
ಬೆಂಗಳೂರು: ಲಾಕ್ಡೌನ್ ಸಡಿಲಿಕೆ ಆಗುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಅಪರಾಧದ ಪ್ರಕರಣಗಳು ಸಹ ಹೆಚ್ಚುತ್ತಿವೆ. ಇದೀಗ ಜೋಡಿ ಕೊಲೆಯೊಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಬಡಾವಣೆಯ ಖಾಲಿ ಕಟ್ಟಡವೊಂದರ ತಳಮಹಡಿಯಲ್ಲಿ ಮೃತ ದೇಹಗಳು ಪತ್ತೆಯಾಗಿದ್ದು ಹತ್ಯೆಯಾಗಿರುವವರನ್ನ ಸಹೋದರರಾದ ಸದಾಶಿವ ಹಾಗೂ ದಂಡಪಾಣಿ ಎಂದು ಗುರುತಿಸಲಾಗಿದೆ.
ತಮ್ಮನಿಂದಲೇ ನಡೆದಿತ್ತಾ ಅಣ್ಣಂದಿರ ಕೊಲೆ..?
ದೊಣ್ಣೆಯಿಂದ ಹೊಡೆದು ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಇನ್ನು ಹತ್ಯೆ ನಡೆದು 2-3 ದಿನಗಳಾಗಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಜೊತೆಗೆ ಪೊಲೀಸರ ಪ್ರಕಾರ ಮೃತರ ತಮ್ಮನಿಂದಲೇ ಸಹೋದರರಿಬ್ಬರ ಹತ್ಯೆಯಾಗಿದೆ ಎಂದು ತಿಳಿದುಬಂದಿದೆ.
Published On - 2:53 pm, Tue, 16 June 20