AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿ ವಿಶೇಷ ದರ್ಶನ ಮಾಡಿಸುತ್ತೇನೆಂದು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್‌ ಧೋನಿ ಮ್ಯಾನೇಜರ್‌ಗೆ ವಂಚನೆ

ಕಳೆದ ವರ್ಷ ಅಕ್ಟೋಬರ್​​ 26 ರಂದು ಅಪರಿಚಿತ ವ್ಯಕ್ತಿಯೊಬ್ಬ ಎಮ್​ಎಸ್​ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್​ ಅವರಿಗೆ ಕರೆ ಮಾಡಿ ನಾನು ಎನ್​​. ಎಸ್​​ ನಕುಲ್​​ ಐಎಎಸ್ ಅಧಿಕಾರಿಯಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ಎಂದು ಪರಿಚಯಿಸಿಕೊಂಡಿದ್ದಾನೆ. ಮುಂದೇನಾಯ್ತು ಈ ಸ್ಟೋರಿ ಓದಿ..

ತಿರುಪತಿ ವಿಶೇಷ ದರ್ಶನ ಮಾಡಿಸುತ್ತೇನೆಂದು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್‌ ಧೋನಿ ಮ್ಯಾನೇಜರ್‌ಗೆ ವಂಚನೆ
ಎಮ್​ಎಸ್​ ಧೋನಿ, ಎಫ್​ಐಆರ್​​
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Feb 03, 2024 | 8:47 AM

Share

ಬೆಂಗಳೂರು, ಫೆಬ್ರವರಿ 03: ಭಾರತ ಪುರುಷರ ಕ್ರಿಕೆಟ್​ ತಂಡದ ಮಾಜಿ ನಾಯಕ ಎಮ್​​ಎಸ್​​ ಧೋನಿ (MS Dhoni) ಅವರ ಮ್ಯಾನೇಜರ್ ಅವರಿಗೆ ವಂಚಿಸಲಾಗಿದ್ದು, ಹೆಚ್​ಎಸ್​ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಿರುಪತಿಯಲ್ಲಿ (Tirupati) ವಿಶೇಷ ದರ್ಶನ ಮಾಡಿಸುತ್ತೇನೆ ಅಂತ ಹೇಳಿ ಎಮ್​ಎಸ್​ಧೋನಿ ಅವರ ಮ್ಯಾನೇಜರ್ ಸ್ಚಾಮಿನಾಥನ್ ಅವರಿಂದ  6.5 ಲಕ್ಷ ರೂ. ಪಡೆದು ವಂಚಿಸಲಾಗಿದೆ.

ಕಳೆದ ವರ್ಷ ಅಕ್ಟೋಬರ್​​ 26 ರಂದು ಅಪರಿಚಿತ ವ್ಯಕ್ತಿಯೊಬ್ಬ ಸ್ವಾಮಿನಾಥನ್​ ಅವರಿಗೆ ಕರೆ ಮಾಡಿ ನಾನು ಎನ್​​. ಎಸ್​​ ನಕುಲ್​​ ಐಎಎಸ್ ಅಧಿಕಾರಿಯಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನ್ಯಾಯಾಧೀಶರಾದ ಕೆಸಿ ಭಾನು ಅವರ ಮಗ ಸಂದೀಪ್​​ ಅವರು ಎಮ್​ಎಸ್​ ಧೋನಿ ಅವರನ್ನು ಭೇಟಿಯಾಗಬೇಕೆಂದು ನಕುಲ್​​ ಸ್ವಾಮಿನಾಥ್​ನ ಅವರಿಗೆ ಹೇಳಿದ್ದಾನೆ.

ನಂತರ ಅಕ್ಟೋಬರ್​ 29 ರಂದು ಸಂದೀಪ್​ ಹಾಗೂ ಆತನ ಸ್ನೇಹಿತ ಸಲ್ಮಾನ್ ಬೆಂಗಾಲ್​​ ಹೋಟೆಲ್​​ನಲ್ಲಿ ಸ್ವಾಮಿನಾಥನ್​ ಮತ್ತು ಎಮ್​ಎಸ್​ ಧೋನಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ತಿರುಪತಿ ವಿಶೇಷ ದರ್ಶನ ಮಾಡಿಸುತ್ತೇವೆ ಯಾವಾಗ ಬೇಕಾದರೂ ಕರೆ ಮಾಡಿ ಎಂದು ಹೇಳಿದ್ದಾರೆ. ಬಳಿಕ ನವೆಂಬರ್​ 11 ರಂದು ಸಂದೀಪ್​ ಸ್ವಾಮಿನಾಥನ್​ ಅವರಿಗೆ ಕರೆ ಮಾಡಿ “ವಿಶೇಷ ದರ್ಶನ 12 ಜನರಿಗೆ ನೀಡಲಾಗುವುದು ಎಂದು ತಿಳಿಸಿದ್ದಾನೆ.

ಇದನ್ನೂ ಓದಿ:  Salman Khan: ಸಲ್ಮಾನ್ ಖಾನ್ ಹೆಸರಲ್ಲಿ ವಂಚನೆ; ಎಚ್ಚರಿಕೆ ಕೊಟ್ಟ ಭಾಯಿಜಾನ್

ಆಗ ಸ್ವಾಮಿನಾಥನ್​​ ತಾನು ದುಬೈನಲ್ಲಿದ್ದೇನೆ ಬೇರೆ ಯಾರಿಗಾದರು ನೀಡಿ ಎಂದು ಹೇಳಿದ್ದಾರೆ. ಆಗ ಸಂದೀಪ್​ ನೀವೆ ಯಾರಿಗಾದರೂ ಪ್ರೊಟೋಕಾಲ್​ ಲೆಟರ್​ ನೀಡಿ ಎಂದು ಸ್ವಾಮಿನಾಥನ್​ ಅವರಿಗೆ ಅವರಿಗೆ ಹೇಳಿದ್ದಾನೆ. ಆಗ ಸ್ವಾಮಿನಾಥನ್​​ ಕೂಡ್ಲುಗೇಟ್​​ನಲ್ಲಿ ಶಾಲೆ ನಡೆಸುತ್ತಿರುವ ತಮ್ಮ ಸ್ನೇಹಿತ ವಿನೀತ್​ ಚಂದ್ರಶೇಖರ್​ ಅವರಿಗೆ ನೀಡಿ ಎಂದು ಹೇಳಿ ಹೇಳಿದ್ದಾರೆ. ನಂತರ ಡಿಸೆಂಬರ್​ 20 ರಂದು ನಾಗೇಶ್ವರ ರಾವ್​ ಎಂಬುವರು ವಿನೀತ್​​ ಚಂದ್ರಶೇಖರ್​ ಅವರಿಗೆ ಕರೆ ಮಾಡಿ ತಾನು ಸಚಿವೆ ನಿರ್ಮಲ ಸೀತಾರಾಮನ್​ ಅವರ ಪಿಎ ಎಂದು ಹೇಳಿದ್ದಾನೆ.

ಬಳಿಕ ಡೊನೇಷನ್​ ಮಾಡಲು ಇಚ್ಛೆಯಿದ್ದಲ್ಲಿ ಸಾಯಿ ಕ್ರಿಯೇಷನ್ ಟ್ರಸ್ಟ್​​ಗೆ ಹಣ ಹಾಕುವಂತೆ ವಿನೀತ್​ ಅವರಿಗೆ ನಾಗೇಶ್ವರ ರಾವ್​ ಹೇಳಿದ್ದಾನೆ. ಅದರಂತೆ ವಿನೀತ್​​ ಅವರು ಡಿಸೆಂಬರ್​​ 22 ರಂದು 3,33,333 ರೂಪಾಯಿಯನ್ನು ವರ್ಗಾವಣೆ ಮಾಡಿದ್ದಾರೆ. ನಂತರ ತಿರುಪತಿ ವಿಶೇಷ ದರ್ಶನ, ರೂಮ್​ ಹಾಗೂ ಇತ್ಯಾದಿ ಖರ್ಚುಗಳೆಂದು ಹೇಳಿ 3 ಲಕ್ಷ ರೂ. ಅನ್ನು ಗೂಗಲ್​ ಪೇ ಮಾಡಿಸಿಕೊಂಡಿದ್ದಾನೆ. ಕೆಲವು ದಿನಗಳ ಬಳಿಕ ಹಣ ಕೇಳಿದರೆ ಕೊಡುತ್ತೇನೆಂದು ಹೇಳುತ್ತಾ ಇದುವರೆಗೂ ಹಣ ನೀಡದೆ ಒಟ್ಟು 6,33,333 ರೂ. ಪಡೆದು ಮೋಸ ಮಾಡಿದ್ದಾರೆ ಎಂದು ಸ್ವಾಮಿನಾಥನ್​ ಅವರು ದೂರು ದಾಖಲಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:20 am, Sat, 3 February 24

ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ