AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವಿಟ್ಟರ್ ಖರೀದಿಸಿದ ಮೊತ್ತಕ್ಕೆ ಟೆಸ್ಲಾದಲ್ಲಿ ಇಲಾನ್ ಮಸ್ಕ್​ಗೆ ಸಂಭಾವನೆ; ಷೇರುದಾರರಿಂದ ಒಪ್ಪಿಗೆ ಮುದ್ರೆ, ಇನ್ನೇನಿದ್ರೂ ಕೋರ್ಟ್ ಒಪ್ಪಿಗೆ ಬಾಕಿ

Elon Musk pay package of 44.9 billion dollar: ಇಲಾನ್ ಮಸ್ಕ್ ಅವರಿಗೆ 44.9 ಬಿಲಿಯನ್ ಡಾಲರ್ ಸಂಭಾವನೆ ಕೊಡುವ ಪ್ರಸ್ತಾಪಕ್ಕೆ ಟೆಸ್ಲಾ ಷೇರುದಾರರು ಒಪ್ಪಿಗೆ ಸೂಚಿಸಿದ್ದಾರೆ. ಗುರುವಾರ (ಜೂನ್ 13) ನಡೆದ ವೋಟಿಂಗ್​ನಲ್ಲಿ ಹೆಚ್ಚಿನ ಮತಗಳು ಮಸ್ಕ್ ಪರವಾಗಿ ಬಿದ್ದಿವೆ. ಮಸ್ಕ್ ಅವರಿಗೆ ಈ ಸಂಭಾವನೆಯು ನಗದು ಬದಲು ಷೇರು ಮತ್ತಿತರ ರೂಪದಲ್ಲಿ ಸಿಗಲಿದೆ. ಆದರೆ, ಡೆಲಾವೇರ್ ಕೋರ್ಟ್ ಈ ಹಿಂದೆ ಮಸ್ಕ್​ಗೆ ಕೊಡಲಾಗುವ ಪೇ ಪ್ಯಾಕೇಜ್ ಮೊತ್ತವನ್ನು ತಿರಸ್ಕರಿಸಿತ್ತು. ಟೆಸ್ಲಾ ಆಡಳಿತ ಮಂಡಳಿ ಅಥವಾ ಇಲಾನ್ ಮಸ್ಕ್ ಮತ್ತೊಮ್ಮೆ ಡೆಲಾವೇರ್ ಕೋರ್ಟ್ ಮುಂದೆ ಹೋಗಿ ಮರುಮನವಿ ಸಲ್ಲಿಸಬಹುದು.

ಟ್ವಿಟ್ಟರ್ ಖರೀದಿಸಿದ ಮೊತ್ತಕ್ಕೆ ಟೆಸ್ಲಾದಲ್ಲಿ ಇಲಾನ್ ಮಸ್ಕ್​ಗೆ ಸಂಭಾವನೆ; ಷೇರುದಾರರಿಂದ ಒಪ್ಪಿಗೆ ಮುದ್ರೆ, ಇನ್ನೇನಿದ್ರೂ ಕೋರ್ಟ್ ಒಪ್ಪಿಗೆ ಬಾಕಿ
ಇಲಾನ್ ಮಸ್ಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 14, 2024 | 12:18 PM

Share

ವಾಷಿಂಗ್ಟನ್, ಜೂನ್ 14: ಟೆಸ್ಸಾ ಸಿಇಒ ಇಲಾನ್ ಮಸ್ಕ್ ಅವರ 44.9 ಬಿಲಿಯನ್ ಡಾಲರ್ ಸಂಭಾವನೆಯ ಪ್ಯಾಕೇಜ್​ಗೆ (compensation package) ಷೇರುದಾರರು ಒಪ್ಪಿಗೆ ಸೂಚಿಸಿದ್ದಾರೆ. ನಿನ್ನೆ ಗುರುವಾರ ನಡೆದ ಟೆಸ್ಲಾ ಷೇರುದಾರರ ವೋಟಿಂಗ್​ನಲ್ಲಿ (shareholders voting) ಮಸ್ಕ್ ಅವರ ಬೃಹತ್ ಪೇ ಪ್ಯಾಕೇಜ್​ಗೆ ಸಮ್ಮತಿ ಸಿಕ್ಕಿದೆ. ಕೋರ್ಟ್ ಈ ಪ್ಯಾಕೇಜ್ ಪ್ರಸ್ತಾಪವನ್ನು ತಿರಸ್ಕರಿಸಿದರೂ ಟೆಸ್ಲಾ ಆಡಳಿತ ಮಂಡಳಿ ಇಲಾನ್ ಮಸ್ಕ್​ಗೆ (Elon Musk) ದಾಖಲೆಯ 44.9 ಬಿಲಿಯನ್ ಡಾಲರ್ ಪೇ ಪ್ಯಾಕೇಜ್ ಕೊಡುವ ಪ್ರಸ್ತಾಪಕ್ಕೆ ಒಪ್ಪಿಗೆ ಕೊಟ್ಟಿತ್ತು. ಇದೀಗ ಷೇರುದಾರರೂ ಒಪ್ಪಿಕೊಂಡಿದ್ದಾರೆ. ವೋಟಿಂಗ್ ರಿಸಲ್ಟ್ ಬಂದ ಬಳಿಕ ಇಲಾನ್ ಮಸ್ಕ್ ಅವರು ಷೇರುದಾರರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಇಲ್ಲಿ 44.9 ಬಿಲಿಯನ್ ಡಾಲರ್ ಎಂದರೆ ರುಪಾಯಿ ಕರೆನ್ಸಿಯಲ್ಲಿ ಮೂರು ಲಕ್ಷ ಕೋಟಿ ರೂಗಿಂತ ಅಧಿಕವಾಗುತ್ತದೆ.

ಕುತೂಹಲ ಎಂದರೆ, ಹೆಚ್ಚೂಕಡಿಮೆ ಇಷ್ಟೇ ಮೊತ್ತಕ್ಕೆ ಇಲಾನ್ ಮಸ್ಕ್ ಅವರು 2022ರಲ್ಲಿ ಟ್ವಿಟ್ಟರ್ ಅನ್ನು ಖರೀದಿಸಿದ್ದರು. ಆಗ ಅಷ್ಟು ದೊಡ್ಡ ಮೊತ್ತದ ವ್ಯವಸ್ಥೆ ಮಾಡಲು ಟೆಸ್ಲಾದಲ್ಲಿ ತಮಗಿದ್ದ ಶೇ. 22ರಷ್ಟು ಷೇರುಪಾಲಿನಲ್ಲಿ ಒಂದಷ್ಟು ಷೇರುಗಳನ್ನು ಮಾರಿದ್ದರು. ಈಗ ಟೆಸ್ಲಾದಲ್ಲಿ ಇಲಾನ್ ಅವರ ಷೇರುಪಾಲು ಶೇ. 13ರಷ್ಟಿದೆ.

ಇದನ್ನೂ ಓದಿ: ಭಾರತಕ್ಕೆ ಹೋಲಿಸಿದರೆ ಚೀನಾ ಷೇರುಪೇಟೆ ಹೇಗೆ? ಚೀನೀ ದೌರ್ಬಲ್ಯ ಬಿಚ್ಚಿಟ್ಟ ಮಾರ್ಗನ್ ಸ್ಟಾನ್ಲೀ ಅಧಿಕಾರಿ

ಈಗ ಟೆಸ್ಲಾ ಷೇರುದಾರರು ಇಲಾನ್ ಮಸ್ಕ್ ಅವರಿಗೆ 44.9 ಬಿಲಿಯನ್ ಡಾಲರ್ ಸಂಭಾವನೆ ಯೋಜನೆಗೆ ಒಪ್ಪಿಕೊಂಡರಾದರೂ ಅದು ಜಾರಿಗೆ ಬರಬೇಕಾದರೆ ಕೋರ್ಟ್ ಸಮ್ಮತಿ ಬೇಕಾಗುತ್ತದೆ. ಸದ್ಯ ಅಮೆರಿಕದ ಡೆಲಾವೇರ್ ಚಾನ್ಸರಿ ಕೋರ್ಟ್ ಇಲಾನ್ ಮಸ್ಕ್ ಅವರಿಗೆ ನೀಡುವ ಈ ಸಂಭಾವನೆಯನ್ನು ತಿರಸ್ಕರಿಸಿದ್ದಾರೆ. ಷೇರುದಾರರು ಒಪ್ಪಿಗೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಬಹುದು. ಈ ಪ್ರಕರಣ ಇತ್ಯರ್ಥಗೊಳ್ಳಲು ವರ್ಷವೇ ಆಗಬಹುದು.

ಇಲಾನ್ ಮಸ್ಕ್ ಅವರಿಗೆ ಯಾಕಿಷ್ಟು ಬೃಹತ್ ಸಂಭಾವನೆ?

ಗಮನಿಸಬೇಕಾದ ಸಂಗತಿ ಎಂದರೆ ಇಲಾನ್ ಮಸ್ಕ್ ಅವರಿಗೆ ನೀಡಲಾಗುವ 44.9 ಬಿಲಿಯನ್ ಡಾಲರ್ ಹಣ ಕ್ಯಾಷ್ ಅಲ್ಲ. ಇದು ಷೇರು ಇತ್ಯಾದಿ ಕಾಂಪೆನ್ಸೇಶನ್ ಆಗಿರುತ್ತದೆ. ಟೆಸ್ಲಾ ಸಿಇಒ ಆಗಿ ಮಸ್ಕ್ ಅವರು ಸಂಬಳ ಪಡೆಯುತ್ತಿಲ್ಲ. ಅವರಿಗೆ ಡಿವಿಡೆಂಡ್ ಇತ್ಯಾದಿಗಳ ಮೂಲಕ ಹಣ ಹರಿದುಬರುತ್ತದೆ.

ಇಲ್ಲಿ ಅವರು ಟೆಸ್ಲಾದಲ್ಲಿ ತಾನು ಹೊಂದಿರುವ ಷೇರುಪಾಲನ್ನು ಶೇ. 13ರಿಂದ ಶೇ 25ಕ್ಕೆ ಹೆಚ್ಚಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಟೆಸ್ಲಾದಲ್ಲಿ ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಇರಾದೆ ಮಸ್ಕ್ ಅವರಿಗಿದೆ. ಅವರ ಟೆಸ್ಲಾದಿಂದ ಸೆಲ್ಫ್ ಡ್ರೈವಿಂಗ್ ಕಾರುಗಳ ಅಭಿವೃದ್ಧಿ ನಿರಂತರವಾಗಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸೆಲ್ಫ್ ಡ್ರೈವಿಂಗ್ ಕಾರಿಗೆ ದೊಡ್ಡ ಮಾರುಕಟ್ಟೆ ಇರಲಿದೆ.

ಇದನ್ನೂ ಓದಿ: ಮರ್ಸೆಡೀಸ್ ಹೆಸರು ಯಾವ ಸಂಸ್ಥಾಪಕರದ್ದಲ್ಲ; ಇಲ್ಲಿದೆ ಈ ಬ್ರ್ಯಾಂಡ್ ಹಿಂದಿನ ಕುತೂಹಲದ ಸಂಗತಿ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಆಳ ಅಗಲವನ್ನು ಇಲಾನ್ ಮಸ್ಕ್ ಬಲ್ಲರು. ಟೆಸ್ಲಾದ ಛೇರ್ಮನ್ ಸೇರಿದಂತೆ ಎಂಜಿನಿಯರುಗಳ ತಂಡದವರೆಲ್ಲರೂ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ. ಇಲಾನ್ ಮಸ್ಕ್ ಟೆಸ್ಲಾ ಬಿಟ್ಟು ಹೋದರೆ ಅವರಿಗಿರುವ ನೂರೆಂಟ್ ಐಡಿಯಾಗಳಲ್ಲಿ ಎಲ್ಲಿಯಾದರೂ ಹೊಸದಾಗಿ ಪ್ರಾಜೆಕ್ಟ್ ಆರಂಭಿಸಬಲ್ಲರು. ಕಷ್ಟವಾಗುವುದು ಟೆಸ್ಲಾಗೆಯೇ ಎಂದು ಮೊನ್ನೆಮೊನ್ನೆ ಟೆಸ್ಲಾ ಛೇರ್ಮನ್ ಹೇಳಿದ್ದರು.

ತಮ್ಮ ಕಾಂಪೆನ್ಸೇಶನ್ ಪ್ಯಾಕೇಜ್ ಬಗ್ಗೆ ಟೆಸ್ಲಾ ಷೇರುದಾರರ ವೋಟಿಂಗ್​ಗೆ ಮುನ್ನ ಇಲಾನ್ ಮಸ್ಕ್ ಒಂದು ಮಾತು ಹೇಳಿದ್ದರು. ತನಗೆ ಸಿಗುವ ಕಾಂಪೆನ್ಸೇಶನ್ ಪ್ಯಾಕೇಜ್ ಅನ್ನು ಬಳಸಲು ಆಗುವುದಿಲ್ಲ. ಷೇರುಗಳನ್ನು ಆರು ವರ್ಷ ಕಾಲ ಮಾರುವುದಿಲ್ಲ ಎಂದು ಭರವಸೆ ನೀಡಿದ್ದರು. ಈ ಕಾರಣಕ್ಕೆ ಶೇರ್​ಹೋಲ್ಡರ್​ಗಳು ಗ್ರೀನ್ ಸಿಗ್ನಲ್ ಕೊಟ್ಟಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು