AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia- Ukraine Crisis: ಡೀಸೆಲ್ ಕೊರತೆ ಎದುರಿಸುತ್ತಿರುವ ಯುರೋಪ್​ಗೆ ರಿಲಯನ್ಸ್​ನಿಂದ ಪೂರೈಕೆ

ಉಕ್ರೇನ್- ರಷ್ಯಾ ಬಿಕ್ಕಟ್ಟಿನ ಮಧ್ಯೆ ಯುರೋಪ್​ನಲ್ಲಿ ಡೀಸೆಲ್ ಪೂರೈಕೆ ಮಾಡುವುದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಮುಂದಾಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Russia- Ukraine Crisis: ಡೀಸೆಲ್ ಕೊರತೆ ಎದುರಿಸುತ್ತಿರುವ ಯುರೋಪ್​ಗೆ ರಿಲಯನ್ಸ್​ನಿಂದ ಪೂರೈಕೆ
ಮುಕೇಶ್ ಅಂಬಾನಿ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Mar 09, 2022 | 8:50 PM

Share

ಉಕ್ರೇನ್‌ ಮೇಲೆ ರಷ್ಯಾ ಸಾರಿರುವ ಯುದ್ಧದ (Russia- Ukraine Crisis) ಪರಿಣಾಮವಾಗಿ ಜಾಗತಿಕವಾಗಿ ಇಂಧನ ಕೊರತೆ ಏರ್ಪಟ್ಟಿದ್ದು, ಇದರಿಂದಾಗಿ ವಿಶ್ವದ ಅತಿದೊಡ್ಡ ಸಂಸ್ಕರಣಾ ಸಮುಚ್ಚಯಕ್ಕೆ ಹೆಚ್ಚು ಅಗತ್ಯವಿರುವ ಉತ್ತೇಜನವನ್ನು ನೀಡುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಜಾಮ್‌ನಗರ ಘಟಕವು ಕಚ್ಚಾ ಸಂಸ್ಕರಣೆಯನ್ನು ಮಾಡುತ್ತಿದೆ ಮತ್ತು ಡೀಸೆಲ್‌ಗೆ ಹೆಚ್ಚುತ್ತಿರುವ ಬೇಡಿಕೆ ಲಾಭವನ್ನು ಪಡೆಯಲು ಯೋಜಿತ ನಿರ್ವಹಣೆಯನ್ನು ಮುಂದಕ್ಕೆ ಒಯ್ಯುತ್ತಿದೆ ಎಂದು ಈ ಸಂಗತಿ ಬಗ್ಗೆ ನೇರವಾದ ಮಾಹಿತಿ ಇರುವಂಥವರು ತಿಳಿಸಿದ್ದಾರೆ. ಇಲ್ಲಿಂದ ಈಗಾಗಲೇ ಯುರೋಪ್‌ಗೆ ಇಂಧನದ ಸಾಗಣೆಯನ್ನು ಕಳುಹಿಸಲಾಗುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುತ್ತದೆ, ಎಂದು ತಮ್ಮ ಹೆಸರನ್ನು ಬಹಿರಂಗ ಮಾಡಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿರುವುದಾಗಿ ವರದಿ ಆಗಿದೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಇರುವ ಗುಜರಾತ್ ರಾಜ್ಯದ ಸಮುಚ್ಚಯವು ಎರಡು ಸಂಸ್ಕರಣಾಗಾರಗಳಿಂದ ದಿನಕ್ಕೆ 1.36 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುತ್ತದೆ ಮತ್ತು ಹೆಚ್ಚಿನ ಇಂಧನವನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ. ಬಿಲಿಯನೇರ್ ಮುಕೇಶ್ ಅಂಬಾನಿ ಒಡೆತನದ ಸಂಸ್ಥೆಯು ದಿನಕ್ಕೆ 7,04,000 ಬ್ಯಾರೆಲ್‌ಗಳ ರಫ್ತು-ಕೇಂದ್ರಿತ ಸ್ಥಾವರವು ಸಾಂಕ್ರಾಮಿಕದಿಂದ ಸೊರಗುತ್ತಿದ್ದು, ಜನವರಿಯಲ್ಲಿ ಅದರ ಸಾಮರ್ಥ್ಯದ ಮುಕ್ಕಾಲು ಭಾಗವನ್ನು ಮಾತ್ರ ಬಳಸಿಕೊಂಡಿದೆ.

“ಕಚ್ಚಾ ಫೀಡ್‌ಸ್ಟಾಕ್ ಅನುಪಾತ ಮತ್ತು ಇಳುವರಿ ಬದಲಾವಣೆಗಳ ವಿಷಯದಲ್ಲಿ ರಿಲಯನ್ಸ್ ದೊಡ್ಡ ಮಟ್ಟದಲ್ಲಿ ಆರಾಮದಾಯಕ ಸ್ಥಿತಿಯನ್ನು ಹೊಂದಿದೆ. ಇದು ಅದರ ಉತ್ಪಾದನೆಯ ಶೇ 80ರಷ್ಟು ರಫ್ತು ಮಾಡುತ್ತದೆ,” ಎಂದು FGE ಕನ್ಸಲ್ಟೆಂಟ್​ನಲ್ಲಿ ದಕ್ಷಿಣ ಏಷ್ಯಾ ತೈಲದ ಮುಖ್ಯಸ್ಥ ಸೆಂಥಿಲ್ ಕುಮಾರನ್ ಹೇಳಿದ್ದಾರೆ. “ಇದು ಬಲವಾದ ಮಾರ್ಜಿನ್ ಸಮಯದಲ್ಲಿ ಗರಿಷ್ಠ ಪ್ರಯೋಜನವನ್ನು ನೀಡುತ್ತದೆ,” ಎಂದಿದ್ದಾರೆ. ರಷ್ಯಾದಿಂದ ಉಕ್ರೇನ್‌ನ ಮೇಲೆ ಆಕ್ರಮಣದ ನಂತರ ಯುರೋಪ್‌ನಲ್ಲಿ ಇಂಧನ ಬೆಲೆಯು ಗಗನಕ್ಕೆ ಏರುತ್ತಿದ್ದಂತೆ ಏಷ್ಯಾದ ಕೆಲವು ಸಂಸ್ಕರಣಾಗಾರಗಳಿಂದ ವಿದೇಶಕ್ಕೆ ಡೀಸೆಲ್ ಕಳುಹಿಸಲು ನೋಡುತ್ತಿದೆ. ಅಲ್ಲಿಯ ಬೆಲೆಗಳು ಕಳೆದ ವರ್ಷದ ಹೆಚ್ಚಿನ ಅವಧಿಗೆ 10 ಯುಎಸ್​ಡಿಗಿಂತ ಕಡಿಮೆಯಿದ್ದ ಬೆಲೆಯೊಂದಿಗೆ ಹೋಲಿಸಿದರೆ, ಏಷ್ಯಾದಲ್ಲಿ ಇರುವ ಬೆಲೆಗಳಿಗಿಂತ ಟನ್‌ಗೆ 139 ಡಾಲರ್​ಗಿಂತ ಹೆಚ್ಚಿನ ಪ್ರೀಮಿಯಂಗೆ ಏರಿದೆ. ರಿಲಯನ್ಸ್‌ನಂತಹ ಕೆಲವು ಪ್ರೊಸೆಸರ್‌ಗಳು ಆರ್ಬಿಟ್ರೇಜ್ ಟ್ರೇಡ್ ಎಂದು ಕರೆಯುವ ಲಾಭವನ್ನು ಪಡೆಯಲು ಉತ್ತಮ ಸ್ಥಾನದಲ್ಲಿವೆ, ಆದರೆ ಇತರರು ತೈಲಕ್ಕಾಗಿ ಹೆಚ್ಚುತ್ತಿರುವ ವೆಚ್ಚಗಳೊಂದಿಗೆ ಹೆಣಗುತ್ತಿದ್ದಾರೆ ಮತ್ತು ರನ್ ಕಡಿತವನ್ನು ಪರಿಗಣಿಸುತ್ತಿದ್ದಾರೆ.

ಈ ತಿಂಗಳಿನಿಂದ ಸುಮಾರು ಮೂರು ವಾರಗಳ ಕಾಲ ಜಾಮ್‌ನಗರದಲ್ಲಿ ಕಚ್ಚಾ ಸಂಸ್ಕರಣಾ ಘಟಕಗಳಲ್ಲಿ ಒಂದನ್ನು ಮುಚ್ಚಲು ರಿಲಯನ್ಸ್ ಯೋಜಿಸಿತ್ತು. ಆದರೆ ಈಗ ಅದನ್ನು ಸೆಪ್ಟೆಂಬರ್‌ಗೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸುತ್ತಿವೆ. ರಫ್ತು-ಕೇಂದ್ರಿತ ಘಟಕವು ಜನವರಿಯಲ್ಲಿ ತನ್ನ ಸಾಮರ್ಥ್ಯದ ಶೇ 74.7ರಷ್ಟು ಮಾತ್ರ ಬಳಸಿಕೊಂಡಿದೆ ಎಂದು ಭಾರತದ ತೈಲ ಸಚಿವಾಲಯದ ಮಾಹಿತಿ ತೋರಿಸುತ್ತದೆ. ರಷ್ಯಾದ Rosneft Oil Co. PJSC ಒಡೆತನದಲ್ಲಿ ನಯಾರ ಎನರ್ಜಿ ಲಿಮಿಟೆಡ್ (Nayara Energy Ltd.) ಶೇ 49ರಷ್ಟು ಪಾಲು ಹೊಂದಿದ್ದು, ಜಾಮ್‌ನಗರ ಪ್ರದೇಶದಲ್ಲಿ ರಿಫೈನರಿಯನ್ನು ನಿರ್ವಹಿಸುತ್ತದೆ ಮತ್ತು ಇಂಧನವನ್ನು ರಫ್ತು ಮಾಡುತ್ತದೆ. ಆದರೂ ರಿಲಯನ್ಸ್‌ಗಿಂತ ಕಡಿಮೆ ಪ್ರಮಾಣದಲ್ಲಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಂತಹ ದೊಡ್ಡ ಸರ್ಕಾರಿ ಸ್ವಾಮ್ಯದ ಪ್ರೊಸೆಸರ್‌ಗಳು ದೇಶೀಯ ಮಾರುಕಟ್ಟೆ ಮೇಲೆ ಹೆಚ್ಚು ಕೇಂದ್ರೀಕೃತವಾಗಿವೆ.

ಭಾರತ ಇದುವರೆಗೆ ಉಕ್ರೇನ್ ಆಕ್ರಮಣವನ್ನು ಖಂಡಿಸುವುದನ್ನು ತಪ್ಪಿಸುತ್ತಾ ಬಂದಿದೆ. ವ್ಲಾಡಿಮಿರ್ ಪುಟಿನ್ ಅವರ ಆಕ್ರಮಣವನ್ನು ಖಂಡಿಸುವ ವಿಚಾರದಲ್ಲೂ ವಿಶ್ವಸಂಸ್ಥೆಯಲ್ಲಿ ಮತದಾನದಿಂದ ದೂರವಿತ್ತು. ಮಾಸ್ಕೋ ವಿರುದ್ಧದ ಯಾವುದೇ ನಿರ್ಬಂಧಗಳಲ್ಲಿ ಭಾಗವಹಿಸಿಲ್ಲ ಮತ್ತು ಪರಿಸ್ಥಿತಿಯನ್ನು ಸರಾಗಗೊಳಿಸಲು ಮಾತುಕತೆ ನಡೆಸಲು ರಷ್ಯಾ ಮತ್ತು ಉಕ್ರೇನ್ ಅನ್ನು ಒತ್ತಾಯಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಅಪ್‌ಸ್ಟ್ರೀಮ್ ಎಕ್ಸ್‌ಪ್ಲೋರರ್ ಒಎನ್‌ಜಿಸಿ ವಿದೇಶ್ ಲಿಮಿಟೆಡ್ ಈ ತಿಂಗಳ ಆರಂಭದಲ್ಲಿ ಹೇಳಿರುವಂತೆ, ರಷ್ಯಾದ ಸಖಾಲಿನ್-ಐ ಯೋಜನೆಯಲ್ಲಿ ಉತ್ಪಾದಿಸಲಾದ ಕಚ್ಚಾ ತೈಲವನ್ನು ಮಾರಾಟ ಮಾಡುವಲ್ಲಿ ಯಾವುದೇ ಸವಾಲನ್ನು ನಿರೀಕ್ಷಿಸಿಲ್ಲ. ಅದರ ಆಪರೇಟರ್ ಎಕ್ಸಾನ್ ಮೊಬಿಲ್ ಕಾರ್ಪೊರೇಷನ್ ಅಂತಿಮವಾಗಿ ಅಭಿವೃದ್ಧಿಯಲ್ಲಿ ಅದರ ಪಾಲು ಪಡೆದು ನಿರ್ಗಮಿಸುವ ಮೊದಲು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾರಂಭಿಸಿತು.

ಇದನ್ನೂ ಓದಿ: ಆಪಲ್, ಪೆಪ್ಸಿ, ರೋಲೆಕ್ಸ್ ಸೇರಿದಂತೆ 300ಕ್ಕೂ ಹೆಚ್ಚು ಕಂಪೆನಿಗಳಿಂದ ರಷ್ಯಾದಲ್ಲಿ ಕಾರ್ಯಾಚರಣೆ ಸ್ಥಗಿತ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್