Sign In

By signing in or creating an account, you agree with Associated Broadcasting Company's Terms & Conditions and Privacy Policy.

KPMG Report: ಮುಂದಿನ 5 ವರ್ಷದಲ್ಲಿ ಸೆಮಿಕಂಡಕ್ಟರ್ ಸೇರಿ ಈ ಮೂರು ಕ್ಷೇತ್ರಗಳಿಂದ ಭಾರತೀಯ ಆರ್ಥಿಕತೆಗೆ 240 ಬಿಲಿಯನ್ ಡಾಲರ್ ಕೊಡುಗೆ: ಕೆಪಿಎಂಜಿ ವರದಿ

Indian Economy: ಸೆಮಿಕಂಡಕ್ಟರ್ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಭಾರತ ಗಣನೀಯ ವೃದ್ಧಿ ಸಾಧಿಸುತ್ತದೆ ಎಂದು ಕೆಪಿಎಂಜಿ ವರದಿಯೊಂದು ಹೇಳಿದೆ. ಮಿಕಂಡಕ್ಟರ್, 5ಜಿ ಮತ್ತು ಸ್ಯಾಟಿಲೈಟ್ ಕಮ್ಯೂನಿಕೇಶನ್ ತಂತ್ರಜ್ಞಾನಗಳು ಭಾರತದ ಪ್ರಮುಖ ರಾಷ್ಟ್ರೀಯ ಶಕ್ತಿಗಳಾದ ಆರ್ಥಿಕತೆ, ತಂತ್ರಜ್ಞಾನ, ಜನಸಂಖ್ಯೆ ಮತ್ತು ಬೇಡಿಕೆಯನ್ನು ಸರಿಯಾಗಿ ಬಳಸಿಕೊಳ್ಳಲಿವೆ. ಹೀಗಾಗಿ, ಈ ಮೂರು ಕ್ಷೇತ್ರಗಳು ಮುಂದಿನ ವರ್ಷಗಳಲ್ಲಿ ಗಣನೀಯ ಅಭಿವೃದ್ಧಿ ಹೊಂದಬಹುದು ಎಂಬ ನಿರೀಕ್ಷೆ ಇದೆ.

KPMG Report: ಮುಂದಿನ 5 ವರ್ಷದಲ್ಲಿ ಸೆಮಿಕಂಡಕ್ಟರ್ ಸೇರಿ ಈ ಮೂರು ಕ್ಷೇತ್ರಗಳಿಂದ ಭಾರತೀಯ ಆರ್ಥಿಕತೆಗೆ 240 ಬಿಲಿಯನ್ ಡಾಲರ್ ಕೊಡುಗೆ: ಕೆಪಿಎಂಜಿ ವರದಿ
ಸೆಮಿಕಂಡಕ್ಟರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 30, 2023 | 10:28 AM

ನವದೆಹಲಿ, ಅಕ್ಟೋಬರ್ 30: ವಿಶ್ವದ ಎಲೆಕ್ಟ್ರಾನಿಕ್ಸ್ ಫ್ಯಾಕ್ಟರಿ ಆಗಲು ಹೊರಟಿರುವ ಭಾರತಕ್ಕೆ ಖುಷಿಯ ಸುದ್ದಿ. ಸೆಮಿಕಂಡಕ್ಟರ್ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಭಾರತ ಗಣನೀಯ ವೃದ್ಧಿ ಸಾಧಿಸುತ್ತದೆ ಎಂದು ಕೆಪಿಎಂಜಿ (KPMG- Klynveld Peat Marwick Goerdeler) ವರದಿಯೊಂದು ಹೇಳಿದೆ. ಸೆಮಿಕಂಡಕ್ಟರ್ಸ್, 5ಜಿ ಮತ್ತು ಸ್ಯಾಟಿಲೈಟ್ ಕಮ್ಯೂನಿಕೇಶನ್ಸ್ ಕ್ಷೇತ್ರಗಳು ಮುಂದಿನ 5 ವರ್ಷದಲ್ಲಿ ಭಾರತದ ಆರ್ಥಿಕತೆಗೆ (Indian economy) 240 ಬಿಲಿಯನ್ ಡಾಲರ್ ಕೊಡುಗೆ ನೀಡುತ್ತದೆ. ಅಂದರೆ ಬರೋಬ್ಬರಿ 20 ಲಕ್ಷ ರುಪಾಯಿಯಷ್ಟು ವಿಸ್ತಾರ ಹೊಂದಲಿವೆ. 2027-28ರ ಹಣಕಾಸು ವರ್ಷದಷ್ಟರಲ್ಲಿ ಈ ಮೂರು ಕ್ಷೇತ್ರಗಳಿಂದ ಭಾರತದ ಜಿಡಿಪಿಗೆ ಸಿಗುವ ಕೊಡುಗೆ ಶೇ. 1.6ರಷ್ಟು ಇರಲಿದೆ ಎಂದು ಕೆಪಿಎಂಜಿ ತನ್ನ ವರದಿಯಲ್ಲಿ ಅಂದಾಜಿಸಿದೆ.

ನೆದರ್​ಲ್ಯಾಂಡ್ಸ್ ಮೂಲದ ಕೆಪಿಎಂಜಿ ವಿಶ್ವದ ಅಗ್ರಗಣ್ಯ ಅಕೌಂಟಿಂಗ್ ಕಂಪನಿಗಳಲ್ಲಿ ಒಂದು. ಇಂಡಿಯಾ ಮೊಬೈಲ್ ಕಾಂಗ್ರೆಸ್​ನ ಏಳನೇ ಆವೃತ್ತಿಯ ಕಾರ್ಯಕ್ರಮದ ವೇಳೆ ಈ ವರದಿ ಬಿಡುಗಡೆ ಮಾಡಿದ ಕೆಪಿಎಂಜಿ, ಜಾಗತಿಕ ಡಿಜಿಟಲ್ ಶಕ್ತಿಕೇಂದ್ರವಾಗಿ ಪರಿವರ್ತಿತವಾಗಲು ಭಾರತ ಅಣಿಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. ಸೆಮಿಕಂಡಕ್ಟರ್, 5ಜಿ ಮತ್ತು ಸ್ಯಾಟಿಲೈಟ್ ಕಮ್ಯೂನಿಕೇಶನ್ ತಂತ್ರಜ್ಞಾನಗಳು ಭಾರತದ ಪ್ರಮುಖ ರಾಷ್ಟ್ರೀಯ ಶಕ್ತಿಗಳಾದ ಆರ್ಥಿಕತೆ, ತಂತ್ರಜ್ಞಾನ, ಜನಸಂಖ್ಯೆ ಮತ್ತು ಬೇಡಿಕೆಯನ್ನು ಸರಿಯಾಗಿ ಬಳಸಿಕೊಳ್ಳಲಿವೆ. ಹೀಗಾಗಿ, ಈ ಮೂರು ಕ್ಷೇತ್ರಗಳು ಮುಂದಿನ ವರ್ಷಗಳಲ್ಲಿ ಗಣನೀಯ ಅಭಿವೃದ್ಧಿ ಹೊಂದಬಹುದು ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: ರಿಲಾಯನ್ಸ್ ಕ್ರೆಡಿಟ್ ಕಾರ್ಡ್; ಹೊಸ ಮಾರುಕಟ್ಟೆಗೆ ಬಂದ ಮುಕೇಶ್ ಅಂಬಾನಿ; ಎಸ್​ಬಿಐ ಜೊತೆ ಒಪ್ಪಂದ

ಟೆಲಿಕಮ್ಯೂನಿಕೇಶನ್ಸ್ ಅಥವಾ ದೂರಸಂಕರ್ಪ ಕ್ಷೇತ್ರದ ಮೌಲ್ಯ ಸದ್ಯಕ್ಕೆ 3,000 ಬಿಲಿಯನ್ ಡಾಲರ್ ಎಂದು ಪರಿಗಣಿಸಲಾಗಿದೆ. ಈ ಹಣಕಾಸು ವರ್ಷದಲ್ಲಿ (2023-24) ಇದು ಶೇ. 7ರಿಂದ 9ರಷ್ಟು ಸಿಎಜಿಆರ್​ನಲ್ಲಿ ಬೆಳೆಯಬಹುದೆಂದು ಕೆಪಿಎಂಜಿ ನಿರೀಕ್ಷಿಸಿದೆ.

‘ಟೆಲಿಕಾಂ ಹಾಗೂ ಸಂಬಂಧಿತ ಉದ್ಯಮಗಳಲ್ಲಿ ನೇಮಕಾತಿಯಲ್ಲಿ ಶೇ. 40ರಷ್ಟು ಹೆಚ್ಚಳವಾಗಬಹುದು. 5ಜಿ/6ಜಿ ಬಿಡುಗಡೆಯು ಟೆಲಿಕಾಂ ಸೆಕ್ಟರ್​ನಲ್ಲಿ ಉದ್ಯೋಗ ಸಾಧ್ಯತೆಯನ್ನು ಹೆಚ್ಚಿಸುತ್ತದೆ,’ ಎಂದು ಅದು ಹೇಳಿದೆ.

ಇವತ್ತಿನ ಸಂದರ್ಭದಲ್ಲಿ ದೂರಸಂಕಪರ್ಕ ಉದ್ಯಮದಲ್ಲಿ 40 ಲಕ್ಷ ಮಂದಿ ಕೆಲಸ ಪಡೆದಿದ್ದಾರೆ. ಇದರಲ್ಲಿ 22 ಲಕ್ಷ ನೇರ ಉದ್ಯೋಗವಾಗಿದ್ದರೆ 18 ಲಕ್ಷದಷ್ಟು ಮಂದಿ ಪರೋಕ್ಷವಾಗಿ ಕೆಲಸ ಪಡೆದಿದ್ದಾರೆ. ಕೆಪಿಎಂಜಿ ವರದಿ ಪ್ರಕಾರ 2025-26ರ ಹಣಕಅಸು ವರ್ಷದಲ್ಲಿ ಟೆಲಿಕಮ್ಯೂನಿಕೇಶನ್ಸ್ ಕ್ಷೇತ್ರದಲ್ಲಿ ಉದ್ಯೋಗ ಸಂಖ್ಯೆ 60 ಲಕ್ಷ ದಾಟುವ ಸಾಧ್ಯತೆ ಇದೆ.

ಇದನ್ನೂ ಓದಿ: ಬ್ರೌಸರ್​ಗಳಲ್ಲಿ ಡೀಫಾಲ್ಟ್ ಸರ್ಚ್ ಎಂಜಿನ್ ಆಗಲು ಗೂಗಲ್ ತೆರುವ ಹಣ ವರ್ಷಕ್ಕೆ ಬರೋಬ್ಬರಿ 2 ಲಕ್ಷಕೋಟಿ ರೂ?

ಭಾರತದಲ್ಲಿ ಸ್ಮಾರ್ಟ್​ಫೋನ್ ಮತ್ತು ಡಾಟಾ ಬಳಕೆ ಗಣನೀಯವಾಗಿ ಹೆಚ್ಚಾಗಬಹುದು. ಕೋವಿಡ್​ಗಿಂತ ಮುಂಚಿನ ದಿನದಿಂದ ಆರಂಭಿಸಿ 2023ರವರೆಗೂ ಗ್ರಾಮೀಣ ಭಾಗದಲ್ಲಿ ಸ್ಮಾರ್ಟ್​ಫೋನ್ ಹೊಂದಿರುವವರ ಸಂಖ್ಯೆ ದ್ವಿಗುಣಗೊಂಡಿದೆ. ಭಾರತದ 75.9 ಕೋಟಿ ಸ್ಮಾರ್ಟ್​ಫೋನ್ ಬಳಕೆದಾರರ ಪೈಕಿ 35.8 ಕೋಟಿ ಮಂದಿ ಗ್ರಾಮೀಣ ಭಾಗದಲ್ಲಿ ನೆಲಸಿದ್ದಾರೆ ಎಂಬ ಮಾಹಿತಿಯನ್ನು ಕೆಪಿಎಂಜಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ