AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳಾನಿಧಿ ಮಾರನ್, ಕೆಎಎಲ್ ಏರ್​ವೇಸ್ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್; 1,300 ಕೋಟಿ ರೂ ಕತ್ತಿಯಿಂದ ಪಾರಾದ ಸ್ಪೈಸ್​​ಜೆಟ್

Delhi High Court reject Kalanidhi Maran's claim for Rs. 1,300 crore from SpiceJet: ಸ್ಪೈಸ್​ಜೆಟ್​​ನಿಂದ 1,300 ಕೋಟಿ ರೂ ಪರಿಹಾರ ದೊರಕಿಸಿಕೊಡಬೇಕು ಎಂದು ಕೋರಿ ಸನ್​​ನೆಟ್ವರ್ಕ್​​ನ ಕಳಾನಿದಿ ಮಾರನ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ತಿರಸ್ಕರಿಸಿದೆ. 2015ರಲ್ಲಿ ತಮ್ಮೆಲ್ಲಾ ಷೇರುಗಳನ್ನು ಸ್ಪೈಸ್​​ಜೆಟ್ ಸಂಸ್ಥಾಪಕ ಅಜಯ್ ಸಿಂಗ್​​ಗೆ ವರ್ಗಾಯಿಸಿದ್ದು, ಒಪ್ಪಂದದಂತೆ ತಮಗೆ ಕರ್ವರ್ಟಿಬಲ್ ವಾರಂಟ್ ಮತ್ತು ಪ್ರಿಫರೆನ್ಸ್ ಷೇರುಗಳನ್ನು ನೀಡಲಾಗಿಲ್ಲ ಎಂಬುದು ಮಾರನ್ ಅವರ ಆರೋಪ.

ಕಳಾನಿಧಿ ಮಾರನ್, ಕೆಎಎಲ್ ಏರ್​ವೇಸ್ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್; 1,300 ಕೋಟಿ ರೂ ಕತ್ತಿಯಿಂದ ಪಾರಾದ ಸ್ಪೈಸ್​​ಜೆಟ್
ಸ್ಪೈಸ್ ಜೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 26, 2025 | 2:04 PM

Share

ನವದೆಹಲಿ, ಮೇ 26: ಸ್ಪೈಸ್​​ಜೆಟ್​​ನಿಂದ (SpiceJet) ತಮಗಾಗಿರುವ ಹಾನಿಗೆ ಪರಿಹಾರವಾಗಿ 1,300 ಕೋಟಿ ರೂ ದೊರಕಿಸಿಕೊಡಬೇಕೆಂದು ಉದ್ಯಮಿ ಕಳಾನಿದಿ ಮಾರನ್ (Kalanidhi Maran) ಮತ್ತು ಕೆಎಎಲ್ ಏರ್​ವೇಸ್ (KAL Airways) ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವೂ ತಿರಸ್ಕರಿಸಿದೆ. ಮೇ 23ರಂದು ಈ ತೀರ್ಪು ಬಂದಿದೆ ಎನ್ನಲಾಗಿದ್ದು, ಈ ಸಂಗತಿಯನ್ನು ಸ್ಪೈಸ್​ಜೆಟ್ ಏರ್​ಲೈನ್ಸ್ ಸಂಸ್ಥೆ ಇಂದು ಸೋಮವಾರ ತನ್ನ ರೆಗ್ಯುಲೇಟರಿ ಫೈಲಿಂಗ್​​​ನಲ್ಲಿ ತಿಳಿಸಿದೆ. ಇದರ ಬೆನ್ನಲ್ಲೇ ಸ್ಪೈಸ್​​ಜೆಟ್​​ನ ಷೇರುಬೆಲೆ ಇಂದು ಏರುತ್ತಿದೆ.

‘ಮೂವರು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿದ್ದ ನ್ಯಾಯಮಂಡಳಿ ಬಹಳ ಪರಿಶೀಲನೆ ನಡೆಸಿ ತಿರಸ್ಕರಿಸಿತ್ತು. ಅದಾದ ಬಳಿಕ ಕೆಎಎಲ್ ಏರ್​ವೇಸ್ ಮತ್ತು ಕಳಾನಿದಿ ಮಾರನ್ ಅವರು ದೆಹಲಿ ಹೈಕೋರ್ಟ್​​ನ ಏಕಸದಸ್ಯ ಪೀಠದಲ್ಲಿ ಮನವಿ ಸಲ್ಲಿಸಿದ್ದರು. ಆ ಕೋರ್ಟ್​​ನಲ್ಲೂ ತಿರಸ್ಕೃತವಾಗಿದೆ’ ಎಂದು ರೆಗ್ಯುಲೇಟರಿ ಫೈಲಿಂಗ್​​​ನಲ್ಲಿ ಸ್ಪೈಸ್​​ಜೆಟ್ ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಜಪಾನ್ ಹಿಂದಿಕ್ಕಿದ್ದೇವೆಂದು ತೃಪ್ತರಾಗದಿರಿ… ಮುಂದಿನ ಜಿಗಿತವು ತಲಾದಾಯದ್ದಾಗಿರಬೇಕು: ಆನಂದ್ ಮಹೀಂದ್ರ

ಇದನ್ನೂ ಓದಿ
Image
ಭಾರತದ ಮುಂದಿನ ಜಿಗಿತವು ತಲಾದಾಯದ್ದಾಗಿರಬೇಕು: ಆನಂದ್ ಮಹೀಂದ್ರ
Image
ರಿನಿವಬಲ್ ಎನರ್ಜಿ ಸಾಮರ್ಥ್ಯ, 3ನೇ ಸ್ಥಾನದಲ್ಲಿ ಭಾರತ
Image
ಭಾರತೀಯ ವಿಜ್ಞಾನಿಗಳಿಂದ ಸೂಪರ್​ಫಾಸ್ಟ್ ಸೋಡಿಯಂ ಬ್ಯಾಟರಿ
Image
ಶ್ರೀಮಂತರು ಬ್ರಿಟನ್ ಬಿಟ್ಟು ಹೋಗುತ್ತಿರುವುದ್ಯಾಕೆ?

ಸ್ಪೈಸ್​​ಜೆಟ್ ಮತ್ತು ಕಳಾನಿಧಿ ಮಾರನ್ ನಡುವಿನ ವಿವಾದವೇನು?

ಕೆಎಎಲ್ ಏರ್​ವೇಸ್ ಎಂಬುದು ಸನ್ ನೆಟ್ವರ್ಕ್​​ನ ಮುಖ್ಯಸ್ಥ ಕಳಾನಿದಿ ಮಾರನ್ ಅವರ ಹೂಡಿಕೆ ಸಂಸ್ಥೆ. ಸ್ಪೈಸ್​​ಜೆಟ್ ಜೊತೆಗಿನ ಇವರ ಸಂಬಂಧ ದಶಕಗಳದ್ದು. ಕೆಎಎಲ್ ಏರ್​​ವೇಸ್ ಮತ್ತು ಕಳಾನಿದಿ ಮಾರನ್ ಅವರು ಸ್ಪೈಸ್​​ಜೆಟ್​​ನಲ್ಲಿ ಶೇ. 37.7ರಷ್ಟಿದ್ದ ತಮ್ಮ ಷೇರುಪಾಲನ್ನು 2010ರಲ್ಲಿ ಶೇ. 58.46ಕ್ಕೆ ಹೆಚ್ಚಿಸಿಕೊಂಡಿದ್ದರು.

2015ರ ಫೆಬ್ರುವರಿಯಲ್ಲಿ ತಮ್ಮ ಅಷ್ಟೂ ಷೇರುಗಳನ್ನು ಸ್ಪೈಸ್​​ಜೆಟ್ ಸಹ-ಸಂಸ್ಥಾಪಕ ಅಜಯ್ ಸಿಂಗ್ ಅವರಿಗೆ ಮರಳಿಸಿದ್ದರು.

ಒಪ್ಪಂದದ ಪ್ರಕಾರ ಕ್ವನ್ವರ್ಟಿಬಲ್ ವಾರಂಟ್ ಮತ್ತು ಪ್ರಿಫರೆನ್ಸ್ ಷೇರುಗಳನ್ನು ನೀಡಲು ಸ್ಪೈಸ್​​ಜೆಟ್​​ಗೆ ತಾವು 679 ಕೋಟಿ ರೂ ಪಾವತಿಸಿದ್ದೆವು. ಆದರೆ, ತಮಗೆ ಈ ವಾರಂಟ್ ಮತ್ತು ಪ್ರಿಫರೆನ್ಸ್ ಷೇರು ನೀಡಲಾಗಿಲ್ಲ ಎಂದು ಮಾರನ್ ಆರೋಪ ಮಾಡಿ, 2018ರಲ್ಲಿ ಸ್ಪೈಸ್​ಜೆಟ್ ವಿರುದ್ಧ ನ್ಯಾಯಮಂಡಳಿ ಮೆಟ್ಟಿಲೇರಿ 1,323 ಕೋಟಿ ರೂ ಹಾನಿ ಕಟ್ಟಿಸಿಕೊಡುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: ಭಾರತದಲ್ಲಿ ರಿನಿವಬಲ್ ಎನರ್ಜಿ ಸಾಮರ್ಥ್ಯ 232 ಗಿ.ವ್ಯಾ.; ಜಾಗತಿಕವಾಗಿ 3ನೇ ಸ್ಥಾನದಲ್ಲಿ

ಆದರೆ, ಮೂವರು ನಿವೃತ್ತ ಸುಪ್ರೀಂ ನ್ಯಾಯಮೂರ್ತಿಗಳಿದ್ದ ನ್ಯಾಯಮಂಡಳಿಯು ಮಾರನ್ ಅರ್ಜಿಯನ್ನು ಭಾಗಶಃ ತಿರಸ್ಕರಿಸಿತು. 1,323 ಕೋಟಿ ಪರಿಹಾರ ಒದಗಿಸುವ ಮನವಿಯನ್ನು ತಿರಸ್ಕರಿಸಿತು. ಆದರೆ, 579 ಕೋಟಿ ರೂ ಹಣವನ್ನು ಬಡ್ಡಿಸಮೇತವಾಗಿ ಮಾರನ್ ಅವರಿಗೆ ನೀಡಬೇಕೆಂದು ಸ್ಪೈಸ್​​ಜೆಟ್​​ಗೆ ಸೂಚಿಸಿತು.

ಕೆಎಎಲ್ ಏರ್​ವೇಸ್ ಮತ್ತು ಮಾರನ್ ಅವರು ದೆಹಲಿ ಹೈಕೋರ್ಟ್​​ನ ಏಕಸದಸ್ಯ ಪೀಠಕ್ಕೆ ಮೇಲ್ಮನವಿ ಮಾಡಿದರು. ಅದೂ ಕೂಡ ಟ್ರಿಬ್ಯುನಲ್ ತೀರ್ಪನ್ನು ಎತ್ತಿಹಿಡಿಯಿತು. ಈಗ ದೆಹಲಿ ಹೈಕೋರ್ಟ್​​ನ ವಿಭಾಗೀಯ ಪೀಠ ಕೂಡ 2025ರ ಮೇ 2ರಂದು ಇದೇ ತೀರ್ಪು ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್