AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಆ್ಯಪ್​ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪೇಮೆಂಟ್ ಆಗಲ್ಲ: ಆರ್​ಬಿಐ ಕತ್ತರಿ

RBI's new rules on Rent Payment using Credit Card: ಕ್ರೆಡ್, ಫೋನ್​ಪೇ ಇತ್ಯಾದಿ ಫಿನ್​ಟೆಕ್ ಪ್ಲಾಟ್​ಫಾರ್ಮ್​ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ರೆಂಟ್ ಪಾವತಿಸಬಹುದಿತ್ತು. ಪಾವತಿದಾರರಿಗೆ ರಿವಾರ್ಡ್ ಪಾಯಿಂಟ್ಸ್ ಕೂಡ ಸಿಗುತ್ತಿತ್ತು. ಆದರೆ, ಆರ್​ಬಿಐನ ಹೊಸ ನಿಯಮದಿಂದಾಗಿ ಈ ರೆಂಟ್ ಪೇಮೆಂಟ್ ಅವಕಾಶ ಇಲ್ಲದಂತಾಗಿದೆ. ವೆರಿಫೈ ಆದ ವರ್ತಕರಿಗೆ ಮಾತ್ರ ಇಂಥ ರೆಂಟ್ ಪಾವತಿಗೆ ಅವಕಾಶ ಇರುತ್ತದೆ.

ಯುಪಿಐ ಆ್ಯಪ್​ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪೇಮೆಂಟ್ ಆಗಲ್ಲ: ಆರ್​ಬಿಐ ಕತ್ತರಿ
ಯುಪಿಐ ಪಾವತಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 19, 2025 | 3:20 PM

Share

ನವದೆಹಲಿ, ಸೆಪ್ಟೆಂಬರ್ 19: ಬಾಡಿಗೆ ಹಣ ಸಂದಾಯ ಮಾಡುವ ಸಂಬಂಧ ಆರ್​ಬಿಐ ಇತ್ತೀಚೆಗೆ ಒಂದು ನಿಯಮ ಬದಲಾವಣೆ ಮಾಡಿದೆ. ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಆ್ಯಪ್​ಗಳ ಮೂಲಕ ರೆಂಟ್ ಪೇಮೆಂಟ್ ಮಾಡುವ ಅವಕಾಶ ಇದರೊಂದಿಗೆ ಕೈತಪ್ಪಿದಂತಾಗಿದೆ. ಆರ್​ಬಿಐ ಸೆಪ್ಟೆಂಬರ್ 15ರಂದು ಹೊಸ ನಿಯಮ ತಂದ ಬಳಿಕ ಫೋನ್ ಪೇ, ಪೇಟಿಎಂ, ಕ್ರೆಡ್ ಇತ್ಯಾದಿ ಫಿನ್​ಟೆಕ್ ಪ್ಲಾಟ್​ಫಾರ್ಮ್​ಗಳು ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪಾವತಿಸುವ ಸೌಲಭ್ಯವನ್ನು ಹಿಂಪಡೆದಿವೆ.

ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪಾವತಿಸಿದ್ದರೆ ಪಾಯಿಂಟ್ಸ್ ಸಿಗ್ತಿತ್ತು…

ಕ್ರೆಡ್, ಫೋನ್ ಪೇ, ಪೇಟಿಎಂ ಇತ್ಯಾದಿ ಪ್ಲಾಟ್​ಫಾರ್ಮ್​ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಹಣ ಪಾವತಿ ಮಾಡಿದರೆ ರಿವಾರ್ಡ್ ಪಾಯಿಂಟ್ಸ್ ಸಿಕ್ತಿತ್ತು. ಈ ಆಸೆಗೆ ಬಿದ್ದು ಅದು ಇತ್ತೀಚೆಗೆ ಟ್ರೆಂಡ್ ಆಗಿತ್ತು. ರಿವಾರ್ಡ್ಸ್ ಆಸೆಗೋಸ್ಕರ ಕ್ರೆಡಿಟ್ ಕಾರ್ಡ್ ಮೂಲಕ ಫಿನ್​ಟೆಕ್ ಆ್ಯಪ್​ಗಳ ಬಳಸಿ ರೆಂಟ್ ಪಾವತಿಸುತ್ತಿದ್ದವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿತ್ತು.

ಈಗ ರೆಂಟ್ ಪಾವತಿ ಸಂಬಂಧ ಆರ್​ಬಿಐ ಮಾಡಿದ ನಿಯವೇನು?

ಆರ್​ಬಿಐನ ಪರಿಷ್ಕೃತ ಮಾರ್ಗಸೂಚಿ ಪ್ರಕಾರ, ಕ್ರೆಡಿಟ್ ಕಾರ್ಡ್ ಬಳಸಿ ಯಾರಂದವರಿಗೆ ಪೇಮೆಂಟ್ ಮಾಡಲಾಗುವುದಿಲ್ಲ. ನೇರ ಒಪ್ಪಂದ ಹೊಂದಿರುವ ವರ್ತಕರಿಗೆ ಮಾತ್ರ ಪೇಮೆಂಟ್ ಮಾಡಲು ಅವಕಾಶ ಕೊಡುವಂತೆ ಪೇಮೆಂಟ್ ಅಗ್ರಿಗೇಟರ್ಸ್ ಮತ್ತು ಪೇಮೆಂಟ್ ಗೇಟ್​ವೇ ಸಂಸ್ಥೆಗಳಿಗೆ ಆರ್​ಬಿಐ ಸೂಚಿಸಿದೆ.

ಇದನ್ನೂ ಓದಿ: Income Tax Refund Delay: ಇನ್ನೂ ರೀಫಂಡ್ ಬಂದಿಲ್ಲವಾ? ಏನು ಕಾರಣ? ಬಡ್ಡಿ ಸಮೇತ ಸಿಗುತ್ತಾ ಹಣ?

ಫಿನ್​ಟೆಕ್ ಕಂಪನಿಗಳು ಸರಿಯಾದ ಕೆವೈಸಿ ಪರಿಶೀಲನೆ ಮಾಡುತ್ತಿಲ್ಲ. ಒಂದು ರೀತಿಯಲ್ಲಿ ಅನಿಯಂತ್ರಿತ ಸ್ಥಳವಾಗಿದೆ ಎಂಬುದು ಆರ್​ಬಿಐನ ಆತಂಕ. ಅದೇ ಕಾರಣಕ್ಕೆ ನಿಯಮ ಬಿಗಿಗೊಳಿಸಿದೆ.

ಈಗ ಹೆಚ್ಚಿನ ಮನೆ ಅಥವಾ ಕಟ್ಟಡ ಮಾಲೀಕರು ವರ್ತಕರಾಗಿ ನೊಂದಾಯಿಸಿಕೊಂಡಿರುವುದಿಲ್ಲ. ಹೀಗಾಗಿ, ಅವರ ಅಕೌಂಟ್​ಗೆ ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಲು ಸಾಧ್ಯವಾಗುವುದಿಲ್ಲ.

ಆರ್​ಬಿಐನ ಈ ಪರಿಷ್ಕೃತ ನಿಯಮ ಜಾರಿಗೆ ಬರುವ ಮುನ್ನವೇ ಈ ಕ್ರೆಡಿಟ್ ಕಾರ್ಡ್ ಟ್ರಾನ್ಸಾಕ್ಷನ್​ಗಳಿಗೆ ಕಡಿವಾಣ ಹಾಕಲು ಕೆಲ ಬ್ಯಾಂಕುಗಳು ಕ್ರಮ ತೆಗೆದುಕೊಂಡಿದ್ದವು. ಕಳೆದ ವರ್ಷ ಎಚ್​ಡಿಎಫ್​ಸಿ ಬ್ಯಾಂಕು ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುವ ರೆಂಟ್ ಪೇಮೆಂಟ್ ಮೇಲೆ ಶೇ. 1ರವರೆಗೆ ಶುಲ್ಕ ವಿಧಿಸಲು ಆರಂಭಿಸಿತು. ಐಸಿಐಸಿಐ ಬ್ಯಾಂಕು ಹಾಗೂ ಎಸ್​ಬಿಐ ಕಾರ್ಡ್ ಕಂಪನಿಗಳು ಕೂಡ ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಮಾಡಲಾಗುವ ರೆಂಟ್ ಪಾವತಿಗೆ ರಿವಾರ್ಡ್ ಪಾಯಿಂಟ್ಸ್ ಕೊಡುವುದನ್ನು ನಿಲ್ಲಿಸಿದ್ದವು.

ಇದನ್ನೂ ಓದಿ: ಇಪಿಎಫ್​ಒನಲ್ಲಿ ಹೊಸ ಫೀಚರ್ಸ್; ಪಾಸ್​ಬುಕ್ ಲೈಟ್, ಟ್ರಾನ್ಸ್ಫರ್ ಸರ್ಟಿಫಿಕೇಟ್, ತ್ವರಿತ ಅನುಮೋದನೆ

ಫೋನ್​ಪೆ, ಪೇಟಿಎಂ, ಅಮೇಜಾನ್ ಪೇ ಮೊದಲಾದ ಫಿನ್​ಟೆಕ್ ಪ್ಲಾಟ್​ಫಾರ್ಮ್​ಗಳು ಕಳೆದ ವರ್ಷವೇ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪೇಮೆಂಟ್ ಮಾಡುವ ಅವಕಾಶವನ್ನು ನಿಲ್ಲಿಸಿದ್ದವು. ಕ್ರೆಡ್​ನಂತಹ ಕೆಲ ಪ್ಲಾಟ್​ಫಾರ್ಮ್​ಗಳಲ್ಲಿ ಇದು ಮುಂದುವರಿದಿತ್ತು.

ಈಗ ರೆಂಟ್ ಪೇಮೆಂಟ್ ಹೇಗೆ ಮಾಡುವುದು?

ವ್ಯಕ್ತಿಯಿಂದ ವ್ಯಕ್ತಿಗೆ ಕಳುಹಿಸಲಾಗುವ ಯುಪಿಐ ಮೂಲಕ ಬಾಡಿಗೆ ಹಣ ಪಾವತಿಸಬಹುದು. ಅಥವಾ ಕ್ಯಾಷ್, ನೆಟ್​ಬ್ಯಾಂಕಿಂಗ್, ಚೆಕ್ ಇತ್ಯಾದಿ ಮೂಲಕ ಪಾವತಿಸಬಹುದು. ಆದರೆ, ಇವುಗಳಿಂದ ರಿವಾರ್ಡ್ ಪಾಯಿಂಟ್ಸ್ ಸಿಗುವುದಿಲ್ಲ ಅಷ್ಟೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?