AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿಯನ್ನು ಕೊಂದು ಪಾಪ ಕಳೆದುಕೊಳ್ಳಲು ಗಂಗಾ ನದಿಯಲ್ಲಿ ಮುಳುಗಿದ ಯುವಕ!

ಉತ್ತರ ಪ್ರದೇಶದ ವ್ಯಕ್ತಿ ಗಂಗಾ ನದಿಯಲ್ಲಿ ಸ್ನಾನ ಮಾಡಿ, ಜೌನ್‌ಪುರದಲ್ಲಿ ಪಾಪಮುಕ್ತಿಗಾಗಿ ಗಂಗಾ ನದಿಯಲ್ಲಿ ಮುಳುಗಿದ್ದಾನೆ. ಮೃತಳನ್ನು ವಾರಾಣಸಿ ಜಿಲ್ಲೆಯ ರೋಹಾನಿಯಾ ಪೊಲೀಸ್ ಠಾಣೆ ಪ್ರದೇಶದ ಮುರದಿಯೊ ಗ್ರಾಮದ ಜೈ ಕುಮಾರ್ ನಿಶಾದ್ ಅವರ ಪುತ್ರಿ 25 ವರ್ಷದ ಅನನ್ಯ ಸಹಾನಿ ಎಂದು ಗುರುತಿಸಲಾಗಿದೆ.

ಪ್ರೇಯಸಿಯನ್ನು ಕೊಂದು ಪಾಪ ಕಳೆದುಕೊಳ್ಳಲು ಗಂಗಾ ನದಿಯಲ್ಲಿ ಮುಳುಗಿದ ಯುವಕ!
Up Man Takes Dip In Ganga
ಸುಷ್ಮಾ ಚಕ್ರೆ
|

Updated on: Mar 02, 2025 | 10:19 PM

Share

ನವದೆಹಲಿ: ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಮೇಲೆ ಕಬ್ಬಿಣದ ರಾಡ್‌ನಿಂದ ಹೊಡೆದು, ಆಕೆಯನ್ನು ಕೊಂದು ಆಕೆಯ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದಿದ್ದಾನೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡ ಜೌನ್‌ಪುರ ಪೊಲೀಸರು ಆರಂಭದಲ್ಲಿ ಇದನ್ನು ಅಪರಿಚಿತ ಶವ ಎಂದು ಪರಿಗಣಿಸಿದ್ದರು. ಆದರೆ, ಬಳಿಕ ಈ ಕೊಲೆಯ ಜಾಡು ಹಿಡಿದು, ಈ ಪ್ರಕರಣವನ್ನು ಒಂದೇ ದಿನದೊಳಗೆ ಭೇದಿಸಿದ್ದಾರೆ. ಶುಕ್ರವಾರ ಜೌನ್‌ಪುರ ನಗರದ ಜೆಸಿಯ ಕ್ರಾಸ್‌ರೋಡ್ಸ್ ಮತ್ತು ವಾಜಿದ್‌ಪುರ ಛೇದಕದ ನಡುವಿನ ಕಮಲಾ ಆಸ್ಪತ್ರೆಯ ಮುಂಭಾಗದ ಕಸದ ರಾಶಿಯ ಬಳಿ ಪೊದೆಗಳ ನಡುವೆ ಸಿಕ್ಕಿದ ಕೆಂಪು ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು.

ಆ ಶವ ಪತ್ತೆಯಾದ ನಂತರ, ಪೊಲೀಸ್ ವರಿಷ್ಠಾಧಿಕಾರಿ ಡಾ. ಕೌಸ್ತುಭ್ ಕೊಟ್ವಾಲಿ ನಗರ ನಿರೀಕ್ಷಕ-ಪ್ರಭಾರಿ ಮಿಥಿಲೇಶ್ ಕುಮಾರ್ ಮಿಶ್ರಾ ಮತ್ತು ಅವರ ತಂಡಕ್ಕೆ ತಕ್ಷಣದ ತನಿಖೆಯನ್ನು ಪ್ರಾರಂಭಿಸಲು ಆದೇಶಿಸಿದರು. ಪೊಲೀಸರು ಅಪರಾಧ ಸ್ಥಳದ ಸುತ್ತಮುತ್ತಲಿನ ಮತ್ತು ಇತರ ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಕೊಲೆಯ ಸುಳಿವು ಕಂಡುಬಂದಿತ್ತು.

ಇದನ್ನೂ ಓದಿ: ಮಧ್ಯರಾತ್ರಿ 3 ಗಂಟೆಗೆ ಎಂಟ್ರಿ ಕೊಡುತ್ತೆ ಬೆಡ್ ಶೀಟ್ ಗ್ಯಾಂಗ್: ಬೆಚ್ಚಿಬಿದ್ದ ಹೊಸಕೋಟೆ ಜನರು

ಮೃತಳನ್ನು ವಾರಾಣಸಿ ಜಿಲ್ಲೆಯ ರೋಹನಿಯಾ ಪೊಲೀಸ್ ಠಾಣೆ ಪ್ರದೇಶದ ಮುರದೇವ್ ಗ್ರಾಮದ ಜೈ ಕುಮಾರ್ ನಿಶಾದ್ ಅವರ ಪುತ್ರಿ 25 ವರ್ಷದ ಅನನ್ಯಾ ಸಹಾನಿ ಎಂದು ಗುರುತಿಸಲಾಗಿದೆ. ಅನನ್ಯಾ ಜೌನ್‌ಪುರದ ಸ್ಟೈಲ್ ಬಜಾರ್ ಶಾಪಿಂಗ್ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ಮಚ್ಲಿಶಹರ್ ಪದವ್ ಬಳಿಯ ಮಾಲಿಪುರದ ವಕೀಲರ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಳು.

ವರದಿಗಳ ಪ್ರಕಾರ, ಪೊಲೀಸರು ಮಧ್ಯಾಹ್ನ 2.30ರ ಸುಮಾರಿಗೆ ಜೌನ್‌ಪುರ ಜಂಕ್ಷನ್ (ಭಂಡಾರಿ ರೈಲ್ವೆ ನಿಲ್ದಾಣ)ನಿಂದ ಆರೋಪಿ ವಿಶಾಲ್ ಸಹಾನಿಯನ್ನು ಬಂಧಿಸಿದರು. ಅನನ್ಯಾ ಮತ್ತು ವಿಶಾಲ್ ಅವರ ಮದುವೆಗೆ ಮೊದಲು 2019ರಿಂದ ಪ್ರಣಯ ಸಂಬಂಧದಲ್ಲಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಅವರ ಕುಟುಂಬಕ್ಕೆ ಅವರ ಸಂಬಂಧದ ಬಗ್ಗೆ ತಿಳಿದಾಗ, ಅವರು ವಾರಾಣಸಿಯ ಇನ್ನೊಬ್ಬ ಯುವಕನೊಂದಿಗೆ ಅವರ ಮದುವೆಯನ್ನು ಏರ್ಪಡಿಸಿದರು. ಆದರೆ, ಮದುವೆಯ ನಂತರವೂ ಇವರಿಬ್ಬರೂ ಭೇಟಿಯಾಗುತ್ತಲೇ ಇದ್ದರು. ಇದರಿಂದಾಗಿ ಆಕೆಯ ಪತಿ ಸುಮಾರು 3 ವರ್ಷಗಳ ಹಿಂದೆ ಅನನ್ಯಾಳನ್ನು ಬಿಟ್ಟಿದ್ದ.

ಇದನ್ನೂ ಓದಿ: ದೃಶ್ಯಂ ಸಿನಿಮಾ ಶೈಲಿಯಲ್ಲೇ ಕೊಲೆ; 13 ತಿಂಗಳ ಬಳಿಕ ರಹಸ್ಯ ಬಯಲು

ಅನನ್ಯಾ ವಿಶಾಲ್ ಅವರನ್ನು ಮದುವೆಯಾಗಲು ಬಯಸಿದ್ದಳು. ಆದರೆ ಅವರ ಕುಟುಂಬವು ಈ ಸಂಬಂಧವನ್ನು ವಿರೋಧಿಸಿತು. ಇದರಿಂದ ಅವರು ಮನೆ ಬಿಟ್ಟು ಜೌನ್‌ಪುರಕ್ಕೆ ಹೋದರು. ಅಲ್ಲಿ ಅವರು ಕೆಲಸ ಮಾಡಲು ಪ್ರಾರಂಭಿಸಿದರು. ಫೆಬ್ರವರಿ 24ರಂದು, ವಿಶಾಲ್ ವಾರಾಣಸಿಯಿಂದ ಅನನ್ಯಾಳನ್ನು ಅವಳ ರೂಂನಲ್ಲಿ ಭೇಟಿಯಾಗಲು ಹೋದವರು ರಾತ್ರಿಯಿಡೀ ಅಲ್ಲಿಯೇ ಇದ್ದ. ಮರುದಿನ ಬೆಳಿಗ್ಗೆ, ಅವರ ನಡುವೆ ಜಗಳವಾಯಿತು. ಈ ಸಮಯದಲ್ಲಿ ಕೋಪಗೊಂಡ ವಿಶಾಲ್ ಅನನ್ಯಾಳ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದಾನೆ.

ಗಾಬರಿಗೊಂಡ ವಿಶಾಲ್ ದೇಹವನ್ನು ವಿಲೇವಾರಿ ಮಾಡಲು ಮತ್ತು ಸಾಕ್ಷ್ಯಗಳನ್ನು ನಾಶಮಾಡಲು ಪ್ಲಾನ್ ಮಾಡಿದನು. ಅವನು ಶವವನ್ನು ಸೂಟ್‌ಕೇಸ್‌ನಲ್ಲಿ ಇರಿಸಿ, ಇ-ರಿಕ್ಷಾವನ್ನು ಬಾಡಿಗೆಗೆ ಪಡೆದು, ಕಮಲಾ ಆಸ್ಪತ್ರೆಯ ಬಳಿ ಎಸೆದು ಮನೆಗೆ ಓಡಿಹೋದನು. ವರದಿಗಳ ಪ್ರಕಾರ, ಕೊಲೆ ಮಾಡಿದ ನಂತರ, ವಿಶಾಲ್ ಗಂಗಾನದಿಯಲ್ಲಿ ಸ್ನಾನ ಮಾಡಿ ದೇವರಿಂದ ಕ್ಷಮೆ ಯಾಚಿಸಲು ತಲೆ ಬೋಳಿಸಿಕೊಂಡನು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ