AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಕ್ ತಪಾಸಣೆ ವೇಳೆ ಸಿಕ್ಕಿಬಿದ್ದರು.. ಖೋಟಾ ನೋಟು ದಂಧೆಕೋರರು!

ಬೆಂಗಳೂರು: ಮಾಸ್ಕ್​ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸುವ ಬಿಬಿಎಂಪಿ ಮಾರ್ಷಲ್​ಗಳು ಮತ್ತು ಪೊಲೀಸರನ್ನು ಕಂಡರೆ ಕೆಲವರ ಕಣ್ಣು ಕೆಂಪಾಗುತ್ತದೆ. ಅಯ್ಯೋ, ಆ ಹಾಳಾದ ಮಾಸ್ಕ್​ನ ಎಲ್ಲಿಟ್ಟೆ. ಬೇಗ ಹಾಕೋ ಬೇಕು.. ಇಲ್ಲಾಂದ್ರೆ ಇವರು ಫೈನ್​ ಜಡೀತಾರೆ ಅಂತಾ ಸಿಟ್ಟುಮಾಡಿಕೊಳ್ಳೋರೆ ಹೆಚ್ಚು. ಆದರೆ, ಮಾಸ್ಕ್ ತಪಾಸಣೆ ವೇಳೆ ಅಂತರ್ ರಾಜ್ಯ ಖೋಟಾ ನೋಟು ದಂಧೆಕೋರರು ಮೈಕೋಲೇಔಟ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಸುಮನ್(36), ದೇವರಾಜನ್ (31), ಹಾಗೂ ಮುನಿಶೇಖರ್ (29) […]

ಮಾಸ್ಕ್ ತಪಾಸಣೆ ವೇಳೆ ಸಿಕ್ಕಿಬಿದ್ದರು.. ಖೋಟಾ ನೋಟು ದಂಧೆಕೋರರು!
KUSHAL V
| Edited By: ಸಾಧು ಶ್ರೀನಾಥ್​|

Updated on: Nov 14, 2020 | 2:01 PM

Share

ಬೆಂಗಳೂರು: ಮಾಸ್ಕ್​ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸುವ ಬಿಬಿಎಂಪಿ ಮಾರ್ಷಲ್​ಗಳು ಮತ್ತು ಪೊಲೀಸರನ್ನು ಕಂಡರೆ ಕೆಲವರ ಕಣ್ಣು ಕೆಂಪಾಗುತ್ತದೆ. ಅಯ್ಯೋ, ಆ ಹಾಳಾದ ಮಾಸ್ಕ್​ನ ಎಲ್ಲಿಟ್ಟೆ. ಬೇಗ ಹಾಕೋ ಬೇಕು.. ಇಲ್ಲಾಂದ್ರೆ ಇವರು ಫೈನ್​ ಜಡೀತಾರೆ ಅಂತಾ ಸಿಟ್ಟುಮಾಡಿಕೊಳ್ಳೋರೆ ಹೆಚ್ಚು. ಆದರೆ, ಮಾಸ್ಕ್ ತಪಾಸಣೆ ವೇಳೆ ಅಂತರ್ ರಾಜ್ಯ ಖೋಟಾ ನೋಟು ದಂಧೆಕೋರರು ಮೈಕೋಲೇಔಟ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಸುಮನ್(36), ದೇವರಾಜನ್ (31), ಹಾಗೂ ಮುನಿಶೇಖರ್ (29) ಬಂಧಿತ ಆರೋಪಿಗಳು. ಪ್ರೊಬೇಷನರಿ PSI ರಾಜ್ ಕುಮಾರ್ ಹಾಗೂ ಹೆಡ್ ಕಾನ್​ಸ್ಟೇಬಲ್​ ಪ್ರಮೋದ್ ಸಮಯಪ್ರಜ್ಞೆಯಿಂದ ಈ ಬೃಹತ್​ ಖೋಟಾ ನೋಟು ಜಾಲ ಪತ್ತೆಯಾಗಿದೆ.

ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? ಆರೋಪಿಗಳು ತಮಿಳುನಾಡು ನೊಂದಣಿಯ ಕಾರಿನಲ್ಲಿ ಖೋಟಾ ನೋಟುಗಳನ್ನು ನಗರದಲ್ಲಿ ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ. ಇದೇ ವೇಳೆ, ಆರೋಪಿಗಳು ಮಾಸ್ಕ್ ಧರಿಸದ ಕಾರಣ ಅವರ ಕಾರನ್ನ PSIರಾಜ್ ಕುಮಾರ್ ತಡೆದಿದ್ದಾರೆ.

ಪರಿಶೀಲನೆ ವೇಳೆ ಆರೋಪಿಗಳ ವರ್ತನೆ ಸಂಶಯಾಸ್ಪದವಾಗಿ ಕಂಡುಬಂದಾಗ ಪೊಲೀಸರು ವಾಹನದ ತಪಾಸಣೆಗೆ ಮುಂದಾದರು. ಈ ವೇಳೆ, ಕಾರ್​ನಲ್ಲಿ ಕಂತೆ ಕಂತೆ ಖೋಟಾ ನೋಟು ಪತ್ತೆಯಾಗಿದೆ. ಅಸಲಿ ನೋಟುಗಳನ್ನು ಖದೀಮರು ಕಲರ್ ಜೆರಾಕ್ಸ್ ಮಾಡಿ ಚಲಾಯಿಸಲು ನಗರಕ್ಕೆ ತರುತ್ತಿದ್ದರು ಎಂದು ಹೇಳಲಾಗಿದೆ. ಸದ್ಯ, ಬಂಧಿತರಿಂದ 2 ಸಾವಿರ ಹಾಗೂ 500 ರೂ. ಮುಖಬೆಲೆಯ 7 ಲಕ್ಷದ 78 ಸಾವಿರ ರೂ ನೋಟು ಹಾಗೂ 1 ಕಾರನ್ನು ಜಪ್ತಿ ಮಾಡಿದ್ದಾರೆ.

Follow Us
KUSHAL V
KUSHAL V
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ