Disney Layoff: 7,000 ಸಾಲಲ್ಲ, ಇನ್ನೊಂದು ಸುತ್ತು ಉದ್ಯೋಗಿಗಳ ವಜಾ ನಿರ್ಧಾರ ಮಾಡಿದ ಡಿಸ್ನಿ; ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಎಷ್ಟು?

4,000 Disney Employees May Lose Job: ಫೆಬ್ರುವರಿ ತಿಂಗಳಲ್ಲಿ 7,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದ ವಾಲ್ಟ್ ಡಿಸ್ನಿ ಇದೀಗ ಮತ್ತೊಂದು ಸುತ್ತಿನ ವಜಾ ಕಾರ್ಯಕ್ಕೆ ನಿಂತಿದೆ. ಈ ಬಾರಿ 4,000ದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಬ್ಲೂಮ್​ಬರ್ಗ್ ವರದಿಯಲ್ಲಿ ತಿಳಿಸಲಾಗಿದೆ.

Disney Layoff: 7,000 ಸಾಲಲ್ಲ, ಇನ್ನೊಂದು ಸುತ್ತು ಉದ್ಯೋಗಿಗಳ ವಜಾ ನಿರ್ಧಾರ ಮಾಡಿದ ಡಿಸ್ನಿ; ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಎಷ್ಟು?
ವಾಲ್ಟ್ ಡಿಸ್ನಿ
Follow us
|

Updated on: Apr 19, 2023 | 1:04 PM

ನವದೆಹಲಿ: ಅಮೆರಿಕದ ಎಂಟರ್ಟೈನ್ಮೆಂಟ್ ದೈತ್ಯ ವಾಲ್ಟ್ ಡಿಸ್ನೀ (Walt Disney) ಉದ್ಯೋಗಿಗಳ ವಜಾಗೊಳಿಸುವ ತನ್ನ ಭರಾಟೆ ಮುಂದುವರಿಸುತ್ತಿದೆ. ಫೆಬ್ರುವರಿ ತಿಂಗಳಲ್ಲಿ 7,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದ ವಾಲ್ಟ್ ಡಿಸ್ನಿ ಇದೀಗ ಮತ್ತೊಂದು ಸುತ್ತಿನ ವಜಾ ಕಾರ್ಯಕ್ಕೆ (Layoffs) ನಿಂತಿದೆ. ಈ ಬಾರಿ 4,000ದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಬ್ಲೂಮ್​ಬರ್ಗ್ ವರದಿಯಲ್ಲಿ ತಿಳಿಸಲಾಗಿದೆ. ವಾಲ್ಟ್ ಡಿಸ್ನಿಯ ಎಂಟರ್ಟೈನ್ಮೆಂಟ್ ವಿಭಾಗದಲ್ಲಿ ಶೇ. 15ರಷ್ಟು ಮಂದಿಯನ್ನು ಮನೆಗೆ ಕಳುಹಿಸಲು ಡಿಸ್ನಿ ಮ್ಯಾನೇಜ್ಮೆಂಟ್ ನಿರ್ಧರಿಸಿರುವುದು ತಿಳಿದುಬಂದಿದೆ. ಈಗಾಗಲೇ ಕೆಲಸದಿಂದ ತೆಗೆದುಹಾಕಬಹುದಾದ ಉದ್ಯೋಗಿಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಕೆಲಸ ಕಳೆದುಕೊಳ್ಳಲಿರುವ ಉದ್ಯೋಗಿಗಳಿಗೆ ಫೆಬ್ರುವರಿ 24ರಿಂದಲೇ ನೋಟೀಸ್ ಕೊಡಲಾಗಲಿದೆ ಎಂದೂ ವರದಿ ಹೇಳುತ್ತಿದೆ.

ವಾಲ್ಟ್ ಡಿಸ್ನಿಯ ಟಿವಿ, ಸಿನಿಮಾ, ಥೀಮ್ ಪಾರ್ಕ್, ಕಾರ್ಪೊರೆಟ್ ಪೊಸಿಶನ್ ಮೊದಲಾದ ವಿಭಾಗಳಲ್ಲಿ ಲೇ ಆಫ್ ಮಾಡಲಾಗುತ್ತಿದೆ. ಡಿಸ್ನಿ ಕಾರ್ಯನಿರ್ವಹಿಸುವ ಎಲ್ಲಾ ಪ್ರದೇಶಗಳೂ ಈ ಜಾಬ್ ಕಟ್ ಬಾಧಿಸಲಿದೆ.

ವಾಲ್ಟ್ ಡಿಸ್ನಿ ಇಷ್ಟು ಉದ್ಯೋಗಿಗಳನ್ನು ಕೆಲಸದಿಂದ ಬಿಡಿಸುತ್ತಿರುವುದು ಯಾಕೆ?

ಉದ್ಯೋಗಿಕಡಿತ ಪ್ರಕ್ರಿಯೆಯಲ್ಲಿರುವ ಎಲ್ಲಾ ಕಂಪನಿಗಳಂತೆ ವಾಲ್ಟ್ ಡಿಸ್ನಿ ಕೂಡ ಆರ್ಥಿಕ ದುಸ್ಥಿತಿಯ ಕಾರಣಕ್ಕೆ ವೆಚ್ಚ ಕಡಿತಗೊಳಿಸುವ ದೃಷ್ಟಿಯಿಂದ ಸಿಬ್ಬಂದಿ ಸಂಖ್ಯೆ ಕಡಿಮೆಗೊಳಿಸುತ್ತಿದೆ.

ಇದನ್ನೂ ಓದಿHurun Global Unicorn Index 2023: ಬೈಜುಸ್, ಸ್ವಿಗ್ಗಿ, ಡ್ರೀಮ್11 ಅಗ್ರಮಾನ್ಯ ಭಾರತೀಯ ಯೂನಿಕಾರ್ನ್ಸ್; ಗ್ಯಾಜೆಲೆಸ್ ಸ್ಟಾರ್ಟಪ್​ಗಳೂ ಭಾರತದಲ್ಲಿ ಹೆಚ್ಚಿವೆ

ವಾಲ್ಟ್ ಡಿಸ್ನಿಯ ಒಟ್ಟಾರೆ ವ್ಯವಹಾರದಲ್ಲಿ 5.5 ಬಿಲಿಯನ್ ಡಾಲರ್​ನಷ್ಟು (ಸುಮಾರು 45,000 ಕೋಟಿ ರೂ) ಹಣ ಒಂದು ವರ್ಷಕ್ಕೆ ವೆಚ್ಚವಾಗುತ್ತಿದೆ. ಆದಾಯ ಕಡಿಮೆ ಆಗಿರುವುದರಿಂದ ವೆಚ್ಚವನ್ನೂ ಕಡಿಮೆಗೊಳಿಸುವುದಾಗಿ ವಾಲ್ಟ್ ಡಿಸ್ನಿ ಕಂಪನಿ ಹೇಳಿಕೊಂಡಿದೆ. ಕಳೆದ ವರ್ಷದ ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಡಿಸ್ನಿಯ ಸ್ಟ್ರೀಮಿಂಗ್ ಬ್ಯುಸಿನೆಸ್​ನಲ್ಲಿ 1.47 ಬಿಲಿಯನ್ ಡಾಲರ್ ನಷ್ಟ ಅನುಭವಿಸಿತ್ತು. ಹೀಗಾಗಿ, ಉದ್ಯೋಗಕಡಿತದ ಪರ್ವ ಆರಂಭ ಮಾಡಿದೆ. ಈ ವರ್ಷದ ಆರಂಭದಲ್ಲಿ ಡಿಸ್ನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸಂಖ್ಯೆ 2,20,000 ಇತ್ತು. ಇದರಲ್ಲಿ 7,000 ಉದ್ಯೋಗಿಗಳನ್ನು ಕೆಲಸದಿಂದ ಬಿಡುಸುತ್ತಿರುವುದಾಗಿ ವಾಲ್ಟ್ ಡಿಸ್ನಿ ಫೆಬ್ರುವರಿಯಲ್ಲಿ ಘೋಷಿಸಿತ್ತು. ಏಪ್ರಿಲ್​ನಲ್ಲಿ 4,000 ಡಿಸ್ನಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿಗಳು ಮಾರ್ಚ್​ನಲ್ಲಿ ಪ್ರಕಟವಾಗಿದ್ದವು. ಈಗ ಅದು ನಿಜವಾಗುತ್ತಿದೆ.

ಡಿಸ್ನಿ ಎಂಟರ್ಟೈನ್ಮೆಂಟ್ ವಿಭಾಗದಲ್ಲಿ ಯಾಕೆ ಹೆಚ್ಚು ಉದ್ಯೋಗ ಕಡಿತ?

ವಾಲ್ಟ್ ಡಿಸ್ನಿ ತನ್ನ ವ್ಯವಹಾರ ಗುರಿಯನ್ನು ಪರಿಷ್ಕರಿಸಿದೆ. ಅದಕ್ಕೆ ತಕ್ಕಂತೆ ಸಂಘಟನೆಯಲ್ಲಿ ಬದಲಾವಣೆ ತರುತ್ತಿದೆ. ಜನರಲ್ ಎಂಟರ್ಟೈನ್ಮೆಂಟ್ ಬದಲು ಫ್ರಾಂಚೈಸಿ ಪ್ರಾಪರ್ಟಿಗಳು ಮತ್ತು ಜನಪ್ರಿಯ ಬ್ರ್ಯಾಂಡ್​ಗಳತ್ತ ಹೆಚ್ಚು ಗಮನ ಕೊಡುತ್ತಿದೆ. ಹೀಗಾಗಿ, ಡಿಸ್ನಿಯ ಎಂಟರ್ಟೈನ್ಮೆಂಟ್ ವಿಭಾಗದಲ್ಲಿ ಹೆಚ್ಚು ಜಾಬ್ ಕಟ್ ಆಗುತ್ತಿದೆ.

ಇದನ್ನೂ ಓದಿIndia Digital Story: ಜಿ20 ರಾಷ್ಟ್ರಗಳನ್ನು ಆಕರ್ಷಿಸುತ್ತಿರುವ ಭಾರತದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ: ಕ್ಯುಆರ್ ಕೋಡ್‌ಗಳ ಚಮತ್ಕಾರ

ಇನ್ನು, ವಾಲ್ಟ್ ಡಿಸ್ನಿ ಕಂಪನಿ ತನ್ನ ಸ್ಟ್ರೀಮಿಂಗ್ ಬ್ಯುಸಿನೆಸ್ ಬದಲು ಆನ್​ಲೈನ್ ವಿಡಿಯೋ ಪ್ಲಾಟ್​ಫಾರ್ಮ್​ನತ್ತ ಗಮನ ಹೆಚ್ಚು ಹರಿಸುತ್ತಿದೆ. ಕಳೆದ ವರ್ಷ ಡಿಸ್ನಿಗೆ ಸ್ಟ್ರೀಮಿಂಗ್ ವ್ಯವಹಾರದಲ್ಲಿ ಬಹಳ ನಷ್ಟವಾಗಿತ್ತು. ಅದರ ಪರಿಣಾಮವಾಗಿ ಬಾಬ್ ಐಗರ್ ಅವರು ವಾಲ್ಟ್ ಡಿಸ್ನಿಯ ಸಿಇಒ ಆಗಿ ಬಂದರು. ಅವರ ಆಗಮನದ ಬಳಿಕ ವಾಲ್ಟ್ ಡಿಸ್ನಿಯಲ್ಲಿ ಉದ್ಯೋಗಕಡಿತದ ಪರ್ವ ಆರಂಭವಾಗಿದೆ. ಹಾಗೆಯೇ, ಡಿಸ್ನಿಯ ವ್ಯವಹಾರ ಕ್ರಮವೂ ಬದಲಾಗುತ್ತಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ