Sign In

By signing in or creating an account, you agree with Associated Broadcasting Company's Terms & Conditions and Privacy Policy.

Titan Co Limited: ಮಾರುಕಟ್ಟೆ ಬಂಡವಾಳ 2 ಲಕ್ಷ ಕೋಟಿ ರೂಪಾಯಿ ದಾಟಿದ ಟಾಟಾ ಸಮೂಹದ ಮತ್ತೊಂದು ಕಂಪೆನಿ

ಟೈಟಾನ್ ಕಂಪೆನಿಯು ಗುರುವಾರ ಹೊಸ ದಾಖಲೆಯನ್ನು ಬರೆಯಿತು. ಟಾಟಾ ಸಮೂಹದ ಎರಡನೇ ಕಂಪೆನಿಯಾಗಿ ಮಾರುಕಟ್ಟೆ ಬಂಡವಾಳ ಮೌಲ್ಯ 2 ಲಕ್ಷ ಕೋಟಿ ರೂಪಾಯಿಯನ್ನು ದಾಟಿತು.

Titan Co Limited: ಮಾರುಕಟ್ಟೆ ಬಂಡವಾಳ 2 ಲಕ್ಷ ಕೋಟಿ ರೂಪಾಯಿ ದಾಟಿದ ಟಾಟಾ ಸಮೂಹದ ಮತ್ತೊಂದು ಕಂಪೆನಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 07, 2021 | 1:22 PM

ಷೇರಿನ ಬೆಲೆಯು ದಾಖಲೆ ಮಟ್ಟಕ್ಕೆ ಏರುವ ಮೂಲಕ ಎರಡು ಲಕ್ಷ ಕೋಟಿ ರೂಪಾಯಿಯ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ದಾಟಿದ ಟಾಟಾ ಸಮೂಹದ ಎರಡನೇ ಕಂಪೆನಿ ಎಂಬ ಶ್ರೇಯಕ್ಕೆ ಗುರುವಾರ ಟೈಟಾನ್ ಲಿಮಿಟೆಡ್ (Titan Co. Limited) ಪಾತ್ರವಾಯಿತು. ಟೈಟಾನ್ ಷೇರು ಬಿಎಸ್ಇಯಲ್ಲಿ ದಾಖಲೆಯ ರೂ. 2343ರ ಗರಿಷ್ಠ ಮಟ್ಟವನ್ನು ಮುಟ್ಟಿತು. ಹಿಂದಿನ ಸೆಷನ್​ನ ಮುಕ್ತಾಯದ ದರಕ್ಕಿಂತ ಬೆಲೆಯು ಶೇ 9ರಷ್ಟು ಹೆಚ್ಚಾಯಿತು. ಅದರ ಮಾರುಕಟ್ಟೆ ಬಂಡವಾಳ ಮೌಲ್ಯವು 2.07 ಲಕ್ಷ ಕೋಟಿಗಳಷ್ಟಾಯಿತು. ಟೈಟಾನ್ ಕಂಪೆನಿಗೂ ಮುನ್ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಈ ಮೈಲುಗಲ್ಲನ್ನು ತಲುಪಿದ ಟಾಟಾ ಸಮೂಹದ ಮೊದಲ ಕಂಪೆನಿ ಆಗಿದೆ. ಅಂದಹಾಗೆ ಟೈಟಾನ್ ಕಂಪೆನಿಯು ಸೆಪ್ಟೆಂಬರ್ ತ್ರೈಮಾಸಿಕದ ಬೇಡಿಕೆಯಲ್ಲಿ ಬಲವಾದ ಚೇತರಿಕೆಯನ್ನು ಬುಧವಾರ ವರದಿ ಮಾಡಿದೆ ಮತ್ತು ಅದರ ಹೆಚ್ಚಿನ ವಿಭಾಗಗಳಲ್ಲಿ ಮಾರಾಟವು ಕೊರೊನಾ ಬಿಕ್ಕಟ್ಟಿನ ಪೂರ್ವ ಸ್ಥಿತಿಗಿಂತ ಹೆಚ್ಚಾಗಿದೆ ಅಥವಾ ಹತ್ತಿರದಲ್ಲಿವೆ. ಆಭರಣ ವಿಭಾಗವು ವರ್ಷದಿಂದ ವರ್ಷಕ್ಕೆ ನೋಡಿದರೆ ಶೇ 78ರಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ (ಬುಲಿಯನ್ ಮಾರಾಟವನ್ನು ಹೊರತುಪಡಿಸಿ). ಇದು ಎರಡು ವರ್ಷಗಳ ಆಧಾರದ ಮೇಲೆ ಶೇ 32 CAGR ಅನ್ನು ತಲುಪಿದೆ. ಈ ವಿಭಾಗವು FY22ರ ಎರಡನೇ ತ್ರೈಮಾಸಿಕದಲ್ಲಿ 13 ಮಳಿಗೆಗಳನ್ನು ಸೇರಿಸಿತು. ಒಟ್ಟು ಸ್ಟೋರ್ ಎಣಿಕೆ ಈ ಮೂಲಕ 414ಕ್ಕೆ ಹೋಯಿತು. ಕೈಗಡಿಯಾರಗಳು ಮತ್ತು ಧರಿಸಬಹುದಾದ (ವೇರಬಲ್ಸ್) ವಿಭಾಗವು ಶೀಘ್ರವಾಗಿ ಚೇತರಿಸಿಕೊಂಡಿದ್ದು, ಎಲ್ಲ ಉತ್ಪನ್ನ ಬ್ರ್ಯಾಂಡ್‌ಗಳಲ್ಲಿ ಮಾರಾಟದಲ್ಲಿ ವೇಗ ಕಂಡುಬಂದಿದೆ. ಈ ವಿಭಾಗವು ಶೇ 73ರ ವಾರ್ಷಿಕ ಬೆಳವಣಿಗೆಯನ್ನು ವರದಿ ಮಾಡಿದೆ.

ಕನ್ನಡಕ ವಿಭಾಗದಲ್ಲಿ ಎಲ್ಲ ಸೆಗ್ಮೆಂಟ್​ಗಳಲ್ಲೂ ಆರೋಗ್ಯಕರ ಬೆಳವಣಿಗೆ ಕಂಡುಬಂದಿದೆ. ಆದಾಯವು ವರ್ಷದಿಂದ ವರ್ಷಕ್ಕೆ ಶೇ 74ರಷ್ಟು ಏರಿಕೆಯಾಗುತ್ತಿದೆ. ಈ ವಿಭಾಗದ ಮಾರಾಟವು ತನ್ನ ಕಿರಿಯ ಬ್ರ್ಯಾಂಡ್ ತನೇರಾ ಮತ್ತು ಸುಗಂಧ ಹಾಗೂ ಪರಿಕರಗಳನ್ನು ಒಳಗೊಂಡಿರುತ್ತದೆ. ವರ್ಷದಿಂದ ವರ್ಷಕ್ಕೆ ಶೇ 121ರಷ್ಟು ಏರಿಕೆಯಾಗಿದೆ. “ಪೂರ್ಣ ಅನ್‌ಲಾಕ್ ಮತ್ತು ಮುಂಬರುವ ಹಬ್ಬ/ಮದುವೆ ಸೀಸನ್ ಮುಂದಿನ ತ್ರೈಮಾಸಿಕಗಳಲ್ಲಿ ಆದಾಯವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಮತ್ತು ನಮ್ಮ ದೃಷ್ಟಿಯಲ್ಲಿ ಹೆಚ್ಚಿನ ಏರಿಕೆಯನ್ನು ನೀಡಬಹುದು. ಬಲವಾದ ಬೆಳವಣಿಗೆಯ ಅಂಶ, ನಾವು FY23/FY24 EPS ಅಂದಾಜುಗಳನ್ನು ಶೇ 8-12ಕ್ಕೆ ಹೆಚ್ಚಿಸುತ್ತೇವೆ. ಘನ ಬೆಳವಣಿಗೆ ಮತ್ತು ಗಳಿಕೆಯ ದೃಷ್ಟಿಕೋನವನ್ನು ಗಮನಿಸಿದರೆ, 2022ರ ಸೆಪ್ಟೆಂಬರ್ ಹೊತ್ತಿಗೆ ನಮ್ಮ ಟಾರ್ಗೆಟ್​ ಪ್ರೈಸ್​ (TP) ರೂ. 2,530 ಕ್ಕೆ ಹೆಚ್ಚಿಸುತ್ತೇವೆ (ರೂ. 2,000 ದಿಂದ). ಸ್ಟಾಕ್ ಅನ್ನು 65x ಎಂದು ಸೆಪ್ಟೆಂಬರ್’23E EPS (ಹಿಂದಿನ 55x ಸೆಪ್ಟೆಂಬರ್​’23E EPS ನಿಂದ) ಮೌಲ್ಯಮಾಪನ ಮಾಡಿದ್ದೇವೆ,” ಎಂದು Emkay ಸಂಶೋಧನೆ ಟಿಪ್ಪಣಿಯಲ್ಲಿ ತಿಳಿಸಿದೆ.

Emkary ರೀಸರ್ಚ್ ಹೇಳಿರುವಂತೆ, ಅಪ್​ಡೇಟ್​ ಆಧಾರದಲ್ಲಿ ಟೈಟಾನ್ ಶೇ 64ರಷ್ಟು ಆದಾಯದ ಬೆಳವಣಿಗೆಯನ್ನು 7100 ಕೋಟಿ ರೂಪಾಯಿಗೆ ವರದಿ ಮಾಡುವ ನಿರೀಕ್ಷೆಯಿದೆ. ಸರಳವಾದ ಚಿನ್ನದ ಮಿಶ್ರಣದ ಹೊರತಾಗಿಯೂ ಆಪರೇಟಿಂಗ್ ಮಾರ್ಜಿನ್ಸ್ ಶೇ 11.5ರ ಸಾಮಾನ್ಯ ಮಟ್ಟವನ್ನು ತಲುಪಬೇಕು, Q1 ಮತ್ತು ಕೆಲವು ಆಪರೇಟಿಂಗ್ ಹತೋಟಿಗಳಲ್ಲಿ ಕಂಡುಬರುವ ಬಲವಾದ ವೆಚ್ಚ ಉಳಿತಾಯ ಇದಕ್ಕೆ ಕಾರಣಗಳು. FY21Q2ರಲ್ಲಿ ಬಂದಿದ್ದ 200 ಕೋಟಿ ರೂಪಾಯಿಯ ಲಾಭಕ್ಕೆ ಹೋಲಿಸಿದರೆ 550 ಕೋಟಿ ರೂಪಾಯಿ ತೆರಿಗೆ ನಂತರ ಲಾಭವನ್ನು ಬ್ರೋಕರೇಜ್ ಸಂಸ್ಥೆ ಅಂದಾಜಿಸಿದೆ.

ಮೋತಿಲಾಲ್ ಓಸ್ವಾಲ್ ಸೆಕ್ಯೂರಿಟೀಸ್ ಚಿನ್ನದ ಬೆಲೆಗಳಲ್ಲಿ ಸ್ಥಿರತೆಯನ್ನು 47,000 ರೂಪಾಯಿಯಲ್ಲಿ ನಿರೀಕ್ಷಿಸುತ್ತದೆ. ಇದು ಗ್ರಾಹಕರ ಬೇಡಿಕೆಯನ್ನು ಸಮೀಪದ ಅವಧಿಯಲ್ಲಿ ನಿರೀಕ್ಷಿಸುತ್ತದೆ. ಲವಲವಿಕೆಯ ಗ್ರಾಹಕರ ಭಾವನೆಯೊಂದಿಗೆ, ಹಬ್ಬದ ಬೇಡಿಕೆಯು ದೃಢವಾಗಿ ಉಳಿಯುವ ಸಾಧ್ಯತೆಯಿದೆ. ಮೋತಿಲಾಲ್ ಓಸ್ವಾಲ್ ಸೆಕ್ಯೂರಿಟೀಸ್ ಚಿನ್ನದ ಬೆಲೆಗಳಲ್ಲಿ ಸ್ಥಿರತೆಯನ್ನು 47,000 ರೂಪಾಯಿಯಲ್ಲಿ ನಿರೀಕ್ಷಿಸುತ್ತದೆ.

ಇದನ್ನೂ ಓದಿ: Tata Wins Air India Bid: ಟಾಟಾ ಸನ್ಸ್​ ಪಾಲಿಗೆ ಏರ್​ಇಂಡಿಯಾ ಖರೀದಿಯ ಹೆಮ್ಮೆ; ಮುಂದಿನ ಹಾದಿಯ ಸವಾಲುಗಳು

ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!