Tata Apple stores: ದೇಶದಲ್ಲಿ ನೂರು ವಿಶೇಷ ಆ್ಯಪಲ್ ಸ್ಟೋರ್​ ಆರಂಭಿಸಲಿದೆ ಟಾಟಾ ಗ್ರೂಪ್; ವರದಿ

ಮಾಲ್​ಗಳು ಮತ್ತು ಸ್ಟ್ರೀಟ್​ಗಳ ಬಳಿ ಸ್ಟೋರ್ ಆರಂಭಿಸಲು ಜಾಗಕ್ಕಾಗಿ ಟಾಟಾ ಈಗಾಗಲೇ ಮಾತುಕತೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

Tata Apple stores: ದೇಶದಲ್ಲಿ ನೂರು ವಿಶೇಷ ಆ್ಯಪಲ್ ಸ್ಟೋರ್​ ಆರಂಭಿಸಲಿದೆ ಟಾಟಾ ಗ್ರೂಪ್; ವರದಿ
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on:Dec 12, 2022 | 3:55 PM

ನವದೆಹಲಿ: ಟಾಟಾ ಸಮೂಹವು (Tata Group) ಶೀಘ್ರದಲ್ಲೇ ದೇಶದಾದ್ಯಂತ 100 ಸಣ್ಣ ವಿಶೇಷ ಆ್ಯಪಲ್ ಸ್ಟೋರ್​ಗಳನ್ನು (Apple Stores) ಆರಂಭಿಸಲಿದೆ ಎಂದು ವರದಿಯಾಗಿದೆ. ಟಾಟಾ ಒಡೆತನದ ಇನ್​ಫಿನಿಟಿ ರಿಟೇಲ್​ ಜತೆ ಆ್ಯಪಲ್ ಮಾತುಕತೆ ನಡೆಸುತ್ತಿದೆ. ಇನ್​ಫಿನಿಟಿ ರಿಟೇಲ್ ಸದ್ಯ ದೇಶದಲ್ಲಿ ಕ್ರೋಮಾ ಸ್ಟೋರ್​​ಗಳನ್ನು ನಡೆಸುತ್ತಿದೆ. ಶಾಪಿಂಗ್ ಮಾಲ್​ಗಳಲ್ಲಿ, ಖ್ಯಾತ ಸ್ಥಳಗಳು ಮತ್ತು ಸಮೀಪದ ಪ್ರದೇಶಗಳಲ್ಲಿ 500-600 ಚದರ ಅಡಿ ವಿಸ್ತೀರ್ಣದ ಆ್ಯಪಲ್ ಸ್ಟೋರ್​​ಗಳನ್ನು ತೆರೆಯಲಾಗುವುದು. ಈ ಸ್ಟೋರ್​ಗಳು ಆ್ಯಪಲ್ ಪ್ರೀಮಿಯಂ ರಿಸೆಲ್ಲರ್ ಸ್ಟೋರ್​ಗಳಿಗಿಂತ ಸಣ್ಣದಾಗಿರಲಿದೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ತಿಳಿಸಿದೆ. ಪ್ರೀಮಿಯಂ ರಿಸೆಲ್ಲರ್ ಸ್ಟೋರ್​ಗಳು ಸಾವಿರ ಚದರ ಅಡಿ ವಿಸ್ತೀರ್ಣದ್ದಾಗಿವೆ. ಸಣ್ಣ ಸ್ಟೋರ್​ಗಳಲ್ಲಿ ಐಫೋನ್, ಐಪ್ಯಾಡ್ ಮತ್ತು ವಾಚ್​ಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.

ಮಾಲ್​ಗಳು ಮತ್ತು ಸ್ಟ್ರೀಟ್​ಗಳ ಬಳಿ ಸ್ಟೋರ್ ಆರಂಭಿಸಲು ಜಾಗಕ್ಕಾಗಿ ಟಾಟಾ ಈಗಾಗಲೇ ಮಾತುಕತೆ ಆರಂಭಿಸಿದೆ ರಿಟೇಲ್​ ಕನ್ಸಲ್ಟೇಂಟ್ ಒಬ್ಬರು ತಿಳಿಸಿದ್ದಾರೆ. ಆ್ಯಪಲ್​ನ ಮೊದಲ ಕಂಪನಿ ಮಾಲೀಕತ್ವದ ಸ್ಟೋರ್ ಮಾರ್ಚ್​ನಲ್ಲಿ ಮುಂಬೈಯಲ್ಲಿ ಆರಂಭವಾಗುವ ನಿರೀಕ್ಷೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Tata Group: ಭಾರತದಲ್ಲಿ ಐಫೋನ್ ತಯಾರಿಸುವ ವಿಸ್ಟ್ರಾನ್ ಬೆಂಗಳೂರು ಘಟಕ ಖರೀದಿಗೆ ಟಾಟಾ ಒಲವು

ಕಂಪನಿ ಮಾಲೀಕತ್ವದ ಸ್ಟೋರ್​ಗಳಿಂದ ಸಹಭಾಗಿತ್ವ ಹೊಂದಿರುವವರಿಗೆ ಮತ್ತು ಚಿಲ್ಲರೆ ಮಾರಾಟಗಾರರಿಗೆ ಅನುಕೂಲವಾಗಲಿದೆ. ಮಾರಾಟ ಹೆಚ್ಚಾಗಲಿದೆ ಎಂದು ಆ್ಯಪಲ್ ಈಗಾಗಲೇ ಸ್ಥಳೀಯ ಫ್ರಾಂಚೈಸ್​​ ಸಹಭಾಗಿತ್ವ ಹೊಂದಿರುವವರಿಗೆ ತಿಳಿಸಿದೆ ಎನ್ನಲಾಗಿದೆ.

ದೇಶದಲ್ಲಿ ಜುಲೈ – ಸೆಪ್ಟೆಂಬರ್ ಅವಧಿಯಲ್ಲಿ 17 ಲಕ್ಷ ಐಫೋನ್ ಮಾರಾಟವಾಗಿದೆ ಎಂದು ಸೈಬರ್​ಮೀಡಿಯಾ ರಿಸರ್ಚ್ (ಸಿಎಂಆರ್) ತಿಳಿಸಿದೆ. ಭಾರತದಲ್ಲಿ ಮಾರಾಟ ಹೆಚ್ಚಿಸಲು ಮತ್ತು ಉತ್ಪಾದನಾ ಸಾಮರ್ಥ್ಯ ವೃದ್ಧಿಸುವತ್ತ ಆ್ಯಪಲ್ ಚಿತ್ತ ನೆಟ್ಟಿದೆ.

ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸುವಂತೆ ವಿಸ್ಟ್ರಾನ್, ಪಾಕ್ಸ್​​ಕಾನ್ ಹಾಗೂ ಪೆಗಾಟ್ರಾನ್​​ಗಳಿಗೆ ಆ್ಯಪಲ್ ಸೂಚಿಸಿದೆ ಎಂದು ‘ಲೈವ್ ಮಿಂಟ್’ ವರದಿ ತಿಳಿಸಿದೆ. ವಿಸ್ಟ್ರಾನ್, ಪಾಕ್ಸ್​​ಕಾನ್ ಹಾಗೂ ಪೆಗಾಟ್ರಾನ್​​ಗಳು ಭಾರತದಲ್ಲಿ ಐಫೋನ್ ತಯಾರಿಸುತ್ತಿವೆ. ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸುವುದರಿಂದ ಭಾರತದಲ್ಲಿ ತಯಾರಿಸಿದ ಐಫೋನ್ ರಫ್ತಿಗೆ ನೆರವಾಗಲಿದೆ ಎಂದು ವರದಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Mon, 12 December 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್