AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ನೋಟು ಮುದ್ರಿಸಲು 4 ರೂ; 2,000 ರೂಗಳ 370 ಕೋಟಿ ನೋಟುಗಳನ್ನು ಪಡೆಯಲು ಸರಕಾರದಿಂದ 1,300 ಕೋಟಿ ರೂ ವೆಚ್ಚ

RBI Spends Rs 1,300 Cr For Rs 2,000 Notes: ಒಟ್ಟು 7.40 ಲಕ್ಷಕೋಟಿ ರೂ ಮೊತ್ತವೆನಿಸುವ 370 ಕೋಟಿಗೂ ಹೆಚ್ಚು ನೋಟುಗಳನ್ನು ಪಡೆಯಲು ಸರ್ಕಾರ 1,300 ಕೋಟಿ ರೂ ಖರ್ಚು ಮಾಡಿರುವ ವಿಚಾರವನ್ನು ಆರ್​ಟಿಐ ಅಡಿಯಲ್ಲಿ ಆರ್​ಬಿಐ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ. ಆರ್​ಬಿಐ ಮೂರು ಹಂತಗಳಲ್ಲಿ 2,000 ರೂ ಮುಖಬೆಲೆಯ ನೋಟುಗಳನ್ನು ಪಡೆದಿದೆ. 2016-17ರಲ್ಲಿ 350.4 ಕೋಟಿ ನೋಟುಗಳು, 2017-18ರಲ್ಲಿ 15.1 ಕೋಟಿ ನೋಟುಗಳು, ಹಾಗು 2018-19ರಲ್ಲಿ 4.7 ಕೋಟಿ ನೋಟುಗಳನ್ನು ಆರ್​ಬಿಐ ಪಡೆದಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ. ಲಿ ಸಂಸ್ಥೆ ಈ ನೋಟುಗಳನ್ನು ಆರ್​ಬಿಐಗೆ ಮುದ್ರಿಸಿ ಕೊಟ್ಟಿತ್ತು.

ಒಂದು ನೋಟು ಮುದ್ರಿಸಲು 4 ರೂ; 2,000 ರೂಗಳ 370 ಕೋಟಿ ನೋಟುಗಳನ್ನು ಪಡೆಯಲು ಸರಕಾರದಿಂದ 1,300 ಕೋಟಿ ರೂ ವೆಚ್ಚ
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 29, 2023 | 6:18 PM

Share

ನವದೆಹಲಿ, ಸೆಪ್ಟೆಂಬರ್ 29: ಸರ್ಕಾರ 2016ರಲ್ಲಿ 500 ರೂ ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ 2,000 ರೂ ನೋಟುಗಳನ್ನು ಮುದ್ರಿಸಿತ್ತು. ಈಗ ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಈ ನೋಟುಗಳಿಗೆ ಸರ್ಕಾರ ಎಷ್ಟು ಖರ್ಚು ಮಾಡಿದೆ ಎಂಬ ಪ್ರಶ್ನೆಗೆ ಆರ್​ಬಿಐ ಉತ್ತರ ನೀಡಿದೆ. ಒಟ್ಟು 7.40 ಲಕ್ಷಕೋಟಿ ರೂ ಮೊತ್ತವೆನಿಸುವ 370 ಕೋಟಿಗೂ ಹೆಚ್ಚು ನೋಟುಗಳನ್ನು ಪಡೆಯಲು ಸರ್ಕಾರ 1,300 ಕೋಟಿ ರೂ ಖರ್ಚು ಮಾಡಿರುವ ವಿಚಾರವನ್ನು ಆರ್​ಟಿಐ ಅಡಿಯಲ್ಲಿ ಆರ್​ಬಿಐ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ. ದಿ ಹಿಂದೂ ಬಿಸಿನಿಸ್​ಲೈನ್ ಪತ್ರಿಕೆ ಪ್ರಕಟಿಸಿದ ವರದಿಯಲ್ಲಿ ಇದರ ವಿವರಗಳಿವೆ.

ಆರ್​ಬಿಐ ಮೂರು ಹಂತಗಳಲ್ಲಿ 2,000 ರೂ ಮುಖಬೆಲೆಯ ನೋಟುಗಳನ್ನು ಪಡೆದಿದೆ. 2016-17ರಲ್ಲಿ 350.4 ಕೋಟಿ ನೋಟುಗಳು, 2017-18ರಲ್ಲಿ 15.1 ಕೋಟಿ ನೋಟುಗಳು, ಹಾಗು 2018-19ರಲ್ಲಿ 4.7 ಕೋಟಿ ನೋಟುಗಳನ್ನು ಆರ್​ಬಿಐ ಪಡೆದಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ. ಲಿ ಸಂಸ್ಥೆ ಈ ನೋಟುಗಳನ್ನು ಆರ್​ಬಿಐಗೆ ಮುದ್ರಿಸಿ ಕೊಟ್ಟಿತ್ತು.

ಇದನ್ನೂ ಓದಿ: ಎರಡು ವರ್ಷವಾದರೂ ಎಫ್​ಟಿಎಸ್​ಇ​ ಇಂಡೆಕ್ಸ್ ಪಟ್ಟಿಗೆ ಸೇರ್ಪಡೆಯಾಗದ ಭಾರತೀಯ ಬಾಂಡ್​ಗಳು; ಏನಿದರ ಎಫೆಕ್ಟ್?

ಸಾವಿರ ನೋಟುಗಳ ಮುದ್ರಣಕ್ಕೆ 4,180 ರೂ ಖರ್ಚು?

ನೋಟು ಮುದ್ರಣ ಸಂಸ್ಥೆಯು 2,000 ರೂ ಮುಖಬೆಲೆಯ ಒಂದು ಸಾವಿರ ನೋಟುಗಳನ್ನು 4,180 ರೂಗಳಿಗೆ ಆರ್​ಬಿಐಗೆ ಮುದ್ರಿಸಿ ಕೊಟ್ಟಿದೆ. 2016-17ರಲ್ಲಿ ಒಂದು ಸಾವಿರ ನೋಟುಗಳಿಗೆ 3,540 ರೂ ಬೆಲೆಯಂತೆ ಆರ್​ಬಿಐಗೆ 350.4 ಕೋಟಿ ನೋಟುಗಳನ್ನು ಕೊಟ್ಟಿದೆ. 2017-18 ಮತ್ತು 2018-19ರಲ್ಲಿ ಕ್ರಮವಾಗಿ 4,180 ರೂ ಮತ್ತು 3,530 ರೂ ಬೆಲೆಯಲ್ಲಿ ಸಾವಿರ ನೋಟುಗಳನ್ನು ಮುದ್ರಿಸಿ ಕೊಡಲಾಗಿದೆ. ಅಂದರೆ ಸುಮಾರು 3.50 ರೂನಿಂದ 4.18 ರೂ ಬೆಲೆಗೆ ಒಂದು ನೋಟನ್ನು ಪಡೆಯಲಾಗಿದೆ.

ಈಗೆಷ್ಟಿದೆ 2,000 ರೂ ನೋಟುಗಳು?

ಆರ್​ಬಿಐನಿಂದ ಬಿಡುಗಡೆ ಆಗಿದ್ದ 2,000 ರೂ ಮುಖಬೆಲೆಯ ನೋಟುಗಳ ಒಟ್ಟು ಮೊತ್ತ 7.40 ಲಕ್ಷ ಕೋಟಿ ರೂಗೂ ಹೆಚ್ಚು ಇತ್ತು. ಕ್ರಮೇಣವಾಗಿ ನೋಟುಗಳನ್ನು ಚಲಾವಣೆಯಿಂದ ಆರ್​ಬಿಐ ಹಿಂಪಡೆದುಕೊಳ್ಳುತ್ತಾ ಹೋಗಿತ್ತು. 2023ರ ಮಾರ್ಚ್ ತಿಂಗಳಲ್ಲಿ 3.62 ಲಕ್ಷ ಕೋಟಿ ರೂ ಮೊತ್ತದ 2,000 ರೂ ನೋಟುಗಳು ಚಲಾವಣೆಯಲ್ಲಿದ್ದವು.

ಇದನ್ನೂ ಓದಿ: ಕಾಲೇಜಲ್ಲಿ ಸಂಜೆ ಬ್ಯಾಚ್ ಮಾಡಿದ್ರೆ ಯಾರಿಗೆ ಲಾಭ?; ಷೇರುಮಾರುಕಟ್ಟೆಯಲ್ಲಿ ಟ್ರೇಡಿಂಗ್ ಅವಧಿ ವಿಸ್ತರಿಸುವ ಪ್ರಸ್ತಾಪಕ್ಕೆ ವ್ಯಂಗ್ಯ

ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ಮೇ ತಿಂಗಳಲ್ಲಿ ಪ್ರಕಟಿಸಿದ ಬಳಿಕ ಶೇ. 93ರಷ್ಟು ನೋಟುಗಳು ಆರ್​ಬಿಐಗೆ ಹಿಂದಿರುಗಿವೆ. ಈ ನೋಟುಗಳನ್ನು ಮರಳಿಸಲು ಆರ್​ಬಿಐ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ. ಇದನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ