AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AMD: ಬೆಂಗಳೂರಿನಲ್ಲಿ ಅಮೆರಿಕದ ಎಎಂಡಿಯಿಂದ ಅತಿದೊಡ್ಡ ಡಿಸೈನ್ ಸೆಂಟರ್; 5 ಲಕ್ಷ ಚದರಡಿಯಲ್ಲಿ ಕಟ್ಟಡ; 400 ಮಿಲಿಯನ್ ಡಾಲರ್ ಹೂಡಿಕೆ

Chip Design Center In Bengaluru: ಅಮೆರಿಕದ ಚಿಪ್ ತಯಾರಕ ಎಎಂಡಿ ಸಂಸ್ಥೆ ಬೆಂಗಳೂರಿನಲ್ಲಿ ಅತಿದೊಡ್ಡ ಆರ್ ಅಂಡ್ ಡಿ ಕೇಂದ್ರ ಸ್ಥಾಪಿಸಲಿದ್ದು, ಮುಂದಿನ 5 ವರ್ಷದಲ್ಲಿ 400 ಮಿಲಿಯನ್ ಡಾಲರ್ ಬಂಡವಾಳ ಹಾಕಲಿದೆ. ಈ ಕೇಂದ್ರದಿಂದ 3,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

AMD: ಬೆಂಗಳೂರಿನಲ್ಲಿ ಅಮೆರಿಕದ ಎಎಂಡಿಯಿಂದ ಅತಿದೊಡ್ಡ ಡಿಸೈನ್ ಸೆಂಟರ್; 5 ಲಕ್ಷ ಚದರಡಿಯಲ್ಲಿ ಕಟ್ಟಡ; 400 ಮಿಲಿಯನ್ ಡಾಲರ್ ಹೂಡಿಕೆ
ಎಎಂಡಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 28, 2023 | 3:21 PM

Share

ಗಾಂಧಿನಗರ, ಜುಲೈ 28: ಅಮೆರಿಕದ ಚಿಪ್ ತಯಾರಿಕಾ ಸಂಸ್ಥೆ ಎಎಂಡಿ (AMD- Advanced Micro Devices) ಬೆಂಗಳೂರಿನಲ್ಲಿ ತನ್ನ ಅತಿದೊಡ್ಡ ಆರ್ ಅಂಡ್ ಡಿ ಘಟಕ ಸ್ಥಾಪಿಸಲು ಮುಂದಾಗಿದೆ. ಈ ವರ್ಷದೊಳಗೆ ಅದರ ನೂತನ ಚಿಪ್ ಡಿಸೈನ್ ಸೆಂಟರ್ ಬೆಂಗಳೂರಿನಲ್ಲಿ ತಲೆ ಎತ್ತಲಿದೆ. ಮುಂದಿನ 3 ವರ್ಷದಲ್ಲಿ 400 ಮಿಲಿಯನ್ ಡಾಲರ್ (ಸುಮಾರು 3,290 ಕೋಟಿ ರೂ) ಹೂಡಿಕೆ ಮಾಡಲಿದ್ದು, ಸುಮಾರು 3 ಸಾವಿರ ಎಂಜಿನಿಯರುಗಳ ನೇಮಕಾತಿ ಮಾಡಿಕೊಳ್ಳುವ ಆಲೋಚನೆಯಲ್ಲಿ ಎಎಂಡಿ ಇದೆ. ಈ ಬೃಹತ್ ಸೆಮಿಕಂಡಕ್ಟರ್ ಡಿಸೈನ್ ಕೇಂದ್ರ ಬರೋಬ್ಬರಿ 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದೆಯಂತೆ.

ಗುಜರಾತ್​ನ ಗಾಂಧಿನಗರದಲ್ಲಿ ಇಂದು ಚಾಲನೆಗೊಂಡ ವಾರ್ಷಿಕ ಸೆಮಿಕಂಡಕ್ಟರ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಎಎಂಡಿ ಸಂಸ್ಥೆಯ ಸಿಟಿಒ ಮತ್ತು ಕಾರ್ಯವಾಹಕ ಉಪಾಧ್ಯಕ್ಷ ಮಾರ್ಕ್ ಪೇಪರ್​ಮಾಸ್ಟರ್ ಅವರು ಬೆಂಗಳೂರಿನಲ್ಲಿ ಅತಿದೊಡ್ಡ ಡಿಸೈನ್ ಸೆಂಟರ್ ಸ್ಥಾಪನೆಯ ಬಗ್ಗೆ ಸುಳಿವು ನೀಡಿದರು.

ಅಮೆರಿಕದ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾದಲ್ಲಿ ಮುಖ್ಯಕಚೇರಿ ಹೊಂದಿರುವ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ ಸಂಸ್ಥೆ ಭಾರತದಲ್ಲಿ ಹೆಜ್ಜೆ ಇಟ್ಟು ಎರಡು ದಶಕಗಳಾಗಿವೆ. ಬೆಂಗಳೂರಿನಲ್ಲಿರುವ ಕಚೇರಿ ಸೇರಿ ಭಾರತದಲ್ಲಿ 9 ಸ್ಥಳಗಳಲ್ಲಿ ಎಎಂಡಿ ನೆಲೆ ಇದೆ. ಇದೀಗ ಬೆಂಗಳೂರಿನಲ್ಲಿ ಡಿಸೈನ್ ಸೆಂಟರ್ ಶುರುವಾದರೆ ಭಾರತದಲ್ಲಿ ಎಎಂಡಿ ಉಪಸ್ಥಿತಿ 10ನೆಯದ್ದಾಗುತ್ತದೆ. ಸದ್ಯ ಎಎಂಡಿಯ ಭಾರತೀಯ ಕಚೇರಿಗಳಲ್ಲಿ ಒಟ್ಟು 6,500 ಮಂದಿ ಉದ್ಯೋಗಿಗಳಿದ್ದು, ಹೊಸ ಡಿಸೈನ್ ಸೆಂಟರ್ ಬಂದ ಬಳಿಕ ಉದ್ಯೋಗಿಗಳ ಸಂಖ್ಯೆ ಹತ್ತಿರಹತ್ತಿರ 10,000ಕ್ಕೆ ಏರುತ್ತದೆ.

ಇದನ್ನೂ ಓದಿ: Semicon India: ಸೆಮಿಕಂಡಕ್ಟರ್ ಉದ್ಯಮ ಸ್ಥಾಪಿಸಬೇಕೆಂದರೆ ಗಂಡೆದೆ ಬೇಕು: ಭಾರತವನ್ನು ಶ್ಲಾಘಿಸಿದ ಫಾಕ್ಸ್​ಕಾನ್

ಬೆಂಗಳೂರಿನಲ್ಲಿ ಎಎಂಡಿ ಸ್ಥಾಪಿಸಲಿರುವ ಅತ್ಯಾಧುನಿಕ ಚಿಪ್ ಡಿಸೈನ್ ಸೆಂಟರ್ ಈ ವರ್ಷಾಂತ್ಯದೊಳಗೆ ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ಈ ಬೆಳವಣಿಗೆಯನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದ್ದಾರೆ.

‘ಭಾರತದಲ್ಲಿ ವಿಶ್ವ ದರ್ಜೆಯ ಸೆಮಿಕಂಡಕ್ಟರ್ ಡಿಸೈನ್ ಮತ್ತು ಇನೋವೇಶನ್ ಇಕೋಸಿಸ್ಟಂ ನಿರ್ಮಿಸಲು ಇದು ಖಂಡಿತವಾಗಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಉನ್ನತ ಕೌಶಲ್ಯದ ಸೆಮಿಕಂಡಕ್ಟರ್ ಎಂಜಿನಿಯರುಗಳು ಮತ್ತು ಸಂಶೋಧಕರಿಗೆ ಇದು ಒಳ್ಳೆಯ ಅವಕಾಶಗಳನ್ನು ಒದಗಿಸುತ್ತದೆ. ಭಾರತವು ಜಾಗತಿಕ ಪ್ರತಿಭಾ ಅಡ್ಡೆಯಾಗಬೇಕೆನ್ನುವ ನರೇಂದ್ರ ಮೋದಿ ಕನಸಿಗೆ ಇದು ಪೂರಕವಾಗಿದೆ’ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಫಾಕ್ಸ್‌ಕಾನ್, ವೇದಾಂತ ಮೇಕ್ ಇನ್ ಇಂಡಿಯಾ ಯೋಜನೆಗೆ ಬದ್ಧ: ಸಚಿವ ಅಶ್ವಿನಿ ವೈಷ್ಣವ್

ಸೆಮಿಕಂಡಕ್ಟರ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಸೆಮಿಕಂಡಕ್ಟರ್ ಅನ್ನು ಮಾತೃ ಉದ್ಯಮ ಎಂದು ಕರೆದಿದ್ದಾರೆ.

‘ಸೆಮಿಕಂಡಕ್ಟರ್ ಒಂದು ರೀತಿಯ ಮಾತೃ ಉದ್ಯಮವಿದ್ದಂತೆ. ನೀವು ಅದನ್ನು ಪಡೆದಿದ್ದರೆ ಹಲವು ಕ್ಷೇತ್ರಗಳನ್ನು ಹೊಂದಿದಂತೆ. ಫಾರ್ಮ್ ಟ್ರಾಕ್ಟರ್​ಗಳಿಂದ ಹಿಡಿದು ಮೊಬೈಲ್ ಫೋನ್​ವರೆಗೂ, ಕಾರುಗಳಿಂದ ಫ್ರಿಜ್​ನವರೆಗೆ ಸೆಮಿಕಂಡಕ್ಟರ್​ಗಳು ಅಗತ್ಯ ಇವೆ’ ಎಂದು ವೈಷ್ಣವ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ