AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಆರ್​ಆರ್ ಹರಾಜು ಮೂಲಕ ಬ್ಯಾಂಕುಗಳಿಗೆ 2.50 ಲಕ್ಷ ಕೋಟಿ ರೂ ಹಣ; ಡಾಲರ್ ಮಾರಾಟದ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ದೊಡ್ಡ ಕ್ರಮ

RBI to infuse Rs 2.5 trillion into Indian banking system: ಭಾರತೀಯ ರಿಸರ್ವ್ ಬ್ಯಾಂಕ್ ಇಂದು (ಫೆ. 12) ವೇರಿಯಬಲ್ ರೇಟ್ ರಿಪೋ ಹರಾಜು ಪ್ರಕ್ರಿಯೆ ನಡೆಸುತ್ತಿದೆ. ಇದು ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ 2.50 ಲಕ್ಷ ಕೋಟಿ ರೂ ಹಣ ತುಂಬಿಸಲು ಆರ್​​ಬಿಐ ತೆಗೆದುಕೊಳ್ಳುತ್ತಿರುವ ಕ್ರಮವಾಗಿದೆ. ಬ್ಯಾಂಕುಗಳು ಈ ಹರಾಜಿನಲ್ಲಿ ಪಾಲ್ಗೊಂಡು, ತಮಗೆ ಅವಶ್ಯಕ ಇರುವಷ್ಟು ಫಂಡಿಂಗ್ ಪಡೆಯಬಹುದು.

ವಿಆರ್​ಆರ್ ಹರಾಜು ಮೂಲಕ ಬ್ಯಾಂಕುಗಳಿಗೆ 2.50 ಲಕ್ಷ ಕೋಟಿ ರೂ ಹಣ; ಡಾಲರ್ ಮಾರಾಟದ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ದೊಡ್ಡ ಕ್ರಮ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 12, 2025 | 10:44 AM

Share

ನವದೆಹಲಿ, ಫೆಬ್ರುವರಿ 12: ಲಿಕ್ವಿಡಿಟಿ ಸಮಸ್ಯೆ ಎದುರಿಸುತ್ತಿರುವ ಭಾರತದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹಣ ಹರಿವು ಹೆಚ್ಚಿಸಲು ರಿಸರ್ವ್ ಬ್ಯಾಂಕ್ ವಿಆರ್​ಆರ್ ಹರಾಜು (Variable Rate Repo Auction) ಪ್ರಕ್ರಿಯೆ ನಡೆಸಲು ನಿಶ್ಚಯಿಸಿದೆ. ಇವತ್ತು ನಡೆಯಲಿರುವ ವೇರಿಯಬಲ್ ರೇಟ್ ರಿಪೋ ಆಕ್ಷನ್​ನಲ್ಲಿ ಎರಡೂವರೆ ಲಕ್ಷ ಕೋಟಿ ರೂ ಹಣವನ್ನು ಬ್ಯಾಂಕುಗಳಿಗೆ ಒದಗಿಸುವ ಗುರಿ ಆರ್​ಬಿಐಗೆ ಇದೆ.

ಹಿಂದಿನ ಎರಡು ದಿನಗಳಲ್ಲಿ ಆರ್​ಬಿಐ ಸಾಕಷ್ಟು ಡಾಲರ್​ಗಳನ್ನು ಮಾರಾಟ ಮಾಡಿತ್ತು. ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತವನ್ನು ತಡೆಯಲು ಆರ್​ಬಿಐ ಸುಮಾರು ಆರೇಳು ಬಿಲಿಯನ್ ಡಾಲರ್ ಮೌಲ್ಯದಷ್ಟು ಡಾಲರ್​ಗಳನ್ನು ಮಾರಿತ್ತು. ಇದರಿಂದ ಬ್ಯಾಂಕಿಂಗ್ ವಲಯದಲ್ಲಿ ತುಸು ಹಣದ ಕೊರತೆ (liquidity deficit) ಸೃಷ್ಟಿಯಾಗಿದೆ. ಈ ಕೊರತೆಯನ್ನು ನೀಗಿಸಲು ಆರ್​ಬಿಐ ವಿಆರ್​ಆರ್ ಹರಾಜು ಅಸ್ತ್ರ ಉಪಯೋಗಿಸಲು ಹೊರಟಿದೆ.

ಇದನ್ನೂ ಓದಿ: ಡಾಲರ್ ಎದುರು 2 ವರ್ಷದಲ್ಲಿ ಅತಿದೊಡ್ಡ ಜಿಗಿತ ಕಂಡ ರುಪಾಯಿ; ಇತ್ತೀಚಿನ ಕರೆನ್ಸಿ ಹಿನ್ನಡೆಗೆ ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್

ಆರ್​ಬಿಐ ಆಗಾಗ್ಗೆ ಅಗತ್ಯ ಇರುವಾಗೆಲ್ಲಾ ಈ ವಿಆರ್​ಆರ್ ಹರಾಜು ಮಾರ್ಗ ಅನುಸರಿಸುತ್ತಿರುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಲಿಕ್ವಿಡಿಟಿ ಸಮಸ್ಯೆ ಎದುರಾದಾಗ ಈ ರೀತಿಯ ಕ್ರಮ ಅನಿವಾರ್ಯವಾಗಿರುತ್ತದೆ. ಕಳೆದ ಒಂದು ತಿಂಗಳಿಂದಲೂ ಆರ್​ಬಿಐ ಬಹುತೇಕ ದಿನನಿತ್ಯವೂ ವೇರಿಯಬಲ್ ರೇಟ್ ರಿಪೋ ಆಕ್ಷನ್ ಪ್ರಕ್ರಿಯೆ ನಡೆಸುತ್ತಿದೆ. ಲಿಕ್ವಿಡಿಟಿ ಸಮಸ್ಯೆ, ಅಥವಾ ಫಂಡಿಂಗ್ ಕೊರತೆ ಎದುರಿಸುತ್ತಿರುವ ಬ್ಯಾಂಕುಗಳು ಈ ಹರಾಜಿನಲ್ಲಿ ಪಾಲ್ಗೊಂಡು ಹಣ ಪಡೆಯಬಹುದು.

ಆರ್​ಬಿಐನಿಂದ ಡಾಲರ್​ಗಳ ಮಾರಾಟ ದೊಡ್ಡ ಪ್ರಮಾಣದಲ್ಲಿ ಆಗಿರುವುದು, ಹಾಗೂ ತೆರಿಗೆಗಳ ಹೊರಹರಿವು ಹೆಚ್ಚಾಗಿರುವುದು ಬ್ಯಾಂಕಿಂಗ್ ಸಿಸ್ಟಂನಲ್ಲಿ ಲಿಕ್ವಿಡಿಟಿ ಕೊರತೆ ಎದುರಾಗಲು ಕಾರಣ. ಕೆಲ ದಿನಗಳ ಅಂತರದಲ್ಲೇ ಎರಡು ಲಕ್ಷ ಕೋಟಿ ರೂ ಹಣದ ಕೊರತೆ ಎದುರಾಗಿದೆ ಎಂಬುದು ಟ್ರೇಡರ್​ಗಳ ಅನಿಸಿಕೆ.

ಇದನ್ನೂ ಓದಿ: ಸೈಬರ್ ವಂಚನೆ ತಡೆಯಲು ಆರ್​ಬಿಐ ಕ್ರಮ; ಬ್ಯಾಂಕುಗಳಿಗೆ ಬೇರೆ ಡೊಮೇನ್, ಅಂತಾರಾಷ್ಟ್ರೀಯ ಪಾವತಿಗೆ ಹೆಚ್ಚುವರಿ ಸೆಕ್ಯುರಿಟಿ

ಜನವರಿ ಕೊನೆಯ ವಾರದಲ್ಲಿ ಆರ್​​ಬಿಐ ವಿಆರ್​ಆರ್ ಹರಾಜು ಮೂಲಕ ಎರಡು ದಿನದಲ್ಲಿ ಮೂರೂವರೆ ಲಕ್ಷ ಕೋಟಿ ರೂಗೂ ಅಧಿಕ ಹಣವನ್ನು ಬ್ಯಾಂಕುಗಳಿಗೆ ನೀಡಿತ್ತು. ಈಗ ಒಂದೇ ದಿನದಲ್ಲಿ ಎರಡೂವರೆ ಲಕ್ಷ ಕೋಟಿ ರೂ ನೀಡಲು ಹೊರಟಿದೆ. ಇದು ಒಂದು ದಿನದಲ್ಲಿ ಆರ್​ಬಿಐ ಕೈಗೊಂಡ ಅತಿದೊಡ್ಡ ಮೊತ್ತದ ಹರಾಜೆನಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್