AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Twitter Buyout: ಎಲಾನ್ ಮಸ್ಕ್​ ವಿರುದ್ಧದ ವಿಚಾರಣೆ ಸ್ಥಗಿತಗೊಳಿಸಿದ ಅಮೆರಿಕ ಕೋರ್ಟ್​; ಅ 28ರ ಒಳಗೆ  ಟ್ವಿಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ

ವಿಚಾರಣೆಯನ್ನು ಅ 28ರ ಸಂಜೆ 5 ಗಂಟೆಯವರೆಗೂ ಸ್ಥಗಿತಗೊಳಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.

Twitter Buyout: ಎಲಾನ್ ಮಸ್ಕ್​ ವಿರುದ್ಧದ ವಿಚಾರಣೆ ಸ್ಥಗಿತಗೊಳಿಸಿದ ಅಮೆರಿಕ ಕೋರ್ಟ್​; ಅ 28ರ ಒಳಗೆ  ಟ್ವಿಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Oct 07, 2022 | 9:44 AM

Share

ವಿಲ್​ಮಿಂಗ್​ಟನ್​: ಎಲಾನ್​ಮಸ್ಕ್ (Elon Musk) ಮತ್ತು ಟ್ವಿಟರ್ (Twitter)​ ನಡುವಣ ಪ್ರಕರಣದ ವಿಚಾರಣೆಯನ್ನು ಅಮೆರಿಕದ ಕೋರ್ಟ್​ ಸ್ಥಗಿತಗೊಳಿಸಿದೆ. ಟ್ವಿಟರ್​ ಖರೀದಿಗಾಗಿ ಮಸ್ಕ್​ ಅವರಿಗೆ 44 ಶತಕೋಟಿ ಡಾಲರ್​ ಒಟ್ಟುಗೂಡಿಸಲು ಸಮಯಾವಕಾಶ ನೀಡಲು ಕೋರ್ಟ್​ ನಿರ್ಧರಿಸಿದ್ದು, ಇದೇ ತಿಂಗಳ 28ರ ಒಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ. ವಿಚಾರಣೆಯನ್ನು ಅ 28ರ ಸಂಜೆ 5 ಗಂಟೆಯವರೆಗೂ ಸ್ಥಗಿತಗೊಳಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.

ಈ ಕಾಲಮಿತಿಯ ಒಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಇಬ್ಬರೂ ಕಕ್ಷಿದಾರರು ನನ್ನನ್ನು ಸಂಪರ್ಕಿಸಬೇಕು. ನವೆಂಬರ್ ತಿಂಗಳಲ್ಲಿ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ನ್ಯಾಯಾಧೀಶರಾದ ಕ್ಯಾಥಲೀನ್ ಮೆಕ್​ಕೊರ್​ಮಿಕ್ ಹೇಳಿದರು. ಈ ಹಿಂದೆ ನಿಗದಿಯಾದಂತೆ ಅ 17ರಂದು ಎಲಾನ್​ಸ್ಕ್​ ವಿರುದ್ಧದ ವಿಚಾರಣೆ ಆರಂಭವಾಗಬೇಕಿತ್ತು. ಆದರೆ ಮಸ್ಕ್​ ಅವರು ಟ್ವಿಟರ್ ಖರೀದಿಯ ಬಗ್ಗೆ ತಮ್ಮ ನಿಲುವು ಪುನರುಚ್ಚರಿಸಿದ ನಂತರ ವಿಚಾರಣೆ ಮುಂದೂಡಿಕೆಯಾಗಿದೆ.

ಟ್ವಿಟರ್ ಖರೀದಿಗೆ ಆಸಕ್ತಿ ತೋರಿದ್ದ ಎಲಾನ್ ಮಸ್ಕ್ ನಂತರ ನಕಲಿ ಖಾತೆಗಳ ವಿಚಾರ ಮುಂದಿಟ್ಟು ವಹಿವಾಟಿನಿಂದ ಹಿಂದೆ ಸರಿದಿದ್ದರು. ಟ್ವಿಟರ್ ಕಂಪನಿಯ ಷೇರು ಮೌಲ್ಯಗಳ ಮೇಲೆ ಈ ವಿದ್ಯಮಾನ ಪರಿಣಾಮ ಬೀರಿತ್ತು. ಗುರುವಾರ ಮಸ್ಕ್ ಖರೀದಿ ಒಪ್ಪಂದಕ್ಕೆ ಬದ್ಧತೆ ಘೋಷಿಸಿದ ನಂತರ ಷೇರುಮೌಲ್ಯ ಏಕಾಏಕಿ ನಾಟಕೀಯವಾಗಿ ಬೆಳೆಯಿತು.

ಟ್ವಿಟರ್ ಖರೀದಿಗಾಗಿ ಹಣ ಒಗ್ಗೂಡಿಸುತ್ತಿರುವ ಎಲಾನ್ ಮಸ್ಕ್ ತಮ್ಮ ಮಾಲೀಕತ್ವದ ಟೆಸ್ಲಾ ಕಂಪನಿಯ ಷೇರುಗಳನ್ನು ಮಾರುವ ಮೂಲಕ 15.4 ಶತಕೋಟಿ ಡಾಲರ್​ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಮಾರಾಟ ಪ್ರಕ್ರಿಯೆ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ.

ವಿವಾದಕ್ಕೆ ತೆರೆ

ಅಮೆರಿಕದ ಉದ್ಯಮಿ ಎಲಾನ್ ಮಸ್ಕ್​ (Elon Musk) ಮತ್ತೊಮ್ಮೆ ಟ್ವಿಟರ್ (Twitter) ಖರೀದಿಗೆ ಪ್ರಸ್ತಾವ ಮುಂದಿಟ್ಟಿದ್ದಾರೆ. ಈ ಮೊದಲು ಒಪ್ಪಿಕೊಂಡಿದ್ದ ದರಕ್ಕೇ ಕಂಪನಿಯನ್ನು ಖರೀದಿಸುವುದಾಗಿ ಮಸ್ಕ್ ಸ್ಪಷ್ಟಪಡಿಸಿದ್ದಾರೆ. ಟ್ವಿಟರ್ ಮತ್ತು ಮಸ್ಕ್​ ನಡುವೆ ಇತ್ತೀಚೆಗಷ್ಟೇ ಹೇಳಿಕೆ-ಪ್ರತಿ ಹೇಳಿಕೆಗಳ ಸಮರ ನಡೆದಿತ್ತು. ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯಲೆಂದು ಮಸ್ಕ್​ ನ್ಯಾಯಾಲಯದಲ್ಲಿ ಕಾನೂನು ಸಮರವನ್ನೂ ಆರಂಭಿಸಿದ್ದರು. ಇದೀಗ ನಡೆದಿರುವ ಮತ್ತೊಂದು ಬೆಳವಣಿಗೆಯಲ್ಲಿ ಟ್ವಿಟರ್​ಗೆ ನೀಡಿದ್ದ ಖರೀದಿ ಪ್ರಸ್ತಾವಕ್ಕೆ ಮಾನ್ಯತೆ ನೀಡುವುದಾಗಿ ಮಸ್ಕ್​ ಅಮೆರಿಕದ ಸೆಕ್ಯುರಿಟಿ ಅಂಡ್ ಎಕ್ಸ್​ಚೇಂಜ್ ಕಮಿಷನ್​ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಟ್ವಿಟರ್​ನ ಪ್ರತಿ ಷೇರಿಗೆ 54.20 ಡಾಲರ್​ನಂತೆ ಪಾವತಿಸಲು ಒಪ್ಪಿರುವುದಾಗಿ ಮಸ್ಕ್ ಅವರಿಂದ ಪತ್ರ ಬಂದಿದೆ ಎಂದು ಟ್ವಿಟರ್​ ಎಎಫ್​ಪಿ ಸುದ್ದಿಸಂಸ್ಥೆಗೆ ತಿಳಿಸಿದೆ. ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಬೇಕು, ಎಲ್ಲ ಕಾನೂನು ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಮಸ್ಕ್​ ಷರತ್ತು ಹಾಕಿದ್ದಾರೆ. ಟ್ವಿಟರ್ ದಾಖಲಿಸಿದ್ದ ಪ್ರಕರಣದ ವಿಚಾರಣೆಯು ಇದೇ ವಾರ ಆರಂಭವಾಗಬೇಕಿತ್ತು.

ನ್ಯಾಯಾಲಯದಲ್ಲಿ ತಮಗೆ ಗೆಲುವುದು ಸಿಗುವುದಿಲ್ಲ ಎಂದು ಖಾತ್ರಿಯಾದ ನಂತರವೇ ಮಸ್ಕ್​ ಈ ನಿರ್ಧಾರಕ್ಕೆ ಬಂದಿರಬಹುದು. ಖರೀದಿಸುವ ನಿರ್ಧಾರ ಮಾಡಿ ಮತ್ತೆ ಹಿಂಜರಿಯುವುದು ಕೆಲ ಸಾಮಾನ್ಯ ಮನುಷ್ಯರಲ್ಲಿ ಕಂಡುಬರುವ ಪ್ರವೃತ್ತಿ. ಆದರೆ ಹೆಜ್ಜೆ ಮುಂದಿಡುವ ಮೊದಲು ಮಸ್ಕ್​ ಪೂರ್ವಾಪರ ವಿವೇಚಿಸಿರಲಿಲ್ಲವೇ ಎಂದು ರಿಚ್​ಮಂಡ್ ಲಾ ಯೂನಿವರ್ಸಿಟಿಯ ಪ್ರಾಧ್ಯಾಪಕ ಕಾರ್ಲ್​ ಟೊಬಿಯಾಸ್ ಹೇಳಿದರು.

ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ, ಸ್ಪೇಸ್​ ಎಕ್ಸ್​ ಸೇರಿದಂತೆ ಹಲವು ಉದ್ಯಮಗಳ ಸಮೂಹ ಹೊಂದಿರುವ ಯಶಸ್ವಿ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸುವುದಾಗಿ ಕಳೆದ ಏಪ್ರಿಲ್​ನಲ್ಲಿ ಘೋಷಿಸಿದ್ದರು. ಆದರೆ ಜುಲೈ ತಿಂಗಳಲ್ಲಿ ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದರು. ‘ನಕಲಿ ಖಾತೆಗಳ ಮೂಲಕ ಟ್ವಿಟರ್​ ಮೋಸ ಮಾಡುತ್ತಿದೆ’ ಎನ್ನುವುದು ಮಸ್ಕ್ ಅವರ ಆರೋಪವಾಗಿತ್ತು. ಈ ಅರೋಪವನ್ನು ಅಲ್ಲಗಳೆದಿದ್ದ ಟ್ವಿಟರ್, ನಿರೂಪಿಸುವಂತೆ ಸವಾಲು ಹಾಕಿತ್ತು.

Published On - 9:44 am, Fri, 7 October 22

‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು