AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಆರ್​ಆರ್ ಹರಾಜು ಮೂಲಕ ಬ್ಯಾಂಕುಗಳಿಗೆ 2.50 ಲಕ್ಷ ಕೋಟಿ ರೂ ಹಣ; ಡಾಲರ್ ಮಾರಾಟದ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ದೊಡ್ಡ ಕ್ರಮ

RBI to infuse Rs 2.5 trillion into Indian banking system: ಭಾರತೀಯ ರಿಸರ್ವ್ ಬ್ಯಾಂಕ್ ಇಂದು (ಫೆ. 12) ವೇರಿಯಬಲ್ ರೇಟ್ ರಿಪೋ ಹರಾಜು ಪ್ರಕ್ರಿಯೆ ನಡೆಸುತ್ತಿದೆ. ಇದು ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ 2.50 ಲಕ್ಷ ಕೋಟಿ ರೂ ಹಣ ತುಂಬಿಸಲು ಆರ್​​ಬಿಐ ತೆಗೆದುಕೊಳ್ಳುತ್ತಿರುವ ಕ್ರಮವಾಗಿದೆ. ಬ್ಯಾಂಕುಗಳು ಈ ಹರಾಜಿನಲ್ಲಿ ಪಾಲ್ಗೊಂಡು, ತಮಗೆ ಅವಶ್ಯಕ ಇರುವಷ್ಟು ಫಂಡಿಂಗ್ ಪಡೆಯಬಹುದು.

ವಿಆರ್​ಆರ್ ಹರಾಜು ಮೂಲಕ ಬ್ಯಾಂಕುಗಳಿಗೆ 2.50 ಲಕ್ಷ ಕೋಟಿ ರೂ ಹಣ; ಡಾಲರ್ ಮಾರಾಟದ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ದೊಡ್ಡ ಕ್ರಮ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 12, 2025 | 10:44 AM

Share

ನವದೆಹಲಿ, ಫೆಬ್ರುವರಿ 12: ಲಿಕ್ವಿಡಿಟಿ ಸಮಸ್ಯೆ ಎದುರಿಸುತ್ತಿರುವ ಭಾರತದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹಣ ಹರಿವು ಹೆಚ್ಚಿಸಲು ರಿಸರ್ವ್ ಬ್ಯಾಂಕ್ ವಿಆರ್​ಆರ್ ಹರಾಜು (Variable Rate Repo Auction) ಪ್ರಕ್ರಿಯೆ ನಡೆಸಲು ನಿಶ್ಚಯಿಸಿದೆ. ಇವತ್ತು ನಡೆಯಲಿರುವ ವೇರಿಯಬಲ್ ರೇಟ್ ರಿಪೋ ಆಕ್ಷನ್​ನಲ್ಲಿ ಎರಡೂವರೆ ಲಕ್ಷ ಕೋಟಿ ರೂ ಹಣವನ್ನು ಬ್ಯಾಂಕುಗಳಿಗೆ ಒದಗಿಸುವ ಗುರಿ ಆರ್​ಬಿಐಗೆ ಇದೆ.

ಹಿಂದಿನ ಎರಡು ದಿನಗಳಲ್ಲಿ ಆರ್​ಬಿಐ ಸಾಕಷ್ಟು ಡಾಲರ್​ಗಳನ್ನು ಮಾರಾಟ ಮಾಡಿತ್ತು. ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತವನ್ನು ತಡೆಯಲು ಆರ್​ಬಿಐ ಸುಮಾರು ಆರೇಳು ಬಿಲಿಯನ್ ಡಾಲರ್ ಮೌಲ್ಯದಷ್ಟು ಡಾಲರ್​ಗಳನ್ನು ಮಾರಿತ್ತು. ಇದರಿಂದ ಬ್ಯಾಂಕಿಂಗ್ ವಲಯದಲ್ಲಿ ತುಸು ಹಣದ ಕೊರತೆ (liquidity deficit) ಸೃಷ್ಟಿಯಾಗಿದೆ. ಈ ಕೊರತೆಯನ್ನು ನೀಗಿಸಲು ಆರ್​ಬಿಐ ವಿಆರ್​ಆರ್ ಹರಾಜು ಅಸ್ತ್ರ ಉಪಯೋಗಿಸಲು ಹೊರಟಿದೆ.

ಇದನ್ನೂ ಓದಿ: ಡಾಲರ್ ಎದುರು 2 ವರ್ಷದಲ್ಲಿ ಅತಿದೊಡ್ಡ ಜಿಗಿತ ಕಂಡ ರುಪಾಯಿ; ಇತ್ತೀಚಿನ ಕರೆನ್ಸಿ ಹಿನ್ನಡೆಗೆ ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್

ಆರ್​ಬಿಐ ಆಗಾಗ್ಗೆ ಅಗತ್ಯ ಇರುವಾಗೆಲ್ಲಾ ಈ ವಿಆರ್​ಆರ್ ಹರಾಜು ಮಾರ್ಗ ಅನುಸರಿಸುತ್ತಿರುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಲಿಕ್ವಿಡಿಟಿ ಸಮಸ್ಯೆ ಎದುರಾದಾಗ ಈ ರೀತಿಯ ಕ್ರಮ ಅನಿವಾರ್ಯವಾಗಿರುತ್ತದೆ. ಕಳೆದ ಒಂದು ತಿಂಗಳಿಂದಲೂ ಆರ್​ಬಿಐ ಬಹುತೇಕ ದಿನನಿತ್ಯವೂ ವೇರಿಯಬಲ್ ರೇಟ್ ರಿಪೋ ಆಕ್ಷನ್ ಪ್ರಕ್ರಿಯೆ ನಡೆಸುತ್ತಿದೆ. ಲಿಕ್ವಿಡಿಟಿ ಸಮಸ್ಯೆ, ಅಥವಾ ಫಂಡಿಂಗ್ ಕೊರತೆ ಎದುರಿಸುತ್ತಿರುವ ಬ್ಯಾಂಕುಗಳು ಈ ಹರಾಜಿನಲ್ಲಿ ಪಾಲ್ಗೊಂಡು ಹಣ ಪಡೆಯಬಹುದು.

ಆರ್​ಬಿಐನಿಂದ ಡಾಲರ್​ಗಳ ಮಾರಾಟ ದೊಡ್ಡ ಪ್ರಮಾಣದಲ್ಲಿ ಆಗಿರುವುದು, ಹಾಗೂ ತೆರಿಗೆಗಳ ಹೊರಹರಿವು ಹೆಚ್ಚಾಗಿರುವುದು ಬ್ಯಾಂಕಿಂಗ್ ಸಿಸ್ಟಂನಲ್ಲಿ ಲಿಕ್ವಿಡಿಟಿ ಕೊರತೆ ಎದುರಾಗಲು ಕಾರಣ. ಕೆಲ ದಿನಗಳ ಅಂತರದಲ್ಲೇ ಎರಡು ಲಕ್ಷ ಕೋಟಿ ರೂ ಹಣದ ಕೊರತೆ ಎದುರಾಗಿದೆ ಎಂಬುದು ಟ್ರೇಡರ್​ಗಳ ಅನಿಸಿಕೆ.

ಇದನ್ನೂ ಓದಿ: ಸೈಬರ್ ವಂಚನೆ ತಡೆಯಲು ಆರ್​ಬಿಐ ಕ್ರಮ; ಬ್ಯಾಂಕುಗಳಿಗೆ ಬೇರೆ ಡೊಮೇನ್, ಅಂತಾರಾಷ್ಟ್ರೀಯ ಪಾವತಿಗೆ ಹೆಚ್ಚುವರಿ ಸೆಕ್ಯುರಿಟಿ

ಜನವರಿ ಕೊನೆಯ ವಾರದಲ್ಲಿ ಆರ್​​ಬಿಐ ವಿಆರ್​ಆರ್ ಹರಾಜು ಮೂಲಕ ಎರಡು ದಿನದಲ್ಲಿ ಮೂರೂವರೆ ಲಕ್ಷ ಕೋಟಿ ರೂಗೂ ಅಧಿಕ ಹಣವನ್ನು ಬ್ಯಾಂಕುಗಳಿಗೆ ನೀಡಿತ್ತು. ಈಗ ಒಂದೇ ದಿನದಲ್ಲಿ ಎರಡೂವರೆ ಲಕ್ಷ ಕೋಟಿ ರೂ ನೀಡಲು ಹೊರಟಿದೆ. ಇದು ಒಂದು ದಿನದಲ್ಲಿ ಆರ್​ಬಿಐ ಕೈಗೊಂಡ ಅತಿದೊಡ್ಡ ಮೊತ್ತದ ಹರಾಜೆನಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!