AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರುಪೇಟೆ ರಕ್ತದೋಕುಳಿ; ಮಕಾಡೆ ಮಲಗಿರುವ ಸಾವಿರಕ್ಕೂ ಹೆಚ್ಚು ಷೇರುಗಳು

India stock market bleeding continues: ಬಿಎಸ್​ಇನಲ್ಲಿರುವ 4,000ಕ್ಕೂ ಅಧಿಕ ಷೇರುಗಳ ಪೈಕಿ 1,058 ಷೇರುಗಳ ಮೌಲ್ಯ ತನ್ನ ಗರಿಷ್ಠ ಮಟ್ಟದಿಂದ ಶೇ. 30ಕ್ಕಿಂತ ಒಳಗೆ ಕುಸಿತ ಕಂಡಿದೆ. ಎನ್​ಎಸ್​ಇನ ನಿಫ್ಟಿ500 ಸೂಚ್ಯಂಕದ ಶೇ. 81ರಷ್ಟು ಸ್ಟಾಕ್​ಗಳು 200 ಡಿಎಂಎ ಸರಾಸರಿಗಿಂತ ಕಡಿಮೆಗೆ ಹೋಗಿದೆ. ಇದು ಷೇರು ಮಾರುಕಟ್ಟೆಯ ಋಣಾತ್ಮಕ ಟ್ರೆಂಡ್​ನ ಸಂಕೇತವಾಗಿದೆ.

ಷೇರುಪೇಟೆ ರಕ್ತದೋಕುಳಿ; ಮಕಾಡೆ ಮಲಗಿರುವ ಸಾವಿರಕ್ಕೂ ಹೆಚ್ಚು ಷೇರುಗಳು
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 12, 2025 | 12:27 PM

Share

ನವದೆಹಲಿ, ಫೆಬ್ರುವರಿ 12: ಭಾರತದ ಷೇರು ಮಾರುಕಟ್ಟೆಯ ಪತನ ಮುಂದುವರಿದಿದೆ. ಹಲವು ಬಾರಿ ಸಕಾರಗಳಿಂದ ಮಾರುಕಟ್ಟೆ ಬಿದ್ದಿದೆ. ಬಲವಾದ ಕಾರಣ ಇಲ್ಲದೇ ಬಿದ್ದಿದಿದೆ. ವಿದೇಶೀ ಹೂಡಿಕೆದಾರರ ಬಂಡವಾಳ ಹೊರ ಹೋಗುತ್ತಿರುವುದು ಮಾರುಕಟ್ಟೆಯ ಇಳಿಮುಖಕ್ಕೆ ಪ್ರಮುಖ ಕಾರಣ. ಈ ಬಂಡವಾಳ ಹೊರಹರಿವಿಗೆ ಕಾರಣಗಳು ಹಲವಿವೆ. ಅದೇನೇ ಇರಲಿ, ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಗಿ ಟ್ರೇಡ್ ಆಗುತ್ತಿರುವ 4,000 ಕ್ಕೂ ಅಧಿಕ ಸ್ಟಾಕ್​ಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಸ್ಟಾಕ್​ಗಳ ಮೌಲ್ಯ ಗಣನೀಯವಾಗಿ ಕುಸಿದಿರುವುದು ತಿಳಿದುಬಂದಿದೆ.

ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಬಿಎಸ್​ಇನಲ್ಲಿ ಕನಿಷ್ಠ 500 ಕೋಟಿ ರೂ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪನಿಗಳ ಪೈಕಿ 1,058 ಕಂಪನಿಗಳ ಷೇರು ಮೌಲ್ಯ ತಮ್ಮ ಗರಿಷ್ಠ ಮಟ್ಟದಿಂದ ಶೇ. 30ರಷ್ಟು ಕುಸಿತ ಕಂಡಿವೆ. ಭರ್ಜರಿ ಐಪಿಒ ಪಡೆದಿದ್ದ ವಾರೀ ರಿನಿವಬಲ್ ಎನರ್ಜಿಯಂತೂ ಶೇ. 70ರಷ್ಟು ಕುಸಿತ ಕಂಡಿದೆ. ಒಲಾ ಎಲೆಕ್ಟ್ರಿಕ್, ಹೊನಸ ಕನ್ಸೂಮರ್, ಅದಾನಿ ಗ್ರೀನ್, ತೀತಾಗಡ್, ಕೊಚಿನ್ ಶಿಪ್​ಯಾರ್ಡ್ ಇತ್ಯಾದಿ ಕಂಪನಿಗಳ ಷೇರು ಮೌಲ್ಯ ದೊಡ್ಡ ಕುಸಿತ ಕಂಡಿದೆ.

ಇದನ್ನೂ ಓದಿ: ಅಮೆರಿಕದ ಚಿಪ್​ಟೂಲ್ ತಯಾರಿಸುವ ಲ್ಯಾಮ್ ರಿಸರ್ಚ್​ನಿಂದ 10,000 ಕೋಟಿ ರೂ ಹೂಡಿಕೆ; ಇನ್ವೆಸ್ಟ್ ಕರ್ನಾಟಕಕ್ಕೆ ಉದ್ಯಮವಲಯದಿಂದ ನಿರೀಕ್ಷೆಮೀರಿ ಸ್ಪಂದನೆ

ಎನ್​ಎಸ್​ಇಯಲ್ಲೂ ರಕ್ತದೋಕುಳಿ….

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಅಗ್ರಗಣ್ಯ 500 ಸ್ಟಾಕ್​ಗಳ ಪೈಕಿ 404 ಸ್ಟಾಕ್​ಗಳು, ಅಂದರೆ ನಿಫ್ಟಿ 500 ಇಂಡೆಕ್ಸ್​ನ ಶೇ. 81ರಷ್ಟು ಸ್ಟಾಕ್​ಗಳು 200 ಡಿಎಂಎಗಿಂತ ಕಡಿಮೆ ಮಟ್ಟಕ್ಕೆ ಕುಸಿದಿವೆಯಂತೆ.

ಡಿಎಂಎ ಎಂದರೆ ಡೈಲಿ ಮೂವಿಂಗ್ ಆವರೇಜ್. ಅಂದರೆ, ದಿನದ ಸರಾಸರಿ ದರ ಬದಲಾವಣೆ. 200 ದಿನಗಳ ಸರಾಸರಿ ಮೌಲ್ಯಕ್ಕಿಂತ ಕಡಿಮೆ ಮಟ್ಟಕ್ಕೆ ಈ 404 ಸ್ಟಾಕ್​ಗಳು ಬಿದ್ದಿವೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ. 200 ಡಿಎಂಎ ಮಟ್ಟಕ್ಕಿಂತ ಕಡಿಮೆಗೆ ಹೋದರೆ ಅದು ಬೇರಿಶ್ ಟ್ರೆಂಡ್ ಎಂದು ಪರಿಗಣಿಸಲಾಗುತ್ತದೆ. ಅಂದರೆ ಕರಡಿ ಕುಣಿತ ಸಂಭವಿಸುತ್ತಿದೆ ಎನ್ನುವ ಅಪಾಯದ ಸಂಕೇತ ಇದು.

ಇದನ್ನೂ ಓದಿ: ವಿಆರ್​ಆರ್ ಹರಾಜು ಮೂಲಕ ಬ್ಯಾಂಕುಗಳಿಗೆ 2.50 ಲಕ್ಷ ಕೋಟಿ ರೂ ಹಣ; ಡಾಲರ್ ಮಾರಾಟದ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ದೊಡ್ಡ ಕ್ರಮ

ದೊಡ್ಡ ಮಾರುಕಟ್ಟೆ ಬಂಡವಾಳ ಇರುವ ಕಂಪನಿಗಳ ಕಥೆಯೇ ಹೀಗಿರುವಾಗ, ಸಣ್ಣ ಷೇರುಗಳ ಪರಿಸ್ಥಿತಿ ಹೇಗಿರಬಹುದು? ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸುದೀರ್ಘವಾದ ಮಾರ್ಕೆಟ್ ಕರೆಕ್ಷನ್ ಆಗುತ್ತಿದೆ ಎನ್ನುವ ಅಭಿಪ್ರಾಯ ಇದೆ. ಆದರೆ, ಅಮೆರಿಕದ ಹೂಡಿಕೆದಾರ ಜಿಮ್ ರೋಜರ್ಸ್ ಅವರು ಈ ಭಾರತೀಯ ಮಾರುಕಟ್ಟೆ ಪತನ ಮತ್ತಷ್ಟಾಗಬೇಕು ಎಂದು ಹೇಳುತ್ತಿದ್ದಾರೆ. ಈಗ ಆಗುತ್ತಿರುವ ಕುಸಿತ ಸಾಲದು, ಮತ್ತಷ್ಟು ಇಳಿಮುಖವಾಗಿ ಹೂಡಿಕೆದಾರರು ಕಂಗಾಲು ಆಗುವ ಪರಿಸ್ಥಿತಿ ಬಂದಾಗ ಇಲ್ಲಿಯ ಷೇರುಗಳ ಮೇಲೆ ಹೂಡಿಕೆ ಮಾಡುವುದಾಗಿ ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್