಗ್ ರೈಟ್ಸ್ ಅನ್ನು ಮೀರಬಾರದು ಎಂದು ಆರ್​ಬಿಐ ಷರತ್ತು ಹಾಕಿದೆ. ಅಗ್ರಿಗೇಟ್ ಹೋಲ್ಡಿಂಗ್ ಎಂದರೆ ಎಚ್​ಡಿಎಫ್​ಸಿ ಗ್ರೂಪ್​ನ ಎಲ್ಲಾ ಸಂಸ್ಥೆಗಳೂ ಸೇರಿ ಇಂಡಸ್​ಇಂಡ್​ನಲ್ಲಿ ಹೊಂದಿರುವ ಒಟ್ಟೂ ಷೇರುಪಾಲು. ಈ ಒಟ್ಟೂ ಷೇರುಪಾಲು ಶೇ. 5ಕ್ಕಿಂತ ಕಡಿಮೆ ಆಗಿ ಹೋಗಿದ್ದು, ಅದನ್ನು ಶೇ. 5 ಅಥವಾ ಅದಕ್ಕಿಂತ ಮೇಲೆ ಹೆಚ್ಚಿಸಲು ಎಚ್​ಡಿಎಫ್​ಸಿ ಮತ್ತೆ ಆರ್​ಬಿಐನ ಅನುಮೋದನೆ ಪಡೆಯಬೇಕಾಗುತ್ತದೆ.

ಎಚ್​ಡಿಎಫ್​ಸಿ ಬ್ಯಾಂಕ್ ಸ್ಪಷ್ಟನೆ

ಐಡಿಎಫ್​ಸಿ ಬ್ಯಾಂಕ್​ನಲ್ಲಿ ಶೇ. 9.50ರವರೆಗೆ ಷೇರುಪಾಲು ಖರೀದಿಸಲು ಎಚ್​ಡಿಎಫ್​ಸಿ ಬ್ಯಾಂಕ್​ಗೆ ಆರ್​ಬಿಐ ಅನುಮತಿ ನೀಡಿರುವ ಸುದ್ದಿಗೆ ಎಚ್​ಡಿಎಫ್​ಸಿ ಬ್ಯಾಂಕ್ ಪ್ರತಿಕ್ರಿಯಿಸಿದೆ. ಇಲ್ಲಿ ಅನುಮೋದನೆ ನೀಡಲಾಗಿರುವುದು ಎಚ್​ಡಿಎಫ್​ಸಿ ಬ್ಯಾಂಕ್​ಗೆ ಅಲ್ಲ, ಎಚ್​ಡಿಎಫ್​ಸಿ ಗ್ರೂಪ್​ಗೆ ಎಂದು ಅರ್ಥ ಮಾಡಿಕೊಳ್ಳಬೇಕು. ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಪಾಲು ಖರೀದಿಸಲು ಆರ್​ಬಿಐ ನೀಡಿರುವ ಅನುಮೋದನೆಯು ಎಚ್​ಡಿಎಫ್​ಸಿ ಗ್ರೂಪ್​ನ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಹಾಗೂ ಇನ್ಷೂರೆನ್ಸ್ ವಿಭಾಗಗಳಿಗೆ ಎಂದು ಎಚ್​ಡಿಎಫ್​ಸಿ ಬ್ಯಾಂಕ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಛೇರ್ಮನ್ ಜೇಯ್ ಲೀ ಆರೋಪಮುಕ್ತ; ಮತ್ತೆ ಜೈಲು ಸೇರುವ ಅಪಾಯದಿಂದ ಪಾರು

ಹಿಂದೂಜಾ ಗ್ರೂಪ್​ಗೆ ಸೇರಿದ ಇಂಡಸ್​ಇಂಡ್ ಬ್ಯಾಂಕ್ ಡಿಸೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ 2,297.8 ಕೋಟಿ ರೂ ನಿವ್ವಳ ಲಾಭ ಪಡೆದಿದೆ. ಏಪ್ರಿಲ್​ನಿಂದ ಡಿಸೆಂಬರ್​ವರೆಗೆ ಆ ಬ್ಯಾಂಕ್​ನ ಲಾಭ 6,628 ಕೋಟಿ ರೂ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್