AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ: ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣವೊಂದರಲ್ಲಿ ಯಜಮಾನನ ಕೊಲೆ, ಇಬ್ಬರು ಹೆಣ್ಣಮಕ್ಕಳ ಮೇಲೂ ಚಾಕು ಪ್ರಹಾರ

ಕೊಲೆ ಯಾಕೆ ನಡೆಯಿತು, ಹೇಗೆ ನಡೆಯಿತು ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ. 22-ವರ್ಷದ ಯುವತಿಯನ್ನು ಅವರು ಪ್ರಶ್ನಿಸುತ್ತಿದ್ದಾರೆ ಮತ್ತು ಆಕೆ ನೀಡಿರುವ ಹೇಳಿಕೆಗಳಿಗೆ ಪೂರಕವಾಗುವ ಸಾಕ್ಷ್ಯಾಧಾರಗಳನ್ನು ಶೋಧಿಸುತ್ತಿದ್ದಾರೆ.

ಅಮೆರಿಕ: ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣವೊಂದರಲ್ಲಿ ಯಜಮಾನನ ಕೊಲೆ, ಇಬ್ಬರು ಹೆಣ್ಣಮಕ್ಕಳ ಮೇಲೂ ಚಾಕು ಪ್ರಹಾರ
ಕಾರ್ಲೊ ಸೆಕೆಂಡಿನೋ ಮತ್ತು ಅವರ ಮಕ್ಕಳು
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jan 03, 2023 | 7:55 AM

Share

ಅಮೆರಿಕದ ನ್ಯೂ ಯಾರ್ಕ್ (New York) ನಗರದದ ಬ್ರೂಕ್ಲಿನ್ ಪ್ರದೇಶದಲ್ಲಿ ವಾಸವಾಗಿದ್ದ ಒಂದು ಅಮಾಯಕ ಕುಟುಂಬದ ಮೇಲೆ ಹಂತಕರಿಗೆ ಅದ್ಯಾವ ದ್ವೇಷವಿತ್ತೋ? ಅವರ ಮನೆಗೆ ಕ್ರಿಸ್ಮಸ್ ಮುನ್ನಾದಿನ ನುಗ್ಗಿದ ಕೊಲೆಗಡುಕರು ಮನೆಯ ಯಜಮಾನ 61-ವರ್ಷ-ವಯಸ್ಸಿನ ಕಾರ್ಲೊ ಸೆಕಂಡಿಮೊ (Carlo Secondino) ಹರಿತವಾದ ಆಯುಧಗಳಿಂದ ಇರಿದು ಕೊಂದಿದ್ದಾರೆ ಮತ್ತು ಅವರು ಇಬ್ಬರು ಹೆಣ್ಣುಮಕ್ಕಳ ಮೇಲೆ ಕೂಡ ಮಾರಣಾಂತಿಕ (fatal) ಹಲ್ಲೆ ನಡೆಸಿದ್ದಾರೆ. 19-ವರ್ಷದ ಅವರ ಕಿರಿಯ ಮಗಳು ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೆ 22-ವರ್ಷದ ಹಿರಿ ಮಗಳ ಕೈಗೆ ಮೇಲೆ ಇರಿತದ ಗಾಯಗಳಾಗಿವೆ. ಚಿಕಿತ್ಸೆಯ ಬಳಿಕ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಕಿರಿ ಮಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

22-ವರ್ಷದ ಯುವತಿ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ ಇಬ್ಬರು ಹಂತಕರು ಏಕಾಏಕಿ ಮನೆಯೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಸೇಫ್ ನಿಂದ ಹಣ ಹೊರತೆಗೆದು ತಮಗೆ ನೀಡಬೇಕೆಂದು ಅವರು ಒತ್ತಾಯಿಸಿದರೆಂದು ಆಕೆ ಪೊಲೀಸರಿಗೆ ಹೇಳಿದ್ದಾಳಾದರೂ ಅಧಿಕಾರಿಗಳು ಮನೆಯ ಪರಿಶೀಲನೆ ನಡೆಸುವಾಗ ಸೇಫ್ ಕಾಣಿಸಿಲ್ಲ.

ಇದನ್ನೂ ಓದಿ:  ಸೆನ್ಸೇಷನಲ್ ಕ್ರೈಮ್ ಕತೆಗಳು: ತೂತುಕುಡಿಯ ಅಮಾನುಷ ಜೋಡಿ ಲಾಕಪ್ ಕೊಲೆ ತಮಿಳುನಾಡು ಜನರನ್ನು ತತ್ತರಿಸುವಂತೆ ಮಾಡಿದ್ದವು!

ಕೊಲೆ ಯಾಕೆ ನಡೆಯಿತು, ಹೇಗೆ ನಡೆಯಿತು ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ. 22-ವರ್ಷದ ಯುವತಿಯನ್ನು ಅವರು ಪ್ರಶ್ನಿಸುತ್ತಿದ್ದಾರೆ ಮತ್ತು ಆಕೆ ನೀಡಿರುವ ಹೇಳಿಕೆಗಳಿಗೆ ಪೂರಕವಾಗುವ ಸಾಕ್ಷ್ಯಾಧಾರಗಳನ್ನು ಶೋಧಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಈಗಲೂ ಕಾರ್ಲೊ ಅವರ ಮನೆಗೆ ಭೇಟಿ ನೀಡುವುದನ್ನು ಮುಂದುವರಿಸಿದ್ದಾರೆ ಮತ್ತು ಅವರ ನೆರೆಹೊರೆಯವರೊಂದಿಗೆ ವಿಚಾರಣೆ ನಡೆಸುತ್ತಿದ್ದಾರೆ.

ಮಾಧ್ಯಮಗಳೊಂದಿಗೆ ಮಾತಾಡಿರುವ ಜಾನಿ ಶ್ಯೂ ಹೆಸರಿನ ನೆರೆಹೊರೆಯವರು, ‘ನನ್ನ ರೂಂಮೇಟ್ ಬೆಳಗ್ಗೆ 7 ಗಂಟೆಗೆ ಹೊರಟವನು ಕ್ಷಣಾರ್ಧದಲ್ಲಿ ವಾಪಸ್ಸು ಬಂದು ನನ್ನನ್ನು ಹೊರಗೆ ಕರೆದ. ನಾನು ಹೊರಗೆ ಹೋದಾಗ ಕಾರ್ಲೊ ಮನೆ ಸುತ್ತ ಜನ ನೆರೆದಿದ್ದರು. ಯಾರನ್ನೋ ಕೊಲ್ಲಲಾಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದರು,’ ಅಂತ ಹೇಳಿದ್ದಾರೆ.

ಮತ್ತೊಬ್ಬ ನೆರೆಮನೆಯವರಾದ ಜೋ ಪಗಾನೋ ಅವರಿಗೆ ಕಾರ್ಲೊ ಕುಟುಂಬದ ಪರಿಚಯವಿತ್ತು. ‘ಮನೇಲಿ ಒಬ್ಬ ತಂದೆ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದರು. ಅವರು ಹೆಚ್ಚಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಅದಕ್ಕಿಂತ ಜಾಸ್ತಿ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ‘ನಾನು 12-ವರ್ಷಗಳಿಂದ ಇಲ್ಲಿ ವಾಸವಾಗಿದ್ದೇನೆ ಮತ್ತು ಈ ಕುಟುಂಬ ಸಹ ಅಷ್ಟೇ ಸಮಯದಿಂದ ಇಲ್ಲಿ ವಾಸವಾಗಿದೆ,’ ಎಂದು ಜೋ ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ, ಮೋದಿ ಕೂಡ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ ಎಂದ ಸಚಿವ ಜೋಶಿ

ಕಾರ್ಲೊ ಡೆಲಿವರಿಮ್ಯಾನ್ ಅಗಿ ಕೆಲಸ ಮಾಡುತ್ತಿದ್ದ ಮೈಕ್ಸ್ ಡೈನರ್ ನ ಸಹ-ಮಾಲೀಕ ಯದೀರಾ ಗೊಮೆಜ್ ನ್ಯೂ ಯಾರ್ಕ್ ಪೋಸ್ಟ್ ಗೆ, ‘ಈ ಯುವತಿಯರು ಚಿಕ್ಕವರಾಗಿದ್ದಾಗಲೇ ಅವರಮ್ಮ ಕುಟುಂಬವನ್ನು ತೊರೆದು ಹೋದಳು. ಹಾಗಾಗಿ ಮಕ್ಕಳಿಗೆ ಕಾರ್ಲೊ ತಾಯಿ, ತಂದೆ ಎರಡೂ ಆಗಿದ್ದರು. ಇಲ್ಲಿರುವ ಪ್ರತಿಯೊಬ್ಬರು ಅವರನ್ನು ಇಷ್ಟಪಡುತ್ತಿದ್ದರು. ಅವರ ಸಾವು ನಮಗೆ ಬಹುದೊಡ್ಡ ಹಾನಿಯಾಗಿದೆ. ಕೆಲಸ ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಯಾರಾದರೂ ಸಹಾಯ ಕೇಳಿಕೊಂಡು ಹೋದರೆ ಇಲ್ಲ ಅನ್ನುತ್ತಿರಲಿಲ್ಲ, ಎಲ್ಲರಿಗೂ ನೆರವಾಗುತ್ತಿದ್ದರು,’ ಎಂದು ಹೇಳಿದ್ದಾರೆ. ತನಿಖೆ ಮುಂದುವರಿಯುತ್ತಿದೆ. ನ್ಯೂ ಯಾರ್ಕ್ ಪೋಸ್ಟ್ ವರದಿಯೊಂದರ ಪ್ರಕಾರ ಕಾರ್ಲೊ ಕುಟುಂಬದ ಮೇಲೆ ನಡೆದ ಆಕ್ರಮಣ ಪೂರ್ವನಿಯೋಜಿತವಾಗಿರಬಹುದು.

ನ್ಯೂ ಯಾರ್ಕ್ ಪೊಲೀಸ ಡಾಟಾ ಪ್ರಕಾರ ನಗರದಲ್ಲಿ ಕಳೆದ ಜನವರಿಯಿಂದ ಅಪರಾಧ ಪ್ರಮಾಣ ಶೇಕಡ 17 ರಷ್ಟು ಕಡಿಮೆಯಾಗಿದೆ ಮತ್ತು ಕೊಲೆ ಪ್ರಕರಣಗಳಲ್ಲಿ ಶೇಕಡ 12 ರಷ್ಟು ಇಳಿಕೆಯಾಗಿದೆ.

ಹೆಚ್ಚಿನ ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?