AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಕ್ ತಪಾಸಣೆ ವೇಳೆ ಸಿಕ್ಕಿಬಿದ್ದರು.. ಖೋಟಾ ನೋಟು ದಂಧೆಕೋರರು!

ಬೆಂಗಳೂರು: ಮಾಸ್ಕ್​ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸುವ ಬಿಬಿಎಂಪಿ ಮಾರ್ಷಲ್​ಗಳು ಮತ್ತು ಪೊಲೀಸರನ್ನು ಕಂಡರೆ ಕೆಲವರ ಕಣ್ಣು ಕೆಂಪಾಗುತ್ತದೆ. ಅಯ್ಯೋ, ಆ ಹಾಳಾದ ಮಾಸ್ಕ್​ನ ಎಲ್ಲಿಟ್ಟೆ. ಬೇಗ ಹಾಕೋ ಬೇಕು.. ಇಲ್ಲಾಂದ್ರೆ ಇವರು ಫೈನ್​ ಜಡೀತಾರೆ ಅಂತಾ ಸಿಟ್ಟುಮಾಡಿಕೊಳ್ಳೋರೆ ಹೆಚ್ಚು. ಆದರೆ, ಮಾಸ್ಕ್ ತಪಾಸಣೆ ವೇಳೆ ಅಂತರ್ ರಾಜ್ಯ ಖೋಟಾ ನೋಟು ದಂಧೆಕೋರರು ಮೈಕೋಲೇಔಟ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಸುಮನ್(36), ದೇವರಾಜನ್ (31), ಹಾಗೂ ಮುನಿಶೇಖರ್ (29) […]

ಮಾಸ್ಕ್ ತಪಾಸಣೆ ವೇಳೆ ಸಿಕ್ಕಿಬಿದ್ದರು.. ಖೋಟಾ ನೋಟು ದಂಧೆಕೋರರು!
KUSHAL V
| Edited By: |

Updated on: Nov 14, 2020 | 2:01 PM

Share

ಬೆಂಗಳೂರು: ಮಾಸ್ಕ್​ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸುವ ಬಿಬಿಎಂಪಿ ಮಾರ್ಷಲ್​ಗಳು ಮತ್ತು ಪೊಲೀಸರನ್ನು ಕಂಡರೆ ಕೆಲವರ ಕಣ್ಣು ಕೆಂಪಾಗುತ್ತದೆ. ಅಯ್ಯೋ, ಆ ಹಾಳಾದ ಮಾಸ್ಕ್​ನ ಎಲ್ಲಿಟ್ಟೆ. ಬೇಗ ಹಾಕೋ ಬೇಕು.. ಇಲ್ಲಾಂದ್ರೆ ಇವರು ಫೈನ್​ ಜಡೀತಾರೆ ಅಂತಾ ಸಿಟ್ಟುಮಾಡಿಕೊಳ್ಳೋರೆ ಹೆಚ್ಚು. ಆದರೆ, ಮಾಸ್ಕ್ ತಪಾಸಣೆ ವೇಳೆ ಅಂತರ್ ರಾಜ್ಯ ಖೋಟಾ ನೋಟು ದಂಧೆಕೋರರು ಮೈಕೋಲೇಔಟ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಸುಮನ್(36), ದೇವರಾಜನ್ (31), ಹಾಗೂ ಮುನಿಶೇಖರ್ (29) ಬಂಧಿತ ಆರೋಪಿಗಳು. ಪ್ರೊಬೇಷನರಿ PSI ರಾಜ್ ಕುಮಾರ್ ಹಾಗೂ ಹೆಡ್ ಕಾನ್​ಸ್ಟೇಬಲ್​ ಪ್ರಮೋದ್ ಸಮಯಪ್ರಜ್ಞೆಯಿಂದ ಈ ಬೃಹತ್​ ಖೋಟಾ ನೋಟು ಜಾಲ ಪತ್ತೆಯಾಗಿದೆ.

ಖದೀಮರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? ಆರೋಪಿಗಳು ತಮಿಳುನಾಡು ನೊಂದಣಿಯ ಕಾರಿನಲ್ಲಿ ಖೋಟಾ ನೋಟುಗಳನ್ನು ನಗರದಲ್ಲಿ ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ. ಇದೇ ವೇಳೆ, ಆರೋಪಿಗಳು ಮಾಸ್ಕ್ ಧರಿಸದ ಕಾರಣ ಅವರ ಕಾರನ್ನ PSIರಾಜ್ ಕುಮಾರ್ ತಡೆದಿದ್ದಾರೆ.

ಪರಿಶೀಲನೆ ವೇಳೆ ಆರೋಪಿಗಳ ವರ್ತನೆ ಸಂಶಯಾಸ್ಪದವಾಗಿ ಕಂಡುಬಂದಾಗ ಪೊಲೀಸರು ವಾಹನದ ತಪಾಸಣೆಗೆ ಮುಂದಾದರು. ಈ ವೇಳೆ, ಕಾರ್​ನಲ್ಲಿ ಕಂತೆ ಕಂತೆ ಖೋಟಾ ನೋಟು ಪತ್ತೆಯಾಗಿದೆ. ಅಸಲಿ ನೋಟುಗಳನ್ನು ಖದೀಮರು ಕಲರ್ ಜೆರಾಕ್ಸ್ ಮಾಡಿ ಚಲಾಯಿಸಲು ನಗರಕ್ಕೆ ತರುತ್ತಿದ್ದರು ಎಂದು ಹೇಳಲಾಗಿದೆ. ಸದ್ಯ, ಬಂಧಿತರಿಂದ 2 ಸಾವಿರ ಹಾಗೂ 500 ರೂ. ಮುಖಬೆಲೆಯ 7 ಲಕ್ಷದ 78 ಸಾವಿರ ರೂ ನೋಟು ಹಾಗೂ 1 ಕಾರನ್ನು ಜಪ್ತಿ ಮಾಡಿದ್ದಾರೆ.

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು