ಉತ್ತರ ಕನ್ನಡ: ಯುವಕನನ್ನ ಮಾರಕಾಸ್ತ್ರದಿಂದ ಕೊಚ್ಚಿ ಕೊಂದ ಮಾಜಿ ಸೈನಿಕ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 06, 2023 | 4:01 PM

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂಬರ್ 4ರಲ್ಲಿ ಮಾಜಿ ಸೈನಿಕನೊಬ್ಬ ಯುವಕನನ್ನು ಮಾರಾಕಾಸ್ತ್ರದಿಂದ ಕೊಚ್ಚಿ ಕೊಂದ ಘಟನೆ ನಡೆದಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಉತ್ತರ ಕನ್ನಡ: ಯುವಕನನ್ನ ಮಾರಕಾಸ್ತ್ರದಿಂದ ಕೊಚ್ಚಿ ಕೊಂದ ಮಾಜಿ ಸೈನಿಕ
ಮೃತ ವ್ಯಕ್ತಿ
Follow us on

ಉತ್ತರ ಕನ್ನಡ, ಸೆ.06: ಮಾಜಿ ಸೈನಿಕನೊಬ್ಬ ಯುವಕನನ್ನು ಮಾರಾಕಾಸ್ತ್ರದಿಂದ ಕೊಚ್ಚಿ ಕೊಂದ ಘಟನೆ ಉತ್ತರ ಕನ್ನಡ (Uttara kannada) ಜಿಲ್ಲೆಯ ಮುಂಡಗೋಡ (Mundgod) ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂಬರ್ 4ರಲ್ಲಿ ನಡೆದಿದೆ. ಡಾಕ್ಪಾ ಯಾನೆ ಲೋಬ್ಸಂಗ್(35)ಮೃತ ವ್ಯಕ್ತಿ. ಮಾಜಿ ಸೈನಿಕ ಗೊನಪೊ ತಿನ್ಲೆ ಚೊಡೆಕ್ ಎಂಬುವವನಿಂದ ಈ ಕೃತ್ಯ ನಡೆದಿದೆ. ಇನ್ನು ಈ ಇಬ್ಬರು ಮಧ್ಯ ಸೇವಿಸಿ ಗಲಾಟೆ ಮಾಡಿಕೊಂಡು ಬಳಿಕ ಮಾಜಿ ಸೈನಿಕ ಕೊಲೆ ಮಾಡಿದನಾ? ಎಂಬ ಅನುಮಾನ ಮೂಡಿದ್ದು, ಇದೀಗ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಬಳಿಕವೇ ಸತ್ಯಾಂಶ ತಿಳಿದು ಬರಿಬೇಕಿದೆ.

ಸಾಲಬಾದೆಯಿಂದ ರೈತಮಹಿಳೆ ಆತ್ಮಹತ್ಯೆ

ಹಾಸನ: ಸಾಲಬಾದೆ ತಾಳಲಾರದೇ ರೈತಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ತಾಲ್ಲೂಕಿನ ಸಾಲಗಾಮೆ ನರಸೀಪುರ ಗ್ರಾಮದಲ್ಲಿ ನಡೆದಿದೆ. ಸುಜಾತಾ (36) ಮೃತ ಮಹಿಳೆ. 20 ದಿನಗಳ ಹಿಂದೆ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಹಠಾತ್ ಹೃದಯಾಘಾತದಿಂದ ಪತಿ ಲೋಕೇಶ್ ಸಾವನ್ನಪ್ಪಿದ್ದರು. ಪತಿಯ ಸಾನಿನ ಬಳಿಕ, ಕೃಷಿಗೆಂದು ಮಾಡಿದ್ದ ಸಾಲದ ಬಗ್ಗೆ ಚಿಂತೆಗೀಡಾಗಿದ್ದ ಪತ್ನಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ:ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ; ಡಿಕೆ ಶಿವಕುಮಾರ್ ವಿವಾದಿತ ಹೇಳಿಕೆ

ವಿವಿಧ ಬ್ಯಾಂಕ್​ನಲ್ಲಿ 3 ಲಕ್ಷ ಸೇರಿ ಎಂಟು ಲಕ್ಷ ಸಾಲ ಮಾಡಿದ್ದ ಕುಟುಂಬ

ಇನ್ನು ಇವರ ಕುಟುಂಬ ವಿವಿಧ ಬ್ಯಾಂಕ್​​ಗಳಲ್ಲಿ ಮಾಡಿದ್ದ 3ಲಕ್ಷ ಸಾಲದ ಜೊತೆಗೆ ಒಟ್ಟು ಎಂಟು ಲಕ್ಷ ಸಾಲವಾಗಿತ್ತು. ಪತಿಯ ಹಠಾತ್ ಸಾವಿನಿಂದ ಆಘಾತಗೊಂಡಿದ್ದ ಮಹಿಳೆ. ದೊಡ್ಡ ಮೊತ್ತದ ಸಾಲದ ಹೊರೆ ಒಂದು ಕಡೆಯಾದರೇ, ಪತಿಯ ಅಗಲಿಕೆ ಇನ್ನೊಂದು ಕಡೆ. ಇದರಿಂದ ತೀವ್ರ ಮನನೊಂದಿದ್ದ ಮಹಿಳೆ ಈ ನಿರ್ಧಾರ ತೆಗದುಕೊಂಡಿದ್ದಾಳೆ. ಒಂದು ತಿಂಗಳ ಅಂತರದಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Wed, 6 September 23