AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Opening Bell: ಬಜೆಟ್​ ಉತ್ತೇಜನದ ನಿರೀಕ್ಷೆಯಲ್ಲಿ ಸೆನ್ಸೆಕ್ಸ್ 700 ಪಾಯಿಂಟ್ಸ್​ಗೂ ಹೆಚ್ಚು ಏರಿಕೆ

ಕೇಂದ್ರ ಬಜೆಟ್ 2022ರ ಮಂಡನೆ ದಿನವಾದ ಫೆಬ್ರವರಿ 1ನೇ ತಾರೀಕಿನಂದು ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ 700ಕ್ಕೂ ಹೆಚ್ಚು ಪಾಯಿಂಟ್ಸ್ ಏರಿಕೆ ಕಂಡಿದೆ.

Opening Bell: ಬಜೆಟ್​ ಉತ್ತೇಜನದ ನಿರೀಕ್ಷೆಯಲ್ಲಿ ಸೆನ್ಸೆಕ್ಸ್ 700 ಪಾಯಿಂಟ್ಸ್​ಗೂ ಹೆಚ್ಚು ಏರಿಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 01, 2022 | 10:05 AM

Share

ಕೇಂದ್ರ ಬಜೆಟ್​ (Union Budget 2022) ಹಿನ್ನೆಲೆಯಲ್ಲಿ ಫೆಬ್ರವರಿ 1ನೇ ತಾರೀಕಿನ ಮಂಗಳವಾರದಂದು ಸೆನ್ಸೆಕ್ಸ್ ಸೂಚ್ಯಂಕವು 718.22 ಪಾಯಿಂಟ್ಸ್ ಅಥವಾ ಶೇ 1.24ರಷ್ಟು ಮತ್ತು ನಿಫ್ಟಿ 50 ಸೂಚ್ಯಂಕವು 191.20 ಪಾಯಿಂಟ್ಸ್ ಅಥವಾ ಶೇ 1.10ರಷ್ಟು ಮೇಲೇರಿತ್ತು. ಇನ್ನು ಈ ದಿನದ ಬಜೆಟ್​ ನಿರೀಕ್ಷೆಯಲ್ಲಿ ಯಾವ ಷೇರಿನ ಮೇಲೆ ಏನು ಬದಲಾವಣೆ ಆಗಿದೆ ಹಾಗೂ ಯಾವ ಸುದ್ದಿಯ ಹಿನ್ನೆಲೆಯಲ್ಲಿ ಹೀಗಾಗಿದೆ ಎಂಬುದರ ಬಗ್ಗೆ ಪ್ರಮುಖಾಂಶಗಳು ಇಲ್ಲಿವೆ.

* ಶೂನ್ಯ ಬಂಡವಾಳ ಕೃಷಿಗೆ ಕೇಂದ್ರ ಹಣಕಾಸು ಸಚಿವೆ ಒತ್ತು ನೀಡಬಹುದು ಎಂಬ ಕಾರಣಕ್ಕೆ ರಸಗೊಬ್ಬರ ಷೇರುಗಳು ಶೇ 1ರಿಂದ ಶೇ 1ರ ತನಕ ಕುಸಿತ ಕಂಡಿವೆ.

* ನಿರೀಕ್ಷೆಗಿಂತ ಕಡಿಮೆ ಸುಂಕ ಏರಿಕೆ ಹಿನ್ನೆಲೆಯಲ್ಲಿ ಸಿಗರೇಟ್​ ಉತ್ಪಾದಕರ ಷೇರುಗಳು ಶೇ 1ರಿಂದ ಶೇ 2ರಷ್ಟು ಏರಿಕೆ ಕಂಡಿವೆ.

* ಚಿನ್ನದ ಮೇಲಿನ ಮೇಲಿನ ಆಮದು ಸುಂಕ ಏರಿಕೆ ಪ್ರಸ್ತಾವ ಇರುವುದರಿಂದ ಆಭರಣದ ಸ್ಟಾಕ್​ಗಳು ಶೇ 2ರಿಂದ 7ರಷ್ಟು ಕುಸಿದಿವೆ.

* ಸರ್ಕಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಪ್ರಸ್ತಾವ ಇರುವುದರಿಂದ ಎಚ್​ಪಿಸಿಎಲ್​, ಬಿಪಿಸಿಎಲ್​, ಐಒಸಿ ಷೇರುಗಳು ಶೇ 5ರಿಂದ 6ರಷ್ಟು ಇಳಿಕೆ ಆಗಿತ್ತು.

* ಸರ್ಕಾರದಿಂದ ಪ್ರವರ್ತಕ ಷೇರು ಪ್ರಮಾಣ ಇಳಿಸುವ ಪ್ರಸ್ತಾವ ಇರುವುದರಿಂದ 700ರಷ್ಟು ಕಂಪೆನಿಗಳ ಮೇಲೆ ಪ್ರಭಾವ ಆಗಬಹುದು.

* ಬೇಡಿಕೆಗೆ ಉತ್ತೇಜನ ದೊರಕಿಸುವುದಕ್ಕೆ ನಿರ್ಮಲಾ ಸೀತಾರಾಮನ್ ಅವರು ಏನು ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಕಾರ್ಪೊರೇಟ್ಸ್​ಗಳು ಇದ್ದಾರೆ.

* ಮೂಲಸೌಕರ್ಯ ಯೋಜನೆಗಳ ಮೇಲೆ ವೆಚ್ಚ ಮಾಡುವುದು, ಕೊರೊನಾದಿಂದ ಹೊಡೆತ ಬಿದ್ದಿರುವ ಎಂಎಸ್​ಎಂಇಯಂಥ ವಲಯಕ್ಕೆ ಉತ್ತೇಜನ ನೀಡಬಹುದು ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: Union Budget 2022: 10 ವರ್ಷದಲ್ಲಿ ಬಜೆಟ್​ ದಿನದಂದು ಷೇರುಪೇಟೆ ಸೂಚ್ಯಂಕಗಳ ಪರ್ಫಾರ್ಮೆನ್ಸ್ ಹೇಗಿತ್ತು?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ