ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ ಬಂಧನ

ಮೇ 26ರಂದು ಕುಡಿದ ಅಮಲಿನಲ್ಲಿ ಸ್ನೇಹಿತ ನಾರಾಯಣಸ್ವಾಮಿನಿಗೆ (35) 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ ಚಂದ್ರನನ್ನು  ಬಾಗಲೂರು ಠಾಣೆಯ ಪೊಲೀಸ್​ರು ಬಂಧಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ ಬಂಧನ
ಪ್ರಾತಿನಿಧಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Jun 27, 2022 | 5:13 PM

ಬೆಂಗಳೂರು: ಮೇ 26ರಂದು ಕುಡಿದ (Drink) ಅಮಲಿನಲ್ಲಿ ಸ್ನೇಹಿತ ನಾರಾಯಣಸ್ವಾಮಿಗೆ (35) 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ (Murder) ಮಾಡಿದ್ದ ಆರೋಪಿ (Accused) ಚಂದ್ರನನ್ನು  ಬಾಗಲೂರು ಠಾಣೆಯ ಪೊಲೀಸ್​ರು (Police) ಬಂಧಿಸಿದ್ದಾರೆ. ನಾರಾಯಣಸ್ವಾಮಿ, ಚಂದ್ರ ಇಬ್ಬರು ಗಾರೆ ಕೆಲಸ ಮಾಡುತ್ತಿದ್ದರು. ಚಂದ್ರನು ಕುಡಿದ ಅಮಲಿನಲ್ಲಿ ಸ್ನೇಹಿತ ನಾರಾಯಣಸ್ವಾಮಿ ಜೊತೆ ಜಗಳವಾಡಿಕೊಂಡಿದ್ದನು. ಜಗಳ ತಾರಕಕ್ಕೇರಿ ಚಂದ್ರ ನಾರಾಯಣಸ್ವಾಮಿಯನ್ನು ಕೊಲೆ ಮಾಡಿದ್ದನು. ಚಂದ್ರ 6 ತಿಂಗಳ ಹಿಂದೆ ಹೆಂಡತಿ ಜತೆಗೂ ಜಗಳವಾಡಿ ಹೆಂಡತಿಯನ್ನು ಮನೆಯಿಂದ ಓಡಿಸಿದ್ದನು.

ಇದನ್ನು ಓದಿ: ಬೆಂಗಳೂರು: ಜಿಎಸ್​​ಟಿ ಕಚೇರಿ ಕಟ್ಟಡದಿಂದ ಜಿಗಿದು ಆಫೀಸ್​ ಬಾಯ್ ಆತ್ಮಹತ್ಯೆ

ಚಂದ್ರ ಮೇ 26ರಂದು ಮನೆಯಲ್ಲಿ ಮದ್ಯ ಸೇವನೆ ವೇಳೆ ನಾರಾಯಣಸ್ವಾಮಿ ಜೊತೆ ಜಗಳವಾಡಿ ಚಾಕುವಿನಿಂದ ಇರಿದು ಕೊಂದು ಶವ ಬಿಟ್ಟು ಪರಾರಿಯಾಗಿದ್ದನು. ಆಟವಾಡುತ್ತಿದ್ದ ಮಕ್ಕಳು ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ನೇಹಿತರು 4 ವರ್ಷಗಳ ಹಿಂದೆಯೂ ಜಗಳವಾಡಿಕೊಂಡಿದ್ದರು. ಠಾಣೆ ಮೆಟ್ಟಿಲೇರಿದ ನಂತರ ಚಂದ್ರ, ನಾರಾಯಣಸ್ವಾಮಿ ಒಂದಾಗಿದ್ದರು. ಮತ್ತೆ ಕುಡಿದ ಮತ್ತಿನಲ್ಲಿ ಜಗಳವಾಡಿಕೊಂಡು ಒಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.

ಇದನ್ನು ಓದಿ: ಆಕ್ಸಿಡೆಂಟ್ ಎಂದು ಬಿಂಬಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್; ಮದ್ಯ ಕುಡಿಸಿ ಸ್ನೇಹಿತನನ್ನೇ ಕೊಲೆಗೈದಿದ್ದ ಆರೋಪಿಗಳು ಅರೆಸ್ಟ್!

ಮೈಸೂರಿನಲ್ಲಿ ನೀರಿನ ತೊಟ್ಟಿಗೆ ಬಿದ್ದು ಬಾಲಕಿ ಸಾವು

ಮೈಸೂರು: ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ನೀರಿನ ತೊಟ್ಟಿಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ನಗರದ ಹೆಬ್ಬಾಳ ಬಡಾವಣೆಯಲ್ಲಿ ನಡೆದಿದೆ. ಮಹಾಲಕ್ಷ್ಮೀ (3) ಮೃತ ದುರ್ದೈವಿ. ಮಹಾಲಕ್ಷ್ಮೀ ತಮಿಳುನಾಡು ಮೂಲದ ದಂಪತಿಯ ಪುತ್ರಿಯಾಗಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loading...
Unable to load recommendations.
Follow Us