Sign In

By signing in or creating an account, you agree with Associated Broadcasting Company's Terms & Conditions and Privacy Policy.

Union Budget 2022: 10 ವರ್ಷದಲ್ಲಿ ಬಜೆಟ್​ ದಿನದಂದು ಷೇರುಪೇಟೆ ಸೂಚ್ಯಂಕಗಳ ಪರ್ಫಾರ್ಮೆನ್ಸ್ ಹೇಗಿತ್ತು?

ಕಳೆದ 10 ವರ್ಷಗಳಲ್ಲಿ ಕೇಂದ್ರ ಬಜೆಟ್​ ದಿನಂದು ಷೇರು ಮಾರುಕಟ್ಟೆ ಸೂಚ್ಯಂಕಗಳಾದ ನಿಫ್ಟಿ- 50, ಬ್ಯಾಂಕ್​ ನಿಫ್ಟಿ ಪ್ರದರ್ಶನ ಹೇಗಿತ್ತು ಎಂಬುದರ ವಿವರ ಇಲ್ಲಿದೆ.

Union Budget 2022: 10 ವರ್ಷದಲ್ಲಿ ಬಜೆಟ್​ ದಿನದಂದು ಷೇರುಪೇಟೆ ಸೂಚ್ಯಂಕಗಳ ಪರ್ಫಾರ್ಮೆನ್ಸ್ ಹೇಗಿತ್ತು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jan 26, 2022 | 11:44 AM

ಈ ಬಾರಿಯ ಕೇಂದ್ರ ಬಜೆಟ್ 2022-23 (Union Budget 2022-23) ಚೇತರಿಕೆಯನ್ನು ಬೆಂಬಲಿಸಬೇಕು ಹಾಗೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಈವರೆಗೆ ದೇಶೀಯ ಚೇತರಿಕೆ ಏರಿಳಿತದಿಂದ ಕೂಡಿದ್ದು, ಸರ್ಕಾರದ ನೀತಿಗಳ ಬೆಂಬಲದ ಅಗತ್ಯ ಇದೆ. ಇದರ ಹೊರತಾಗಿ, ಶೀಘ್ರದಲ್ಲೇ ಜಾಗತಿಕ ಬಾಂಡ್​ ಸೂಚ್ಯಂಕದಲ್ಲಿ ಒಳಗೊಳ್ಳುವುದಕ್ಕೆ ಭಾರತ ಸಿದ್ಧತೆ ನಡೆಸುತ್ತಿದೆ. ಇದರಿಂದ ಆರ್ಥಿಕ ಸ್ಥಿರತೆಗೆ ಸಹಾಯ ಆಗುತ್ತದೆ. ಆದ್ದರಿಂದ ಹಣಕಾಸು ವರ್ಷ 2023ರಲ್ಲಿ ಸಾಧಾರಣವಾದ ಕನ್ಸಾಲಿಡೇಷನ್ ನಿರೀಕ್ಷಿಸಲಾಗುತ್ತಿದೆ. ಬ್ರೋಕರೇಜ್ ಮತ್ತು ರೀಸರ್ಚ್ ಸಂಸ್ಥೆಯಾದ ಎಡೆಲ್​ವೀಸ್ ಆಲ್ಟರ್​ನೇಟಿವ್ ರೀಸರ್ಚ್​ ಕಳೆದ ಹತ್ತು ವರ್ಷಗಳಿಂದ ಬಜೆಟ್​ ದಿನದಂದು ನಿಫ್ಟಿ-50, ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಮಿಡ್​ಕ್ಯಾಪ್ 100 ಸೂಚ್ಯಂಕಗಳ ಪರ್ಫಾರ್ಮೆನ್ಸ್ ವಿಶ್ಲೇಷಣೆ ಮಾಡುತ್ತಾ ಬರುತ್ತಿದೆ. 2021ರ ಬಜೆಟ್​ನ ದಿನದಂದು ಭಾರೀ ಗಳಿಕೆ ಕಂಡಿದ್ದು, ಶೇ 5ರಷ್ಟು ಏರಿಕೆ ದಾಖಲಿಸಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಘೋಷಣೆಗಳಿಂದ ಹೂಡಿಕೆದಾರರು ಸಂತುಷ್ಟರಾಗಿದ್ದರು. ಅದರ ಫಲಿತಾಂಶ ಸೂಚ್ಯಂಕಗಳಲ್ಲಿ ಕಂಡುಬಂತು. ಆದರೆ 2020ನೇ ಇಸವಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಬಜೆಟ್ ಇರಲಿಲ್ಲ ಎಂಬ ಕಾರಣಕ್ಕೆ ಶೇ 2ರಷ್ಟು ಕುಸಿದಿತ್ತು.

ಕಳೆದ 10 ವರ್ಷಗಳಲ್ಲಿ ನಿಫ್ಟಿ 50 ಬಜೆಟ್ ದಿನದಂದು ಯಾವ ಹಂತದಲ್ಲಿತ್ತು ಹಾಗೂ ಬಜೆಟ್​ ದಿನದಂದು ಏನಾಯಿತು, ಯಾವ ದಿನ ಬಜೆಟ್ ಮಂಡನೆ ಆಯಿತು ಎಂಬ ವಿವರ ಇಲ್ಲಿದೆ. 2012: ಮಾರ್ಚ್ 16, 2012: 5,318- ಶೇ 1.2ರಷ್ಟು ಇಳಿಕೆ

2013: ಫೆಬ್ರವರಿ 28, 2013: 5,693- ಶೇ 1.8ರಷ್ಟು ಇಳಿಕೆ

2014: ಫೆಬ್ರವರಿ 17, 2014: 6,073- ಶೇ 0.4ರಷ್ಟು ಏರಿಕೆ

2014: ಜುಲೈ 10, 2014: 7,568- ಶೇ 0.2ರಷ್ಟು ಇಳಿಕೆ

2015: ಫೆಬ್ರವರಿ 28, 2015: 8,902- ಶೇ 0.6ರಷ್ಟು ಏರಿಕೆ

2016: ಫೆಬ್ರವರಿ 1, 2016: 7,556- ಶೇ 0.1ರಷ್ಟು ಇಳಿಕೆ

2017: ಫೆಬ್ರವರಿ 1, 2017: 8,716- ಶೇ 1.8ರಷ್ಟು ಏರಿಕೆ

2018: ಫೆಬ್ರವರಿ 1, 2018: 11,017- ಶೇ 0.1ರಷ್ಟು ಇಳಿಕೆ

2019: ಫೆಬ್ರವರಿ 1, 2019: 10,894- ಶೇ 0.6ರಷ್ಟು ಏರಿಕೆ

2019: ಜುಲೈ 5, 2019: 11,811- ಶೇ 1.1ರಷ್ಟು ಇಳಿಕೆ

2020: ಫೆಬ್ರವರಿ 1, 2020: 11,662- ಶೇ 2.5ರಷ್ಟು ಇಳಿಕೆ

2021: ಫೆಬ್ರವರಿ 1, 2021: 14,281- ಶೇ 4.7ರಷ್ಟು ಏರಿಕೆ

ನಿಫ್ಟಿ ಬ್ಯಾಂಕ್

2012: ಮಾರ್ಚ್ 16, 2012: 10,391- ಶೇ 1.9ರಷ್ಟು ಇಳಿಕೆ

2013: ಫೆಬ್ರವರಿ 28, 2013: 11,487- ಶೇ 3.7ರಷ್ಟು ಇಳಿಕೆ

2014: ಫೆಬ್ರವರಿ 17, 2014: 10,327- ಶೇ 1.2ರಷ್ಟು ಏರಿಕೆ

2014: ಜುಲೈ 10, 2014: 14,822- ಶೇ 0.7ರಷ್ಟು ಇಳಿಕೆ

2015: ಫೆಬ್ರವರಿ 28, 2015: 19,691- ಶೇ 3.2ರಷ್ಟು ಏರಿಕೆ

2016: ಫೆಬ್ರವರಿ 1, 2016: 15,314- ಶೇ 1.3ರಷ್ಟು ಇಳಿಕೆ

2017: ಫೆಬ್ರವರಿ 1, 2017: 20,021- ಶೇ 2.6ರಷ್ಟು ಏರಿಕೆ

2018: ಫೆಬ್ರವರಿ 1, 2018: 27,221- ಶೇ 0.6ರಷ್ಟು ಇಳಿಕೆ

2019: ಫೆಬ್ರವರಿ 1, 2019: 27,086- ಶೇ 0.8ರಷ್ಟು ಇಳಿಕೆ

2019: ಜುಲೈ 5, 2019: 31,476- ಶೇ 0 ಯಾವುದೇ ಬದಲಾವಣೆ ಇಲ್ಲ

2020: ಫೆಬ್ರವರಿ 1, 2020: 29,821- ಶೇ 3.3ರಷ್ಟು ಇಳಿಕೆ

2021: ಫೆಬ್ರವರಿ 1, 2021: 33,089- ಶೇ 8.3ರಷ್ಟು ಏರಿಕೆ

ಈ ಬಾರಿಯ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1, 2022ರಂದು ಸಂಸತ್​ನಲ್ಲಿ ಮಂಡಿಸಲಾಗುವುದು. ಈ ಮಧ್ಯೆ ಜನವರಿ 31ನೇ ತಾರೀಕಿನ ಮಧ್ಯಾಹ್ನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು. ಗ್ರಾಮೀಣ ವಲಯ, ಪ್ರೊಡಕ್ಷನ್ ಲಿಂಕ್ಡ್ ಇನ್​ಸೆಂಟಿವ್ (ಪಿಎಲ್​ಐ), ಹೊಸ ಉತ್ಪಾದನಾ ಘಟಕಗಳಿಗೆ 2019ರಲ್ಲಿ ಘೋಷಿಸಿದ್ದ ತೆರಿಗೆ ಕಡಿತದ ವಿಸ್ತರಣೆ, ನರೇಗಾದಂಥ ಉದ್ಯೋಗ ಸೃಷ್ಟಿಯ ಯೋಜನೆ ಆರಂಭ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಜೆಟ್ 2022: ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಯಾರು ಗೊತ್ತಾ..? ಇಲ್ಲಿದೆ ಆಸಕ್ತಿಕರ ಮಾಹಿತಿ

Published On - 11:43 am, Wed, 26 January 22

ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ