Sundar Pichai: ಜೀವನದಲ್ಲಿ ಸಾಧನೆ ಮಾಡಬೇಕೆ? ಬುದ್ಧಿಯಲ್ಲ, ಮನಸಿನ ಮಾತಿಗೆ ಕಿವಿಗೊಡಿ: ಗೂಗಲ್ ಸಿಇಒ ಸುಂದರ್ ಪಿಚೈ

Listen to Heart More Than Mind: ಸ್ವ ಸಾಮರ್ಥ್ಯದಿಂದ ವೃತ್ತಿಯಲ್ಲಿ ಬೆಳೆದು ವಿಶ್ವದರ್ಜೆಯ ಕಂಪನಿಯಲ್ಲಿ ಸಿಇಒ ಆಗಿರುವ ಭಾರತೀಯರಲ್ಲಿ ಗೂಗಲ್​ನ ಸುಂದರ್ ಪಿಚೈ ಒಬ್ಬರು. ಒಬ್ಬ ಸಾಮಾನ್ಯ ವ್ಯಕ್ತಿ ಉನ್ನತ ಹಂತಕ್ಕೆ ಏರಲು ಏನು ಬೇಕು? ಬುದ್ಧಿಗಿಂತ ಹೆಚ್ಚಾಗಿ ಮನಸಿನ ಮಾತು ಕೇಳಿ ಎಂದು ಸಲಹೆ ನೀಡುತ್ತಾರೆ ಸುಂದರ್ ಪಿಚೈ. ಈ ಗೂಗಲ್ ಸಿಇಒ ತಮ್ಮ ಮಕ್ಕಳಿಗೆ ಮೊಬೈಲ್ ಬಳಕೆ ಅವಕಾಶವನ್ನು ಸೀಮಿತಗೊಳಿಸುತ್ತಾರೆ.

Sundar Pichai: ಜೀವನದಲ್ಲಿ ಸಾಧನೆ ಮಾಡಬೇಕೆ? ಬುದ್ಧಿಯಲ್ಲ, ಮನಸಿನ ಮಾತಿಗೆ ಕಿವಿಗೊಡಿ: ಗೂಗಲ್ ಸಿಇಒ ಸುಂದರ್ ಪಿಚೈ
ಸುಂದರ್ ಪಿಚೈ
Follow us
|

Updated on: Feb 16, 2024 | 2:38 PM

ಭಾರತದಲ್ಲಿ ಸಾಂಪ್ರದಾಯಿಕವಾಗಿ ಇಲ್ಲಿನ ದೊಡ್ಡ ಉದ್ದಿಮೆಗಳು (businesses) ಕೌಟುಂಬಿಕವಾಗಿ ಬಳುವಳಿಯಾಗಿ ಪಡೆದು ಮುಂದುವರಿಯುತ್ತಿರುವಂತಹವು. ಹೆಚ್ಚಿನ ಉದ್ಯಮಿಗಳು ಅದೇ ಹಿನ್ನೆಲೆಯ ಕುಟುಂಬಕ್ಕೆ ಸೇರಿರುವಂತಹವರು. ಆದರೆ, ಜಾಗತಿಕ ಕಂಪನಿಗಳಿಗೆ ಸಿಇಒ ಆಗಿರುವ ಭಾರತೀಯರಲ್ಲಿ ಬಹಳ ಜನರು ದೊಡ್ಡ ಹಿನ್ನೆಲೆ ಹೊಂದಿದವರಲ್ಲ. ತಮ್ಮ ಸ್ವಸಾಮರ್ಥ್ಯದಿಂದ (self made businessmen) ತಳಮಟ್ಟದಿಂದ ಬೆಳೆದು ಬಂದವರೇ ಹೆಚ್ಚು. ಅಂಥವರಲ್ಲಿ ಗೂಗಲ್ ಮತ್ತು ಆಲ್ಫಬೆಟ್​ನ ಸಿಇಒ ಆಗಿರುವ ಸುಂದರ್ ಪಿಚೈ ಕೂಡ ಒಬ್ಬರು. ಚೆನ್ನೈನ ಮಧ್ಯಮವರ್ಗದ ಕುಟುಂಬದ ಹುಡುಗನಾಗಿ ಬೆಳೆದ ಸುಂದರ್ ಪಿಚೈ (Sundar Pichai) ಇವತ್ತು ಇಡೀ ವಿಶ್ವವನ್ನೇ ಆವರಿಸಿರುವ ತಂತ್ರಜ್ಞಾನ ಕಂಪನಿಯ ಮುಖ್ಯಸ್ಥರಾಗಿ ವಿಶ್ವದ ಪ್ರಭಾವಿಗಳಲ್ಲಿ ಒಬ್ಬರೆನಿಸಿದ್ದಾರೆ. ಅವರಿಗೆ ಈ ಎತ್ತರಕ್ಕೆ ಏರಲು ಹೇಗೆ ಸಾಧ್ಯವಾಯಿತು? ಹಾವಾಡಿಗರ ನಾಡು ಎಂದು ವಿದೇಶಿಗರು ಹಂಗಿಸುತ್ತಿದ್ದ ದೇಶದಿಂದ ಹೋಗಿ ಅದೇ ವಿದೇಶಿಗರ ಮುಂದೆ ನಿಂತು ಅವರು ಚುಕ್ಕಾಣಿ ಹಿಡಿಯುವುದು ಎಂದರೆ ಸಾಮಾನ್ಯವಲ್ಲ.

ಸುಂದರ್ ಪಿಚೈ ತಮ್ಮ ಸಾಧನೆಗೆ ನೀಡುವ ಕಾರಣ ಇದು…

ಬುದ್ಧಿಯ ಮಾತು ಬೇಡ, ಮನಸಿನ ಮಾತು ಕೇಳಿ ಎಂಬುದು ಯುವ ಜನರಿಗೆ ಸುಂದರ್ ಪಿಚೈ ಅವರ ಸೊಗಸಾದ ಹಿತನುಡಿ.

‘ನಿಮ್ಮ ಮನಸು ಯಾವುದರಲ್ಲಿ ಖುಷಿ ಪಡುತ್ತದೆ ಎಂಬುದನ್ನು ನೀವು ಕಂಡುಕೊಳ್ಳಬೇಕು. ಬುದ್ಧಿಯ ಮಾತು ಕೇಳುವುದಕ್ಕಿಂತ ಮನಸಿನ ಈ ಖುಷಿ ಏನು ಎಂದು ತಿಳಿಯಲು ಯತ್ನಿಸಿ. ಇದೊಂದು ಪ್ರಯಾಣ ಇದ್ದಂತೆ. ಈ ಖುಷಿ ಯಾವುದು ಎಂಬುದನ್ನು ನೀವು ಕಂಡುಕೊಂಡರೆ ಆಗಲೇ ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು,’ ಎಂದು ಸುಂದರ್ ಪಿಚೈ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮಾರ್ಚ್ ತಿಂಗಳಲ್ಲಿ ಡಿಎ ಹೆಚ್ಚಳ ಘೋಷಣೆ; ಸಂಬಳ ಎಷ್ಟು ಹೆಚ್ಚಾಗಬಹುದು, ಇಲ್ಲಿದೆ ಲೆಕ್ಕಾಚಾರ

ಮಕ್ಕಳು ಯಾವ ಕೋರ್ಸ್ ಓದಬೇಕೆಂದು ಸಾಮಾನ್ಯವಾಗಿ ಪೋಷಕರೇ ನಿರ್ಧರಿಸುವುದುಂಟು. ಸಿವಿಲ್ ಎಂಜಿನಿಯರ್ ಆಗಬೇಕೆಂದು ಬಹಳ ಇಚ್ಛೆ ಹೊಂದಿದ್ದ ವಿದ್ಯಾರ್ಥಿಯೊಬ್ಬ ಮನೆಯವರ ಒತ್ತಡಕ್ಕೆ ಒಳಗಾಗಿ ವೈದ್ಯಕೀಯ ಕೋರ್ಸ್​ಗೆ ಸೇರಿದರೆ ಹೇಗಾಗಬಹುದು? ಕೋರ್ಸ್ ಓದಬಹುದು. ಆದರೆ, ವೃತ್ತಿಯಲ್ಲಿ ಇಷ್ಟಪಟ್ಟು ಮುಂದುವರಿಯಲು ಆಗುತ್ತದೆಯೇ? ಜೀವನದಲ್ಲಿ ಕೆಲಸದ ಸಂತೃಪ್ತಿ, ವೃತ್ತಿ ಏಳ್ಗೆ ಸಿಗದೇ ಹೋಗಬಹುದು. ಕೆಲಸದ ಒತ್ತಡದಿಂದ ಬಳಲಬಹುದು ಎಂಬುದು ತಜ್ಞರ ಅನಿಸಿಕೆ. ಗೂಗಲ್ ಸಿಇಒ ಸುಂದರ್ ಪಿಚೈ ಅವರ ಹಿತನುಡಿ ಕೂಡ ಇದೇ ನಿಟ್ಟಿನಲ್ಲಿ ಇರುವಂಥದ್ದು.

ಮಕ್ಕಳಿಗೆ ಲಕ್ಷ್ಮಣರೇಖೆ ಹಾಕುತ್ತಾರಾ ಪಿಚೈ?

ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸುಂದರ್ ಪಿಚೈ ಅವರು ತಮ್ಮ ಮಕ್ಕಳಿಗೆ ಮೊಬೈಲ್ ಬಳಕೆಗೆ ನಿರ್ಬಂಧದ ಗೆರೆ ಹಾಕುತ್ತಾರೆ ಎಂದು ಹೇಳಿಕೊಂಡಿದ್ದರು.

ತಂತ್ರಜ್ಞಾನದ ಅರಿವು ಇವತ್ತು ಎಲ್ಲರಿಗೂ ಇರಬೇಕು. ಆದರೆ, ಅದೇ ನಮ್ಮನ್ನು ಆವರಿಸಬಾರದು. ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಸ್ವಯಂ ನಿಯಂತ್ರಣ ಇರಬೇಕು ಎಂದು ಹೇಳುವ ಗೂಗಲ್ ಸಿಇಒ, ತಮ್ಮ ಮಕ್ಕಳಿಗೆ ಸೀಮಿತ ಅವಧಿಗೆ ಮಾತ್ರ ಮೊಬೈಲ್, ಟಿವಿ ಬಳಕೆಗೆ ಅವಕಾಶ ಕೊಡುತ್ತಾರಂತೆ.

ಇದನ್ನೂ ಓದಿ: ಎಸ್​ಜಿಬಿ ಮ್ಯಾಜಿಕ್; ತಿಂಗಳಿಗೆ 10,000 ರೂನಂತೆ ಎಂಟೇ ವರ್ಷ ಹೂಡಿಕೆ; 40 ವರ್ಷದಲ್ಲಿ ಆಗುತ್ತೆ 48 ಕೋಟಿ ರೂ

ಸುಂದರ್ ಪಿಚೈ ಏಕಕಾಲದಲ್ಲಿ 20 ಮೊಬೈಲ್ ಬಳಸುತ್ತಾರೆ; ಏಕೆ?

ವೈಯಕ್ತಿಕವಾಗಿ ಮೊಬೈಲ್ ಬಳಕೆಯಿಂದ ದೂರ ಇರಲು ಇಚ್ಛಿಸುವ ಸುಂದರ್ ಪಿಚೈ ಬಳಿ 20 ಮೊಬೈಲ್​ಗಳಿರುತ್ತವೆ. ಏಕಕಾಲದಲ್ಲಿ ಅವರು ಈ ಮೊಬೈಲ್​ಗಳನ್ನು ಬಳಸುತ್ತಾರೆ ಎಂದರೆ ಅಚ್ಚರಿ ಎನಿಸಬಹುದು. ಆದರೆ, ಸಿಇಒ ಹುದ್ದೆಯ ಕಾರಣಕ್ಕೆ ಅವರು ಇಷ್ಟು ಮೊಬೈಲ್​ಗಳನ್ನು ಬಳಸುವುದು ಅನಿವಾರ್ಯ ಎನ್ನಲಾಗಿದೆ. ಎಲ್ಲಾ ಮೊಬೈಲ್​ನಲ್ಲೂ ಅವರು ಗೂಗಲ್​ನ ಆ್ಯಪ್​ಗಳು ಸರಿಯಾಗಿ ಕೆಲಸ ಮಾಡುತ್ತವೆಯಾ ಎಂಬುದನ್ನು ಸಿಇಒ ಆಗಿ ಗಮನಿಸುವ ಜವಾಬ್ದಾರಿ ಅವರಿಗಿರುತ್ತದೆ. ಅದಕ್ಕಾಗಿ ಅವರು ಏಕಕಾಲದಲ್ಲಿ ಅಷ್ಟು ಮೊಬೈಲ್​ಗಳನ್ನು ಬಳಸುತ್ತಾರೆ.

ವೀಕೆಂಡ್​ನಲ್ಲೂ ಅವರು ಮೊಬೈಲ್ ಬಳಕೆಯಿಂದ ಪೂರ್ಣವಾಗಿ ದೂರ ಇರಲು ಆಗುವುದಿಲ್ಲವಂತೆ. ಅದಕ್ಕೆ ಕಾರಣ ಅವರ ಹುದ್ದೆಯ ಜವಾಬ್ದಾರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು