AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market Investors Wealth: ಎರಡು ದಿನದಲ್ಲಿ ಹೂಡಿಕೆದಾರರ ಸಂಪತ್ತು 7.21 ಲಕ್ಷ ಕೋಟಿ ರೂ. ಹೆಚ್ಚಳ

ಷೇರು ಮಾರುಕಟ್ಟೆ ಹೂಡಿಕೆದಾರರು ಎರಡು ದಿನದ ಏರಿಕೆಲ್ಲಿ 7.21 ಕೋಟಿ ರೂಪಾಯಿ ಗಳಿಸಿದ್ದಾರೆ. ಪ್ರಮುಖವಾಗಿ ಏರಿಕೆ ಕಂಡ ಷೇರುಗಳ ವಿವರಗಳು ಇಲ್ಲಿವೆ.

Stock Market Investors Wealth: ಎರಡು ದಿನದಲ್ಲಿ ಹೂಡಿಕೆದಾರರ ಸಂಪತ್ತು 7.21 ಲಕ್ಷ ಕೋಟಿ ರೂ. ಹೆಚ್ಚಳ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 10, 2022 | 8:01 AM

Share

ಕಚ್ಚಾ ತೈಲದ ಬೆಲೆಗಳು ಹೆಚ್ಚಿದ್ದರೂ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳು ಏರಿಕೆಯನ್ನು ಎರಡನೇ ದಿನಕ್ಕೆ ವಿಸ್ತರಿಸಿದ್ದರಿಂದ ಈಕ್ವಿಟಿ ಹೂಡಿಕೆದಾರರು ರೂ. 7.21 ಲಕ್ಷ ಕೋಟಿಗಳನ್ನು ಸಂಗ್ರಹಿಸಿದ್ದಾರೆ. ಭಾರತೀಯ ಷೇರು ಮಾರುಕಟ್ಟೆಗಳು ಇಂದು ಶೇಕಡಾ 2ರಷ್ಟು ಏರಿಕೆ ಕಂಡವು. ನಿಫ್ಟಿ ಮತ್ತು ಸೆನ್ಸೆಕ್ಸ್ ಶೇ 2ರಷ್ಟು ಏರಿಕೆಯಾಗಿ ಕ್ರಮವಾಗಿ 16,345 ಪಾಯಿಂಟ್ಸ್ ಮತ್ತು 54,647 ಪಾಯಿಂಟ್ಸ್​ನಲ್ಲಿ ಕೊನೆಗೊಂಡವು. ಹಿಂದಿನ ಸೆಷನ್​ನಲ್ಲಿ ಶೇ 1ರಷ್ಟು ಗಳಿಕೆಯನ್ನು ಕಂಡಿತು. ರಿಲಯನ್ಸ್ ಮತ್ತು ಆಟೋಮೊಬೈಲ್ ಸ್ಟಾಕ್‌ಗಳಲ್ಲಿನ ಲಾಭಗಳಿಂದ ಏರಿಕೆಗೆ ಉತ್ತೇಜನ ದೊರೆಯಿತು. ಸರ್ಕಾರವು ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಕೊರೊನಾ ನಿರ್ಬಂಧಗಳನ್ನು ತೆಗೆದ ನಂತರ ವಿಮಾನಯಾನ ಸಂಸ್ಥೆಗಳು ಸಹ ಉತ್ತೇಜನ ನೀಡಿವೆ. ಮಾಹಿತಿ ತಂತ್ರಜ್ಞಾನ, ರಿಯಾಲ್ಟಿ, ಹೆಲ್ತ್‌ಕೇರ್ ಮತ್ತು ಹಣಕಾಸು ಕ್ಷೇತ್ರಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದವು. ಆದರೆ ಲೋಹ ಸೂಚ್ಯಂಕಗಳು ಸೊರಗಿದವು. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಎರಡೂ ಶೇ 2ಕ್ಕಿಂತ ಹೆಚ್ಚಾದವು. ಏಷ್ಯಾದಲ್ಲಿ, ಜಪಾನ್, ಶಾಂಘೈ ಮತ್ತು ಹಾಂಕಾಂಗ್‌ನಲ್ಲಿ ಷೇರುಗಳು ಕುಸಿದರೆ, ಆಸ್ಟ್ರೇಲಿಯಾ ಲಾಭದೊಂದಿಗೆ ಕೊನೆಗೊಂಡಿತು.

“ತೀವ್ರ ಕುಸಿತದ ನಂತರ ನಾವು ಸದ್ಯಕ್ಕೆ ಸೂಚ್ಯಂಕಗಳಲ್ಲಿನ ರೀಬೌಂಡ್ ಅಥವಾ ಪರಿಹಾರದ ಏರಿಕೆಯನ್ನು ನೋಡುತ್ತಿದ್ದೇವೆ. ಮತ್ತು ನಿಫ್ಟಿ- 50 16,400 ಪಾಯಿಂಟ್ಸ್ ವಲಯಕ್ಕಿಂತ ಕೆಳಗೆ ವಹಿವಾಟು ನಡೆಸುವವರೆಗೆ ಇದು ಮಾರಾಟದ ಮೇಲೆ-ಏರಿಕೆ ಮಾರುಕಟ್ಟೆಯಾಗಿದೆ,” ಎಂದು ರೆಲಿಗೇರ್ ಬ್ರೋಕಿಂಗ್‌ನಲ್ಲಿ ಸಂಶೋಧನಾ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ. ತೈಲದಿಂದ ರೀಟೇಲ್​ ತನಕ ಉದ್ಯಮ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಅತ್ಯಂತ ಬೆಲೆಬಾಳುವ ಕಂಪೆನಿ ಆಗಿದ್ದು, ನಾಲ್ಕು ದಿನಗಳ ನಷ್ಟದ ಸರಣಿಯನ್ನು ಶೇ 5.3ರಷ್ಟು ಏರಿಕೆಯೊಂದಿಗೆ ಕಳಚಿಕೊಂಡಿದೆ. ಏರ್‌ಲೈನ್ ಆಪರೇಟರ್‌ಗಳಾದ ಇಂಟರ್‌ಗ್ಲೋಬ್ ಏವಿಯೇಷನ್ ಸತತ ಆರು ಅವಧಿಯ ನಷ್ಟದ ನಂತರ ಮತ್ತು ಸ್ಪೈಸ್‌ಜೆಟ್ ಕ್ರಮವಾಗಿ ಶೇ 6.9 ಮತ್ತು ಶೇ 6ರಷ್ಟು ಏರಿಕೆಯಲ್ಲೇ ಮುಕ್ತಾಯ ಕಂಡವು. ಮಾರ್ಚ್ 27ರಿಂದ ಅಂತಾರಾಷ್ಟ್ರೀಯ ಸ್ಥಳಗಳಿಗೆ ನಿಗದಿತ ವಾಣಿಜ್ಯ ವಿಮಾನ ಕಾರ್ಯಾಚರಣೆಗಳನ್ನು ಅನುಮತಿಸುವುದಾಗಿ ಸರ್ಕಾರ ಹೇಳಿದೆ.

ನಿಫ್ಟಿ ವಾಹನ ಸೂಚ್ಯಂಕವು ಶೇ 2.85ರಷ್ಟು ಹೆಚ್ಚಾಗಿದೆ. ಮಾರುತಿ ಸುಜುಕಿ ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ ಕ್ರಮವಾಗಿ ಶೇ 3.2 ಮತ್ತು ಶೇ 4.9 ಏರಿಕೆಯಾಗಿದೆ. ನಿಫ್ಟಿ ಐಟಿ ಸೂಚ್ಯಂಕ, ಇಂಧನ ಸೂಚ್ಯಂಕ, ಹಣಕಾಸು ಸೇವೆಗಳ ಸೂಚ್ಯಂಕ ಮತ್ತು ಬ್ಯಾಂಕ್‌ಗಳ ಸೂಚ್ಯಂಕ ಕೂಡ ಶೇ 1 ಮತ್ತು ಶೇ 2ರ ನಡುವೆ ಮುನ್ನಡೆ ಸಾಧಿಸಿದೆ. ಹೆವಿವೇಯ್ಟ್‌ಗಳಾದ ಬಜಾಜ್ ಫಿನ್‌ಸರ್ವ್ ಮತ್ತು ಬಜಾಜ್ ಫೈನಾನ್ಸ್ ಕ್ರಮವಾಗಿ ಶೇ 3.9 ಮತ್ತು ಶೇ 5 ಏರಿಕೆ ಕಂಡಿವೆ.

ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್