AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬರ್ ಕ್ರೈಂ ತಡೆಯಲು ಬೆಂಗಳೂರು ಪೊಲೀಸರು ಯಶಸ್ವಿ; ವಂಚಕರ ಖಾತೆಗೆ ಹೋಗಬೇಕಿದ್ದ 48 ಕೋಟಿ ರೂಪಾಯಿ ವಾಪಸ್!

2020ರ ಡಿಸೆಂಬರ್​ 22ರಂದು ICR ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೋಲ್ಡನ್​ ಹವರ್ ಕಾನ್ಸೆಪ್ಟ್​ ಜಾರಿಗೊಳಿಸಿದ್ದರು.

ಸೈಬರ್ ಕ್ರೈಂ ತಡೆಯಲು ಬೆಂಗಳೂರು ಪೊಲೀಸರು ಯಶಸ್ವಿ; ವಂಚಕರ ಖಾತೆಗೆ ಹೋಗಬೇಕಿದ್ದ 48 ಕೋಟಿ ರೂಪಾಯಿ ವಾಪಸ್!
ಸೈಬರ್ ಕ್ರೈಂ
TV9 Web
| Edited By: |

Updated on:Jun 01, 2021 | 11:25 PM

Share

ಬೆಂಗಳೂರು: ಸೈಬರ್​ ಕ್ರೈಂ​ ಇನ್ಸಿಡೆಂಟ್​ ರಿಪೋರ್ಟ್​ ವ್ಯವಸ್ಥೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ವಿಧಾನದ ಮೂಲಕ ಸೈಬರ್​ ವಂಚಕರ ಖಾತೆಗೆ ಹೋಗಬೇಕಿದ್ದ ಹಣ ವಾಪಸ್ ಪಡೆಯಲಾಗಿದೆ. ಕಳೆದ ತಿಂಗಳಲ್ಲಿ ಬರೋಬ್ಬರಿ 48 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದೆ. 48 ಕೋಟಿ ಹಣ ಹಿಂಪಡೆದಿರುವ ಬೆಂಗಳೂರು ಪೊಲೀಸರು, ವಂಚಕರ ಖಾತೆಗೆ ಹೋಗಬೇಕಿದ್ದ ಹಣವನ್ನು ಉಳಿಸಿದ್ದಾರೆ. ದಾಖಲಾದ ಒಟ್ಟು 3175 ಪ್ರಕರಣಗಳ ಪೈಕಿ ವಂಚಕರ 1312 ಬ್ಯಾಂಕ್​ ಖಾತೆ ಫ್ರೀಜ್ ಮಾಡಲಾಗಿದೆ.

2020ರ ಡಿಸೆಂಬರ್​ 22ರಂದು ICR ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೋಲ್ಡನ್​ ಹವರ್ ಕಾನ್ಸೆಪ್ಟ್​ ಜಾರಿಗೊಳಿಸಿದ್ದರು. ಅದರಂತೆ ಸೈಬರ್​ ವಂಚನೆಯಾದ 1 ಗಂಟೆ ಅವಧಿ ಗೋಲ್ಡನ್​ ಹವರ್ ಆಗಿರಲಿದೆ. ಆ ಅವಧಿಯಲ್ಲಿ 112 ಸಂಖ್ಯೆಯ ಮೂಲಕ ಸೈಬರ್​ ವಂಚನೆ ದೂರು ನೀಡಬೇಕು. 112 ಸಂಖ್ಯೆಗೆ ಕರೆ ಮಾಡಿ ಸೂಕ್ತ ಮಾಹಿತಿ ನೀಡಿದರೆ ಸಾಕು. ಖಾತೆಯಿಂದ ಯಾವುದೇ ಹಣ ವರ್ಗಾವಣೆಯಾಗದಂತೆ ತಡೆ ನೀಡಲಾಗುತ್ತದೆ.

ಈ ಕ್ರಮದಿಂದ ವರ್ಗಾವಣೆಯಾದ ಹಣ ವಂಚಕರ ಖಾತೆಯಿಂದ ವಾಪಸ್ ಮೋಸಕ್ಕೆ ಒಳಗಾದವರ ಖಾತೆಗೆ ಬರುತ್ತದೆ. ಗೋಲ್ಡನ್ ಹವರ್​ ಸದ್ಬಳಕೆ ಮಾಡಿಕೊಂಡರೆ ವಂಚನೆಗೆ ತಡೆ ಒಡ್ಡಬಹುದು. ಇದರಿಂದ ಸೈಬರ್​ ವಂಚನೆಗೊಳಗಾಗುವುದನ್ನು ತಗ್ಗಿಸಲು ಸಾಧ್ಯವಿದೆ. ಹೀಗೆ ಈ ವಿಧಾನದ ಮೂಲಕ ಬರೋಬ್ಬರಿ 48 ಕೋಟಿ ರೂಪಾಯಿಯನ್ನು ವಾಪಸ್ ಪಡೆಯಲಾಗಿದೆ. ಇದರಿಂದ ICR ವ್ಯವಸ್ಥೆ ಪ್ರಾಯೋಗಿಕ ಹಂತದಲ್ಲೇ ಯಶಸ್ಸು ಸಾಧಿಸಿದಂತಾಗಿದೆ.

ಗೋಲ್ಡನ್ ಹವರ್ ವ್ಯವಸ್ಥೆ ಬಳಸುವುದು ಹೀಗೆ:

– ನಿಮಗೆ ಯಾವುದೇ ರೀತಿಯ ಸೈಬರ್ ವಂಚನೆಯಾದರೆ. ನೀವು ನಿಮ್ಮ ಖಾತೆಯಿಂದ ಅಪರಿಚಿತರಿಗೆ ಹಣ ಕಳುಹಿಸಿದರೆ, ಮೋಸದ ಜಾಲಕ್ಕೆ ಬಿದ್ದರೆ ಕೂಡಲೇ ಎಚ್ಚರವಾಗಿ – ನಿಮಗೆ ವಂಚನೆಯಾದ ನಂತರದ 1 ಗಂಟೆಯ ಅವಧಿ ಗೋಲ್ಡನ್ ಹವರ್ ಎಂದು ಪರಿಗಣಿಸಲ್ಪಡುತ್ತದೆ – ಆ ಅವಧಿಯಲ್ಲಿ 112 ಸಂಖ್ಯೆಗೆ ಡಯಲ್ ಮಾಡಿ – 112 ಸಂಖ್ಯೆಯ ಮೂಲಕ ಸೈಬರ್ ವಂಚನೆಯಾದ ಬಗ್ಗೆ ದೂರು ನೀಡಬೇಕು – 112 ಸಂಖ್ಯೆಗೆ ಸೂಕ್ತ ಮಾಹಿತಿಗಳನ್ನು ಒದಗಿಸಿದರೆ ಸಾಕು – ನಿಮ್ಮ ಖಾತೆಯಿಂದ ಯಾವುದೇ ಹಣ ವರ್ಗಾವಣೆ ಆಗದಂತೆ ತಡೆಯಲಾಗುತ್ತದೆ – ಈ ಕ್ರಮದಿಂದ ವರ್ಗಾವಣೆಯಾದ ಹಣ ವಂಚಕರ ಖಾತೆಯಿಂದ ವಾಪಸ್ ಮೋಸಕ್ಕೆ ಒಳಗಾದವರ ಖಾತೆಗೆ ಬರುತ್ತದೆ

ಇದನ್ನೂ ಓದಿ: ಆರ್​ಬಿಐ ಹೆಸರಲ್ಲಿ ಸುಮಾರು 2 ಕೋಟಿ ವಂಚನೆ ಮಾಡಿದ್ದ ಯುವತಿ, ಕೃತ್ಯಕ್ಕೆ ಸಹಕರಿಸುತ್ತಿದ್ದ ನಟ ಬಂಧನ

ನೀವು ಈ ಅಪ್ಲಿಕೇಷನ್​ಗಳನ್ನು ಬಳಸುತ್ತಿದ್ದರೆ ಕೂಡಲೇ ಡಿಲೀಟ್ ಮಾಡಿ; ಮಾಹಿತಿ ಸೋರಿಕೆಯಿಂದ ಪಾರಾಗಿ!

Published On - 11:22 pm, Tue, 1 June 21

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ