AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿಯ ಬಯಕೆ ತೀರಿಸಲು ಹೋಗಿ ಗೋವಾ ಬೀಚ್‌ನಲ್ಲಿ ಸಿಕ್ಕಿಬಿದ್ದ ಬೆಂಗಳೂರಿನ ಯುವಕ

ಪ್ರೇಯಸಿ ಗೋವಾ ಹುಚ್ಚಿಗೆ ಪ್ರೇಮಿ ತನ್ನ ಮನೆಯಲಿದ್ದ ಚಿನ್ನ ಎಗರಿಸಿದ್ದಾನೆ. ಬಳಿಕ ಗೋವಾ ಬೀಚ್​ನಲ್ಲಿ ಲವರ್ ಜತೆ ಜಾಲಿ ಮಾಡುತ್ತಿರುವಾಗ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರೇಯಸಿಯ ಬಯಕೆ ತೀರಿಸಲು ಹೋಗಿ ಗೋವಾ ಬೀಚ್‌ನಲ್ಲಿ ಸಿಕ್ಕಿಬಿದ್ದ ಬೆಂಗಳೂರಿನ ಯುವಕ
ಪ್ರೇಯಸಿ ಗೋವಾ ಆಸೆಗೆ ಮನೆಯಲಿದ್ದ ಚಿನ್ನ ಕದ್ದ
TV9 Web
| Edited By: |

Updated on:Dec 27, 2022 | 10:56 PM

Share

ಬೆಂಗಳೂರು: ಆತ ಉಂಡಾಡಿ ಗುಂಡ.. ಮಾಡುವುದಕ್ಕೆ ಕೆಲಸವಿಲ್ಲದೇ ಏರಿಯಾ ಸುತ್ತಾಡಿಕೊಂಡು ಮನೆಲ್ಲಿದ್ದ. ಆದ್ರೂ ಈತನಿಗೆ ಒಬ್ಬಳು ಪ್ರೇಯಿಸಿಯಿದ್ದಳು. ಆ ಪ್ರೇಯಸಿಯ ಆಸೆ ತೀರಿಸಲು ಹೋದ ಪ್ರೇಮಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ: ಕನಕಪುರ: ಅವಿವಾಹಿತನ ಜೊತೆ ವಿವಾಹಿತೆಯ ಆಕ್ರಮ ಸಂಬಂಧ, ಕೊನೆಗೆ ಆ ವಿವಾಹಿತೆಯ ಕಾಟ ತಾಳದೆ ಹತ್ಯೆ ಮಾಡಿದ!

ಹೌದು.. ಆರೋಪಿಯ ಹೆಸರು ಮಹಮ್ಮದ್ ಇರ್ಫಾನ್. ಬೆಂಗಳೂರಿನ ಆಡುಗೋಡಿ ನಿವಾಸಿ. ತಾಯಿ, ಅಣ್ಣ ಹಾಗೂ ಅತ್ತಿಗೆ ಜೊತೆ ಇರುವ ಈತ, ಮೂರು ಹೊತ್ತು ತಿನ್ನೋದು. ಉಂಡಾಡಿ ಗುಂಡನಂತೆ ಪ್ರೇಯಿಸಿ ಜೊತೆ ಸುತ್ತೋದಷ್ಟೇ ಕಾಯಕ. ಹೀಗೆ ಒಮ್ಮೆ ಪ್ರೇಯಸಿಗೆ ಏನ್​ ಬೇಕು ಅಂತ ಕೇಳಿದ್ದಾನೆ. ಅವಳು ಗೋವಾಗೆ ಹೋಗೋ ಆಸೆ ವ್ಯಕ್ತಪಡಿಸಿದ್ದಾಳೆ.

ಆದ್ರೆ, ಕೈಲಿ ನಯಾಪೈಸೆ ಇಲ್ಲದ ಇರ್ಫಾನ್, ತಾನಿದ್ದ ಮನೆಗೆ ಕನ್ನ ಹಾಕಿದ್ದಾನೆ. ರಾತ್ರಿ ಎಲ್ಲರೂ ಮಲಗಿದ್ದ ವೇಳೆ 103 ಗ್ರಾಮ್ ಚಿನ್ನಾಭರಣ ಎಗರಿಸಿದ್ದಾನೆ. ಬಳಿಕ ಗಿರವಿ ಅಂಗಡಿಯಲ್ಲಿಟ್ಟು, ಲಕ್ಷ ಲಕ್ಷ ಹಣ ತೆಗೆದುಕೊಂಡು ಪ್ರೇಯಸಿ ಜೊತೆ ಗೋವಾಗೆ ಜೂಟ್ ಆಗಿದ್ದಾನೆ.

ಗೋವಾ ಬೀಚ್‌ನಲ್ಲಿ ತಗ್ಲಾಕೊಂಡ

ಮನೆಯಲ್ಲಿರೋ ಚಿನ್ನಾಭರಣ ಕಾಣೆಯಾಗ್ತಿದ್ದಂತೆ ಇರ್ಫಾನ್ ಅಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಗೆ ಬಂದು ಮಹಜರ್ ಮಾಡಿದ ಪೊಲೀಸರಿಗೆ, ಮನೆಯಲ್ಲಿ ಕಾಣದ ಇರ್ಫಾನ್ ಮೇಲೆ ಡೌಟ್ ಬಂದಿದೆ. ಆಗ ಮನೆಯವರು ಗೆಳೆಯರ ಜೊತೆ ಗೋವಾಕ್ಕೆ ಹೋಗಿರುವುದಾಗಿ ಹೇಳಿದ್ದಾರೆ. ಆಗ ಪೊಲೀಸರ ಅನುಮಾನ ಮತ್ತಷ್ಟು ನಿಜವಾಗಿದೆ. ಕೂಡಲೇ ತಂಡ ರಚನೆ ಮಾಡಿ ಗೋವಾಕ್ಕೆ ತೆರಳಿದ ಪೊಲೀಸರು ಇರ್ಫಾನ್‌ನನ್ನ ಪತ್ತೆ ಹಚ್ಚಿದ್ದಾರೆ. ಪ್ರೇಯಸಿ ಜೊತೆ ಗೋವಾ ಬೀಚ್‌ನಲ್ಲಿ ಅಲೆದಾಡುತ್ತಿದ್ದ ಚೋರ ಇರ್ಫಾನ್ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾನೆ.

ಗೋವಾದಿಂದ ಇರ್ಫಾನ್‌ನನ್ನ ಕರೆತಂದ ಪೊಲೀಸರು, ಆತ ಗಿರವಿಯಿಟ್ಟಿದ್ದ ಚಿನ್ನವನ್ನು ರಿಕವರಿ ಮಾಡಿದ್ದಾರೆ. ಆದ್ರೆ ಪ್ರೇಯಸಿಯ ಬಯಕೆ ತೀರಿಸಲು ತಾನಿದ್ದ ಮನೆಗೆ ಕನ್ನ ಹಾಕಿ, ಪೊಲೀಸರ ಅತಿಥಿಯಾಗಿರೋದು ವಿಪರ್ಯಾಸ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:21 pm, Tue, 27 December 22

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ