AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್ ಕೊಹ್ಲಿ ಬೆಂಬಲಿತ ಗೋ ಡಿಜಿಟ್ ಐಪಿಒ ಆಫರ್ ಇವತ್ತು ಆರಂಭ; ಅನುಷ್ಕಾ, ಕೊಹ್ಲಿ ಷೇರುಪಾಲು ಇತ್ಯಾದಿ ವಿವರ

Go Digit General Insurance IPO: ಮೋಟಾರು ವಾಹನಗಳಿಗೆ ವಿಮೆ ಸೇವೆ ಒದಗಿಸುವ ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿ ಐಪಿಒಗೆ ತೆರೆದುಕೊಂಡಿದೆ. ಇವತ್ತು ಮೇ 15ಕ್ಕೆ ಆರಂಭವಾಗಿ ಮೇ 17ರವರೆಗೂ ಷೇರುಗಳನ್ನು ಖರೀದಿಸಲು ಅವಕಾಶ ಇದೆ. ಐಪಿಒದಲ್ಲಿ ಹೂಡಿಕೆದಾರರು ಕನಿಷ್ಠ 55 ಷೇರುಗಳನ್ನು ಖರೀದಿಸಬಹುದು. ಪ್ರತೀ ಷೇರಿನ ಬೆಲೆ 258ರಿಂದ 272 ರೂವರೆಗೆ ಇದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಬೆಂಬಲಿತ ಗೋ ಡಿಜಿಟ್ ಐಪಿಒ ಆಫರ್ ಇವತ್ತು ಆರಂಭ; ಅನುಷ್ಕಾ, ಕೊಹ್ಲಿ ಷೇರುಪಾಲು ಇತ್ಯಾದಿ ವಿವರ
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 15, 2024 | 12:52 PM

Share

ಮುಂಬೈ, ಮೇ 15: ವಿರಾಟ್ ಕೊಹ್ಲಿ ಹೂಡಿಕೆ ಮಾಡಿರುವ ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿ (Go digit general insurance) ಷೇರು ಮಾರುಕಟ್ಟೆಗೆ ಅಡಿ ಇಡಲು ಸಜ್ಜಾಗಿದ್ದು , ಇವತ್ತು ಅದರ ಐಪಿಒ (Go Digit IPO) ಆರಂಭವಾಗಿದೆ. 2,616.65 ಕೋಟಿ ರೂ ಮೊತ್ತದ ಈ ಐಪಿಒನಲ್ಲಿ ಒಟ್ಟು 9.62 ಕೋಟಿ ಷೇರುಗಳು ಬಿಕರಿಯಾಗುತ್ತಿವೆ. ಮೇ 15, ಇವತ್ತು ಐಪಿಒ ಆರಂಭವಾಗಿ ಮೇ 17ಕ್ಕೆ ಮುಗಿಯುತ್ತದೆ. ಒಟ್ಟು 9.62 ಕೋಟಿ ಷೇರುಗಳ ಪೈಕಿ 4.14 ಕೋಟಿ ಷೇರುಗಳು ಹೊಸದಾಗಿ ವಿತರಿಸಲಾಗುತ್ತಿದೆ. ಇವುಗಳ ಮೊತ್ತ 1,125 ಕೋಟಿ ರೂ ಆಗಿದೆ. ಈಗಾಗಲೇ ಷೇರುಪಾಲು ಹೊಂದಿರುವವರು 5.48 ಕೋಟಿ ಷೇರುಗಳನ್ನು ಆಫ್​ಲೋಡ್ ಮಾಡುತ್ತಿದ್ದಾರೆ. ಈ ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಹೂಡಿಕೆ ಮಾಡಿದ್ದಾರೆ. ಇಬ್ಬರಿಗೂ ಒಂದಷ್ಟು ಷೇರುಪಾಲು ಇದೆ.

ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಐಪಿಒ ವಿವರ

  • ಐಪಿಒ ದಿನ: ಮೇ 15ರಿಂದ 17ರವರೆಗೆ
  • ಮಾರಾಟಕ್ಕಿರುವ ಷೇರುಗಳು: 9.62 ಕೋಟಿ
  • ಒಟ್ಟು ಬಂಡವಾಳ ನಿರೀಕ್ಷೆ: 2,614 ಕೋಟಿ ರೂ
  • ಐಪಿಒ ಷೇರುಬೆಲೆ: 258ರಿಂದ 272 ರೂ
  • ಖರೀದಿಸಬೇಕಾದ ಕನಿಷ್ಠ ಷೇರು ಪ್ರಮಾಣ: 55 ಈಕ್ವಿಟಿ ಷೇರು; ಕನಿಷ್ಠ ಹೂಡಿಕೆ 14,190 ರೂನಿಂದ 14,990 ರೂವರೆಗೆ ಇದೆ.

ಇದನ್ನೂ ಓದಿ: ಸಾರ್ವಜನಿಕರ ಷೇರುಪಾಲು ಶೇ. 10ಕ್ಕೆ ಹೆಚ್ಚಿಸಲು ಎಲ್​ಐಸಿಗೆ ಸಿಕ್ಕಿತು ಮೂರು ವರ್ಷ ಹೆಚ್ಚುವರಿ ಕಾಲಾವಕಾಶ

ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿಯ ಹಣಕಾಸು ಸ್ಥಿತಿ

2016ರಲ್ಲಿ ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿ ಆರಂಭವಾಗಿದೆ. ಇದು ಮೋಟಾರು ವಾಹನಗಳಿಗೆ ವಿಮೆ ಮಾರುವ ಕಂಪನಿ. ಕಳೆದ ಒಂದು ವರ್ಷದಿಂದ ಕಂಪನಿಯ ಹಣಕಾಸು ಸಾಧನೆ ಸಾಕಷ್ಟು ಉತ್ತಮಗೊಂಡಿದೆ. 2022ರ ಏಪ್ರಿಲ್​ನಿಂದ ಡಿಸೆಂಬರ್​ವರೆಗಿನ ಅವಧಿಯಲ್ಲಿ ಅದರ ಕಾರ್ಯಾಚರಣೆ ನಷ್ಟ 570 ಕೋಟಿ ರೂ ಇತ್ತು. 2023ರಲ್ಲಿ ಇದೇ ಅವಧಿಯಲ್ಲಿ ಅದರ ಆಪರೇಟಿಂಗ್ ಲಾಸ್ 101.2 ಕೋಟಿ ರೂಗೆ ಇಳಿದಿದೆ.

ಇನ್ನು, ಕಂಪನಿ ಅದೇ ಅವಧಿಯಲ್ಲಿ ಪಡೆದಿರುವ ನಿವ್ವಳ ಲಾಭ ಬರೋಬ್ಬರಿ 1,290 ಕೋಟಿ ರೂ ಇದೆ. ಹಿಂದಿನ ವರ್ಷದಲ್ಲಿ ಸಿಕ್ಕ ಲಾಭ 100.21 ಕೋಟಿ ರೂ ಮಾತ್ರ. ಒಂದು ವರ್ಷದ ಅಂತರದಲ್ಲಿ ಗೋ ಡಿಜಿಟ್ ಉತ್ತಮ ಲಾಭ ಮಾಡಿದೆ.

ಇದನ್ನೂ ಓದಿ: ಷೇರುಪೇಟೆ ಕುಸಿಯುತ್ತಿದೆಯಾ? ಜೂನ್ 4ರೊಳಗೆ ಖರೀದಿಸಿಬಿಡಿ: ಅಮಿತ್ ಶಾ ಸಲಹೆ ಕೇಳಿ

ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಹೂಡಿಕೆ ಎಷ್ಟು?

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಗೋ ಡಿಜಿಟ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಪ್ರತೀ ಷೇರಿಗೆ 75 ರೂ ಬೆಲೆಯಂತೆ 2,66,667 ಷೇರುಗಳನ್ನು ಖರೀದಿಸಿದ್ದರು. ಅನುಷ್ಕಾ ಶರ್ಮಾ 66,667 ಷೇರುಗಳನ್ನು ಹೊಂದಿದ್ದಾರೆ. ಇಬ್ಬರೂ ಸೇರಿ 3,33,334 ಷೇರುಗಳನ್ನು ಹೊಂದಿದ್ದಾರೆ.

ಈ ಐಪಿಒ ಬೆಲೆಯಲ್ಲೇ ಷೇರು ಲಿಸ್ಟ್ ಆಗಿದ್ದಾದಲ್ಲಿ ಇಬ್ಬರ ಷೇರುಸಂಪತ್ತು ಒಂಬತ್ತು ಕೋಟಿ ರೂವರೆಗೂ ಹೆಚ್ಚಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ