AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brij Singh: ‘ಸಾಕಪ್ಪಾ ಸಾಕು ಭಾರತದ ಸಾವಾಸ, ಅಮೆರಿಕಕ್ಕೆ ವಾಪಸ್ ಹೋಗ್ತೀನಿ’- ಬೆಂಗಳೂರಲ್ಲಿ ಕಂಪನಿ ನೊಂದಾಯಿಸಲು ಹೆಣಗಾಡಿದ ಬ್ರಿಜ್ ಸಿಂಗ್

Company Registration Problem: ಸ್ಟಾರ್ಟಪ್ ನಗರಿ ಬೆಂಗಳೂರಿನಲ್ಲಿ ತಮ್ಮೊಂದು ಕಂಪನಿಯನ್ನು ನೊಂದಾಯಿಸಲು ಬ್ರಿಜ್ ಸಿಂಗ್ 2 ತಿಂಗಳಿಂದ ವಿಫಲಪ್ರಯತ್ನ ಮಾಡಿದ್ದಾರಂತೆ. ಈ ಬಗ್ಗೆ ಟ್ವೀಟ್ ಮೂಲಕ ಹತಾಶೆ ತೋಡಿಕೊಂಡ ಅವರು, ಅಮೆರಿಕಕ್ಕೆ ವಾಪಸ್ ಹೋಗುವ ಸಮಯ ಬರುತ್ತಿದೆ ಎಂದಿದ್ದಾರೆ.

Brij Singh: ‘ಸಾಕಪ್ಪಾ ಸಾಕು ಭಾರತದ ಸಾವಾಸ, ಅಮೆರಿಕಕ್ಕೆ ವಾಪಸ್ ಹೋಗ್ತೀನಿ’- ಬೆಂಗಳೂರಲ್ಲಿ ಕಂಪನಿ ನೊಂದಾಯಿಸಲು ಹೆಣಗಾಡಿದ ಬ್ರಿಜ್ ಸಿಂಗ್
ಕಂಪನಿ ನೊಂದಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 28, 2023 | 12:58 PM

Share

ಬೆಂಗಳೂರು, ಜುಲೈ 28: ಭಾರತ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್​ನ ಪಟ್ಟಿಯಲ್ಲಿ (Ease of doing business) ಸ್ವಲ್ಪಸ್ವಲ್ಪವೇ ಮೇಲೇರುತ್ತಿದೆ. ಸ್ಟಾರ್ಟಪ್​ಗಳ ಉತ್ತೇಜನಕ್ಕಾಗಿ ಸರ್ಕಾರ ಬಹಳಷ್ಟು ಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ವಾಸ್ತವದಲ್ಲಿ ಚಿತ್ರಣ ಹೇಗಿದೆ? ಅಮೆರಿಕದಿಂದ ಬಂದು ಬೆಂಗಳೂರಿನಲ್ಲಿ ಕಂಪನಿ ಸ್ಥಾಪಿಸಲು ಯತ್ನಿಸುತ್ತಿರುವ ಎನ್​ಆರ್​ಐವೊಬ್ಬರು ಭಾರತದಲ್ಲಿನ ಅನುಭವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ನೋ ಮೌಂಟೇನ್ (snowmountain.ai) ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಸ್ಥೆಯ ಸಂಸ್ಥಾಪಕ ಬ್ರಿಜ್ ಸಿಂಗ್ (Brij Singh) ಅವರು ತಮ್ಮ ಕಂಪನಿಯೊಂದನ್ನು ಭಾರತದಲ್ಲಿ ನೊಂದಾಯಿಸುವ ಪ್ರಯತ್ನದಲ್ಲಿ ಎದುರಾದ ಅನುಭವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

‘ಭಾರತ ಮತ್ತು ಬೆಂಗಳೂರೆಂದರೆ ನನಗೆ ಇಷ್ಟವೇ. ಆದರೆ, ಅಲ್ಲಿ ಒಂದು ತಿಂಗಳಲ್ಲಿ ಕಲಿತದ್ದಕ್ಕಿಂತಲೂ ಹೆಚ್ಚಿನದನ್ನು ಕಳೆದ 3 ದಿನದಲ್ಲಿ ಬೇ ಏರಿಯಾದಲ್ಲಿ ಕಲಿತಿದ್ದೇನೆ. ಭಾರತದಲ್ಲಿ ಒಂದು ಕಂಪನಿಯನ್ನು ನೊಂದಾಯಿಸಲು ಎರಡು ತಿಂಗಳು ಪ್ರಯತ್ನಿಸಿದ್ದೇನೆ. ಈಗಲೂ ಅದು ಸಾಧ್ಯವಾಗಿಲ್ಲ. ಸಂಭಾವ್ಯ ಗ್ರಾಹಕರು, ಹೂಡಿಕೆದಾರರು ಹಾಗೂ ಇತರ ಸ್ಥಾಪಕರು ನೀಡುವ ಪರಿಹಾರ ಸಲಹೆಗಳು ಬೇರೆ ಮಟ್ಟದಲ್ಲಿ ಇವೆ…’ ಎಂದು ಬ್ರಿಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಬೇ ಏರಿಯಾ ಎಂಬುದು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಒಂದು ಪ್ರದೇಶ. ಬ್ರಿಜ್ ಸಿಂಗ್ ಜುಲೈ 27ರಂದು ಮಾಡಿದ ಈ ಟ್ವೀಟ್​ನಲ್ಲಿ, ‘ನಾನು ಅಮೆರಿಕಕ್ಕೆ ವಾಪಸ್ ಹೋಗುವ ಸಮಯ ಬರುತ್ತಿದೆ ಅನಿಸುತ್ತದೆ. ಈ ವಿಚಾರವನ್ನು ಬಹಳ ಭಾರದ ಹೃದಯದಿಂದ ಹೇಳುತ್ತಿದ್ದೇನೆ’ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Star Notes: ಸ್ಟಾರ್ ಚಿಹ್ನೆ ಇರುವ ನೋಟುಗಳು ಅಮಾನ್ಯವಾ? ನೋಟುಗಳಿಗೆ ಸ್ಟಾರ್ ಯಾಕಿರುತ್ತದೆ? ಇಲ್ಲಿದೆ ಆರ್​ಬಿಐ ಸ್ಪಷ್ಟನೆ

ಬ್ರಿಜ್ ಸಿಂಗ್ ಅವರ ಈ ಟ್ವೀಟ್​ಗೆ ಸಾಕಷ್ಟು ಸ್ಪಂದನೆಯೂ ಸಿಕ್ಕಿದೆ. ಕುಲದೀಪ್ ಎಂಬುವವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಭಾರತದಲ್ಲಿ ಎಲ್ಲವೂ ಕಠಿಣವೇ. ಆದರೂ ಜನರು ನಿರ್ಮಾಣ ಕಾರ್ಯದಲ್ಲಿದ್ದಾರೆ. ಯಶಸ್ವಿಯೂ ಆಗಿದ್ದಾರೆ ಎಂದಿದ್ದಾರೆ.

ಇದಕ್ಕೆ ಸ್ಪಂದಿಸಿದ ಬ್ರಿಜ್ ಸಿಂಗ್, ತಾನು ಯಾವುದನ್ನೂ ಬಿಡುವುದಿಲ್ಲ. ಕೇವಲ ವಿಚಾರ ಹಂಚಿಕೊಂಡೆ ಅಷ್ಟೇ. ವಿಶ್ವಕ್ಕಾಗಿ ಭಾರತದಲ್ಲಿ ನಿರ್ಮಾಣ ಮಾಡುವುದರಿಂದ ಬಹಳಷ್ಟು ಅನುಕೂಲತೆಗಳಿವೆ ಎಂದು ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: SBI Safety Tips: ಆನ್​ಲೈನ್​ನಲ್ಲಿ ಸುರಕ್ಷಿತವಾಗಿ ಬ್ಯಾಂಕಿಂಗ್ ನಡೆಸಲು ಎಸ್​ಬಿಐ ನೀಡಿದೆ ಕೆಲ ಟಿಪ್ಸ್

ಸಿಎ ಸಮಸ್ಯೆ ಇರಬಹುದು

ಇನ್ನೂ ಕೆಲವರು ಬ್ರಿಜ್ ಅವರ ನೊಂದಣಿ ವೈಫಲ್ಯದ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಬ್ರಿಜ್ ಸಿಂಗ್ ಅವರು ತಮ್ಮ ಕಂಪನಿಯನ್ನು ನೊಂದಾಯಿಸಲು ಎರಡು ತಿಂಗಳಾದರೂ ಆಗಿಲ್ಲ ಎಂದರೆ ಅದಕ್ಕೆ ಚಾರ್ಟರ್ಡ್ ಅಕೌಂಟೆಂಟ್​ನ ವೈಫಲ್ಯ ಇರುತ್ತೆ. ಒಬ್ಬ ಒಳ್ಳೆಯ ಸಿಎಸ್ ಇದ್ದರೆ 20 ದಿನದಲ್ಲಿ ಕಂಪನಿ ರಿಜಿಸ್ಟ್ರೇಶನ್ ಆಗುತ್ತದೆ ಎಂದು ಒಬ್ಬರು ಕಾಮೆಂಟಿಸಿದ್ದಾರೆ.

ಮಯಂಕ್ ಎಂಬ ವ್ಯಕ್ತಿ, ತಾನು 7 ದಿನದಲ್ಲಿ ಪ್ರೈವೇಟ್ ಲಿ ಕಂಪನಿ ನೊಂದಾಯಿಸಿ ಸರ್ಟಿಫಿಕೇಟ್ ಕೂಡ ಪಡೆದಿದ್ದೇನೆ ಎಂದಿದ್ದಾರೆ. ಸಿಎ ಇಲ್ಲದೇ ತಾವೇ ಸ್ವಂತವಾಗಿ ಬೇಗನೇ ಕಂಪನಿ ರಿಜಿಸ್ಟ್ರೇಶನ್ ಮಾಡಬಹುದು. ಬ್ರಿಜ್ ಸಿಂಗ್ ಅವರು ಸರಿಯಾದ ಸಿಎ ಅನ್ನು ಆಯ್ಕೆ ಮಾಡಿಕೊಂಡಿಲ್ಲವಾಗಿರಬಹುದು ಎಂದು ಮಗದೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Fri, 28 July 23

ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ