AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳಾನಿಧಿ ಮಾರನ್, ಕೆಎಎಲ್ ಏರ್​ವೇಸ್ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್; 1,300 ಕೋಟಿ ರೂ ಕತ್ತಿಯಿಂದ ಪಾರಾದ ಸ್ಪೈಸ್​​ಜೆಟ್

Delhi High Court reject Kalanidhi Maran's claim for Rs. 1,300 crore from SpiceJet: ಸ್ಪೈಸ್​ಜೆಟ್​​ನಿಂದ 1,300 ಕೋಟಿ ರೂ ಪರಿಹಾರ ದೊರಕಿಸಿಕೊಡಬೇಕು ಎಂದು ಕೋರಿ ಸನ್​​ನೆಟ್ವರ್ಕ್​​ನ ಕಳಾನಿದಿ ಮಾರನ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ತಿರಸ್ಕರಿಸಿದೆ. 2015ರಲ್ಲಿ ತಮ್ಮೆಲ್ಲಾ ಷೇರುಗಳನ್ನು ಸ್ಪೈಸ್​​ಜೆಟ್ ಸಂಸ್ಥಾಪಕ ಅಜಯ್ ಸಿಂಗ್​​ಗೆ ವರ್ಗಾಯಿಸಿದ್ದು, ಒಪ್ಪಂದದಂತೆ ತಮಗೆ ಕರ್ವರ್ಟಿಬಲ್ ವಾರಂಟ್ ಮತ್ತು ಪ್ರಿಫರೆನ್ಸ್ ಷೇರುಗಳನ್ನು ನೀಡಲಾಗಿಲ್ಲ ಎಂಬುದು ಮಾರನ್ ಅವರ ಆರೋಪ.

ಕಳಾನಿಧಿ ಮಾರನ್, ಕೆಎಎಲ್ ಏರ್​ವೇಸ್ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್; 1,300 ಕೋಟಿ ರೂ ಕತ್ತಿಯಿಂದ ಪಾರಾದ ಸ್ಪೈಸ್​​ಜೆಟ್
ಸ್ಪೈಸ್ ಜೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 26, 2025 | 2:04 PM

Share

ನವದೆಹಲಿ, ಮೇ 26: ಸ್ಪೈಸ್​​ಜೆಟ್​​ನಿಂದ (SpiceJet) ತಮಗಾಗಿರುವ ಹಾನಿಗೆ ಪರಿಹಾರವಾಗಿ 1,300 ಕೋಟಿ ರೂ ದೊರಕಿಸಿಕೊಡಬೇಕೆಂದು ಉದ್ಯಮಿ ಕಳಾನಿದಿ ಮಾರನ್ (Kalanidhi Maran) ಮತ್ತು ಕೆಎಎಲ್ ಏರ್​ವೇಸ್ (KAL Airways) ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವೂ ತಿರಸ್ಕರಿಸಿದೆ. ಮೇ 23ರಂದು ಈ ತೀರ್ಪು ಬಂದಿದೆ ಎನ್ನಲಾಗಿದ್ದು, ಈ ಸಂಗತಿಯನ್ನು ಸ್ಪೈಸ್​ಜೆಟ್ ಏರ್​ಲೈನ್ಸ್ ಸಂಸ್ಥೆ ಇಂದು ಸೋಮವಾರ ತನ್ನ ರೆಗ್ಯುಲೇಟರಿ ಫೈಲಿಂಗ್​​​ನಲ್ಲಿ ತಿಳಿಸಿದೆ. ಇದರ ಬೆನ್ನಲ್ಲೇ ಸ್ಪೈಸ್​​ಜೆಟ್​​ನ ಷೇರುಬೆಲೆ ಇಂದು ಏರುತ್ತಿದೆ.

‘ಮೂವರು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿದ್ದ ನ್ಯಾಯಮಂಡಳಿ ಬಹಳ ಪರಿಶೀಲನೆ ನಡೆಸಿ ತಿರಸ್ಕರಿಸಿತ್ತು. ಅದಾದ ಬಳಿಕ ಕೆಎಎಲ್ ಏರ್​ವೇಸ್ ಮತ್ತು ಕಳಾನಿದಿ ಮಾರನ್ ಅವರು ದೆಹಲಿ ಹೈಕೋರ್ಟ್​​ನ ಏಕಸದಸ್ಯ ಪೀಠದಲ್ಲಿ ಮನವಿ ಸಲ್ಲಿಸಿದ್ದರು. ಆ ಕೋರ್ಟ್​​ನಲ್ಲೂ ತಿರಸ್ಕೃತವಾಗಿದೆ’ ಎಂದು ರೆಗ್ಯುಲೇಟರಿ ಫೈಲಿಂಗ್​​​ನಲ್ಲಿ ಸ್ಪೈಸ್​​ಜೆಟ್ ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಜಪಾನ್ ಹಿಂದಿಕ್ಕಿದ್ದೇವೆಂದು ತೃಪ್ತರಾಗದಿರಿ… ಮುಂದಿನ ಜಿಗಿತವು ತಲಾದಾಯದ್ದಾಗಿರಬೇಕು: ಆನಂದ್ ಮಹೀಂದ್ರ

ಇದನ್ನೂ ಓದಿ
Image
ಭಾರತದ ಮುಂದಿನ ಜಿಗಿತವು ತಲಾದಾಯದ್ದಾಗಿರಬೇಕು: ಆನಂದ್ ಮಹೀಂದ್ರ
Image
ರಿನಿವಬಲ್ ಎನರ್ಜಿ ಸಾಮರ್ಥ್ಯ, 3ನೇ ಸ್ಥಾನದಲ್ಲಿ ಭಾರತ
Image
ಭಾರತೀಯ ವಿಜ್ಞಾನಿಗಳಿಂದ ಸೂಪರ್​ಫಾಸ್ಟ್ ಸೋಡಿಯಂ ಬ್ಯಾಟರಿ
Image
ಶ್ರೀಮಂತರು ಬ್ರಿಟನ್ ಬಿಟ್ಟು ಹೋಗುತ್ತಿರುವುದ್ಯಾಕೆ?

ಸ್ಪೈಸ್​​ಜೆಟ್ ಮತ್ತು ಕಳಾನಿಧಿ ಮಾರನ್ ನಡುವಿನ ವಿವಾದವೇನು?

ಕೆಎಎಲ್ ಏರ್​ವೇಸ್ ಎಂಬುದು ಸನ್ ನೆಟ್ವರ್ಕ್​​ನ ಮುಖ್ಯಸ್ಥ ಕಳಾನಿದಿ ಮಾರನ್ ಅವರ ಹೂಡಿಕೆ ಸಂಸ್ಥೆ. ಸ್ಪೈಸ್​​ಜೆಟ್ ಜೊತೆಗಿನ ಇವರ ಸಂಬಂಧ ದಶಕಗಳದ್ದು. ಕೆಎಎಲ್ ಏರ್​​ವೇಸ್ ಮತ್ತು ಕಳಾನಿದಿ ಮಾರನ್ ಅವರು ಸ್ಪೈಸ್​​ಜೆಟ್​​ನಲ್ಲಿ ಶೇ. 37.7ರಷ್ಟಿದ್ದ ತಮ್ಮ ಷೇರುಪಾಲನ್ನು 2010ರಲ್ಲಿ ಶೇ. 58.46ಕ್ಕೆ ಹೆಚ್ಚಿಸಿಕೊಂಡಿದ್ದರು.

2015ರ ಫೆಬ್ರುವರಿಯಲ್ಲಿ ತಮ್ಮ ಅಷ್ಟೂ ಷೇರುಗಳನ್ನು ಸ್ಪೈಸ್​​ಜೆಟ್ ಸಹ-ಸಂಸ್ಥಾಪಕ ಅಜಯ್ ಸಿಂಗ್ ಅವರಿಗೆ ಮರಳಿಸಿದ್ದರು.

ಒಪ್ಪಂದದ ಪ್ರಕಾರ ಕ್ವನ್ವರ್ಟಿಬಲ್ ವಾರಂಟ್ ಮತ್ತು ಪ್ರಿಫರೆನ್ಸ್ ಷೇರುಗಳನ್ನು ನೀಡಲು ಸ್ಪೈಸ್​​ಜೆಟ್​​ಗೆ ತಾವು 679 ಕೋಟಿ ರೂ ಪಾವತಿಸಿದ್ದೆವು. ಆದರೆ, ತಮಗೆ ಈ ವಾರಂಟ್ ಮತ್ತು ಪ್ರಿಫರೆನ್ಸ್ ಷೇರು ನೀಡಲಾಗಿಲ್ಲ ಎಂದು ಮಾರನ್ ಆರೋಪ ಮಾಡಿ, 2018ರಲ್ಲಿ ಸ್ಪೈಸ್​ಜೆಟ್ ವಿರುದ್ಧ ನ್ಯಾಯಮಂಡಳಿ ಮೆಟ್ಟಿಲೇರಿ 1,323 ಕೋಟಿ ರೂ ಹಾನಿ ಕಟ್ಟಿಸಿಕೊಡುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: ಭಾರತದಲ್ಲಿ ರಿನಿವಬಲ್ ಎನರ್ಜಿ ಸಾಮರ್ಥ್ಯ 232 ಗಿ.ವ್ಯಾ.; ಜಾಗತಿಕವಾಗಿ 3ನೇ ಸ್ಥಾನದಲ್ಲಿ

ಆದರೆ, ಮೂವರು ನಿವೃತ್ತ ಸುಪ್ರೀಂ ನ್ಯಾಯಮೂರ್ತಿಗಳಿದ್ದ ನ್ಯಾಯಮಂಡಳಿಯು ಮಾರನ್ ಅರ್ಜಿಯನ್ನು ಭಾಗಶಃ ತಿರಸ್ಕರಿಸಿತು. 1,323 ಕೋಟಿ ಪರಿಹಾರ ಒದಗಿಸುವ ಮನವಿಯನ್ನು ತಿರಸ್ಕರಿಸಿತು. ಆದರೆ, 579 ಕೋಟಿ ರೂ ಹಣವನ್ನು ಬಡ್ಡಿಸಮೇತವಾಗಿ ಮಾರನ್ ಅವರಿಗೆ ನೀಡಬೇಕೆಂದು ಸ್ಪೈಸ್​​ಜೆಟ್​​ಗೆ ಸೂಚಿಸಿತು.

ಕೆಎಎಲ್ ಏರ್​ವೇಸ್ ಮತ್ತು ಮಾರನ್ ಅವರು ದೆಹಲಿ ಹೈಕೋರ್ಟ್​​ನ ಏಕಸದಸ್ಯ ಪೀಠಕ್ಕೆ ಮೇಲ್ಮನವಿ ಮಾಡಿದರು. ಅದೂ ಕೂಡ ಟ್ರಿಬ್ಯುನಲ್ ತೀರ್ಪನ್ನು ಎತ್ತಿಹಿಡಿಯಿತು. ಈಗ ದೆಹಲಿ ಹೈಕೋರ್ಟ್​​ನ ವಿಭಾಗೀಯ ಪೀಠ ಕೂಡ 2025ರ ಮೇ 2ರಂದು ಇದೇ ತೀರ್ಪು ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ