Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ವರ್ಷವಾದರೂ ಎಫ್​ಟಿಎಸ್​ಇ​ ಇಂಡೆಕ್ಸ್ ಪಟ್ಟಿಗೆ ಸೇರ್ಪಡೆಯಾಗದ ಭಾರತೀಯ ಬಾಂಡ್​ಗಳು; ಏನಿದರ ಎಫೆಕ್ಟ್?

FTSE and Indian Govt Bonds: ಭಾರತೀಯ ಬಾಂಡ್ ಮಾರುಕಟ್ಟೆಯಲ್ಲಿ ನಿರೀಕ್ಷಿತ ಸುಧಾರಣೆ ಆಗದ ಹಿನ್ನೆಲೆಯಲ್ಲಿ ತನ್ನ ಇಂಡೆಕ್ಸ್​ಗೆ ಸೇರ್ಪಡೆ ಮಾಡುವ ನಿರ್ಧಾರವನ್ನು ಸದ್ಯಕ್ಕೆ ಮುಂದಕ್ಕೆ ಹಾಕಿದೆ ಎಫ್​ಟಿಎಸ್​ಇ. ಆದರೆ, ಎಫ್​ಟಿಎಸ್​ಇಯ ವಾಚ್​ಲಿಸ್ಟ್​ನಲ್ಲಿ ಭಾರತದ ಬಾಂಡ್​ಗಳು ಇರಲಿವೆ. ಅಂದರೆ, ಮುಂದಿನ ದಿನಗಳಲ್ಲಿ ಭಾರತೀಯ ಬಾಂಡ್ ಮಾರುಕಟ್ಟೆ ಬಗ್ಗೆ ಎಫ್​ಟಿಎಸ್​ಇಗೆ ವಿಶ್ವಾಸ ಮೂಡಿದರೆ ಅದರ ಎಮರ್ಜಿಂಗ್ ಮಾರ್ಕೆಟ್ಸ್ ಗವರ್ನ್ಮೆಂಟ್ ಬಾಂಡ್ ಇಂಡೆಕ್ಸ್​ಗೆ ಭಾರತ ಸರ್ಕಾರದ ಬಾಂಡ್​ಗಳನ್ನು ಒಳಗೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ.

ಎರಡು ವರ್ಷವಾದರೂ ಎಫ್​ಟಿಎಸ್​ಇ​ ಇಂಡೆಕ್ಸ್ ಪಟ್ಟಿಗೆ ಸೇರ್ಪಡೆಯಾಗದ ಭಾರತೀಯ ಬಾಂಡ್​ಗಳು; ಏನಿದರ ಎಫೆಕ್ಟ್?
ಎಫ್​ಟಿಎಸ್​ಇ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 29, 2023 | 2:05 PM

ನವದೆಹಲಿ, ಸೆಪ್ಟೆಂಬರ್ 29: ಜೆಪಿ ಮಾರ್ಗನ್ ಚೇಸ್ ಸಂಸ್ಥೆ ಮುಂದಿನ ವರ್ಷ ಭಾರತೀಯ ಬಾಂಡ್​ಗಳನ್ನು ತನ್ನ ಎಮರ್ಜಿಂಗ್ ಮಾರ್ಕೆಟ್ ಇಂಡೆಕ್ಸ್​ನಲ್ಲಿ ಸೇರಿಸಿಕೊಳ್ಳುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಮತ್ತೊಂದು ಪ್ರಮುಖ ಬಾಂಡ್ ಎಕ್ಸ್​ಚೇಂಜ್ ಮಾರುಕಟ್ಟೆಯಾದ ಎಫ್​ಟಿಎಸ್​ಇಯಿಂದ (FTSE Russel) ನಿರಾಸೆಯ ಸುದ್ದಿ ಬಂದಿದೆ. ಎಫ್​ಟಿಎಸ್​ಇ ಎಮರ್ಜಿಂಗ್ ಮಾರ್ಕೆಟ್ಸ್ ಗವರ್ನ್ಮೆಂಟ್ ಬಾಂಡ್ ಇಂಡೆಕ್ಸ್​ನಲ್ಲಿ ಭಾರತದ ಬಾಂಡ್​ಗಳನ್ನು ಒಳಗೊಳ್ಳುವ ಕಾಲ ಸದ್ಯಕ್ಕೆ ಕೂಡಿ ಬಂದಿಲ್ಲ. ಭಾರತೀಯ ಬಾಂಡ್ ಮಾರುಕಟ್ಟೆಯಲ್ಲಿ ನಿರೀಕ್ಷಿತ ಸುಧಾರಣೆ ಆಗದ ಹಿನ್ನೆಲೆಯಲ್ಲಿ ತನ್ನ ಇಂಡೆಕ್ಸ್​ಗೆ ಸೇರ್ಪಡೆ ಮಾಡುವ ನಿರ್ಧಾರವನ್ನು ಸದ್ಯಕ್ಕೆ ಮುಂದಕ್ಕೆ ಹಾಕಿದೆ ಎಫ್​ಟಿಎಸ್​ಇ. ಆದರೆ, ಎಫ್​ಟಿಎಸ್​ಇಯ ವಾಚ್​ಲಿಸ್ಟ್​ನಲ್ಲಿ ಭಾರತದ ಬಾಂಡ್​ಗಳು ಇರಲಿವೆ. ಅಂದರೆ, ಮುಂದಿನ ದಿನಗಳಲ್ಲಿ ಭಾರತೀಯ ಬಾಂಡ್ ಮಾರುಕಟ್ಟೆ (Indian Bond Market) ಬಗ್ಗೆ ಎಫ್​ಟಿಎಸ್​ಇಗೆ ವಿಶ್ವಾಸ ಮೂಡಿದರೆ ಅದರ ಎಮರ್ಜಿಂಗ್ ಮಾರ್ಕೆಟ್ಸ್ ಗವರ್ನ್ಮೆಂಟ್ ಬಾಂಡ್ ಇಂಡೆಕ್ಸ್​ಗೆ ಭಾರತ ಸರ್ಕಾರದ ಬಾಂಡ್​ಗಳನ್ನು ಒಳಗೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ.

‘ಎಫ್​ಟಿಎಸ್​ಇ ಎಮರ್ಜಿಂಗ್ ಮಾರ್ಕೆಟ್ಸ್ ಗವರ್ನ್ಮೆಂಟ್ ಬಾಂಡ್ ಇಂಡೆಕ್ಸ್​ನಲ್ಲಿ ಒಳಗೊಳ್ಳಲು ಪರಿಗಣನೆಗೆ ಭಾರತವನ್ನು ನಮ್ಮ ಗಮನದಲ್ಲಿ ಇರಿಸಿಕೊಂಡಿರುವುದನ್ನು ಮುಂದುವರಿಸಉತ್ತಿದ್ದೇವೆ’ ಎಂದು ಬ್ರಿಟನ್ ದೇಶದ ಎಫ್​ಟಿಎಸ್​ಇ ರಸಲ್ ಗ್ರೂಪ್ ಹೇಳಿದೆ.

2021ರಲ್ಲಿ ಫೈನಾನ್ಷಿಯಲ್ ಟೈಮ್ಸ್ ಸ್ಟಾಕ್ ಎಕ್ಸ್​ಚೇಂಜ್ ಸಂಸ್ಥೆ ತನ್ನ ಎಮರ್ಜಿಂಗ್ ಮಾರ್ಕೆಟ್ಸ್ ಗವರ್ನ್ಮೆಂಟ್ ಬಾಂಡ್ ಇಂಡೆಕ್ಸ್​ನಲ್ಲಿ ಒಳಗೊಳ್ಳಲು ಭಾರತವನ್ನು ತನ್ನ ವಾಚ್​ಲಿಸ್ಟ್​ಗೆ ಸೇರಿಸಿತ್ತು.

ಇದನ್ನೂ ಓದಿ: ಕಾಲೇಜಲ್ಲಿ ಸಂಜೆ ಬ್ಯಾಚ್ ಮಾಡಿದ್ರೆ ಯಾರಿಗೆ ಲಾಭ?; ಷೇರುಮಾರುಕಟ್ಟೆಯಲ್ಲಿ ಟ್ರೇಡಿಂಗ್ ಅವಧಿ ವಿಸ್ತರಿಸುವ ಪ್ರಸ್ತಾಪಕ್ಕೆ ವ್ಯಂಗ್ಯ

ಈ ಇಂಡೆಕ್ಸ್​ನಲ್ಲಿ ಉದಯೋನ್ಮುಖ ಆರ್ಥಿಕತೆಯ ದೇಶಗಳ ಸರ್ಕಾರಿ ಬಾಂಡ್​ಗಳನ್ನು ಒಳಗೊಳ್ಳಲಾಗುತ್ತದೆ. ಏಷ್ಯಾದಲ್ಲಿ ಚೀನಾ, ಫಿಲಿಪ್ಪೈನ್ಸ್ ಸೇರಿದಂತೆ ಐದಾರು ದೇಶಗಳ ಬಾಂಡ್​ಗಳು ಈ ಸೂಚ್ಯಂಕದಲ್ಲಿವೆ.

ಎಫ್​ಟಿಎಸ್​ಇ ಎಮರ್ಜಿಂಗ್ ಮಾರ್ಕೆಟ್ಸ್ ಗವರ್ನ್ಮೆಂಟ್ ಬಾಂಡ್ ಇಂಡೆಕ್ಸ್​ನಲ್ಲಿ ಇರುವ ದೇಶಗಳು

  1. ಬ್ರೆಜಿಲ್
  2. ಚಿಲಿ
  3. ಚೀನಾ
  4. ಕೊಲಂಬಿಯಾ
  5. ಹಂಗೆರಿ
  6. ಇಂಡೋನೇಷ್ಯಾ
  7. ಮೆಕ್ಸಿಕೋ
  8. ಮಲೇಷ್ಯಾ
  9. ಪೆರು
  10. ಫಿಲಿಪ್ಪೈನ್ಸ್
  11. ಪೋಲ್ಯಾಂಡ್
  12. ರೊಮೇನಿಯಾ
  13. ಸೌದಿ ಅರೇಬಿಯಾ
  14. ಸೌತ್ ಆಫ್ರಿಕಾ
  15. ಥಾಯ್ಲೆಂಡ್
  16. ಟರ್ಕಿ

ಇದನ್ನೂ ಓದಿ: ಚೀನಾದ ಎವರ್​ಗ್ರಾಂಡೆ ದಯನೀಯ ಸ್ಥಿತಿ; ಛೇರ್ಮನ್ ಬಂಧನದ ಬೆನ್ನಲ್ಲೇ ಷೇರು ಸ್ಥಗಿತ; ಭಾರತದಿಂದ ಕಲಿಯಲಿ ಎಂದ ಉದಯ್ ಕೋಟಕ್

ಭಾರತದ ಬಾಂಡ್ ಮಾರುಕಟ್ಟೆಗೆ ನಿರಾಸೆಯಾ?

ಎಫ್​ಟಿಎಸ್​ಇಯ ಈ ಮೇಲಿನ ಇಂಡೆಕ್ಸ್​ಗೆ ಇನ್ನೂ ಸೇರ್ಪಡೆ ಆಗದೇ ಇರುವುದು ಭಾರತಕ್ಕೆ ಹಿನ್ನಡೆಯಾ? ಎಫ್​ಟಿಎಸ್​ಇ ಇಂಡೆಕ್ಸ್​ನಲ್ಲಿ ಒಳಗೊಳ್ಳುವ ನಿರೀಕ್ಷೆ ಸದ್ಯಕ್ಕೆ ಇರಲಿಲ್ಲ. ಹೀಗಾಗಿ, ಈ ಬೆಳವಣಿಗೆಯು ಭಾರತದ ಮೇಲೆ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಇದಕ್ಕಿಂತಲೂ ಜೆಪಿ ಮಾರ್ಗನ್​ನ ಎಮರ್ಜಿಂಗ್ ಮಾರ್ಕೆಟ್ ಇಂಡೆಕ್ಸ್​ನಲ್ಲಿ ಸೇರ್ಪಡೆಯಾಗುವುದು ಹೆಚ್ಚು ಬಂಡವಾಳ ಹರಿದುಬರಲು ಎಡೆ ಮಾಡಿಕೊಡುತ್ತದೆ ಎನ್ನುವ ಅಭಿಪ್ರಾಯಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ